Browsed by
Category: Articles in other books

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’

ಲಂಕೇಶ್-೬೦, ಮೈಸೂರು ವಿಚಾರಸಂಕೀರಣದಲ್ಲಿ ಮಾಡಿದ ಭಾಷಣದಿಂದ

ಲಂಕೇಶರ ಕಾದಂಬರಿಗಳ ಬಗ್ಗೆ ಮಾತನಾಡುವುದಕ್ಕೆ ಮೊದಲು ನವ್ಯ ಸಾಹಿತ್ಯದ (ಆಗ ನಾನಿನ್ನು ವಿದ್ಯಾರ್ಥಿ) ಆ ದಿನಗಳನ್ನು ನೆನೆಸಿಕೊಳ್ಳಲಿಕ್ಕೆ ನನಗೆ ಬಹಳ ಇಸ್ತ ಆಗುತ್ತದೆ. ಅನಂತಮೂರ್ತಿ, ತೇಜಸ್ವಿ, ಲಂಕೇಶರು ನಮಗೆ ಆ ಕಾಲಕ್ಕೆ ಪೂರ್ಣತೇಜಸ್ವಿಗಳಂತೆ ಕಾಣುತ್ತಿದ್ದರು. ಇವರ ಬರವಣಿಗೆಯ ಪ್ರಭಾವದಲ್ಲಿ ನಾವು ಏನಾಗಿದ್ವಿ ಅಂತಂದ್ರೆ ಮಾಸ್ತಿಯಾಗಲಿ, ಕುವೆಂಪು ಆಗಲಿ, ಬೇಂದ್ರೆಯಾಗಲೀ ನಮಗೆ ಕಾಣುತ್ತಿರಲಿಲ್ಲ. ಹಾಗೆ ಈ ಮೂವರೇ ನಮಗೆ ಪೂರ್ಣಸೂರ್ಯ ಪ್ರಭೆಯ ಹಾಗೆ ಕಾಣುತ್ತಿದ್ದರು. ಆಗ ಹುಡುಗರಾಗಿದ್ದ ನಮಗೆ ಸಾಹಿತ್ಯದ ರೂಪುರೇಷೆಗಳು ಮನಸ್ಸಿನಲ್ಲಿ ಮೂಡುತ್ತಿದ್ದ ಹೊತ್ತಿನಲ್ಲಿ ಮಾಸ್ತಿ, ಕುವೆಂಪು, ಬೇಂದ್ರೆ, ಪು.ತಿ.ನ. ಇವರೆಲ್ಲ ಕಾಣದ ಹಾಗೆ ನವ್ಯ ಸಾಹಿತ್ಯದ ಪ್ರಭೆ ಮಾತ್ರ ನಮ್ಮ ಕಣ್ಣಿಗೆ ರಾಚುತ್ತಿತ್ತು. ಅನಂತಮೂರ್ತಿಯವರು ನಮ್ಮ ಸಂಸ್ಕೃತಿಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ವ್ಯಾಖ್ಯಾನಗಳನ್ನು ಬರೆಯುತ್ತಿದ್ದಾರೆ, ಲಂಕೇಶರು ವ್ಯಕ್ತಿ ಪ್ರತಿಕ್ಷಣ ಎಷ್ಟು ತೀವ್ರವಾಗಿ ಬದುಕಬಲ್ಲ ಎಂಬುದನ್ನು ಹೇಳುತ್ತಿದ್ದರು. ತೇಜಸ್ವಿಯವರು ನಿಗೂಢತೆಯ ಬೆನ್ನು ಹತ್ತಿ ತಮ್ಮ ನಿರೂಪಣೆಯನ್ನು ಬಹಳ ಸೊಗಸಾಗಿ ಮುಂದಿಟ್ಟುಕೊಂಡು ನಮ್ಮನ್ನು ಓದಿಸಹತ್ತಿದ್ದರು. ಪ್ರಾಯಶಃ ಈ ಮೂರು ಲೇಖಕರು ನವ್ಯದ ಮೂರು ದಾರಿಯನ್ನು ಈ ರೀತಿಯಲ್ಲಿ ಕಂಡುಕೊಂಡವರು. ಅನಂತಮೂರ್ತಿಯವರು ಒಂದು ರೀತಿಯಲ್ಲಿ ಒಂದು ಮಾದರಿಯನ್ನು ಸೃಷ್ಟಿಸಿದರು. ಅದು ಸಾಸ್ಕೃತಿಕ ನಾಯಕಂ ಪ್ರತಿನಾಯಕ ಇವರನ್ನ ಪ್ರತಿದ್ವಂದ್ವಿಗಳನ್ನಾಗಿ ಮಾಡಿಕೊಂಡು ಅವರ ವಿಷಯವನ್ನು ನಿಕಷಕ್ಕೆ ಒಡ್ಡಿ ಹೊಸ ಅರಿವನ್ನು ಮೂಡಿಸುವುದಕ್ಕೆ ಪ್ರಯತ್ನ ಮಾಡ್ತಾ ಇದ್ದಾಗ ಲಂಕೇಶರು ಬಹಳ ದುರ್ಬಲವಾದ ನಾಯಕನನ್ನ(ಅಂದರೆ ಒಂದು ರೀತಿಯಲ್ಲಿ anti heroನನ್ನು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸುತ್ತಾ ಇದ್ದರು ಅಥವಾ ನಾಯಕನೇ ಇಲ್ಲ ‘ಮುಸ್ಸಂಜೆಯ ಕಥಾ ಪ್ರಸಂಗ’ದಂಥ ಕಾದಂಬರಿಯೂ ಬಂತು. ತೇಜಸ್ವಿಯವರು ನಾಯಕ, ಪ್ರತಿನಾಯಕ ಇಂಥವರನ್ನು ಸೃಷ್ಟಿಸದೆ ಮನುಷ್ಯನೂ ಸಹ ಈ ವಿಶ್ವದಲ್ಲಿ ಉಳಿದ ಪ್ರಾಣಿ, ಪಕ್ಷಿಗಳಂತೆ ಪ್ರಕೃತಿಯಲ್ಲಿ ಒಂದು ಎಂಬಂತೆ ಸೃಷ್ಟಿಸಿಕೊಂಡು ನಿಗೂಢತೆಯ ಅನ್ವೇಷಣೆಗಿಳಿದು ಅದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನದ ಆಲೋಚನೆ ಅವಶ್ಯವೆಂದು ತೋರಿಸಿಕೊಟ್ಟರು. ಈ ಮೂವರು ಲೇಖಕರು ನಮ್ಮ ಯುವಜನಾಂಗಕ್ಕೆ ಹೊಸ ಅರಿವಿನ ಸ್ಪೋಟವನ್ನ, ಎಪಿಸ್ಟಮೊಲಾಜಿಕಲ್ ಬ್ರೇಕ್ ಅಂತ ಏನು ಕರೀತೀವಿ ಅದನ್ನ ಉಂಟು ಮಾಡಿದರು ಎನ್ನುವುದರಲ್ಲಿ ಸಂಶಯ ಇಲ್ಲ. ಈಗ ಲಂಕೇಶರ ಕಾದಂಬರಿಗಳಾದ ‘ಬಿರುಕು’,’ಮುಸ್ಸಂಜೆಯ ಕಥಾ ಪ್ರಸಂಗ’,’ಅಕ್ಕ’ ಇವುಗಳ ಬಗ್ಗೆ ಗಮನ ಹರಿಸಿ ಕನ್ನಡ ಕಾದಂಬರಿಗಳ ಲೋಕಕ್ಕೆ ಅವರ ಕಾಣಿಕೆ ಏನು ಎಂಬುದನ್ನು ಪರಿಶೀಲಿಸಬಹುದು. ಆದರೆ ಲಂಕೇಶರ ಸಂದರ್ಭದಲ್ಲಿ ಇವು ಕೇವಲ ಲಂಕೇಶ್ ಕಾದಂಬರಿಗಳ ಗುಣಗಳು, ಇವು ಅವರ ಕತೆಯ ಗುಣಗಳು. ಇವು ಅವರ ಬರಹದ ಗುಣಗಳು ಅಂತ ಬೇರ್ಪಡಿಸುವುದು ಕಸ್ತ. ಈ ಎಲ್ಲಾ ರೀತಿಯ ಬರಹಗಳ ಹಿಂದಿರುವುದು ಒಂದೇ ರೀತಿಯ ಮನಸ್ಸು ಎಂದು ತಿಳಿಯಬಹುದು. ಆದರೆ ಇಲ್ಲಿ ಕಾದಂಬರಿ ಪ್ರಕಾರದ ಬಗ್ಗೆ ಮಾತನಾಡಬೇಕಾಗಿರುವುದರಿಂದ ಅವರ ಒಟ್ಟು ಬರಹದ ಕೇಕನ್ನು ಒಂದು ಸ್ಲೈಸ್ ಮಾಡಿ ಕತ್ತರಿಸಿಕೊಂಡು ನೋಡಬೇಕಾಗಿದೆ. ಹೀಗೆ ನೋಡುವಾಗ ಪ್ರತಿಯೊಂದು ಕಾದಂಬರಿಯನ್ನು ಪ್ರತ್ಯೇಕವಾಗಿ ನೋಡದೆ ಈ ಕಾದಂಬರಿಯನ್ನು ಸೃಜಿಸುವ ಮನಸ್ಸು ಎಂಥದ್ದು ಎಂದು ನೋಡೋದು ಹೆಚ್ಚು ಸೂಕ್ತ ಅಂತ ಅನಿಸುತ್ತದೆ. ಲಂಕೇಶರ ಕಾದಂಬರಿಗಳಲ್ಲಿ ಬರುವ ಪಾತ್ರಗಳು ಆಯಾಕ್ಷಣದ ಬದುಕಿಗೆ ತೀವ್ರವಾಗಿ ಬದುಕುವ ಮತ್ತು ಪ್ರತಿಕ್ರಿಯಿಸುವ ಪತ್ರಗಳು. ‘ಬಿರುಕು’ವೀಣೆ ಬಸವರಾಜು ಕಳ್ಳನಾಗಿ, ಸುಳ್ಳನಾಗಿ ನಿಮಿಷಕ್ಕೊಂದು ಥರ ಮಾತಾಡುವ ಗೋಸುಂಬೆಯಂತೆ, ಬೊಗಳೆಯಾಗಿ ಕಾಣುತ್ತಲೇ ತನ್ನ ಸುಪ್ತ ಮನಸ್ಸಿನ ಪ್ರತಿಕ್ರಿಯೆಗಳನ್ನು ವ್ಯಕ್ತಮಾದುವಾಗ ಮಾತ್ರ ನಿಜವಾದ ಮನುಷ್ಯನಾಗುತ್ತಾನೆ, ಗತ್ತಿಯಾಗುತ್ತಾನೆ. ಆಯಾಕ್ಷಣದ ಅನಿಸಿಕೆಗಳು, ಪ್ರತಿಕ್ರಿಯೆಗಳು ಬರುವುದರಿಂದ ಒಂದೇ ಪಾತ್ರವು ಅನೇಕ ವೈರುಧ್ಯಗಳಲ್ಲಿ ಬದುಕುತ್ತಿರುವಂತೆ ಕಾಣಿಸುತ್ತವೆ, ಇದು ಬಹಳ ಮುಖ್ಯವಾಗಿ ಲಂಕೇಶರಲ್ಲಿ ಇರುವಂತಹ ಅನನ್ಯತೆಯ ಒಂದು ವಿಷಯ ಅಂತ ಹೇಳಿ ನಾವು ತಿಳಿದುಕೊಳ್ಳಬಹುದು. ಲಂಕೇಶ ಏನು ಮಾಡುತ್ತಾರೆ ಅಂದರೆ ಒಂದೇ ಪಾತ್ರದಲ್ಲಿ ಇರುತಕ್ಕಂತಹ ಗುಣಗಳು, ಅವಗುಣಗಳು, ಅವನ ಶಕ್ತಿ, ಅವನ weakness ಇವೆಲ್ಲವನ್ನೂ ಒಟ್ಟಿಗೆ ಹಿಡಿಯೋದಕ್ಕೆ ಶುರು ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಏನು ಅಂದರೆ ಪ್ರಾಯಶಃ ಆಯಾ ಕ್ಷಣಕ್ಕೆ, ಆಯಾ ಸಂದರ್ಭಕ್ಕೆ ಆ ಪಾತ್ರಗಳು ಬದುಕುತ್ತಾ ಇರುವುದನ್ನು ನೋಡುವಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾ ಇರುತ್ತವೆ ಎಂದು ತೋರಿಸಿಕೊಡುವುದಕ್ಕೆ ಈ ರೀತಿಯ ಪಾತ್ರಗಳನ್ನೂ ಸೃಷ್ಟಿಸುತ್ತಾ ಇರುತ್ತಾರೆ. ಈ ಮೂಲಕ ಪ್ರಾಯಶಃ ಅನಂತಮೂರ್ತಿಯವರಿಂದ ಲಂಕೇಶರು ಭಿನ್ನವಾಗಿಯೂ ಇದ್ದರ ಅಂತ ನೋಡಬಹುದು. ‘ಮುಸ್ಸಂಜೆ’ಯಾ ಸಾವಂತ್ರಿಗೆ ಅವ್ವ ರಂಗವ್ವ ತನ್ನ ಪ್ರಿಯಕರನೋಡನೆಯ ಒಡನಾಟವನ್ನು ಸಹಿಸದ, ತನ್ನ್ನ ತಮ್ಮನಿಗೆ ಮಾಡುವೆ ಮಾಡುವ ಕ್ರೂರಿಯಂತೆಯೂ ತನ್ನೆಲ್ಲ ಆಸೆಗೆ ಅಡ್ಡಬರುವಂತೆಯೂ ಕಾಣುತ್ತಾಳೆ. ಆದರೆ ಮಂಜ ಮತ್ತು ಸಾವಂತ್ರಿಯ ಪ್ರಣಯವನ್ನು ನೋಡಿದ ಜನ ಅವರ ವ್ಯಭಿಚಾರದಿಂದ ತಮ್ಮ ಧರ್ಮಕ್ಕೆ ಅವಹೇಳನವಾಯಿತೆಂದು ಕಿವಿ ಕೂದಲು ಕತ್ತರಿಸಿ ಮೆರವಣಿಗೆ ಮಾಡುತ್ತೇವೆಂದು ಕೂಗಾಡಿಕೊಂಡು ಬಂದಾಗ ರಂಗವಾ ಅವರನ್ನ ಮನೆಮುಂದೆ ಕರೆದುಕೊಂಡು ಬಂದು ಕೈಯ ಕುಡಗೋಲನ್ನು ಎತ್ತಿ ಕ್ರೂರ ಧ್ವನಿಯಲ್ಲಿ ಶಾಪ ಹಾಕಿ ಮಂಜ ಮಾತು ಸಾವಂತ್ರಿಯನ್ನು ಎಳೆಗರುವಿನಂತೆ ಹಿಡಿದು ಗಾಡಿಯಿಂದ ಕೆಳಕ್ಕೆ ಎಲ್ದುಕೊಂಡು ತನ್ನ ಸೊಂಟದಲ್ಲಿದ್ದ ತಾಳೀಸರವನ್ನು ಮಂಜನಿಗೆ ಕೊಟ್ಟು ಅದನು ಸಾವಂತ್ರಿಯ ಕೊರಳಿಗೆ ಕಟ್ಟುವಂತೆ ಹೇಳುತ್ತಾಳೆ. ಇದು ತೀರ ಅನಿರೀಕ್ಷಿತವಾದಂತಹ ತಿರುವು. ಆಮೇಲೆ ಹೇಳುತ್ತಾಳೆ ‘ಅದೇನಾಗುತ್ತೋ ನಾನು ನೋಡ್ಕೋತೀನಿ. ಸುಖವಾಗಿರು ನನ್ನ ಸುಡಗಾಡು ಮಗಳೆ’ ಲಂಕೇಶರ ಮೂರು ಕಾದಂಬರಿಗಳಲ್ಲೂ ಇಂಥ ಉದಾಹರಣೆಗಳನ್ನು ನಾವು ಕೊಡಬಹುದು. ಈ ರೀತಿಯ ಎರಡು ದ್ವಂದ್ವಗಳನ್ನು ಒಟ್ಟಿಗೆ ಸೇರಿಸಿ ನೋಡುವಂಥದ್ದು ಲಂಕೇಶರ ಅನನ್ಯವಾಗ ಗುಣ ಅಂತ ನಾನು ತಿಳಿದಿಕೊಂಡಿದ್ದೀನಿ. ಅದೇ ರೀತಿ ಉಡುಪನಿಗೆ, ಅ ಹಳ್ಳಿಯ ವಾತಾವರಣವನ್ನೆಲ್ಲ ನೋಡಿದ ಉಡುಪನಿಗೆ ಏನು ಅನ್ನಿಸುತ್ತದೆ ಅಂದರೆ ತಮ್ಮ ಎಲ್ಲಾ ದುರಂತಗಳು ಎಷ್ಟು ವಿಚಿತ್ರವಾದವು, ಎಷ್ಟರಮಟ್ಟಿಗೆ ಕ್ಷಣದ ಮನಸ್ಥಿಯ ಮೇಲೆ ನಿಂತಿರುತ್ತದೆ ಎಂದು, ಅದೇ ರೀತಿಯಲ್ಲಿ ಆ ಹಳ್ಳಿಯ ಜನರ ನಡವಳಿಕೆಗಳಿಗೆ ಪ್ರತಿಕ್ರಿಯಿಸಬೇಕಾದರೆ ಉಡುಪ ಒಂದು ರೀತಿಯ marxism ಅನ್ನು ಉಪಯೋಗಿಸುತ್ತಾನೆ. ಅದೂ ವಿಫಲವಾದಾಗ ಲೋಹಿಯಾವಾದವನ್ನು ತೆಗೆದುಕೊಂಡು ಬರುತ್ತಾನೆ. ಅದೂ ಸಾಕಾಗದೆ ಹೋದಾಗ ಗಾಂಧೀವಾದವನ್ನು ತೆಗೆದುಕೊಂಡು ಬರುತ್ತಾನೆ. ಆಯಾ ಕ್ಷಣಕ್ಕೆ ವಾದಗಳನ್ನು ಅಲ್ಲಿ ಅನ್ವಯಿಸಿಕೊಂಡು ನೋಡುವಂಥ ಗುಣವನ್ನು ಪಡೆದಿದ್ದಾನೆ. ಇದೇ ರೀತಿ ‘ಅಕ್ಕ’ ಕಾದಂಬರಿಯ ಬೈಗುಳ ಮತ್ತು ಪ್ರೀತಿ. ಕ್ಯಾತನ ಅಕ್ಕ ದೇವೀರಿಯ ಪ್ರೀತಿ ಕ್ಯಾತನಿಗೆ ಕಾಣಿಸಿಕೊಳ್ಳುವ ಬಗೆ ಹೀಗಿದೆ: “ಕೊಳಗೇರಿಯ ರೌಡಿ ಗ್ಯಾಂಗಿನ ಖಡವ, ನಾಗರ ಇವರನ್ನು ನಿತ್ಯ ಬಯ್ಯುತ್ತಿದ್ದಳು. ಬಯ್ದರೂ ಒಮ್ಮೊಮ್ಮೆ ಉಪ್ಪಿಟ್ಟು ಬೆಲ್ಲದ ಕಾಫಿಯನ್ನು ಕೊಡುತ್ತಿದ್ದಳು”. ಪ್ರೀತಿ – ದ್ವೇಷ ಇವೆರಡೂ ಒಬೋಬ್ಬರಲ್ಲೇ ಒಟ್ಟೊಟ್ಟಿಗೇ ಇರುವಂಥದ್ದು. ಆಯಾ ಕ್ಷಣದಲ್ಲಿ ವ್ಯಕ್ತಮಾಡುವಂಥದ್ದು ಎಂದು ಹೇಳುವುದು ಲಂಕೆಶದ ಗುಣ. ಒಂದು ಸಾರಿ ‘ದೇವೀರಿ ಅನ್ನೋ ಬಜಾರಿ ಬಲೇ ಹರಾಮಿ ಹೆಂಗಸು’ ಎನ್ನಿಸುವ ಕ್ಯಾತನಿಗೆ ಮತ್ತೊಂದು ಕ್ಷಣದಲ್ಲಿ ದೇವೀರಿ ತುಂಬಾ ಒಳ್ಳೆಯವಳು ಅಂತ ಅನ್ನಿಸುತ್ತದೆ. ಮತ್ತೊಂದು ಕ್ಷದಲ್ಲಿ “ಮನೆಗೆ ಹೋಗಕ್ಕೆ ಯಾಕೋ ಬ್ಯಾಸರ, ಮುಂಚೆ ಹೀಗಿರಲಿಲ್ಲ. ದೇವೀರಿ ಹೊತ್ತು ಮುಳುಗೋ ಅಷ್ಟರಾಗೆ ಬಂದು ಕಾಯ್ತ್ಹಿದ್ಲು. ನಾನು ಹೋದ ಕೂಡಲೇ ಬಂದು ಒಂಚೂರು ರೊಟ್ಟಿನಾದ್ರೂ ಕೊಡುತ್ತಿದ್ಲು. ಈಗ ನಾನು ಮನೆಗೆ ಹೋಗೋದು ನನ್ನ ಹಣೆಬರಹ. ಅದಕ್ಕಿಂತ ನೋವಿನ ವಿಚಾರ ಅಂದರೆ ಆಕೆ ಈಗ ಇಲ್ಲದಿದ್ದರೆ ಮನಸ್ಸಿಗೆ ಹಳಾರವಾಗಿರುತ್ತೆ. ಇದ್ಯಾಕೆ ಹಿಂಗಾಗಬೇಕು ಹೇಳ್ತೀರಾ”. ಹೀಗೆ ಆಯಾಕ್ಷಣಕ್ಕೆ ಪ್ರತಿಕ್ರಿಯಿಸುವ ಪಾತ್ರಗಳನ್ನೂ ನಾವು ನೋಡುತ್ತೇವೆ. ಕೆಟ್ಟವರೆಂದುಕೊಂದವರು ಒಂದು ಕ್ಷಣದಲ್ಲಿ ಒಳ್ಳೆಯವರಾಗಿಯೂ, ಒಳ್ಳೆಯವರು ಕೆತ್ತವರಾಗಿಯೂ ವರ್ತಿಸುವುದನ್ನು ಒಂದೇ ಪಾತ್ರದಲ್ಲಿ ನಾವು ಕಾಣಬಹುದು, ಈ ದ್ವಂದ್ವ ಒಂದೇ ಪಾತ್ರದಲ್ಲಿ ಹುಟ್ಟುತ್ತದೆ ಮತ್ತು ಅನಿರೀಕ್ಷಿತ ತಿರುವು ಪಡೆಯುತ್ತದೆ. ಏಕೆಂದರೆ ವೈವಿಧ್ಯಮಯ ಶಕ್ತಿಗಳ ತಾಕಲಾಟದ ರಂಗವಾದ ಈ ಬದುಕಿನಲ್ಲಿ ಅಸಂಖ್ಯ ಸಲ ಒಳ್ಳೆಯದನ್ನು ಮಾಡುವ ಮನುಷ್ಯರಿಂದಲೇ ಕೆಟ್ಟದಾಗಿದೆ. ಒಳ್ಳೆಯದನ್ನು ಮಾಡಬೇಕೆಂಬುದು, ಅದರಿಂದ ಆಗುವ ಕೆಡುಕನ್ನು ಗಮನಕ್ಕೆ ತೆಗೆದುಕೊಳ್ಳದಂತೆ ಮಾಡುತ್ತದೆ. ಮತ್ತೆ ಒಳ್ಳೆಯದು ಕೆಲಸಮಯ ಕೆಟ್ಟದರ ಹಾಗೆಯೇ ಇರುತದೆ ಎನ್ನುವುದು ಲಂಕೇಶರ ಅಭಿಪ್ರಾಯ. ಈ ಕ್ಷಣದ ಬದುಕನ್ನ ಹಿಡಿಯುವುದು ಲಂಕೇಶರ ಮುಖ್ಯ ಆಶಯವಾಗಿರುವುದರಿಂದ ಹಿಂದೆ ಆಗಿರುವುದು, ಮುಂದೆ ಅಗೂದೆಲ್ಲ ಈಗ ಆಗೋದರ ಮೇಲೆ ನಿಂತಿದೆ. past and future ಎರಡೂ ಈಗ presentನ ಮೇಲೆ ನಿಂತಿರುತ್ತದೆ. ಲಂಕೇಶರ ಕಾದಂಬರಿಗಳಲ್ಲಿ ಮೇಲು ನೋಟಕ್ಕೆ ಅಮುಖ್ಯ ಎಂದು ಕಂಡುಬರುವ ಘಟನೆಗಳೇ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುತ್ತವೆ. ಪ್ರತಿಯೊಬ್ಬ ಮನುಷ್ಯನೂ ಒಂದು ಬಗೆಯ ನೋಟಕ್ಕೆ ಹಾಸ್ಯಾಸ್ಪದವಾಗಿಯೂ, ವಿಚಿತ್ರವಾಗಿಯೂ, ಗಂಭೀರವಾಗಿಯೂ ಅಥವಾ ಎಲ್ಲವೂ ಒಟ್ಟಿಗೆಯೇ ಆಗಿ ಕಾನುತ್ತಾವೆ. ಇವೆಲ್ಲ ಒಟ್ಟಾಗಿಯೇ ಬದುಕಿನ ದುರಂತ ಕೂಡ ನಡೆದುಹೋಗುತ್ತದೆ. ಲಂಕೇಶರ ಕಾದಂಬರಿಯ ಪಾತ್ರಗಳು ವೈರುಧ್ಯಗಳ ಮೊತ್ತವೆಂದು ಕಂಡುಬಂದರೂ ಅದು ಸಹಜ ಎಂಬುದನ್ನು ಬಿಂಬಿಸುತ್ತವೆ. ಈ ವಿಷಯವನ್ನು ಹೇಳುವುದಕ್ಕಾಗಿಯೇ ‘ಬಿರುಕು’ವೀಣೆ ಕಥಾನಕದಲ್ಲಿ ನಡೆಯುವ ಘಟನೆಯನ್ನು ಹಿಗ್ಗಿಸಿ, ಅತಿಯಾಗಿ ತೆಗೆದುಕೊಂಡು ಹೋಗಿ ಈ ಸತ್ಯವನ್ನು ತೋರಿಸಲು ಲಂಕೇಶರು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ‘ಬಿರುಕು’ವಿನ ಬಸವರಾಜು ಯುದ್ದಕ್ಕೂ ಜಗಳಕ್ಕೂ ಇರುವ ವ್ಯತ್ಯಾಸವನ್ನು ಈ ರೀತಿ ಗುರುತಿಸುತ್ತಾನೆ. “ಭಾರತೀಯತೆ ಅಂದರೆ ಇದು. ನೀನು ಹೇಳುತ್ತಿರುವುದು ಯುದ್ದ. ನಾನು ಹೇಳುತ್ತಿರುವುದು ಜಗಳ. ಯುದ್ದು ಒಂದು ರೀತಿಯಲ್ಲಿ ಸಾರ್ವಜನಿಕರಲ್ಲಿ ಹಬ್ಬ. ಆ ಹಬ್ಬದಲ್ಲಿ ಸತ್ತ ಕುರಿಗಳು ಸ್ವರ್ಗಸೇರುತ್ತವಂತೆ. ಬದುಕಿ ಬಂದ ಕುರಿಗಳು ವೀರಾಗ್ರಣಿಗಳಾಗುತ್ತವಂತೆ. ಜಗಳ ಹಾಗಲ್ಲ, ಅದೊಂದು ಪುನರ್ಜನ್ಮದ ಥರ. ಎಷ್ಟು ಚೆನ್ನಾಗಿರುತ್ತೆ – ಈ ಜನ್ಮದಲ್ಲೇ ಪುನರ್ಜನ್ಮ ಆದರೆ, ಚೇತರಿಸಿಕೊಂಡು ಹೊಸ ಬದುಕನ್ನು ನೋಡೋದಾದರೆ” ಪ್ರಾಯಶಃ ಈ ರೀತಿ ಕ್ಷಣದ ಬದುಕನ್ನ ಹೊಸದಾಗಿ ಪುನರ್ಜನ್ಮದಂತೆ ಅಷ್ಟೊಂದು intense ಆಗಿ ಬದುಕೋದು ಕನ್ನಡ ಸಾಹಿತ್ಯದಲ್ಲಿ ಪ್ರಾಯಶಃ ಹರಿಹರನಲ್ಲಿ ಕಂಡುಬರುತ್ತದೆಂದು ಕಾಣುತ್ತದೆ. ಅದುಬಿಟ್ಟರೆ ಲಂಕೇಶರ ಬದುಕಿನಲ್ಲಿ ಈ ಕ್ಷಣದ ಬದುಕನ್ನ ಹಿಡಿಯುವುದು, ಬದುಕುವುದು ಬಹಳ ಮುಖ್ಯವಾಗಿ ಕಾಣಿಸುತ್ತದೆ. ಆದರೆ ಈ ಕ್ಷಣದ ಬದುಕನ್ನ ಹಿಡಿಯುವಾಗ ಡಿ.ಅರ್.ನಾಗರಾಜ್ ಅವರು ಹೇಳಿದ ಹಾಗೆ ಒಂದು ರೀತಿ ಅಚಾರಿತ್ರಿಕವಾಗಿಬಿಡುತ್ತಾರೇನೋ ಅನ್ನಿಸುತ್ತದೆ, ಲಂಕೇಶರು. ಲಂಕೇಶರ ಕಾದಂಬರಿಗಳಲ್ಲಿನ ಇನ್ನೊಂದು ಮುಖ್ಯಗುಣ ಅವರೆಲ ಕಾದಂಬರಿಗಳಲ್ಲಿ ಹರಡಿಕೊಂಡಿರುವಂಥದ್ದು. ಅವರ ಕಾದಂಬರಿಗಳಲ್ಲಿ ನನಸು ಎಲ್ಲಿ ಕೊನೆಯಾಗಿ ಕನಸು ಎಲ್ಲಿ ಶುರುವಾಗುತ್ತೆ ಅಂತ ಹೇಳೋದು ದೊಡ್ಡ ಸಮಸ್ಯೆಯಾಗುತ್ತೆ. ಬಸವರಾಜ ತನ್ನ ಹಳ್ಳಿಯ ಹಿನ್ನೆಲೆಯ ಬಗ್ಗೆ ತೀವ್ರತೆಯಿಂದ ಎಷ್ಟೇ ಹೇಳಿಕೊಳ್ಳುತ್ತಿದ್ದರು ಅದು ಅವನ ನಿಜವಾದ ಬದುಕಿನ ಹಳ್ಳಿಯಾಗುವುದಿಲ್ಲ. ಪಟ್ಟಣದ ಒಂದು ವ್ಯವಸ್ತೆಯಿಂದ ಮತ್ತು ಸಂದರ್ಭದಿಂದ ಅದು ಒಂದು ರೀತಿಯಲ್ಲಿ ಕಣಾದ ಹಳ್ಳಿಯಾಗಿ ಮಾರ್ಪಡುತ್ತದೆ. ಅದು ನನಸಾದ ಹಲ್ಲಿಯಾಗುವುದೇ ಇಲ್ಲ. ಪಟ್ಟಣದ ಕೃತಕ ಜೀವನವನ್ನು ಖಂಡಿಸುವಾಗಲೆಲ್ಲ ಇದೊಂದು ಕನಸಿನ ಜೀವನವಾಗಬಾರದಿತ್ತೆ ಅನ್ನಿಸುತ್ತದೆ.ಎಲ್ಲ ವಿಚಿತ್ರಗಳ ಮಧ್ಯೆಯೂ, ರಂಪಗಳ ಮಧ್ಯೆಯೂ ಕೃತಕತೆಗಳ ಮಧ್ಯೆಯೂ ಬೆಂಗಳೂರು ಬಸವರಾಜುವಿಗೆ ಆಕರ್ಷಣೀಯವಾಗಿಯೇ ಇದೆ ಎನಿಸುತ್ತದೆ. ಇನ್ನೊಂದು ಕ್ಷಣದಲ್ಲಿ ಮೂರು ದಿವಸ ರೌಡಿಗಳ ಜೊತೆಯಲ್ಲಿ ಕಳೆದ ಮೇಲೆ ಇದು ಭಾರತವಲ್ಲ, ನಮ್ಮ ವಾತಾವರಣವಲ್ಲ, ಎರವಲು ತಂದ ಖಾಯಿಲೆ ಎ೦ದು ದೃಢವಾಗಿ ನ೦ಬಹತ್ತಿದ ಎ೦ಬ ಅಭಿಪ್ರಾಯವೂ ಇದೆ. ಇದು ಶಿಕ್ಷಿಸುವ ಸ್ಥಳ, ಸೆರೆಮನೆ, ನ್ಯಾಯಾಲಯ ಎಂದು ಅನಿಸಿದ ತಕ್ಷಣವೇ ಇದು ಹಬ್ಬದ ಹಾಗಿದೆ, ಆಟದಂತಿದೆ ಅಂತ ಅ೦ದುಕೊಳ್ಳುತ್ತಾನೆ. ಈ ರೀತಿಯ ತಾಕಲಾಟದಲ್ಲಿ ಬಸವರಾಜುವಿಗೆ ಅನ್ನಿಸುವುದು ಬೆಳಕಿನಲ್ಲಿ ಓಡಬೇಕು, ಕತ್ತಲಿನಲ್ಲಿ ನಡೆಯಬೇಕು ಅಂತ ಜನಕ್ಕೆ ಅದು ಸರಿ ಎನ್ನಿಸುವುದಿಲ್ಲ. ಮಂದ ಬೆಳಕಿನಲ್ಲಿ ಎರಡನ್ನೂ ಮಿಶ್ರಗೊಳಿಸಿ ಸಾಗಬೇಕು ಎನ್ನಿಸುತ್ತದೆ. ಎಲ್ಲಿ ಕೆಟ್ಟ ಪ್ರಪಂಚ ಹೋಗಿ, ಕನಸಿನ, ಅಂದರೆ ಊಹಿಸಿದಂಥ ಪ್ರಪಂಚ ನಿಜವಾಗಲಿ ಎನ್ನುವ ಆಶಯ ಕಾಣುತ್ತದೆ. ‘ಮುಸ್ಸಂಜೆ’ಯಲ್ಲೂ ಸಹ ಈ ರೀತಿ ನನಸು ಕನಸಾಗುವ ಅನೇಕ ಘಟನೆಗಳಿವೆ. ಒಂದು ಉದಾಹರಣೆಯನ್ನು ಮಾತ್ರ ಇಲ್ಲಿ ಕೊಡುತ್ತೇನೆ. ಸಾವಂತ್ರಿ ತನ್ನ ಅವ್ವ ಶಾಸ್ತ್ರಿಯ ಜೊತೆಯಲ್ಲಿ ಮಲಗಿದ್ದನ್ನು ನೋಡುತ್ತಾಳೆ. ಅದೂ ರಾತ್ರಿ ಹೊತ್ತಲ್ಲಿ, ರಸಿಕತೆ ಅಂದರೆ ಹೀಗಿರಬೇಕು ಎಂದು ಅಂದುಕೊಳ್ಳುತ್ತಾಳೆ. ಆದರೆ ರಂಗವ್ವ ತನ್ನ ಮಗಳು , ಮಂಜನೊಡನೆ ಸರಸವಾಡುವುದನ್ನು ಕಂಡು ಅವಳನ್ನು ಹೊಡೆದಾಗ ಸಾವಂತ್ರಿ, “ನೀನಾದರೆ ಶಾಸ್ತ್ರಪ್ಪನ್ ತಾವ ಮಲಕ್ಕೊಬೈದು ನಾಚ್ಕೆಯಾಗಕ್ಕಿಲ್ವ ನಿಂಗೆ” ಅನ್ನುತ್ತಾಳೆ. ರಂಗವ್ವ ತನ್ನ ಕಿವಿಯನ್ನೇ ನಂಬದವಳಂತೆ ಅವಳನ್ನ ನೋಡಿ, “ಏನೇ ನೀ ಹೇಳ್ತಿರೋದು ಏನಾಗೈತೆ ನಿಂಗೆ?” ಎನ್ನುತ್ತಾಳೆ. ಅವ್ವನ ಪ್ರಾಮಾಣಿಕ ಆಶ್ಚರ್ಯ ನೋಡಿ ಸಾವಂತ್ರಿಗೆ ತಾನು ಕಂಡದ್ದು ನನಸೋ ಕನಸೋ ಎಂಬ ಸಂಶಯ ಬಳವಾಗುತ್ತೆ. ಈ ರೀತಿ ಕನಸು ಮತ್ತು ನನಸುಗಳ blend ಅನ್ನು ಲಂಕೇಶರು ತಮ್ಮ ಮೂರು ಕಾದಂಬರಿಗಳಲ್ಲೂಮಾಡಿಕೊಂಡು ಬರುತ್ತಾರೆ. ಇದೆ ರೀತಿ ‘ಅಕ್ಕ’ ಕಾದಂಬರಿಯಲ್ಲೂ ಸಹ. ಅಲ್ಲಿ ಅಕ್ಕ ಬಿಟ್ಟು ಹೊರಟುಹೋಗಿರುತ್ತಾಳೆ. ಮೂರು ದಿವಸವಾದರೂ ಬಂದಿರೋದಿಲ್ಲ. ಆಗ ಕ್ಯಾತ ಹೊಟ್ಟೆ ಹಸಿದುಕೊಂಡು ಮಲಗಿರುತ್ತಾನೆ. ಅವನಿಗೆ ಪೂರ್ಣ ನಿದ್ದೆಯೂ ಬ೦ದಿರುವುದಿಲ್ಲ, ಪೂರ್ಣ ಎಚ್ಚರವೂ ಇರೋದಿಲ್ಲ. ಆ ಒಂದು ಕ್ಷಣದಲ್ಲಿ ಅಕ್ಕ ದೇವೀರಿ ಬಂದು ಕಾಣಿಸಿಕೊಳುತ್ತಾಳೆ. ಕಾಣಿಸಿಕೊ೦ಡು ಕ್ಯಾತನಿಗೆ ಬ್ರೆಡ್ ಕೊಡುವುದಕ್ಕೆ ಬರುತ್ತಾಳೆ. ಕ್ಯಾತ ಅದನ್ನ ಬೇಡ ಎನ್ನುತ್ತಾನೆ. ಆಗ ಅವಳೆನ್ನುವ ಮಾತು ಬಹಳ ಮಾರ್ಮಿಕವಾಗಿದೆ. ಅಲ್ಲೀತನಕ ನರಸಿಂಹ ಮೇಸ್ತ್ರಿ ಅನ್ನೋನು ಬಹಳ ಕೆಟ್ಟವನು ಅಂತ ಚಿತ್ರಿತವಗಿದ್ದರೆ. ಈ ಕನಸಿನಲ್ಲಿ ನರಸಿಂಹ ಮೇಸ್ತ್ರಿ ಬಹಳ ಒಳ್ಳೆಯವನು ಅನ್ನುವ ಚಿತ್ರ ಬರುತ್ತದೆ. “ನರಸಿಂಹ ಮೇಸ್ತ್ರಿ ಈಗ ಬಹಳ ಒಳ್ಳೆಯವನಾಗಿಬಿಟ್ಟಿದ್ದಾನೆ. ಬಾಳ್ ಒಳ್ಳೆಯವನು ಗೊತ್ತಾ, ಕೈ ತುಂಬಾ ಹಣ ಕೊಡುತ್ತಾನೆ. ನನಗೆ ಒಂಚೂರೂ ತೊಂದ್ರೆ ಆಗದ ಹಾಗೆ ನೋಡಿಕೊಳ್ಳುತ್ತಾನೆ” ಅಂದಾಗ ಕ್ಯಾತ “ನನಗೆ ನಿನ್ನ ಮುಖ ನೋಡಿದ್ರೆ ಅಸ್ಯ ಆಗುತ್ತೆ ಹೊಂಟೋಗು ಇಲ್ಲಿಂದ” ಅಂತಾನೆ. ಹೀಗೆ ಕನಸಿಗೆ ಬಂದಾಗ, ಮತ್ತೆ ಅವಳು ಕೆನ್ನೆಗೆ ಹೊದಾದಾಗ ಎಚ್ಚರ ಆಗುತ್ತದೆ. ಎಚ್ಚರ ಆದಾಗ ಅವನಿಗೆ ಅನಿಸಿದ್ದು ಏನೆಂದರೆ ಗುಡಿಸಲು ಬಿಟ್ಟು ದೂರ ಹೊರಟುಹೋಗೋಣ ಅಂತ. ಹಾಗೆ ಹೋಗುತ್ತಿದ್ದಾಗ, ಅಂದರೆ ಈ ನನಸಲ್ಲಿ ನಡೆದುಕೊಂಡು ಹೋಗುತ್ತಾ ಇರುವಾಗ ದೇವೀರಿ ನನಗೆ ಬಂದು ಹೊಡೆದುಬಿಟ್ಟರೆ ಅಂತ ಒಂದು ಸಾರಿ ಅನಿಸಿದರೆ ಮತ್ತೊಂದು ಸಾರಿ ಇದು ಬರೀ ಕನಸಾದರೆ ಅಂತ ಅನ್ನಿಸುತ್ತದೆ. ಹೀಗೆ ಕನಸು – ನನಸು, ನನಸು-ಕನಸು ಅನ್ನೋದನ್ನ ಲಂಕೇಶರು ಸೃಷ್ಟಿಸುವುದು ಕೇವಲ ಕನಸೂ ಅಲ್ಲ, ನನಸೂ ಅಲ್ಲಇದರ ಮಧ್ಯೆ ಇರುವ ಸ್ಥಿತಿಯನ್ನು. ‘ಬಿರುಕು’ ಆಗಲೀ, ‘ಮುಸ್ಸಂಜೆಯ ಕಥಾ ಪ್ರಸಂಗ’ವಾಗಲೀ, ‘ಅಕ್ಕ’ ಆಗಲೀ ಬೆಳೆಯುವುದು ಈ twilight zoneನಲ್ಲಿ. ಈ ಎರಡರ ನಡುವೆ ಒಂದು ಪ್ರಪಂಚವನ್ನು ಸೃಷ್ಟಿಸುತ್ತಾರೆ. ಅದು ಮುಸ್ಸಂಜೆಯಾಗಬಹುದು, ಮುಸ್ಸಂಜೆ ಎನ್ನುವ ಪರಿಕಲ್ಪನೆ ಈ ಮೂರು ಕಾದಂಬರಿಗಳಲ್ಲೂ ಬರುತ್ತದೆ. ಮುಸ್ಸಂಜೆಯಲ್ಲಿ ಕನಸು ನನಸಿನ ಪ್ರವೇಶ ಮುಖ್ಯ ಆಗುತ್ತದೆ. ಈ ರೀತಿ ಓದುಗರ ಮನಸ್ಸಿನಲ್ಲಿ ಲಂಕೇಶರು ಹೊಸ space, ಒಂದು ಹೊಸ ಅವಕಾಶವನ್ನು, ಸೃಷ್ಟಿಸುತ್ತಾರೆ. ಲಂಕೇಶರ ಕಾದಂಬರಿಗಳಲ್ಲಿನ ಇನ್ನೊಂದು ಮುಖ್ಯ ಗುಣ ಅಂದರೆ ಈಗ ಹಾಲಿ ಇರುವ ಜೀವನಕ್ರಮ ಕ್ರುತಿಮವಾದದ್ದು, ಕೆಟ್ತಿರೋದ. ಈ ಕ್ರಮವನ್ನು ಪ್ರವೇಶಿಸಬೇಕಾದರೆ ಅಥವಾ ಹಾಯಬೇಕಾದರೆ ಕಾಡಿಗೆ ಅಂದರೆ ಕ್ರಮವಿಲ್ಲ ಸ್ಥಿತಿಗೆ, ನುಗ್ಗಬೇಕು, ಹೊಸ ಕ್ರಮಕ್ಕಾಗಿ ಕಾಯಬೇಕು ಎಂಬುದನ್ನು ಅವರು ತಮ್ಮ ಮೂರು ಕಾದಂಬರಿಗಳಲ್ಲಿ ನಿರ್ದೇಶಿಸುತ್ತಾರೆ. ‘ಬಿರುಕು’ವಿನ ಬಸವರಾಜು ಹಣ, ಪ್ರಭಾವ, ಸಾಂಸ್ಕೃತಿಕ ಚಟುವಟಿಕೆಗಳು, ಸಾಹಿತ್ಯ ಪ್ರಕಾಶನ, ಸಾಮಾಜಿಕ ಪ್ರತಿಷ್ಠೆ ಇದೆಲ್ಲವೂ ನಾನು ನುಗ್ಗಲಾಗದ ಕಾದೆಂದು ಅಂದುಕೊಳ್ಳುತ್ತಾನೆ. ಲೇಖಕರು ಈ ಕಾಡನ್ನು ಸೂಚಿಸಿ ಬಿಟ್ಟು ಬಿಡುತ್ತಾರೆ. ಎಲ್ಲಾ ಗೋಜಲು ಅನ್ನೋದನ್ನ ಬಿಚ್ಚಿಟ್ಟು ಯಾವ ರೀತಿ ಹೊಸ ಕ್ರಮ ಇರಬೇಕು ಅನ್ನೋದನ್ನ ಓದುಗನಿಗೆ ಬಿಟ್ಟುಬಿಡುತ್ತಾರೆ.ಒಂದು ರೀತಿಯಲ್ಲಿ open text ಆಗಿ ನಮಗೆ ಇವರ ಕಾದಂಬರಿಗಳು ಕಾಣುತ್ತವೆ. ಅಲ್ಲಿ ಓದುಗ ಬಹಳ ಕ್ರಿಯಾಶೀಲನಾಗಬೇಕಾಗುತ್ತದೆ. ಇಲ್ಲಿ ನಮಗೆ ಕಂಡುಬರುವುದು ಕಾದಂಬರಿಗಳಲ್ಲಿ ಅಥವಾ ಯಾವುದೇ ಸಾಹಿತ್ಯಪ್ರಕಾರದಲ್ಲಿ ಎರಡು ರೀತಿಯ ಪುಸ್ತಕಗಳಿರುತ್ತವೆ. ಒಂದು ನಮ್ಮನ್ನ ಸುಮ್ಮನೆಓಡಿಸಿಕೊಂಡು ಹೋಗಿಬಿಡುತ್ತದೆ. ನಾವು ಓದುಗರಾಗಿ ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ಮಾಡಬೇಕಾಗಿಲ್ಲ ಅಥವಾ ವ್ಯಕ್ತಪಡಿಸಬೇಕಾಗಿಲ್ಲ. ನಮ್ಮನ್ನ ಕೊನೇತನಕ ಕರೆದುಕೊ೦ಡು ಹೋಗಿ ಕೊನೆ ಮುಟ್ಟಿಸಿಬಿಡುತ್ತದೆ. ಸಾಮಾನ್ಯವಾಗಿ popular novels ಅಥವಾ popular literature ಈ ಥರ ಮಾಡುತ್ತವೆ. ಆದರೆ ಇನ್ನೊಂದು ರೀತಿಯ ಕಾದಂಬರಿಗಳು ಇರುತ್ತವೆ ಅಥವಾ ಇನ್ನೊಂದು ರೀತಿಯ ಬರಹಗಳು ಇರುತ್ತವೆ. ನಾವು ಓದುಗರಾಗಿ ಸಕ್ರಿಯವಾಗಿ ಅದರ ಜೊತೆ ಪಾಲ್ಗೊಳ್ಳಬೇಕಾಗುತ್ತದೆ. ನಮ್ಮ ಪಠ್ಯವನ್ನು ನಾವು ಪ್ರತೀ ಸಲ ಓದುತ್ತಾ ಇರುವಾಗಲೂ ನಾವು ನಮ್ಮ ಮನಸ್ಸಿನಲ್ಲಿ ಅದನ್ನ ಬಹಳ active ಆಗಿ, ಕ್ರಿಯಾತ್ಮಕವಾಗಿ ಅದರ ಜೊತೆ ಹೊಸದಾಗಿ ಆ text ಅನ್ನು Create ಮಾಡಿಕೊಳ್ಳುತ್ತಿರುತ್ತೀವಿ. ಲಂಕೇಶರ ಕಾದಂಬರಿಗಳು ನಮಗೆ ಈ ರೀತಿ text ಅನ್ನು Create ಮಾಡಿಕೊಳ್ಳುವುದಕ್ಕೆ ಬೇಕಾದಷ್ಟು ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಇಂತಹ ಒಂದು ಹೊಸ open Space ಅನ್ನು create ಮಾಡಿಕೊಡುತ್ತವೆ. ಇದರ ಜೊತೆಗೆ ಲೈಂಗಿಕತೆಯ ಹೊಸ ವ್ಯಾಖ್ಯಾನವನ್ನೇ ತಮ್ಮ ಕಾದಂಬರಿಗಳಲ್ಲಿ ಲಂಕೇಶ್ ಅವರು ಸೃಷ್ಟಿಸುತ್ತಾರೆ. ಲಂಕೇಶರ ಕಾದಂಬರಿಗಳಲ್ಲಿ ಪ್ರೀತಿ, ಪ್ರೇಮ, ಲೈಂಗಿಕತೆ ಸರಳವಾಗಿ ಸಿಗದ ವಸ್ತು ಪ್ರೊ. ರಂಗಯ್ಯನ ಮಗಳ ಪ್ರೇಮವಾಗಲೀ , ರೌಡಿ ಗ್ಯಾಂಗಿನಲ್ಲಿ ಬರುವ ಹೆಣ್ಣಾಗಲೀ ಮದುವೆಗೆ propose ಮಾಡಿದ ಹೆಣ್ಣಾಗಲೀ, ಬಸವರಾಜುವಿಗೆ ಯಾರನ್ನೂ ಸಹ ಹೃದಯತುಂಬಿ ಪ್ರೀತಿಸಲಾಗುವುದಿಲ್ಲ. ಪ್ರೊಫೆಸರ್ ಮಗಳು ಲೈಂಗಿಕ ಸಂಬಂಧಕ್ಕೆ ಸಿದ್ದಳಾದರೂ ಬಸವರಾಜುವಿಗೆ ಅದು ಸಾಧ್ಯವಾಗುವುದೇ ಇಲ್ಲ. ‘ಮುಸ್ಸಂಜೆ’ಯಲ್ಲಿ ಕಾಮ, ಪ್ರೀತಿ, ಪ್ರೇಮ ಎಲ್ಲವೂ ಗೋಜಲಾಗಿರುತ್ತದೆ. ‘ಅಕ್ಕ’ ಕಾದಂಬರಿಯಲ್ಲಿ ಪ್ರೀತಿ, ವಿಶ್ವಾಸ ಎಲ್ಲವೂ ಮಣ್ಣು ಪಾಲಾಗುತ್ತದೆ. ಸಿನೆಮಾ ಸೇರುವುದು, ಲೈಂಗಿಕ ಶೋಷಣೆಯಾಗುವುದು, ಅವಳ ತಂಗಿಯನ್ನು ಮುಂದೆ ಅದೇರೀತಿ ಲೈಂಗಿಕ ವ್ಯಾಪಾರಕ್ಕೆ ಸಿದ್ದಪಡಿಸೋದು, ದೇವೀರಿಯ ಪ್ರೇಮ, ಲೈಂಗಿಕತೆ ಎಲ್ಲವೂ ಅಮಾನುಷವಾಗಿ, ಕೃತ್ರಿಮವಾಗಿ, ವ್ಯಂಗ್ಯವಾಗಿ ಕಾಣಿಸಿಕೊಳ್ಳುತ್ತದೆ. ಪ್ರೇಮ ಎನ್ನುವುದು ಈ ಜಗತ್ತಿನಲ್ಲಿ ಮಹತ್ತರ ತ್ಯಾಗಗಳಿಗೆ ಕಾರಣವಾಗಿರುವಂತೆ ಹಾಸಾಸ್ಪದ ತಪ್ಪುಗಳಿಗೂ, ದಡ್ಡತನಗಳಿಗೂ ಕಾರಣವಾಗಿದೆ. ಈ ಲೋಕಕ್ಕೆ ಬೇಡವಾದ ಆದರ್ಶಗಳಿಗೂ ಕಾರಣವಾಗಿದೆ ಅನ್ನೋದು ಇವರ ಕಾದಂಬರಿಗಳನ್ನು ಓದಿದಾಗ ನಮಗೆ ಗೊತ್ತಾಗುತ್ತದೆ. ‘ಮುಸ್ಸಂಜೆಯ ಕಥಾ ಪ್ರಸಂಗ’ದ ಸಾವಂತ್ರಿಯ ಮದುವೆಯಾಗಿ ಅವಳು ತನ್ನ ತಾಯಿಯನ್ನು ಕೊನೆಯಲ್ಲಿ ನೋಡಿದಾಗ ಲಂಕೇಶರು ಇಲ್ಲಿ ಪ್ರೇಮ, ಕಾಮ ಮತ್ತು ಲೈಂಗಿಕತೆಗೆ ಒಂದು ಹೊಸ aesthetic sense ಅನ್ನು ಸೃಷ್ಟಿಮಾಡಿದ್ದಾರೆ ಅಂತ ನನಗೆ ಅನ್ನಿಸುತು. ಸಾವಂತ್ರಿ ಅವ್ವನನ್ನ ಟೀಕಿಸಲು ಆಗಲಿಲ್ಲ. ಅವಳ ಮುಖದ ಒಂದೊಂದು ಗೆರೆಯೂ, ಒಂದೊಂದು ಸುಂದರ ಕತೆಯನ್ನು ಅವಳಿಗೆ ಹೇಳುತ್ತಿದ್ದವು.ನೋವನ್ನು ಪಡೆಯದಾತ ಪ್ರೇಮಿಸಲಾರ, ನೋವು ನಮ್ಮ ಭಾವನೆಗಳನ್ನು ಕಾಲಿನ ಸಪ್ಪಳ, ಬೆದರಿಕೆಯಿಂದ ರಕ್ಷಿಸುತ್ತದೆ. ಪ್ರೇಮವನ್ನೂ ಕೂಡ ಈ ಅರ್ಥದಲ್ಲಲ್ಲದೆ, ಪ್ರೇಮ ಹೇಗೆ ಅಮರವಾಗಲು ಸಾಧ್ಯ? ಇದು ಲ೦ಕೇಶರು ಪ್ರೇಮದ ಬಗ್ಗೆ ಲೈಂಗಿಕತೆಯ ಬಗ್ಗೆ ಸೃಷ್ಟಿಸಿರುವ ಒಂದು ಹೊಸ aesthetics ಅಂತ ನಾನು ಅ೦ದುಕೊ೦ಡಿದ್ದೇನೆ. ಲಂಕೇಶರ ಕಾದಂಬರಿಗಳಲ್ಲಿ ರಾಜಕೇಎಯ, ಸಂಸ್ಕೃತಿ, ಲೈಂಗಿಕತೆ ಇತ್ಯಾದಿಗಳೆಲ್ಲ ಮೇಲುನೋಟಕ್ಕೆ ಬೇರೆಬೇರೆಯಾಗಿ ಕಂಡರೂ ಯಾವುದೋ ರಾಜಕೀಯ ಶಕ್ತಿಯೊಡನೆ ತಾಲೂಕು ಹಾಕಿಕೊಂಡು ಬದುಕುತ್ತಿರುವುದನ್ನು ಚಿತ್ರಿಸುತ್ತವೆ. ಅವೆಲ್ಲವೂ ಅಂತರಾಳದಲ್ಲಿ ಸಮಾಜದ ಬದುಕಿನೊಡನೆ ಸಂಬಂಧವಿಟ್ಟುಕೊಂಡಿವೆ ಎಂಬ ಶೋಧ ನಡೆಯುತ್ತದೆ, ಅಂತರ್ಗತವಾಗಿ ಹರಿದುಬರುತ್ತವೆ. ಇವೆಲ್ಲವುಗಳು ಇದುವರೆಗೆ ಸ್ಥಾಪಿತವಾದ ಸಿದ್ಧಮಾದರಿಗಳನ್ನು ಮುರಿದು ಹೊಸ ಮಾದರಿಯ ಕಡೆಗೆ ಹೋಗಬೇಕೆಂಬುದನ್ನು ಸೂಚಿಸುತ್ತವೆ. ಇವುಗಳು ಓದುಗ ತುಂಬಿಕೊಳ್ಳಬೇಕಾದ ಖಾಲಿ ಜಾಗಗಳಾಗುತ್ತವೆ. ಆದ್ದರಿಂದ ಈ ಕಾದಂಬರಿಗಳ ಯಾವೊಂದು ಘಟನೆಯೂ ಯಾನ್ತ್ರಿಕವಲ್ಲ. ನಮ್ಮ ಪ್ರೀತಿಗೆ, ಕುತೂಹಲಕ್ಕೆ ಯೋಗ್ಯವಾದ ಜನ ಭಾವನೆಗಳು ಒಟ್ಟಾಗಿ ಸೇರಿದಾಗ ತಂತ್ರ, ಕುತಂತ್ರ, ಕುಚೋದ್ಯಗಳೆಲ್ಲ ಕೇವಲ ಹೊಸ ಮುಸುಕುಗಳಾಗಿದ್ದು, ಬದುಕಿನ ತುಡಿತ ನಮಗೆ ಗೊತ್ತಾಗಿ ಖೊಟ್ಟಿ ಜಾಣತನದಿಂದ ಮುಕ್ತವಾಗಿ ಉಜ್ವಲವಾಗುತ್ತದೆ ಎನ್ನುವುದು ಲಂಕೇಶರ ನಂಬಿಕೆ ಅಂದುಕೊಂಡಿದ್ದೀನಿ. ಕೊನೆಯದಾಗಿ ಲಂಕೇಶ್ ಅವರು ಯಾವುದೇ ಒಂದು ಪರಿಕಲ್ಪನೆಯನ್ನು ಚಿತ್ರಿಸುವಲ್ಲಿ ಅದಕ್ಕೆ ನಾನಾಮುಖವನ್ನು ಜೋಡಿಸಿರುತ್ತಾರೆ. ಓದುಗರು ಇವರ ಕಾದಂಬರಿಗಳನ್ನು ಓದುವಾಗ ಕೇವಲ passive reader ಆಗಿ ಸ್ವೀಕರಿಸಲು ಸಾಧ್ಯವಿಲ್ಲ. ಹೊಸ ಹೊಸ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಅವಕಾಶಗಳನ್ನು ಈ ಕಾದಂಬರಿಕಾರ ಸೃಷ್ಟಿಸುತ್ತಾರೆ. ಇವರ ಕಾದಂಬರಿಯ ಓದುಗ ಸಪ್ಪೆಯಾಗಿರಲು ಸಾಧ್ಯವಿಲ್ಲ. ಕ್ರಿಯಾತ್ಮಕವಾಗಿ ಒಂದುವ ಕ್ರಿಯೆಯಲ್ಲಿ ಪಾಲುಗೊಂಡು ಪ್ರತಿಬಾರಿ ಓದುವಾಗಲೂ ತನ್ನ ಮನಸ್ಸಿನಲ್ಲೇ ಹೊಸದಾಗಿ ಬರೆದುಕೊಳುತ್ತಾ ಹೋಗಬೇಕಾಗುತ್ತದೆ. ಹೀಗೆ ಲಂಕೇಶರು ಈ ಮೇಲಿನ ಅಂಶಗಳನ್ನು ತಮ್ಮ ಮೂರು ಕಾದಂಬರಿಗಳನ್ನು ಬರೆಯುವಾಗಲೂ ಉಪಯೋಗಿಸಿಕೊಳ್ಳುವುದರಿ೦ದ ಈ ಮೂರು ಕಾದಂಬರಿಗಳು ಈ ಅಂಶಗಳ ಮೂರು ಅವತಾರಗಳಾಗಿ ಕಂಡುಬರುತ್ತವೆ. ಕಾದಂಬರಿಗಳನ್ನು ಪೌರಾಣಿಕ, ಚಾರಿತ್ರಿಕ ವಸ್ತುಗಳಿ೦ದ ಆಯ್ದುಕೊಳ್ಳದೆ, ಈಗಾಗಲೇ ಸ್ಥಾಪಿತವಾಗಿರುವ ವಸ್ತುವನ್ನು ತೆಗೆದುಕೊಳ್ಳದೆ ಹೊಸ ವ್ಯಾಖ್ಯಾನವನ್ನು ಕೊಡುವುದರಿ೦ದ ಬದುಕುವಿಗೆ ಮುಸ್ಸಂಜೆಯ ವ್ಯಾಖ್ಯಾನ ಕೊಡುವುದರಲ್ಲೇ, twilight Zone ಅನ್ನು ಹಿಡಿಯುವುದರಲ್ಲೇ ಅವರ ಶಕ್ತಿಯಿದೆ. ಮತ್ತೆ ಅದು ಅಚಾರಾತ್ರಿಕವಾದಾಗ ಬರಬಹುದಾದಂತಹ, ಕೆಲವು ಸಿಗಬಹುದಾದಂತಹ ಅನೇಕ ವಿಷಯಗಳು ತಪ್ಪಿಯೂ ಹೋಗುತ್ತವೆ ಅಂತ ಅನಿಸುತ್ತದೆ. ಇದಿಷ್ಟ ನನಗೆ ಲಂಕೇಶರ ಕಾದಂಬರಿಗಳ ಬಗ್ಗೆ ಅನಿಸಿದ್ದು.

