Browsed by
Category: Articles in other books

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’

ಲಂಕೇಶ್-೬೦, ಮೈಸೂರು ವಿಚಾರಸಂಕೀರಣದಲ್ಲಿ ಮಾಡಿದ ಭಾಷಣದಿಂದ ಲಂಕೇಶರ ಕಾದಂಬರಿಗಳ ಬಗ್ಗೆ ಮಾತನಾಡುವುದಕ್ಕೆ ಮೊದಲು ನವ್ಯ ಸಾಹಿತ್ಯದ (ಆಗ ನಾನಿನ್ನು ವಿದ್ಯಾರ್ಥಿ) ಆ ದಿನಗಳನ್ನು ನೆನೆಸಿಕೊಳ್ಳಲಿಕ್ಕೆ ನನಗೆ ಬಹಳ ಇಸ್ತ ಆಗುತ್ತದೆ. ಅನಂತಮೂರ್ತಿ, ತೇಜಸ್ವಿ, ಲಂಕೇಶರು ನಮಗೆ ಆ ಕಾಲಕ್ಕೆ ಪೂರ್ಣತೇಜಸ್ವಿಗಳಂತೆ ಕಾಣುತ್ತಿದ್ದರು. ಇವರ ಬರವಣಿಗೆಯ ಪ್ರಭಾವದಲ್ಲಿ ನಾವು ಏನಾಗಿದ್ವಿ ಅಂತಂದ್ರೆ ಮಾಸ್ತಿಯಾಗಲಿ, ಕುವೆಂಪು ಆಗಲಿ, ಬೇಂದ್ರೆಯಾಗಲೀ ನಮಗೆ ಕಾಣುತ್ತಿರಲಿಲ್ಲ. ಹಾಗೆ ಈ ಮೂವರೇ ನಮಗೆ ಪೂರ್ಣಸೂರ್ಯ ಪ್ರಭೆಯ ಹಾಗೆ ಕಾಣುತ್ತಿದ್ದರು. ಆಗ ಹುಡುಗರಾಗಿದ್ದ ನಮಗೆ ಸಾಹಿತ್ಯದ ರೂಪುರೇಷೆಗಳು ಮನಸ್ಸಿನಲ್ಲಿ ಮೂಡುತ್ತಿದ್ದ ಹೊತ್ತಿನಲ್ಲಿ ಮಾಸ್ತಿ, ಕುವೆಂಪು, ಬೇಂದ್ರೆ, ಪು.ತಿ.ನ. ಇವರೆಲ್ಲ ಕಾಣದ ಹಾಗೆ ನವ್ಯ ಸಾಹಿತ್ಯದ ಪ್ರಭೆ ಮಾತ್ರ ನಮ್ಮ ಕಣ್ಣಿಗೆ ರಾಚುತ್ತಿತ್ತು. ಅನಂತಮೂರ್ತಿಯವರು ನಮ್ಮ ಸಂಸ್ಕೃತಿಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ವ್ಯಾಖ್ಯಾನಗಳನ್ನು…

Read More Read More

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಪುಸ್ತಕ: ಪುಸ್ತಕ ಪ್ರಪಂಚ ಪೀಠಿಕೆ: ಶ್ರೀಕೃಷ್ಣ ಆಲನಹಳ್ಳಿಯ ಮೊದಲ ಕಾದಂಬರಿ ‘ಕಾಡು’ ಈಗಾಗಲೇ ಕನ್ನಡ ಕಾದಂಬರಿ ಸಂಸ್ಕೃತಿಯ ಪ್ರಜ್ಞಾತಲವನ್ನು ಮುಟ್ಟಿರುವ ಕೃತಿ. ಈ ಕೃತಿಯ ಪ್ರಮುಖ ಪಾತ್ರವಾದ ಪುಟ್ಟ ಬಾಲಕ ಕಿಟ್ಟಿಯ ಮುಗ್ದ ಮನಃಪಟಲದ ಮೇಲೆ ಬೆಳೆದವರ ಲೋಕ ಮೂಡಿಸುವ ಕ್ರೌರ್ಯದ ಬರೆಗಳು ಮಾಸುವುದೇ ಇಲ್ಲ. ಈ ಕಾದಂಬರಿಯಲ್ಲಿ ವಿವರಗಳೆಲ್ಲವೂ ಭೌತಿಕ(physical details) ವಲಯಕ್ಕೆ ಸೇರಿದ್ದು ಅವು ಓದುಗನ ಬೌದ್ದಿಕ(intellectual) ವಲಯಕ್ಕೆ ದಾಟುತ್ತಾ ಅರ್ಥವೈಶಾಲ್ಯತೆಯನ್ನು ಪಡೆದುಕೊಳ್ಳುತ್ತ್ತಾ ಹೋಗುತ್ತವೆ. ಈ ಕಾದಂಬರಿ ‘ನವ್ಯ’ದಿಂದ ಪಡೆದುಕೊಂಡದ್ದನ್ನು ದಕ್ಕಿಸಿಕೊಂಡಿದೆ. ನಂತರ ಬರೆದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವೀಣೆ ಕಿಟ್ಟಿಯ ಮುಗ್ಧತೆಯ ಮುಂದುವರೆದ ರೂಪ. ‘ಗೆಂಡೆತಿಮ್ಮ’ನ ಮುಗ್ದತೆಯನ್ನು ಮರಂಕಿಯ ‘ನಾಗರೀಕ’ ಪ್ರಪಂಚ ಮತ್ತು ಅವನೇ ತನಗರಿವಿಲ್ಲದಂತೆ ಹರಡಿದ ನಾಗರೀಕತೆಯಿಂದ ಗೌವ್ವಳ್ಳಿಯ ಜನ ಅವನ ಮುಗ್ದತೆಯನ್ನು ಚೂರುಚೂರುಮ್ ಆದಿ ಹಾಕುತ್ತಾರೆ. ಈ ಕಾದಂಬರಿಯಲ್ಲಿ…

Read More Read More

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

‘ಗೆಂಡಗಯ್ಯ’, ಇದು ಗೆಳೆಯ ಶಿವತೀರ್ಥನ್ ರವರ ‘ಗೆರೆಗಳು’ ಕವನ ಸಂಕಲನದ ವಿಶಿಷ್ಟ ಕವನ.. ಈ ಇಹದ ಪರಿಪಾಟಲನ್ನು ಕಂಡು ಉಂಡು, ಕಾಣದಂತೆ ತನ್ನ ಕಾಯಕವನ್ನು ನಡೆಸುತ್ತಿರುವ, ಒಳಗಣ್ಣನ್ನು ಸದಾ ತೆರೆದುಕೊಂಡು ಎಸೆದು ಗಾಳ ಬೀಸಿ ಬಲೆ ಕಾಯ್ತು ಕುಂತವ್ನೆ ಸಂತ ಎಂಬ ‘ಇರ’ವಿನ  ‘ಅರಿವ’ನ್ನು ತೆರದಿಡುವ ಕವನ ಈ ಸಂತನಿಗೆ ತನ್ನ ಸುತ್ತೆಲ್ಲ ಇರುವ ಪ್ರಪಂಚ ‘ಅಭಾವದ’ ಪ್ರಪಂಚವೆಂದು ಗೊತ್ತು. ನೋವು, ಯಸನ, ತಳಮಳ, ಬಯಕೆ, ಹಸಿವು ಮತ್ತು ದಾವಿನಿಂದ ಪರಿತಪಿಸುಸುತ್ತಿರುವ ಪ್ರಪಂಚ. ಕವನದ ಪಾರಂಭವೇ ಹೀಗಾಗುತ್ತದೆ : ತನ್ನ ಜನರ ಯಾ೦ತ್ರಿಕ ಪ್ರಾರಂಭವಾಗುವುದೇ ‘ಅಲಾರಾಂ ಕೋಳಿ ಕೂಗ್ತು !’ ಆದರೆ ಇಹದ ಕಷ್ಟವನ್ನು ಮರೆತು ತನ್ನಷ್ಟಕ್ಕೆ ತಾನೇ ಕುಂತ ಸಂತನಲ್ಲ ಇವ. ತನ್ನ ಜನತೆಯ ದೈನಂದಿನ ಪರದಾಟಗಳ ಅನುಭವದ ಮೊತ್ತವಾಗಿ ‘ನೆಪ್ಪಾ…

