Browsed by
Month: December 2016

ಶಾಸ್ತ್ರೀಯ ಭಾಷೆ: ಕನ್ನಡದ ಮುಂದಿರುವ ಸವಾಲು

ಶಾಸ್ತ್ರೀಯ ಭಾಷೆ: ಕನ್ನಡದ ಮುಂದಿರುವ ಸವಾಲು

ಕನ್ನಡಕ್ಕೆ ಶಾಸ್ತ್ರೀಯ(ಅಭಿಜಾತ) ಭಾಷೆಯ ಸ್ಥಾನ ಸಿಕ್ಕಿರುವುದು ಸಂತೋಷದ ಮತ್ತು ಸಂಕಟದ ವಿಷಯ. ಸಂತೋಷ ಏಕೆಂದರೆ ಕನ್ನಡದ ಹಿರಿಮೆ. ಹಳಮೆ, ಉತ್ಕ್ರುಷ್ಟತೆಗಳನ್ನು ಭಾರತ ಸರಕಾರವು ಕೊನೆಗೂ ಗುರುತಿಸಿರುವುದು ಸಂಕಟದ ವಿಷಯವೇಕೆಂದರೆ ಕಾನೂನಿನ ನೆವ ಓದಿ ಶಾಸ್ತ್ರೀಯ ಸ್ಥಾನವನ್ನು ತಡೆಗತ್ತಿರುವುದು. ಈ ಸಂದಿಗ್ದ ಪರಿಸ್ಥಿಯಲ್ಲಿ ಈಗ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಹೋರಾಡಿದ ವಿದ್ವಾಂಸರ ಮತ್ತು ಕರ್ನಾಟಕ ಸರಕಾರದ ಕೈಗೆ ಸಕ್ಕೆ ಕಡ್ಡಿಯನ್ನು ಚೀಪಲು ಕೊಟ್ಟಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಸಂಗತಿಯನ್ನು ನಾನಿಲ್ಲಿ ಸ್ಪಷ್ಟಪಡಿಸಬೇಕು, ಶಾಸ್ತ್ರೀಯ ಭಾಷೆ ಎಂದರೆ ಸಾಹಿತ್ಯ, ಅದರಲ್ಲೂ ಹಳೆಗನ್ನಡ ಸಾಹಿತ್ಯ ಎಂಬ ಸಾಮಾನ್ಯ ನಂಬಿಕೆಯೊಂದು ನಮ್ಮ ವಿದ್ವಾಂಸರಲ್ಲಿ ಮನೆಮಾಡಿದಂತೆ ತೋರುತ್ತಿದೆ. ಇನ್ನೊಂದಿಷ್ಟು ಹಿದಕ್ಕೆ ಹೋಗಿ ಶಾಸನಗಳ ಮೂಲಕ ನಮ್ಮ ಭಾಷೆಯ ಹಳಮೆಯನ್ನು ಗುರುತಿಸಿಯಾರು. ಆದರೆ ಇಷ್ಟಕ್ಕೆ ನಮ್ಮ…

Read More Read More

ಮೈಸೂರು ದಸರಾ – ಸಾಂಸ್ಕೃತಿಕ ಮಹಾಪಠ್ಯ

ಮೈಸೂರು ದಸರಾ – ಸಾಂಸ್ಕೃತಿಕ ಮಹಾಪಠ್ಯ

ಮೈಸೂರು ದಸರಾ ಮೆರವಣಿಗೆಯನ್ನು ನೋಡುವಾಗಲೆಲ್ಲ ನನಗೆ ದ.ರಾ.ಬೇಂದ್ರೆಯವರ ಖಂಡಖಂಡಗಳ ಸಾವ್ರಭೌಮರ ನೆತ್ತಿಯ ಕುಕ್ಕಿ ಸಾಗುವ ಹಾರುವ ಕಾಲದ ಹಕ್ಕಿ ನೆನಪಾಗುತ್ತದೆ. ಮೈಸೂರಿನ ನೆಲ, ಕಳೆದ ೪೦೦ ವರ್ಷಗಳಿಗೂ ಮಿಕ್ಕಿ ಮರೆವಣಿಗೆಯಾ ಹೆಜ್ಜೆ ಗುರುತುಗಳನ್ನು ಬಿಚ್ಚಿಟ್ಟಿದೆ. ನೂರಾರು ವರ್ಷ ಇತಿಹಾಸದ ರಾಜ ಮಹಾರಾಜರ ದಸರಾ ಇಂದೂ ಜನತಾ ದಸರವಾಗಿ ಪರಿವರ್ತಿತಗೊಂಡ ರೀತಿ ನನಗೆ ತುಂಬ ಕುತೂಹಲಕಾರಿ ಅನ್ನಿಸುತ್ತಿದೆ. ಅಂದಿನ ರಾಜಪ್ರಭುತ್ವದಿಂದ ಇಂದಿನ ಪ್ರಜಾಪ್ರಭುತ್ವದ ದಸರಾ ಆಗಿದೆ. ರಾಜಾಧಿಕರ ಪ್ರಜಾ ಅಧಿಕಾರ ಉದ್ದಾರ ಮಾಡಿದ ಮಲೆಮಾದೇಶ್ವರ, ಮಂಟೆಸ್ವಾಮಿಗಳ ಸಹಾಯವನ್ನೂ ಅರಸರು ಮರೆತಿಲ್ಲ. ಇಂದೂ ದಸರಾ ಸಮಯದಲ್ಲಿ ಅರಮನೆಯಲ್ಲಿ ಅವರಿಗೆ ಸಾಂಕೇತಿಕ ಮರ್ಯದ ಸಲ್ಲುತ್ತದೆ. ಒಂದು ರಾಜ್ಯ್ವವನ್ನು ಕಟ್ಟುವುದೆಂದರೆ ಎಲ್ಲಾ ಜನತೆಯ ಸಹಾಯಬೇಕೆಂಬುದನ್ನು ಮೈಸೂರು ರಾಜರು ಅರಿತಿದ್ದರು. ಇವರ ರಾಜ್ಯದಲ್ಲಿ ಜೇನು ಕುರುಬ, ಬೆಟ್ಟಕುರುಬ, ಎರವ ಇತ್ಯಾದಿ…