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಪುಸ್ತಕ: ಪುಸ್ತಕ ಪ್ರಪಂಚ

ಪೀಠಿಕೆ:

ಶ್ರೀಕೃಷ್ಣ ಆಲನಹಳ್ಳಿಯ ಮೊದಲ ಕಾದಂಬರಿ ‘ಕಾಡು’ ಈಗಾಗಲೇ ಕನ್ನಡ ಕಾದಂಬರಿ ಸಂಸ್ಕೃತಿಯ ಪ್ರಜ್ಞಾತಲವನ್ನು ಮುಟ್ಟಿರುವ ಕೃತಿ. ಈ ಕೃತಿಯ ಪ್ರಮುಖ ಪಾತ್ರವಾದ ಪುಟ್ಟ ಬಾಲಕ ಕಿಟ್ಟಿಯ ಮುಗ್ದ ಮನಃಪಟಲದ ಮೇಲೆ ಬೆಳೆದವರ ಲೋಕ ಮೂಡಿಸುವ ಕ್ರೌರ್ಯದ ಬರೆಗಳು ಮಾಸುವುದೇ ಇಲ್ಲ. ಈ ಕಾದಂಬರಿಯಲ್ಲಿ ವಿವರಗಳೆಲ್ಲವೂ ಭೌತಿಕ(physical details) ವಲಯಕ್ಕೆ ಸೇರಿದ್ದು ಅವು ಓದುಗನ ಬೌದ್ದಿಕ(intellectual) ವಲಯಕ್ಕೆ ದಾಟುತ್ತಾ ಅರ್ಥವೈಶಾಲ್ಯತೆಯನ್ನು ಪಡೆದುಕೊಳ್ಳುತ್ತ್ತಾ ಹೋಗುತ್ತವೆ. ಈ ಕಾದಂಬರಿ ‘ನವ್ಯ’ದಿಂದ ಪಡೆದುಕೊಂಡದ್ದನ್ನು ದಕ್ಕಿಸಿಕೊಂಡಿದೆ.

ನಂತರ ಬರೆದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವೀಣೆ ಕಿಟ್ಟಿಯ ಮುಗ್ಧತೆಯ ಮುಂದುವರೆದ ರೂಪ. ‘ಗೆಂಡೆತಿಮ್ಮ’ನ ಮುಗ್ದತೆಯನ್ನು ಮರಂಕಿಯ ‘ನಾಗರೀಕ’ ಪ್ರಪಂಚ ಮತ್ತು ಅವನೇ ತನಗರಿವಿಲ್ಲದಂತೆ ಹರಡಿದ ನಾಗರೀಕತೆಯಿಂದ ಗೌವ್ವಳ್ಳಿಯ ಜನ ಅವನ ಮುಗ್ದತೆಯನ್ನು ಚೂರುಚೂರುಮ್ ಆದಿ ಹಾಕುತ್ತಾರೆ. ಈ ಕಾದಂಬರಿಯಲ್ಲಿ ನಿರೂಪಣೆ ವಿವರಗಳು ‘ಕಾಡು’ವೀಣೆ ಸಾಂಕೇತಿಕ ವಿವರಗಳಾಗದೆ ನೇರವಾಗಿ ಕಥೆಯನ್ನು ಹೇಳುವಂಥದ್ದು. ಇಲ್ಲಿ ಪ್ರಸಂಗ ಹೇಳುವವನದೇ ಒಂದು ‘ಪರಸಂಗ’ವಾಗಿ ಬಿಡುತ್ತದೆ. ಈ ದೃಷ್ಟಿಯಿಂದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವಿಗೆ ಅಭಿಮುಖವಾದ ಬರವಣಿಗೆ. ‘ಪರಸಂಗ ಹೇಳುವ’ ಧಾಟಿಗೆ(oral contradiction) ಹತ್ತಿರವಾಗಿದೆ.

‘ಪರಸಂಗ’ದ ನಾಗರೀಕ ಪ್ರಪಂಚ ಹಳ್ಳಿಯನ್ನು ಹಾಡು ಹೋಗುವ ವಸ್ತುವಾದರೆ ‘ಭುಜಂಗಯ್ಯನ ದಶಾವತಾರ’ದಲ್ಲಿ ಭುಜಂಗಯ್ಯ ಕೃಷಿ ಸಂಸ್ಕೃತಿಯಿಂದ ‘ವ್ಯಾಪಾರ – ಸಂಸ್ಕೃತಿ’ಗೆ ಪ್ರವೇಶ ಪಡೆಯುವುದರಿಂದ ಆತ ಆತನ ಊರು ಅನುಭವಿಸುವ ಅನುಭವ ಚಿತ್ರಿತವಾಗಿದೆ. ‘ಭುಜಂಗಯ್ಯ’ ಕಾದಂಬರಿ ರಚನೆಯಲ್ಲಿ ಮೌಖಿಕ ಸಂಪ್ರದಾಯದ ಅದರಲ್ಲೂ ‘ಹರಟೆ’ಯ ಪ್ರಭೇಧ ಎದ್ದು ಕಾಣುತ್ತದೆ.