Read More Read More

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಪಠ್ಯಕ್ಕೆ ಒಂದು ಅರ್ಥವಿಲ್ಲ. ಅದು ಓದುಗರ ಸೃಷ್ಟಿಗೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ. ಒಂದು ವಿಷಯಕ್ಕೆ ಒಂದು ರಚನೆಯಿದೆ ಎಂದುಕೊಂಡಾ ಕ್ಷಣವೇ ಈ ರಚನೆಯೇ ಪಠ್ಯದ ವಸ್ತು ಎಂದು ಹೇಳಿಬಿಡಬಹುದು . ಇದು ಒಂದು ಕೇಂದ್ರವನ್ನು ಹುಡುಕಿದಂತೆ. ಆದರೆ ಪಠ್ಯದ ಕೇಂದ್ರವು ಯಾವಾಗಲೂ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಕೇಂದ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಇಲ್ಲಿ ಪಠ್ಯವೆಂದರೆ ಯಾವುದಾದರೂ ಒಂದು ನಾಟಕವಾಗಿರಬಹುದು ಅಥವಾ ಯಾವುದೇ ಸಾಹಿತ್ಯ ಕೃತಿಯಾಗಿರಬಹುದು. ಈ ಸಾಹಿತ್ಯ ಕೃತಿಗೆ ಯಾವುದೇ ಒಂದು ರೀತಿಯ ರಚನೆಯಿರುವುದಿಲ್ಲ. ಇದು ಬಹಳ ಮುಖ್ಯವಾದುದು . ಏಕೆಂದರೆ ಮಾತಿನಂತೆ ರಚನೆಗಳೂ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತವೆ. ಹೇಗೆ ಪುನರ್ ಸಾಂದರ್ಭೀಕರಣಕ್ಕೆ ಒಳಗಾಗುತ್ತಾ ಹೊಸ ರೀತಿಯ ಸಾಂಸ್ಕೃತಿಕ ಶೂನ್ಯತೆ ಉಂಟಾಗುತ್ತದೆ. ಸಾಹಿತ್ಯ ಪಠ್ಯ ಸೃಷ್ಟಿಯಾಗುವುದೆಂದರೆ ಇದುವರೆವಿಗೂ ಆ ಸಂಸ್ಕೃತಿಯಲ್ಲಿ ಆ ಅರ್ಥ ಸೃಷ್ಟಿಯಾಗಿಲ್ಲವೆಂದರ್ಥ. ಅರ್ಥ…

Read More Read More

ನವ್ಯತೆ ಕೆಲವು ಪ್ರಶ್ನೆಗಳು

ನವ್ಯತೆ ಕೆಲವು ಪ್ರಶ್ನೆಗಳು

೧೯೫೦, ಅಂದರೆ ಸರಿಯಾಗಿ ಈ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಗೋಕಾಕರು ‘ನವ್ಯ ಕಾವ್ಯ’ದ ಪ್ರಣಾಳಿಕೆಯನ್ನು ಮುಂಬಯಿಯ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಹುಟ್ಟು ಹಾಕಿದುದು ಒಂದು ಚಾರಿತ್ರಿಕ ದಾಖಲೆಯಾಗಿದೆ. “ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ದಿಯನ್ನು ಮುಟ್ಟಿದಾಗ – ಮುಂದೇನೆಂಬ ಪ್ರಶ್ನೆ ಏಳುತ್ತದೆ. ಆ ಪ್ರಶ್ನೆಗೆ ಉತ್ತರ ಇದು, ನವ್ಯ ಕಾವ್ಯ” ಎಂದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಅನಿರ್ವಾರ್ಯರಾಗಿರುವ ‘ನವ್ಯ ದೃಷ್ಟಿ’ಯನ್ನು ಪ್ರತಿಪಾದಿಸಿ, ಅಲ್ಲಿಂದ ೨೫ ವರ್ಷಗಳ ತನಾ ಈ ನವ್ಯ ಕಾವ್ಯದ ರೂಪು ರೇಖೆಗಳ ಪ್ರತಿಪಾದನೆಯನ್ನು ವಿಧಿ ವಿಧಾನಗಳನ್ನು ಕ್ರೂಡ್ಹೀಕರಿಸಿಕೊಂಡು ಬಂದಿರುವ ಕೃತಿ ‘ನವ್ಯತೆ’. ಈ ದೃಷ್ಟಿಯಿಂದ ‘ನವ್ಯತೆ’, ‘ನವ್ಯ ಕಾವ್ಯ’ದ ಒಂದು ಲಾಕ್ಷಣಿಕ ಗ್ರಂಥವಾಗಿ ಬೆಳೆದುಬಂದಿದೆ. ಗೋಕಾಕರು ನವ್ಯ ಕಾವ್ಯದ ಸುಳಿವನ್ನು ಹುಟ್ಟು ಹಾಕುವಾಗ…

Read More Read More