Read More Read More

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’

ಲಂಕೇಶ್-೬೦, ಮೈಸೂರು ವಿಚಾರಸಂಕೀರಣದಲ್ಲಿ ಮಾಡಿದ ಭಾಷಣದಿಂದ ಲಂಕೇಶರ ಕಾದಂಬರಿಗಳ ಬಗ್ಗೆ ಮಾತನಾಡುವುದಕ್ಕೆ ಮೊದಲು ನವ್ಯ ಸಾಹಿತ್ಯದ (ಆಗ ನಾನಿನ್ನು ವಿದ್ಯಾರ್ಥಿ) ಆ ದಿನಗಳನ್ನು ನೆನೆಸಿಕೊಳ್ಳಲಿಕ್ಕೆ ನನಗೆ ಬಹಳ ಇಸ್ತ ಆಗುತ್ತದೆ. ಅನಂತಮೂರ್ತಿ, ತೇಜಸ್ವಿ, ಲಂಕೇಶರು ನಮಗೆ ಆ ಕಾಲಕ್ಕೆ ಪೂರ್ಣತೇಜಸ್ವಿಗಳಂತೆ ಕಾಣುತ್ತಿದ್ದರು. ಇವರ ಬರವಣಿಗೆಯ ಪ್ರಭಾವದಲ್ಲಿ ನಾವು ಏನಾಗಿದ್ವಿ ಅಂತಂದ್ರೆ ಮಾಸ್ತಿಯಾಗಲಿ, ಕುವೆಂಪು ಆಗಲಿ, ಬೇಂದ್ರೆಯಾಗಲೀ ನಮಗೆ ಕಾಣುತ್ತಿರಲಿಲ್ಲ. ಹಾಗೆ ಈ ಮೂವರೇ ನಮಗೆ ಪೂರ್ಣಸೂರ್ಯ ಪ್ರಭೆಯ ಹಾಗೆ ಕಾಣುತ್ತಿದ್ದರು. ಆಗ ಹುಡುಗರಾಗಿದ್ದ ನಮಗೆ ಸಾಹಿತ್ಯದ ರೂಪುರೇಷೆಗಳು ಮನಸ್ಸಿನಲ್ಲಿ ಮೂಡುತ್ತಿದ್ದ ಹೊತ್ತಿನಲ್ಲಿ ಮಾಸ್ತಿ, ಕುವೆಂಪು, ಬೇಂದ್ರೆ, ಪು.ತಿ.ನ. ಇವರೆಲ್ಲ ಕಾಣದ ಹಾಗೆ ನವ್ಯ ಸಾಹಿತ್ಯದ ಪ್ರಭೆ ಮಾತ್ರ ನಮ್ಮ ಕಣ್ಣಿಗೆ ರಾಚುತ್ತಿತ್ತು. ಅನಂತಮೂರ್ತಿಯವರು ನಮ್ಮ ಸಂಸ್ಕೃತಿಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ವ್ಯಾಖ್ಯಾನಗಳನ್ನು…