ಭಾಗ ೧

ಮೌಖಿಕ ಸಂಪ್ರದಾಯವೂ ‘ಭುಜಂಗಯ್ಯ…..’ನೂ:

ಭಾಷೆಯ ಬಳಕೆಯಲ್ಲಿ ಬಿಗುವು, ಬಂಧುವೂ, ಸಾಂಕೇತಿಕತೆಯೂ ಶಿಲ್ಪವೂ ಇರುವುದು ನವ್ಯ ಕಾದಂಬರಿಯ ಪ್ರಮುಖ ಗುಣಗಳು. ಇವುಗಳನ್ನುಗಮನದಲ್ಲಿಟ್ಟುಕೊಂಡು ಓದಿದರೆ ‘ಭುಜಂಗಯ್ಯ…..” ವಿರುದ್ಧ ದಿಕ್ಕಿನಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ಬದಲಾಗಿ ಮೌಖಿಕ ಸಂಪ್ರದಾಯದ ಕೆಲವು ಮುಖ್ಯಲಕ್ಷಣಗಳು ಕಂಡುಬರುತ್ತವೆ. ಈ ಗುಣಲಕ್ಷಣಗಳನ್ನುಕಾದಂಬರಿಯಲ್ಲಿ ಹೀಗೆ ಗುರುತಿಸಬಹುದು.

೧.ಈ ಕಾದಂಬರಿಯ ಪ್ರಮುಖ ಪಾತ್ರ ಊರಿನ ಉಸಾಬರಿಯನ್ನೆಲ್ಲಾ ಭೂಮಿಯನ್ನು ಹೊತ್ತುಕೊಂಡ ಆದಿಶೇಷಶನಂತೆ ತನ್ನಮೇಲೆ ಹೊತ್ತುಕೊಳ್ಳುವ ಯಾವಾಗಲೂ ಕ್ರಿಯಾತ್ಮಕವಾಗೆ ಇರುವ, ಅದಕ್ಕಾಗಿ ಅನೇಕ ರೀತಿಯ ‘ಕಾಯಕ’ಗಳನ್ನೂ ಕೈಗೊಳ್ಳುವ ಭುಜಂಗಯ್ಯ ಕಾದಂಬರಿಯಲ್ಲಿ ಚಿತ್ರಿತವಾಗಿರುವುದು ಕೇವಲ ಭುಜಂಗಯ್ಯನ ಕ್ರಿಯೆಗಳೇ ಅಲ್ಲ. ಅದಕ್ಕೆ ಅವನು ತೋರಿಸುವ ಪ್ರತಿಕ್ರಿಯೆ ಮಾತ್ರವಲ್ಲ ಅವನ ಸುತ್ತ ಅವನು ತೊಡಗಿಸಿಕೊಂಡಿರುವ ಪಾತ್ರಗಳು ಅವನ ಬಗ್ಗೆ, ಅವನ ಕ್ರಿಯೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ಆದ್ದರಿಂದ ಕೇಂದ್ರ ಪಾತ್ರದ ಕ್ರಿಯೆಯಲ್ಲಿ ಸುತ್ತಲಿನ ಪಾತ್ರದ ಕ್ರಿಯೆಗಳೂ, ಅನಿಸ್ಕೆಗಲೂ ಕಾದಂಬರಿಯ ಕೇಂದ್ರ ಪ್ರಜ್ಞಾಬಿನ್ದುವಿಗೆ ಸುತ್ತಲಿನ್ದಲೂ ಅಪ್ಪಳಿಸುತ್ತಿರುತ್ತವೆ. ಒಂದೇ ವಿಷಯಕ್ಕೆ ಸಂಬಂಧಪಟ್ಟಂಥಹ ಅನೇಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಆದ್ದರಿಂದ ಘಟನೆಗಳ ಪುನರಾವರ್ತನೆ, ಅವುಗಳ ಬಗೆಗಿನ ಪ್ರತಿಕ್ರಿಯೆ ಬರುವುದರಿಂದ ಹೇಳಿದ್ದನ್ನೇ ಮತ್ತೆ ಹೇಳುತ್ತಿರುವಂತೆ ಭಾಸವಾಗುತ್ತದೆ. ಇದು ಮೌಖಿಕ ಸಂಪ್ರದಾಯದ ಹರಟೆಯ ವಿಧಾನವೂ ಹೌದ. ‘ಹರಟೆ’ಯಲ್ಲೂ ಒಂದು ಘಟನೆಯನ್ನು ನಾಕಾರು ಜನ ತಮ್ಮ ಅನಿಸಿಕೆಯ ಹಿಂದೆ ಅವುಗಳಿಗೆ ಅರ್ಥವನ್ನು ಕಟ್ಟುತ್ತಾ ಹೋಗುತ್ತಾರೆ ಎಂಬುದನ್ನು ಗಮನಿಸಬಹುದು. ಭುಜಂಗಯ್ಯ ಹೋಟಲಿಟ್ಟಿದ್ದಕ್ಕೆ ನಾನ ಜನ ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುವುದನ್ನು ಉದಾಹರಣಗೆ ನೋಡಬಹುದು. ಅಂತೆಯೇ ಮೊದಲ ಎರಡು ಅಧ್ಯಯನಗಳಲ್ಲಿ ಭುಜಂಗಯ್ಯ ಯಾವತ್ತೂ ಭೂಮಿಯ ಬಗ್ಗೆ ನಿಷ್ಠೆ ಕಳೆದುಕೊಳ್ಳದವನು, ಆಡಿನ ನಿಷ್ಠೆ ಪರಿಶ್ರಮವಾಗಿರುವುದನ್ನು ವಿವರಿಸುವಲ್ಲಿ, ಅದರಿಂದ ಅವನ ಮನಸ್ಸಿನಲ್ಲಿ ಉಂಟಾಗುವ ಮಾನಸಿಕ ತುಮುಲ, ಅದನ್ನು ಹೆಂಡತಿ ಗಮನಿಸುವ ರೀತಿ, ಅಕ್ಕಪಕ್ಕದ ಹೊಲದವರು ಗಮನಿಸುವ ಪ್ರತಿಕ್ರಿಯಿಸುವ ರೀತಿ ಮತ್ತು ಅದೇ ವಿಷಯವನ್ನು ಸಂಗ್ರಹಿಸಿ ಎರಡನೇ ಅಧ್ಯಾಯನದಲ್ಲಿ ಓದುಗರಿಗೆ ಮತ್ತೆ ಜ್ಞಾಪಿಸುವ ರೀತಿಯನ್ನು ಗಮನಿಸಬಹುದು. ಇದೂ ಮೌಖಿಕ ಸಂಪ್ರದಾಯದ ಒಂದು ಗುಣ. ಆದ್ದರಿಂದ ಕಾದಂಬರಿಯಲ್ಲಿ ಬಿಗುವನ್ನು ಕಾನುವವರಿಗೆ ಪುನರಾವರ್ತನೆ ಮತ್ತು ಅತಿಶಯಗುಣ(redundancy) ಕಾಣುತ್ತದೆ.

೨.ಯಾವುದಾದರೂ ಒಂದು ವಿಷಯವನ್ನು ಸ್ವಲ್ಪ ಹೇಳಿ ಅದರಿಂದ ವಿಮುಖವಾಗಿ ಮತ್ತೆ ಎಲ್ಲೂ ಆ ವಿಷಯಕ್ಕೆ ಬರುವುದನ್ನು ಕಾಣಬಹುದು. ಇದನ್ನು ಕಾದಂಬರಿಯಲ್ಲಿ ಅಲ್ಲಲ್ಲೇ ಗಮನಿಸಬಹುದು. ಉದಾಹರಣಗೆ, ಮೂರನೇ ಅಧ್ಯಾಯದ ಎರಡನೇ ಪ್ಯಾರಾದಲ್ಲಿ ಮೈಸೂರಿನ ಸಾಮಾನುಗಳನ್ನು ತರುವ ವಿಷಯ ಪ್ರಾರಂಭವಾದರೆ, ಅದು ಅಲ್ಲಿ ನಿಂತು, ಮತ್ತೆ ಹೋಟೆಲ್ ಕಟ್ಟಡದ ಕಡೆಗೆ ತಿರುಗಿ, ಪೀಪದ ನೀರನ್ನು ತುಂಬಿ ತರಲು ಮನೆಗೆ ಹೋಗಿ ಅಲ್ಲಿ ಅವನ ಹೆಂಡತಿ-ಮಾವನ ಪ್ರತಿಕ್ರಿಯೆಗಳಿಗೆ ತಲೆಕೊಟ್ಟು-ಭುಜಂಗಯ್ಯ ಬಾಲ್ಯದಲ್ಲಿ ಊರು ಬಿಟ್ಟು ಹೋಗಿ ಅನುಭವಿಸಿದ್ದನು ಹೇಳಿ, ಹೋಟಲಿಗೆ ವಾಪಸ್ಸು ಬರುವುದನ್ನು ಹೇಳಿ, ನಂತರ ಭುಜಂಗಯ್ಯನೂ ಕೋಡಂಗಿ ಅಜ್ಜಪ್ಪನೂ ಮೈಸೂರಿಗೆ ಹೋಗುತ್ತಾರೆ, ನಂತರ ನಾಲ್ಕನೇ ಅಧ್ಯಾಯದ ಮೂರನೇ ಪ್ಯಾರದಲ್ಲಿ ‘ಒಂದು ವಾರಕ್ಕೆ ಬೇಕಾದ ಸಾಮಾನುಗಳನ್ನು ಮೈಸೂರಿನಿಂದ ತಂದಿದ್ದು ಸಣ್ಣ ಪುಟ್ಟ ಸಾಮಾನುಗಳನ್ನು ಕ್ಯಾತನಹಳ್ಳಿಯ ಕಾಕನ ಅಂಗಡಿಯಿಂದ ತರಿಸಿಕೊಂಡರಾಯಿತೆಂದು ಕಾರ್ಯೋನ್ಮುಖನಾದ ‘ ಎಂದು ಹೇಳುವುದು., ಈ ರೀತಿಯ ವಿವರಗಳನ್ನು ಹೆಚ್ಚಾಗಿ ಮಾತನಾಡುವ ಸಂಪ್ರದಾಯದಲ್ಲಿ ಕಾಣಬಹುದು.

೩.ಒಂದು ಕ್ರಿಯೆ ಮಾಡಲು ಹೊಳೆದಿದ್ದು ನನ್ತ ಅದಕ್ಕೆ ಬೇಕಾದ ವಿವರಣೆಗಳನ್ನು ಜೋಡಿಸುವುದನ್ನೂಆ ಹೇಳಿಕೆಗೆ ಸಂಜಾಯಿಸಿದಂತೆ ಬರುವದನ್ನೂ ಈ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣಬಹುದು. “ಸುಶೀಲಳು ಭುಜಂಗಯ್ಯನಿಗೆ ಕಾಗದ ಬರೆದು ಡ್ರೈವರ್ ವಿಕ್ಟರ್ ನ ಹತ್ತಿರ ಕೊಟ್ಟು ಕಳುಹಿದಳು “ ಎಂದು ಹೇಳಿ ನಂತರ ‘ಅವಳಿಗೆ ಓದಲು ಬರೆಯಲು ಬರುತ್ತಿತ್ತು” ಎಂದು, ಆದರೆ ಅವಳು ಇನ್ನೊಬ್ಬರಿಗೆ ಬರೆದ ಮೊದಲ ಪತ್ರವೆಂದೂ ಹೇಳುವುದು(ಪುಟ ೨೪೬)

ಭುಜಂಗಯ್ಯನಿಗೆ ‘ಬರೇ ಗೆಜ್ಜಲು ಭೂಮಿ ಇತ್ತು’ ಎಂದು ಹೇಳಿ (ಪುಟ ೫) ನಂತರ ಮತ್ತೆ ಜ್ಞಾಪಿಸಿಕೊಂಡಂತೆ ಅವನಿಗೆ ‘ಊರ ಕೆರೆ ಬಯಲಲ್ಲಿ ಅರ್ಧ ಎಕರೆ ಗದ್ದೆ ಇದೆ’(ಪುಟ ೭) ಎಂದು ಹೇಳುವುದು , ಇತ್ಯಾದಿ ‘after thought’ಗಳನ್ನು ಸೇರಿಸಿಕೊಳ್ಳುವುದನ್ನು ಕಾದಂಬರಿಯಲ್ಲಿ ಕಾಣಬಹುದು.

೪.ಅನೌಪಚಾರಿಕತೆ ಮೌಖಿಕ ಸಂಪ್ರದಾಯದ ಮತ್ತೊಂದು ಗುಣ. ಅದರಲ್ಲೂ ಹರಟೆಯಲ್ಲಿ ಇದು ಎದ್ದು ಕಾಣುವಂಥದ್ದು. ಭುಜಂಗಯ್ಯನ ಸ್ಥಾನಮಾನಗಳನ್ನು ಹೆಚ್ಚಿಸುವ, ಊರವರ ಕಣ್ಣಲ್ಲಿ ಗಣ್ಯನಾಗುವ ಸಂದರ್ಭವನ್ನು ಸೃಷ್ಟಿಸಿಕೊಳ್ಳುವಲ್ಲಿ ದೇವನೂರಿನ ಜಗದ್ಗುರುಗಳು ಅವನ ಮನೆಗೆ ಬಂದು ನಡೆಸುವ ಧಾರ್ಮಿಕ ಕ್ರಿಯೆಯ ವಿವರಣೆಗಿಂತಲೂ, ಗೌರವ, ಶ್ರದ್ದೆ ತೋರಿಸುವಂತಹ ಸಂದರ್ಭದಲ್ಲೂ ಅದಕ್ಕೆ ಹೆಚ್ಚು ಒಟ್ಟು ಕೊಡದೆ, ಅದಾದ ನಂತರ ಪುನ್ದ್ರಿ ಅದರ ಬಗ್ಗೆ ಹರಟುವುದನ್ನು ವಿವರವಾಗಿ ವರ್ಣಿಸಿರುವುದು. ಗುರುಗಳು ಅಮೇಧ್ಯ ತುಳಿದಿದ್ದು, ಅಂತೆಯೇ ಊರಿನ ‘ಬಸವಿ’ ಗುರುಗಳಿಗೆ ನಮಸ್ಕಾರ ಮಾಡುವಾಗ ಕಂಡ ದಪ್ಪ ಮೊಲೆಗಳ ವರ್ಣನೆ ಇತ್ಯಾದಿ ವಿವರಿಸಿ ಅನೌಪಚಾರಿಕ ಮಾತುಗಳಿಗೆ, ಹಗುರವಾದ ವಿಚಾರಕ್ಕೆ ಒತ್ತುಕೊಟ್ಟಿರುವುದು. ಕಾದಂಬರಿಯಲ್ಲಿ ಬಳಸುವ ಭಾಷೆಯಲ್ಲೂ ಈ ಗುಣಗಳನ್ನು ಕಾಣಬಹುದು.

೫.ಉಪಕಥೆಗಳನ್ನು ಸೇರಿಸುವುದು: ಭುಜಂಗಯ್ಯ ಮೊದಲ ಬಾರಿಗೆ ಗಣ್ಯರೊಡನೆ ಸೇರಿ ನ್ಯಾಯ ಹೇಳಿ ಸಾಯಿ ಅನ್ನಿಸಿಕೊಂಡ ಸಂದರ್ಭದಲ್ಲಿ(ಅಧ್ಯಾಯ ೧೩) ಬರುವ ಚಾಮನಾಯಕನ ಹೆಂದರಿ ಕರಿಸಿದ್ದಿ ಮೈದುನನ್ನು ಮಡಗಿಕೊಂಡಿರುವುದರ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ಅದಕ್ಕೆ ಉಪಕಥೆ ಎಂಬಂತೆ ಪುನ್ದ್ರಿ ತನ್ನ ಗೆಳೆಯ ದೊಡ್ದತಮ್ಮನ ಜೊತೆ ಎತ್ತುಗಳ ಚಾಟಿವ್ಯಾಪಾರಕ್ಕೆ ಹೋಗಿದ್ದಾಗ ಅವನು ಒಂದು ಹೆಣ್ಣಿನ ಜೊತೆ ಸಿಕ್ಕಿಬಿದ್ದು ಪಟ್ಟ ಪಾಡಿನ ಕಥೆಯನ್ನು ಅದಕ್ಕೆ ಉಪಕಥೆಯಾಗಿ ಹೇಳುತ್ತಾನೆ.

೬.ಸಾಂಕೇತಿಕತೆ:ಸಾಂಕೇತಿಕತೆ ಸಾಮಾನ್ಯವಾಗಿ ಶಿಷ್ಟ ಸಾಹಿತ್ಯದಲ್ಲಿ ಉರುವುಅ ಒಂದು ಪ್ರಮುಖ ಗುಣ. ಶಿಷ್ಟ ಸಾಹಿತ್ಯದಲ್ಲಿ ಅದು ಕಥೆ ಹೇಳುವ ತಂತ್ರವಾಗಿ ಬರುತ್ತದೆ. ಮೌಖಿಕ ಸಂಪ್ರದಾಯದಲ್ಲಿ ಒಂದು ಕಥಾನಕ(discourse) ಮುಗಿದ ಮೇಲೆ ಅದು ಇನ್ನೊಂದಕ್ಕೆ ಸಂಕೇತವಾಗಿ ನಿಲ್ಲಬಹುದು. ಆದರೆ ಮೌಖಿಕ ಸಂಪ್ರದಾಯದಲ್ಲಿ ಸಾಂಕೇತಿಕತೆ ಕಡಿಮೆ.

“ಭುಜಂಗಯ್ಯ…..” ಕಾದಂಬರಿಯಲ್ಲಿಯೂ ಸಾಂಕೇತಿಕತೆ ಬರುವುದು ಬಹಳ ಕಡಿಮೆ. ಭುಜಂಗಯ್ಯ ತನ್ನ ಹೋಟೆಲಿನ ಪಕ್ಕದಲ್ಲಿ ಬಂದಿದ್ದ ಹಾವಿನ ವಿವರ ಮತ್ತು ಅಲ್ಲಿಗೆ ಮೊದಲ ಬಾರಿಗೆ ಸುಶೀಲ ಬರುವುದು, ಸಾಂಕೇತಿಕವಾಗುತ್ತದೇನೋ ಎಂಬಷ್ಟು ಹತ್ತಿರ ಬರುತ್ತದೆ. ಮುಂದೆ ಭುಜಂಗಯ್ಯನಿಗೂ ಸುಶೀಲಳಿಗೂ ಲೈಂಗಿಕ ಸಂಬಂಧ ಬೆಳೆಯುತ್ತದಾದರೂ, ಹಾವು ಅಲ್ಲಿ ಸಾಂಕೆತಿಕವಾಗದೆ, ಭುಜನ್ಗಯ್ಯನು ಹಾವಿನ ಜೊತೆ ಸರಸವಾಡುವ, ಹಾವು ಕಚ್ಚಿದರೆ ಔಷದ ಕೊಡುವವನು ಎಂಬುದರ ಕಡೆಗೂ ಒಟ್ಟು ಬೀಳುತ್ತದೆ. ಆ ವಿವರ ಇಲ್ಲದೆಯೂ ಅವನು ಸುಶೀಲಳನ್ನು ಪ್ರೀತಿಸಬಹುದಿತ್ತು ಎಂಬುದು ಮುಂದಿನ ಕಾದಂಬರಿಯ ವಿವರಣೆಯಲ್ಲಿ ದೊರೆಯುತ್ತದೆ.

೭.ಮೌಖಿಕ ಸಂಪ್ರದಾಯದ ಭಾಷೆಯಲ್ಲಿ ವಾಕ್ಯರಚನೆ ಶಿಷ್ಟದಲ್ಲಿನಂತೆ ಉದ್ದವೂ ಸಂಕೀರ್ಣವೂ ಆಗಿರುವುದಿಲ್ಲ. ನೇರವೂ ಸರಳವೂ ಆದ ವಾಕ್ಯಗಳು ಇರುವಂತೆ ‘ಭುಜಂಗಯ್ಯ…’ ಕಾದಂಬರಿಯಲ್ಲೂ ಇವೆ.

ಇಲ್ಲಿ ಹೇಳಿದ ಈ ಗುಣಗಳಲ್ಲಿ ಒಂದನ್ನೊಂದನ್ನು ಶಿಷ್ಟ ಸಂಪ್ರದಾಯದ ಬರಹಗಳಲ್ಲಿ ಕಂಡರೂ ಅವುಗಳು ಒಂದು ಕೃತಿಯಲ್ಲಿ ಗಮನಿಸಿದಾಗ ಮುಖ್ಯ ಭಾಗಗಳಾಗಿ ಎದ್ದು ಕಾಣುವಂತೆ ಬಂದಿರುವುದಿಲ್ಲ. ಈ ಗುಣಗಳು ‘ಭುಜಂಗಯ್ಯ……’ ಕಾದಂಬರಿಯಲ್ಲಿ ಕಣ್ಣಿಗೆ ಢಾಳಾಗಿ ಗೋಚರಿಸುತ್ತವೆ ಎಂಬುದನ್ನು ಗಮನಿಸಬಹುದು.

ಭಾಗ ೨

‘ಭುಜಂಗಯ್ಯ…..’ ಕಾದಂಬರಿಯ ಮುಖ್ಯ ಪರಿಕಲ್ಪನೆ:

ಈ ಕಾದಂಬರಿಯ ಉದ್ದಕ್ಕೂ ಹಾಸುಹೊಕ್ಕಾಗಿ ಹರಡಿಕೊಂಡಿರುವ ಪರಿಕಲ್ಪನೆ ‘ಒಳಗು-ಹೊರಗು’ ಎಂಬುದು. ಈ ಪರಿಕಲ್ಪನೆ ಕಾದಂಬರಿಯಲ್ಲಿ ನಾನಾ ಸ್ತರಗಳಲ್ಲಿ ಕೆಲಸಮಾಡುತ್ತದೆ.

೧.ಕುಗ್ರಾಮವಾದ ಮಾದಲ್ಲಿಯ ಎಲ್ಲಾ ಜಾತಿಯ ಜನರೂ ಕೃಷಿ ಸಂಪ್ರದಾಯಕ್ಕೆ ಸೇರಿದ್ದವರು. ಅದು ಅವರಿಗೆ ತಲೆತಲಾಂತರದಿಂದ ಬಂದದ್ದು. ಅದರಿಂದ ಅವರು ಹೊರಬರುವ ಸಾಧ್ಯತೆಗಳೇ ಇಲ್ಲ. ಸಂಪ್ರದಾಯಬದ್ಧವಾದ ಬೇಸಾಯವನ್ನೇ ಅವಲಂಬಿಸುತ್ತಿರುವ ಜನ. ಅದು ಅವರ ನರನಾಡಿಯಾನ್ನು ಮನಸ್ಸನ್ನೂ ಹೊಕ್ಕಿರುವಂಥದ್ದು. ಭುಜಂಗಯ್ಯನೂ ಇಂತದೆ ಸಂಪ್ರದಾಯಕ್ಕೆ ಬದ್ದನಾದವನು. ಆದರೆ ಊರಿನವರನ್ನೆಲ್ಲಾ ಸೇರಿಸಿಕೊಂಡು ಮೋರಿ ಬಾರಿ ಅವನು ಓಡಾಡಿ ಮಾಡಿದ ‘ಪರ’ಕ್ಕೂ ಮಳೆರಾಯ ಒಗೊಟ್ಟಿರದಿದ್ದರಿಂದಮೊದಲ ಬಾರಿಗೆ ಅವನ ಮನಸ್ಸಿನಲ್ಲಿ ಜಮೀನಿನ ಜೊತೆಗೆ ಇನ್ನೇನಾದರೂ ವೃತ್ತಿಯನ್ನು ಅವಲಂಬಿಸಬೇಕೆಂಬುದು ಹೊಕ್ಕು, ಗುಂಗಿಹುಳದಂತೆ ಕೊರೆಯುತ್ತಿರುತ್ತದೆ. ಅದು ಆಕಾರ ತಳೆದದ್ದು ಯಾರೂ ಪ್ರಯಾಣಿಕನೊಬ್ಬ “ಈ ಊರಿನಲ್ಲಿ ಕುಡಿಯುವ ನೀರಿಗೂ ಬರ. ಒಂದು ಹೋಟೆಲಾದರು ಇದ್ದಿದ್ದರೆ” ಎಂದು ಹೇಳಿದ ಗಳಿಗೆಯಿಂದ.,

ತನ್ನೊಳಗೆ ಬಂದು ಕುಳಿತುಕೊಂಡ ಈ ವಿಚಾರವನ್ನು ಮೊದಲು ತನ್ನ ಗೆಳೆಯರೊಡನೆ ಹೊರಹಾಕಿದ ತಕ್ಷಣ ಬಂದ ಪ್ರತಿಕ್ರಿಯೆ ‘ಎಂಜಲು ಲೋಟ ತೊಳೆಯುವುದು ಶಿವಾಚಾರರರಾದ ನಮಗೆ ಅಲ್ಲ’ ಈ ಹೊಸ ಕಾಯಕ ಬೇಡ, ಅದೂ ಸ್ವಲ್ಪ ಆಸ್ತಿವಂತನೇ ಆಗಿರುವ ಭುಜಂಗಯ್ಯನ ಬಾಯಲ್ಲಿ ಈ ಮಾತು ಬಂದಿರುವುದು ಸರಿಯಲ್ಲ ‘ಉದ ನಾವು ಮಾಡುವ ಕೆಲಸವಲ್ಲ’ ಎಂಬ ಪ್ರತಿಕ್ರಿಯೆ.

ಆದರೂ ಇದನ್ನು ಮಾಡಿಯೇ ತೀರುತ್ತೇನೆಂದು ಪಟ್ಟುಹಿಡಿದು ಕೂತಾಗ ಭುಜಂಗಯ್ಯನ ಹೆಂಡತಿ, ತಾಯಿಯರೂ ಅದನ್ನು ವಿರೋಧಿಸುತ್ತಾರೆ. ಅವನ ಹೆಂಡತಿ ಪಾರ್ವತಿಯಂತೂ ತನ್ನ ತೌರಿನಿಂದ ತಂದೆಯನ್ನು ಕರೆಸಿ ಭುಜಂಗಯ್ಯನಿಗೆ ಬುದ್ದಿವಾದ ಹೇಳಿಸುತ್ತಾಳೆ. ಆತ ಪಾಪ-ಪುಣ್ಯ ಬೆರೆಸಿ ಎಚ್ಚರಿಕೆಯ ಉಪದೇಶಾಮೃತವನ್ನೇ ಬಿಗಿಯುತ್ತಾನೆ. ಭುಜಂಗಯ್ಯ ಚಿಕ್ಕವರಾಗಿದ್ದಾಗ ಊರುಬಿಟ್ಟು ‘ಪತ್ರಾವಳಿ’ ಎತ್ತುವ ಕೆಲಸಕ್ಕೆ ಬಿದ್ದಿದ್ದನ್ನು ಜ್ಞಾಪಿಸಿ ಹಂಗಿಸುತ್ತಾನೆ. ಇದರ ಪರಿಣಾಮವಾಗಿ ಭುಜಂಗಯ್ಯನಿಗೆ ಸೇರಿದ ಕುಟುಂಬದ ವ್ಯಕ್ತಿಗಳಿಗೇ ಹೊರಗಿನವನಾಗುತ್ತಾನೆ. ಮನೆಯಲ್ಲಿ ಮೌನಯುದ್ಧವೇ ಪ್ರಾರಂಭವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಭುಜಂಗಯ್ಯನು ಹೋಟೆಲ್ಲಿನ ಕಡೆಗೆ ಹೆಚ್ಚು ಗಮನ ನೀಡಿ ಬೇಸಾಯವನ್ನು ಮರೆತೇಬಿಡುತ್ತಾನೆ ಎಂಬುದು.

ಊರಿನ ಕೆಲ ಜನರಾದರೂ ಭುಜಂಗಯ್ಯನ ಅಭ್ಯುದಯವನ್ನು ಕಂಡು ಮಾತನಾಡಿದರೂ ಹೋಟೆಲ್ಲಿಗೂ ತನಗೂ ಏನೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದುಬಿಡುತ್ತಾರೆ. ಭುಜಂಗಯ್ಯ ಹೋಟೆಲ್ಲಿನಿಂದ ತಂದ ತಿಂಡಿಯನ್ನು ಮಕ್ಕಳಿಗೆ ಕೊಡಲು ಬಿಡುವುದಿಲ್ಲ.

ಭುಜಂಗಯ್ಯ ಮತ್ತು ಹೆಂಡತಿ ಪಾರ್ವತಿ ಒಂದಾಗುವುದು ಮತ್ತೆ ಮಳೆ ಬಂದು ಭುಜಂಗಯ್ಯ ಸ್ವಲ್ಪ ದಿನ ಬೇಸಾಯಕ್ಕೆ ಗಮನಕೊಟ್ಟಾಗಲೇ ಮತ್ತು ಆಟ ಹೋಟೆಲ್ ಆದಾಯವನ್ನು ಅವಳ ಕೈಲಿ ಇಟ್ಟಾಗ.

ಭುಜಂಗಯ್ಯ ಹೋಟೆಲ್ ಇತ್ತ ಕ್ಷಣದಿಂದ ತನ್ನ ಮಾತಿನ ಶಾಲಿಯನ್ನೇ ಬದಲಾಯಿಸಿಕೊಳ್ಳುತ್ತಾನೆ. ಹೊಸ ನುಡಿಗಟ್ಟುಗಳು ವ್ಯಾಪಾರಕ್ಕಾಗಿ ಬೇಕಾಗುವ ಭಾಷೆಯನ್ನೂ ರೂಢಿಸಿಕೊಳ್ಳುತ್ತಾನೆ. ವೇಷಭೂಷಣಗಳಲ್ಲಿ ಬದಲಾಗುತ್ತಾನೆ. ತನ್ನ ಜಾತಿಯ ಜನರಿಗೆ ಹತ್ತಿರವಾಗದಿದ್ದರೂ ಕೆಲವರಿಗಂತೂ ಬಹಳ ಹತ್ತಿರದವನಾಗುತ್ತಾನೆ. ಆದರೆ ಭೂಮಿಯಿಂದ ಹಂತ ಹಂತವಾಗಿ ಹೊರಗಿನವನಾಗುತ್ತಾನೆ. ಅವನಿಗೆ ಸ್ವಲ್ಪ ಆದಾಯ ಬರತೊಡಗಿದಾಗ ಹೊಸ ಹೊಸ ಆಕಾಂಕ್ಷೆಗಳು ತೆರೆದುಕೊಳ್ಳುವ, ತುಂಬಿಕೊಳ್ಳುವ ಮಧುರವಾದ ದಿನಗಳಾಗತೊಡಗುತ್ತವೆ. ಕಂಡದ್ದೆಲ್ಲ ಸುಂದರವಾಗತೊದಗುತ್ತದೆ. ಶ್ರಮವಿಲ್ಲದ ಬದುಕು ಸರಳವಾಗುತ್ತದೆ. ವ್ಯಾಪಾರದ ನೆರಳಿನಲ್ಲಿ ಕೂತು ಮಾಡಿದರೂ ಅದೂ ಕಡಿಮೆಯೇ ತಾನೇ ಎಂದು ಸಮಾಧಾನಪಟ್ಟುಕೊಳ್ಳುತ್ತಾನೆ. ಆದರೆ ಆಟ ಕೃಷಿ ಮಾಡಲಿ ನೇರವಾಗಿ ತಾನು ಹೊಲಗದ್ದೆಗಳಿಗೆ ಹೋಗುವುದಿಲ್ಲ. ತನ್ನ ತಾಯಿಯ ಮೇಲುಸ್ತುವಾರಿಯಲ್ಲೇ ನಡೆಯುತ್ತದೆ. ತಿಂಗಳಾದರೂ ಮುಖ ಕ್ಷೌರ ಮಾಡಿಸಿಕೊಳ್ಳದವನು ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳುತ್ತಾನೆ. ಹೀಗೆ ಬೇಸಾಯ ಸಂಸ್ಕೃತಿಯಿಂದ ಹಂತ ಹಂತವಾಗಿ ದೂರವಾಗುತ್ತಾನೆ. ಹುಂಡಿಯ ಮುದ್ದೆಗೌಡರ ಸಹಾಯದಿಂದ ಹೊಸ ಜಮೀನನ್ನು ಕೊಂಡರೂ ಆಟ ನೇರವಾಗಿ ಬೇಸಾಯಕ್ಕೆ ತೊಡಗುವುದಿಲ್ಲ. ಜೀತದಾಳುಗಳನ್ನು ಇಟ್ಟುಕೊಂಡು ಉಸ್ತುವಾರಿ ರೈತನಾಗುತ್ತಾನೆ. ಹೀಗೆ ಕ್ರಮೇಣ ಬೇಸಾಯದಿಂದ ಪರಕೀಯನಾಗತೊಡಗುತ್ತಾನೆ.

ಇಷ್ಟು ಹೊತ್ತಿಗಾಗಲೇ ತನ್ನ ಜಾತಿಯ ಆಗದವರ ಕಣ್ಣು ಭುಜಂಗಯ್ಯನ ಅಭ್ಯುದಯಕ್ಕೆ ಕೆಂಪಾಗುತ್ತದೆ. ತನ್ನನ್ನು ಹೊರಹಾಕಿದ ಜನರ ಜೊತೆ ಪ್ರತಿಷ್ಠೆಯನ್ನು ಸಂಪಾದಿಸಲು ಭುಜಂಗಯ್ಯ ದೊಡ್ಡಮಠದ ಸ್ವಾಮಿಗಳನ್ನು ತನ್ನ ಕುಗ್ರಾಮಕ್ಕೆ ಕರೆಸಿ ಅವರ ಪಾದಧೂಳಿನಿಂದ ಊರನ್ನು ಪವಿತ್ರಗೊಳಿಸುವ ಕೆಲಸ ಮಾಡುತ್ತಾನೆ. ಇದರಿಂದ ತನ್ನ ಹೊಸ ಕಾಯಕಕ್ಕೆ ಸ್ವಾಮಿಗಳ ‘ಅಸ್ತು’ವಿನ ಮುದ್ರೆ ಒತ್ತಿಸಿ ಅವನನ್ನು ಆಡಿಕೊಳ್ಳುವ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ.