Read More Read More

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಪುಸ್ತಕ: ಪುಸ್ತಕ ಪ್ರಪಂಚ ಪೀಠಿಕೆ: ಶ್ರೀಕೃಷ್ಣ ಆಲನಹಳ್ಳಿಯ ಮೊದಲ ಕಾದಂಬರಿ ‘ಕಾಡು’ ಈಗಾಗಲೇ ಕನ್ನಡ ಕಾದಂಬರಿ ಸಂಸ್ಕೃತಿಯ ಪ್ರಜ್ಞಾತಲವನ್ನು ಮುಟ್ಟಿರುವ ಕೃತಿ. ಈ ಕೃತಿಯ ಪ್ರಮುಖ ಪಾತ್ರವಾದ ಪುಟ್ಟ ಬಾಲಕ ಕಿಟ್ಟಿಯ ಮುಗ್ದ ಮನಃಪಟಲದ ಮೇಲೆ ಬೆಳೆದವರ ಲೋಕ ಮೂಡಿಸುವ ಕ್ರೌರ್ಯದ ಬರೆಗಳು ಮಾಸುವುದೇ ಇಲ್ಲ. ಈ ಕಾದಂಬರಿಯಲ್ಲಿ ವಿವರಗಳೆಲ್ಲವೂ ಭೌತಿಕ(physical details) ವಲಯಕ್ಕೆ ಸೇರಿದ್ದು ಅವು ಓದುಗನ ಬೌದ್ದಿಕ(intellectual) ವಲಯಕ್ಕೆ ದಾಟುತ್ತಾ ಅರ್ಥವೈಶಾಲ್ಯತೆಯನ್ನು ಪಡೆದುಕೊಳ್ಳುತ್ತ್ತಾ ಹೋಗುತ್ತವೆ. ಈ ಕಾದಂಬರಿ ‘ನವ್ಯ’ದಿಂದ ಪಡೆದುಕೊಂಡದ್ದನ್ನು ದಕ್ಕಿಸಿಕೊಂಡಿದೆ. ನಂತರ ಬರೆದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವೀಣೆ ಕಿಟ್ಟಿಯ ಮುಗ್ಧತೆಯ ಮುಂದುವರೆದ ರೂಪ. ‘ಗೆಂಡೆತಿಮ್ಮ’ನ ಮುಗ್ದತೆಯನ್ನು ಮರಂಕಿಯ ‘ನಾಗರೀಕ’ ಪ್ರಪಂಚ ಮತ್ತು ಅವನೇ ತನಗರಿವಿಲ್ಲದಂತೆ ಹರಡಿದ ನಾಗರೀಕತೆಯಿಂದ ಗೌವ್ವಳ್ಳಿಯ ಜನ ಅವನ ಮುಗ್ದತೆಯನ್ನು ಚೂರುಚೂರುಮ್ ಆದಿ ಹಾಕುತ್ತಾರೆ. ಈ ಕಾದಂಬರಿಯಲ್ಲಿ…

Read More Read More

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

‘ಗೆಂಡಗಯ್ಯ’, ಇದು ಗೆಳೆಯ ಶಿವತೀರ್ಥನ್ ರವರ ‘ಗೆರೆಗಳು’ ಕವನ ಸಂಕಲನದ ವಿಶಿಷ್ಟ ಕವನ.. ಈ ಇಹದ ಪರಿಪಾಟಲನ್ನು ಕಂಡು ಉಂಡು, ಕಾಣದಂತೆ ತನ್ನ ಕಾಯಕವನ್ನು ನಡೆಸುತ್ತಿರುವ, ಒಳಗಣ್ಣನ್ನು ಸದಾ ತೆರೆದುಕೊಂಡು ಎಸೆದು ಗಾಳ ಬೀಸಿ ಬಲೆ ಕಾಯ್ತು ಕುಂತವ್ನೆ ಸಂತ ಎಂಬ ‘ಇರ’ವಿನ  ‘ಅರಿವ’ನ್ನು ತೆರದಿಡುವ ಕವನ ಈ ಸಂತನಿಗೆ ತನ್ನ ಸುತ್ತೆಲ್ಲ ಇರುವ ಪ್ರಪಂಚ ‘ಅಭಾವದ’ ಪ್ರಪಂಚವೆಂದು ಗೊತ್ತು. ನೋವು, ಯಸನ, ತಳಮಳ, ಬಯಕೆ, ಹಸಿವು ಮತ್ತು ದಾವಿನಿಂದ ಪರಿತಪಿಸುಸುತ್ತಿರುವ ಪ್ರಪಂಚ. ಕವನದ ಪಾರಂಭವೇ ಹೀಗಾಗುತ್ತದೆ : ತನ್ನ ಜನರ ಯಾ೦ತ್ರಿಕ ಪ್ರಾರಂಭವಾಗುವುದೇ ‘ಅಲಾರಾಂ ಕೋಳಿ ಕೂಗ್ತು !’ ಆದರೆ ಇಹದ ಕಷ್ಟವನ್ನು ಮರೆತು ತನ್ನಷ್ಟಕ್ಕೆ ತಾನೇ ಕುಂತ ಸಂತನಲ್ಲ ಇವ. ತನ್ನ ಜನತೆಯ ದೈನಂದಿನ ಪರದಾಟಗಳ ಅನುಭವದ ಮೊತ್ತವಾಗಿ ‘ನೆಪ್ಪಾ…

Read More Read More