ಇದರ ಪರಿಣಾಮವಾಗಿ ಅವನಿಗೆ ಹೊರಗಿನವರೇ ಆಗಿ ಬಿಟ್ಟಿದ್ದ ಜನವೂ ಅವನನ್ನು ಒಳಗಿನವನಾಗಿ ಒಪ್ಪಿಕೊಳ್ಳಲು ತಯಾರಾಗುತ್ತಾರೆ. ಮಾವ ಪರ್ವತಪ್ಪನೂ ಇದಕ್ಕೆ ಹೊರತಲ್ಲ.

ಭುಜಂಗಯ್ಯ ದೊಡ್ಡಕುಳವಾಗುತ್ತಿದ್ದಂತೆ ಅವನನ್ನು ಪರಕೀಯನಾದವನಂತೆ ಜನ ನೋಡುತ್ತಾರೆ. ಅದನ್ನು ತಪ್ಪಿಸಿಕೊಳ್ಳಲು ನಾಟಕ ಮಾಡಿಸಿ ಜನರು ತನ್ನವನೆಂದು ತಿಳಿದುಕೊಳ್ಳುವಂತೆ ಮಾಡುತ್ತಾನೆ. ಆದರೆ ಭೂಮಿಯ ಬಗ್ಗೆ ಮಾತ್ರ ದೂರ ದೂರದವನಾಗುತ್ತಾ ಹೋಗುತ್ತಾನೆ.

ಸುಶೀಲನ ಪ್ರೇಮ ‘ಮದುವೆ’ಯಲ್ಲಿ ಪರ್ಯಾವಸಾನವಾದಾಗ ಮತ್ತೆ ಊರಿನವರು ದೂರವಾದಂತೆ, ಹೆಂಡತಿಯೂ ಮನೆ ಬಿಟ್ಟು ಹೋಗುತ್ತಾಳೆ. ಪುನಃ ಅವಳು ಆ ಊರಿಗೆ ಬಂದರೂ ಕ್ರಮೇಣ ಭುಜಂಗಯ್ಯನ ಪಿತ್ರಾರ್ಜಿತ ಭೂಮಿ ಪಾರ್ವತಿಯ ಹೆಸರಿಗೆ ಹೋಗುತ್ತದೆ. ಈಗಂತೂ ಅವನು ಕೃಷಿಯಿಂದ ಹೊರಗಿನವನಾಗಿಯೇ ಉಳಿದು ಬಿಡುತ್ತಾನೆ. ಸ್ವಯಾರ್ಜಿತ ಜಮೀನು ಮಾತ್ರ ಅವನದಾಗಿರುತ್ತದೆ.

ಹೋಟೆಲ್ಲಿಗೆ ಬೆಂಕಿಬಿದ್ದು ನಷ್ಟವಾದಾಗಲೂ ಅವನು ಭೂಮಿಯನ್ನು ಉಳಲು ವಾಪಸ್ಸಾಗುವುದಿಲ್ಲ, ಅಂಗಡಿ ಇಡುತ್ತಾನೆ. ನಷ್ಟವಾದ ಮೇಲೆ ಕಂತ್ರಾಟುದಾರನಾಗುತ್ತಾನೆ. ಬಾವಿ ತೆಗೆಸುವ ವೃತ್ತಿಯನ್ನು ಅವಲಂಬಿಸುತ್ತಾನೆ. ಆದರೆ ಜಮೀನು ಉಳಲು ಹೋಗುವುದಿಲ್ಲ. ಯಾರೋ ಬೇರೆ ಊರಿನವನನ್ನು ಕರೆಸಿ ಜಮೀನು ಮಾಡಿಸುತ್ತಾನೆ.

ಕೊನೆಗೆ ಕಣ್ಣು ಕಳೆದುಕೊಂಡ ಮೇಲಂತೂ ಕಂತ್ರಾಟಿನಲ್ಲಿ ಆದ ನಷ್ಟ ತುಂಬಿಕೊಳ್ಳಲು ತನ್ನ ಜಮೀನನ್ನೇ ಮಾರಿಬಿದುತ್ತಾನೆ. ಒಂದು ಅಂಗೈ ಅಗಲದ ಭೂಮಿಯೂ ಇಲ್ಲದವನಾಗಿ ಕೃಷಿ ಸಂಸ್ಕೃತಿಯಿಂದಲೇ ಹೊರಗಿನವನಾಗಿ ಉಳಿದು ಬಿಡುತ್ತಾನೆ.

ಇದರ ಜೊತೆಗೆ ತನ್ನ ಕೈ ಹಿಡಿದ ಹೆಂಡತಿ ಇವನು ಕಣ್ಣು ಕಳೆದುಕೊಂಡಾಗಲೂ ಬದ್ನು ನೋಡದೆ ಹೊರಗಿನವಳಾಗಿಯೇ ಉಳಿದುಕೊಂಡು ಬಿಡುತ್ತಾಳೆ. ಮಕ್ಕಳನ್ನೂ ಗಂಡನಿಂದ ದೂರಮಾಡಿಬಿಡುತ್ತಾಳೆ. ಹೀಗೆ ಭುಜಂಗಯ್ಯ ಕೃಷಿಯಿಂದ ಹೊರಗಾಗಿ, ಹೆಂಡತಿ ಮಕ್ಕಳಿಂದಲೂ ಹೊರಗಿನವನಾಗಿಯೇ ಉಳಿದು ಬಿಡುತ್ತಾನೆ.

೨.ಭುಜಂಗಯ್ಯನಿಗೆ ಹೋಟಲ್ಲು ಇಡುವ ಮನಸ್ಸು ಯಾರೋ ಹೊರಗಿನರಿಂದಾಗಿ ಬಂದಂತೆ ಅವನು ಹೊಟಲ್ಲು ಇಡಲು ಮನಸ್ಸು ಮಾಡಿದಾಗ ಸಲಹೆಗಾಗಿ ಅರಸಿ ಹೋಗುವುದು ಶಿವಾಚಾರದ ಕುಲದವನಾದರೂ, ಆ ಕುಲದ ದೃಷ್ಟಿಯಿಂದ ಅತ್ಯಂತ ಹೀನವಾದ ಹೆಂಡಮಾರುವ ವೃತ್ತಿಯನ್ನು ಹಿಡಿದಿರುವ ಕೋಡಂಗಿ ಅಜ್ಜಪ್ಪನ ಹತ್ತಿರ. ಅವನು ಭುಜಂಗಯ್ಯನ ಅಭಿಲಾಷೆಗೆ ಒತ್ತುಕೊಟ್ಟಿದ್ದೂ ಅಲ್ಲದೆ ಹಣದ ಒತ್ತಾಸೆಯನ್ನು ನೀಡಿ ಊರಹೊರಗೆ, ಕೂಡುರಸ್ತೆಯಲ್ಲಿರುವ ಜಮೀನಿನ ‘ದೆವ್ವದ ಹುಣಸೇಮರ’ದ ಕೆಳಗೆ ಹೊಟಲ್ಲಿಡುವ  ಜಾಗವನ್ನು ಕೊಡುತ್ತಾನೆ. ಕೊನೆಗೆ ಅವನೇ ಭುಜಂಗಯ್ಯನಿಗೆ ಸಲಹೆಗಾರನೂ ಆಗಿ ಭುಜಂಗಯ್ಯನಿಗೆ ಅಂತರಂಗದ ವ್ಯಕ್ತಿಯಾಗಿಬಿಡುತ್ತಾನೆ.

೩.ಊರಿನ ಹರಗಿದ್ದ ಹೋಟೆಲ್ಲಿಗೆ ಮೊದಮೊದಲು ಬರಲು ಹಿಂದೇಟು ಹಾಕುತ್ತಿದ್ದ ಜನ ಕ್ರಮೇಣವಾಗಿ ಯಾರ ಹೆದರಿಕೆ ಭಯವೂ ಇಲ್ಲದೆ ಬಂದು ಟೀ ಕುಡಿಯತೊಡಗಿದರು. ಕೊನೆಗೆ ಭುಜಂಗಯ್ಯನ ತಿಂಡಿಯ ರುಚಿಗೆಬಿದ್ದವರು ಅದು ಇಲ್ಲದೆಯೇ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಂದುಬಿಟ್ಟಿದ್ದರು.

ಭುಜಂಗಯ್ಯನಿಗೆ ಯಾವಾಗಲೂ ಒತ್ತಾಸೆಯಾಗಿ ಹಿತೈಷಿಯಾಗಿ ನಿಂತಿದ್ದವರೆಂದರೆ ಕರೀಗೌದರು ಮತ್ತು ಅವರ ತಮ್ಮ ಮುದ್ದೆಗೌಡರು. ಮಾದಳ್ಳಿಯ ಕರೀಗೌಡರ ಮನೆ ದಾನ ಧರ್ಮಕ್ಕೆ ಹೆಸರಾಗಿದ್ದಾರೆ ಹುಂಡಿಯಲ್ಲಿ ಮುದ್ದೇಗೌಡರ ಮನೆ, ಮುದ್ದೇಗೌಡರ ಹೆಂಡತಿ ಪುಟ್ಟವ್ವ.’ ಭುಜಂಗಯ್ಯ ತನಗೆ ಏನೇ ಕಷ್ಟಬಂದರೂ ತನ್ನ ಜಾತಿಯವರ ಹತ್ತಿರ ಹೋಗುತ್ತಿರಲಿಲ್ಲ. ನೇರವಾಗಿ ಹುಂಡಿಗೆ ಹೋಗಿ ಗೌಡರು ಇರಲಿ ಇಲ್ಲದಿರಲಿ ತನಗೆ ಬೇಕಾದದ್ದನ್ನು ಕೇಳಿ ಪಡೆಯುತ್ತಿದ್ದ. ಕರೀಗೌದರು ಸ್ವಾಮಿಗಳನ್ನು ಕರೆಸಿದ್ದಾಗ ದವಸ ಧಾನ್ಯಗಳನ್ನು ಅವರಿಗೆ ಕೊಟ್ಟಿದ್ದರು. ಭುಜಂಗಯ್ಯ ಜಮೀನು ಖರೀದಿಸುವಂತೆ ಸಲಹೆಮಾಡಿದಾಗ ಅದನ್ನು ಕೊಳ್ಳಲು ಕೈಗಡವಾಗಿ ಹಣ ಕೊಟ್ಟವರು ಮುದ್ದೇಗೌಡರು. ‘ಅವತ್ತಿನಿಂದ ಭುಜಂಗಯ್ಯನಿಗೆ ತನ್ನ ಕಷ್ಟ ಸುಖಕ್ಕೆ ನಿಜವಾಗಲೂ ಆಗುವ ಪುಣ್ಯಾತ್ಮರು ತನ್ನ ಜಾತಿಯವರಲ್ಲ, ಗೌಡರ ಮನೆಯವರು ಅನ್ನುವುದು ಖಚಿತವಾಗಿಬಿಟ್ಟಿತು”.(ಪುಟ೧೨೨) ಭುಜಂಗಯ್ಯ – ಸುಶೀಲರ ಸಂಬಂಧದಲ್ಲಿ ಭುಜಂಗಯ್ಯನನ್ನು ಕುಲದಿಂದ ಹೊರಹಾಕಲು ಮಾಡಿದ ನ್ಯಾಯದಲ್ಲಿ ಸಹಾಯ ಮಾಡಿದವರು ಕರೀಗೌಡರು.

ಒಮ್ಮೆ ಕರೀಗೌಡರಿಗೆ ಹಾವು ಕಚ್ಚಿದಾಗ ಊರಲ್ಲಿ ಯಾವತ್ತು ಹಾವು  ಅವನು ತಮ್ಮ ಜಾತಿಯವನನ್ನು ಬಿಟ್ಟು ಹೇಗೆ ಬಾಯಿ ಹಚ್ಚಿ ವಿಷ ತೆಗೆದಿರಲಿಲ್ಲ. ಈಗ ಮಾತ್ರ ಹಿಂದೂ ಮುಂದೂ ನೋಡದೆ ಬೇರೆ ದಾರಿಯೇ ಕಾಣದೆ ಬಾಯಿಹಚ್ಚಿ ವಿಷ ತೆಗೆಯುತ್ತಾನೆ. ಗೌಡರನ್ನು ಬದುಕಿಸುತ್ತಾನೆ. ಹೋಟೆಲ್ಲು ಸುಟ್ಟುಭಸ್ಮವಾದ ಮೇಲೆ ಭುಜಂಗಯ್ಯನಿಗೆ ಆಸರೆಯಾದವರು ಕರೀಗೌಡರು.

ಹೀಗೆ ಜಾತಿಯ ಹೊರಗಿನವರು ಭುಜಂಗಯ್ಯನಿಗೆ ಒಳಗಿನವರಾಗುತ್ತಾರೆ.

೫. ಭುಜಂಗಯ್ಯನಿಗೆ ಹೊರಗೆ ನಡೆಯುವ ವಿದ್ಯಮಾನವನ್ನೆಲ್ಲಾ ತಿಳಿಯುವಂತೆ ಮಾಡುವವರು, ಹೋಟೆಲ್ ಪ್ರಯಾಣಿಕರನ್ನು ಕರೆತರುವವರು ಲಿಂಗಾಂಬ ಬಸ್ಸಿನ ಡ್ರೈವರ್ ವಿಕ್ಟರಣ್ಣ. ಅವನಿಗೆ ಸುಶೀಲಳ ಜೊತೆ ‘ಮದುವೆ’ ಮಾಡಿಸಲೂ ಅವರು ಸಹಾಯ ಮಾಡುತ್ತಾರೆ.

೬. ಭುಜಂಗಯ್ಯನಲ್ಲಿ ರಾಷ್ಟ್ರೀಯ ಭಾವನೆಯನ್ನು ಮೂಡಿಸುವ ಇನ್ನೊಬ್ಬ ವ್ಯಕ್ತಿ ಬ್ರಾಹ್ಮಣರಾದ ಗೋವಿಂದರಾಜು ಮಾಸ್ತರರು. ವೀರಶೈವ ಧರ್ಮದ ದೇವರುಗಳಿಗಿಂತ ಭಿನ್ನವಾದ ಭವಿಯಾಗಿಯೂ ದೈವತ್ವವನ್ನು ಪಡೆದುಕೊಂಡ ವ್ಯಕ್ತಿ ಗಾಂಧಿಯನ್ನು ಅವನಿಗೆ ಪರಿಚಯ ಮಾಡಿಸಿ, ಹರಿಜನೋದ್ದಾರದ ಬಗ್ಗೆ ಭುಜಂಗಯ್ಯನಲ್ಲಿ ಹೊಸ ರೀತಿಯ ಪರಿಕಲ್ಪನೆಯನ್ನು ಮೂಡಿಸುತ್ತಾರೆ. ಇದರಿಂದ ಭುಜಂಗಯ್ಯ ತನ್ನ ವೀರಶೈವಧರ್ಮ ಎಷ್ಟು ದೊಡ್ಡದು, ಆದರೂ ಇದನ್ನು ಆಚರಿಸುವ ಜನರು ಎಷ್ಟು ಸಣ್ಣ ಮನಸ್ಸಿನವರು ಎಂದು ಅರಿತುಕೊಳ್ಳುತ್ತಾನೆ. ಹಿಂದೆ ಯಾವ ಜಾತಿಯವರಾದರೂ ತಮ್ಮ ಧರ್ಮವನ್ನು ಅಪ್ಪಿಕೊಳ್ಳುವಂತಿತ್ತು. ಆದರೆ ಈಗ? ಗೋವಿಂದರಾಜುವಿನ ಗಾಂಧೀ ತತ್ವ ಭುಜಂಗಯ್ಯನ ಮೇಲೆ ಅಪಾರ ಪ್ರಭಾವ ಬೀರುತ್ತದೆ. ವೀರಶೈವ ಧರ್ಮ ಜಾತಿಗೆ ಸೇರದ ಗಾಂಧಿಯ ಫೋಟೋ ಅವನ ಧರ್ಮದ ದೇವರುಗಳ ಜೊತೆ ನಗುನಗುತ್ತಾ ಸೇರಿ ಬಿಡುತ್ತದೆ. ಇದು ತಂಬೂರಿ ಅಯ್ಯನವರಿಗೂ ನುಂಗಲಾಗದ ತುತ್ತಾಗುತ್ತದೆ.

ನಂತರ ಹರಿಜನರ ಜಾತಿಗೆ ಸೇರಿದ ಕ್ಯಾತನಹಳ್ಳಿಯ ಹೊಸ ಮಾಸ್ತರು ಹೋಟೆಲ್ ಒಳಗೆ ಕುಳಿತು ಕಾಫಿ ಕುಡಿದದ್ದು, ಅದನ್ನು ಭುಜಂಗಯ್ಯ ವಹಿಸಿಕೊಂಡದ್ದು ತನ್ನ ವೀರಶೈವ ಜನಾಂಗ ಸಹಿಸದೆ ಭುಜಂಗಯ್ಯನ ಅಭ್ಯುದಯದ ಹೋಟೆಲ್ಲನ್ನು ಸುಟ್ಟು ಅವನ ಅಭ್ಯುದಯವನ್ನೇ, ಕಾಯಕವನ್ನೇ ಅಳಿಸಿ ಹಾಕಿಬಿಡುತ್ತಾರೆ. ಬೇರೆ ದೇವರುಗಳ ಪಟವನ್ನು ಬಿಟ್ಟು ಗಾಂಧೀಪಟವನ್ನು ಒಡೆದು ಹಾಕಿ ಬಿಡುತ್ತಾರೆ.

೭. ಭುಜಂಗಯ್ಯನ ಮನೆ ಮುಂದೆ ಬರಲಿ, ಅವನು ಮತ್ತಷ್ಟು ಭಾಗ್ಯಶಾಲಿಯಾಗಲಿ ಎಂದು ಹರಸುತ್ತಿದ್ದ ಜೀವ ಹಂಪಾಪುರದ ತಂಬೂರಿ ಅಯ್ನೋರದ್ದು. ಇವರು ಹೇಳುತ್ತಿದ್ದ ಪದಗಳು ಭುಜಂಗಯ್ಯನ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಕುರುಡುತನದ ದೊಡ್ಡ ಭಾರವನ್ನು ಹೊತ್ತು ಮಾದಳ್ಳಿಗೆ ಬಂದ ಮೇಲಂತೂ ಅಯ್ನೋರು ಹಾಡಿದ ಪದಗಳೂ, ಭುಜಂಗಯ್ಯನ ಅಂತರಾಳಕ್ಕೆ ಅನುಭವಗಳಾಗಿ ಇಲಿಯ ತೊಡಗುತ್ತವೆ. ‘ಈ ಲೋಕದ ಬದುಕಿಗೆ ಅಂಟಿಕೊಂಡರೆ ತಾನೂ ಭಾವಿಯಾಗಿ ಕೊಳೆತು ನಾರಿಹೊಗುತ್ತದೆ. ತಾನೂ ಒಬ್ಬ ಶರಣನಾಗಬೇಕು. ಈ ದೇಹಕ್ಕೆ ತನ್ನದು, ತಾನು ಅನ್ನುವ ಮಾಯೆ ಹೋಗಬೇಕು. ಮಾಯೆಯನ್ನು ಗೆಲ್ಲಬೇಕು ಎಂಬ ವೇದಾಂತದ ದರ್ಶನ ಮಾಡಿಸುತ್ತಾರೆ. ಅಧ್ಯಾತ್ಮದ ಗುರುವಾಗಿ ಬಿಡುತ್ತಾರೆ. ಕೊನೆಗೆ ತಮ್ಮ ತಂಬೂರಿಯನ್ನೇ ಅವನಿಗೆ ಕೊಟ್ಟು ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುತ್ತಾರೆ. ತಂಬೂರಿಯನ್ನು ಕೊಟ್ಟು ತಿರುಗಿನೋಡದೆ ಹೊರಟ ಅಯ್ನೋರು ಶಿವನ ಪಾದವನ್ನು ಸೇರಿಬಿಡುತ್ತಾರೆ. ಭುಜಂಗಯ್ಯನ ಮನದ ಒಳಗನ್ನೂ ಸೇರಿಬಿಡುತ್ತಾರೆ.

೮.’ಒಳಗು-ಹೊರಗು’ ಒಂದಾಗುವುದು

(ಅ) ಭುಜಂಗಯ್ಯನಿಗೆ ಎಲ್ಲಾ ರೀತಿಯಲ್ಲೂ ಹೊರಗಿನವಳಾಗಿಯೇ ಉಳಿಯುತ್ತಾಳೆ ಕಟ್ಟಿಕೊಂಡ ಹೆಂಡತಿ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹೊರಗಿನಿಂದ ಬಂದ ಹೊರ ಜಾತಿಯವಳಾದ ಸುಶೀಲ ಮಾತ್ರ ಭುಜಂಗಯ್ಯನಿಗೆ ಒಪ್ಪಿಸಿಕೊಂಡು ಬಿಡುತ್ತಾಳೆ. ಸ್ವತಃ ಭುಜಂಗಯ್ಯನಿಗೇ ‘ಇಟ್ಟುಕೊಂಡವಳಾಗಿ’ ಮೊದಮೊದಲು ಕಂಡ ಸುಶೀಲ ಅವಳ ಆಸೆ ಅವನದೂ, ಅವನ ಆಸೆ ಅವಳದೂ ಆಗಿಬಿಡುತ್ತದೆ. ಯಾವ ಹಿಂದೂ ಸ್ತ್ರೀ ಸಂಹಿತೆಯನ್ನು ಓದದಿದ್ದರೂ ಅವಳು ಅದನ್ನು ಪಾಲಿಸಿಕೊಂಡು ನಡೆಯುತ್ತಾಳೆ. ಊರಹೊರಗೆ ತನ್ನ ಸಂಸಾರವನ್ನು ಪ್ರಾರಂಭಿಸುತ್ತಾಳೆ. ತಂದೆ ಬಳೆಶೆಟ್ಟರು ‘ದದ್ದಾದ ವಡ್ಕೆ’ ಅದು ಎಂದು ಅವಳನ್ನು ಹೊರಹಾಕಿಬಿಡುತ್ತಾರೆ. ಇದರಿಂದಾಗಿ ವೀರಶೈವ ಜನಾಂಗವೇ ಭುಜಂಗಯ್ಯನನ್ನು ಕುಲದಿಂದಲೇ ಹೊರಹಾಕಲು ನ್ಯಾಯ ಸೇರುತ್ತಾರೆ. ಆದರೆ ಅದು ಗೊಂದಲದಿಂದ ಮುಕ್ತಾಯವಾಗುತ್ತದೆ.

ಭುಜಂಗಯ್ಯ ಸುಶೀಲಳನ್ನು ವಿದ್ಯುಕ್ತವಾಗಿ ಲಿಂಗಧಾರಣೆ ಮಾಡಿಸಿ ಜಾತಿಯ ಒಳಕ್ಕೆ ಸೇರಿಸಿಕೊಳ್ಳುವಂತೆ ಮಾಡುತ್ತಾನೆ. ಆದರೆ ಈ ಕದನದಿಂದ ಕೋಟೆಯ ಪೋಲಿಸಿನವರು ಮಾದಳ್ಳಿಗೆ ಹತ್ತಿರದವರಾಗುತ್ತಾರೆ.

ಕರೀಗೌಡರಿಗೆ ಹಾವು ಕಚ್ಚಿದಾಗ ಸುಶೀಲ ಅವರ ಮನೆಗೆ ಬಂದದ್ದು ಭುಜಂಗಯ್ಯನಿಗೇ ಆಶ್ಚರ್ಯವಾದ ಸಂಗತಿ ಆದರೆ ಅವಳನ್ನು ಅಕ್ಕರೆಯಿಂದ ಕರೆದು ಕೂರಿಸಿಕೊಳ್ಳುತ್ತಾರೆ ಗೌಡರ ಹೆಂಡತಿ.

‘ಶರಣನಿಗೆ ಕುಲವಿಲ್ಲ’ ಎಂದು ಅಯ್ನೋರು ಸುಶೀಲೆಯನ್ನು ಲಿಂಗಧಾರಣೆಯಾದರೂ ಒಪ್ಪಿಕೊಂಡಿರಲಿಲ್ಲ. ಅವಳ ಕೈಯಿಂದ ನೀರೂ ಕುಡಿಯುತ್ತಿರಲಿಲ್ಲ. ಅವಳು ಆಗಲೇ ಯಾವ ಶರನರಿಗೂ ಕಡಿಮೆ ಇಲ್ಲದೆ ಶಿವಪೂಜೆ ಮಾಡಲು ಕಲಿತುಕೊಂಡು ಬಿಟ್ಟಿದ್ದಾಳೆ. ಆದರೂ ಅಯ್ನೋರು ಇವಳನ್ನು ತಮ್ಮ ಧರ್ಮದವಳನ್ನಾಗಿ ಒಪ್ಪಿಕೊಳ್ಳಲಿಲ್ಲವೆಂದು ಆಲೋಚಿಸುತ್ತಾನೆ. ಇದರ ವಿಷಯವಾಗಿ ಅವರನ್ನು ಒಮ್ಮೆ ಕೇಳಿಯೂ ಬಿಡುತ್ತಾನೆ. ಆದರೂ ಅವರ ಮನಸ್ಸಿನಲ್ಲಿ ಅವಳು ಲಿಂಗಧಾರಣೆ ಮಾಡಿಸಿಕೊಂದರೂ ಸೆಟ್ಟರವಳೇ. ಈ ಮಹಾತ್ಮಗಾಂಧಿಯನ್ನು ಭುಜಂಗಯ್ಯ ಪೂಜೆ ಮಾಡುವುದನ್ನು ನೋಡಿದರೆ ಹೊಲೆಯರು ಲಿಂಗ ಕಟ್ಟಿಸಿಕೊಂಡು ಬಂದರು ನಮ್ಮವರೆಂದು ಒಪ್ಪಿಕೊಳ್ಳಿ ಎಂದು ಭುಜಂಗಯ್ಯ ಹೇಳಲಾರನೇ ಎಂಬುದರಿಂದ ಅವರು ಒಪ್ಪಿಕೊಳ್ಳುವುದಿಲ್ಲ.

ಭುಜಂಗಯ್ಯನ ಹೊಟಲ್ಲು ಸುಟ್ಟಾಗಲು ಕೈಯಲ್ಲಿ ಹಣವಿಲ್ಲದ್ದಾದರೂ ಸುಶೀಲ ಅವನನ್ನು ಅನುಸರಿಸಿಕೊಂಡಿರುತ್ತಾಳೆ. ಅವರಿಗೆ ಇರಲು ಜಾಗ ಕೊಟ್ಟವರು ವೀರಶೈವರ ಕೇರಿಯವರಲ್ಲ, ಆದರೆ ಕರೀಗೌಡರು. ಮುಂದೆ ಭುಜಂಗಯ್ಯ ಮನೆ ಕಟ್ಟಿಸಿದಾಗ ಅಯ್ನೋರು ಸುಶೀಲಳನ್ನು ತಮ್ಮ ಜಾತಿಯವಳೆಂದು ಸ್ವೀಕರಿಸುತ್ತಾರೆ. “ಊರಲ್ಲಿ ತಮ್ಮ ಜಾತಿಯ ಜನ ಏನೇ ಅಂದರೂ ಅಯ್ನೋರು ಮಾತ್ರ ಭುಜಂಗಯ್ಯನ ಮನೆ ಬಿಡುವುದಿಲ್ಲ(ಪುಟ ೩೮೩)

ಆದರೆ ಒಮ್ಮೆಮ್ಮೆ ಭುಜಂಗಯ್ಯನೆ ಯಾವುದೋ ಜಾತಿಯ ಹೆಣ್ಣನ್ನು ಇತ್ತುಕೊಂಡಿದ್ದೇನಲ್ಲ. ತಾನು ಇಟ್ಟ ಹೆಜ್ಜೆ ತಪ್ಪಲ್ಲವೇ ಅಂದುಕೊಂಡದ್ದೂ ಉಂಟು(ಪುಟ ೩೮೩) . ತಮ್ಮ ಜಾತಿಯವರಿ ಮೂರು ನಾಲ್ಕು ಮದುವೆಯಾದರೆ ಅವರ ಪ್ರತಿಷ್ಠೆ ಹೆಚ್ಚುತ್ತಿತ್ತು. ಆದರೆ ನಾನು? ಎಂಬ ಯೋಚನೆಗೆ ಒಳಗಾಗುತ್ತಾನೆ. ಆದರೆ ಸುಶೀಲ ತಾನು ಮಾಡುತ್ತಿರುವ ತ್ಯಾಗದಿಂದ ಅವನ ಮನಸ್ಸಿನ ಒಳಗೂ ಇಳಿಯುತ್ತಿರುತ್ತಾಳೆ.

ಭುಜಂಗಯ್ಯ ಸಿಡಿಮದ್ದಿನ ಅಪಘಾತಕ್ಕೆ ಒಳಗಾಗಿ ಕಣ್ಣು ಕಳೆದುಕೊಂಡಾಗ ಅವಳು ಧೃತಿಗೆಡದೆ ಅವನ ಸೇವೆ ಮಾಡುತ್ತಾಳೆ. ಅವನನ್ನು ಮಗುವೇನೋ ಎಂಬ ರೀತಿಯಲ್ಲಿ ಕಾಣುತ್ತಾಳೆ. ಅವಳ ಕಣ್ಣುಗಳು ಅವಳದಷ್ಟೇ ಅಲ್ಲ ತನ್ನ ಗಂಡನವೂ ಆಗಿವೆ ಅಂದುಕೊಳ್ಳುತ್ತಾಳೆ. “ನಾನಿರುವತನಕ  ನಿಮಗೇನೂ ಆಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ಇಡುತ್ತಾಳೆ. ಆಗ ಅವನಿಗೆ “ತಾನೆಂದೂ ಒಣಗಿ ಹೋಗದಂತೆ , ತನ್ನೊಳಗಿನದೇನೂ ಬತ್ತಿ ಹೋಗದಂತೆ ಅವಳು ಸದಾ ಆಸರೆಯಾಗುತ್ತಾಳೆ” ಎಂಬ ಭರವಸೆ ಮೂಡುತ್ತದೆ. ಬೆಳಕಾಡದ ಕಣ್ಣುಗಳಲ್ಲಿ ಬೆಳಕು ಕಾಣಲು ಯತ್ನಿಸುತ್ತಾಳೆ. ಇಬ್ಬರಿಗೂ ಬದುಕಿನಲ್ಲಿ ಏನೂ ಕೊರತೆ ಇಲ್ಲ. ಕಳೆದು ಹೋದದ್ದನ್ನೆಲ್ಲಾ ಮತ್ತೆ ಪಡೆದುಕೊಂಡಂತೆ ಎಲ್ಲಾ ತುಂಬಿ ಬಂದಂತೆ ಇಬ್ಬರಿಗೂ ಭಾಸವಾಗುವಂತೆ ಸುಶೀಲ ನಡೆದುಕೊಳ್ಳುತ್ತಾಳೆ. ಅಯ್ನೋರು ತಂದುಕೊಟ್ಟ ನಿಜಗುಣ ಶಿವಯೋಗಿಗಳ ವಚನವನ್ನು ಓದಿ ಹೇಳುತ್ತಾಳೆ. “ದೇವ್ರು ನನ್ನ ಕಣ್ಣು ಕಿತ್ತುಕೊಂಡಿದ್ದರೂ ನಂಗೆ ಬ್ಯಾರೆ ಇನ್ನೆರಡು ಕಣ್ಣು ಕೊಟ್ಟವ್ನೆ” ಅನ್ನಿಸುವಂತಾಗುತ್ತಾಳೆ.

ಜೀವನೋಪಾಯಕ್ಕಾಗಿ ಈಗ ಸುಶೀಲ ತನ್ನ ಹಳೇಕಾರ್ಯಕ್ಕೆ ಹಿಂದಿರುಗುತ್ತಾಳೆ. ಹಳ್ಳಿ ಹಳ್ಳಿಯ ಮೇಲೆ ಹೋಗಿ ಬಳೆ ಮಾರಿ ಬರುತ್ತಾಳೆ. “ಈಗ ಇಡೀ ಊರೇ ತನ್ನನ್ನು ಒಪ್ಪಿಕೊಂಡಿದೆ. ತಾನು ಮಾಡಿದ್ದ ತಪ್ಪನ್ನು ಮರೆತೇಬಿಟ್ಟಿದೆ. ಊರಲ್ಲಿ ಮೊದಲಿಗೆ ಬೇಕೆಂದೇ ನೋವಾಗಲೆಂದೇ ‘ಭುಜಂಗಯ್ಯನ ಇಟ್ಟುಕೊಂಡವಳು’ ಎಂದು ಹಗುರವಾಗಿ ಮಾತನಾಡುತ್ತಿದ್ದವರೂ ಈಗ ತಾವು ಆಡಿಕೊಂಡಿದ್ದಕ್ಕೆ ನಾಚಿಕೆಪಡುವಂತೆ ನಡೆದುಕೊಂಡಿದ್ದಾಳೆ (ಪುಟ ೪೮೨).  ಹೀಗೆ ಸುಶೀಲ ತನ್ನ ಜಾತಿ ಕುಲದವರಿಗೇ ಅಲ್ಲ, ಊರಿನವರಿಗೇ ಒಳಗಿನವಳಾಗಿಬಿಟ್ಟಿದ್ದಾಳೆ.

ಈಗ ಭುಜಂಗಯ್ಯನ ಬದುಕಿಗೆ ಈ ಋತುಮಾನಗಳ ಹಂಗಿಲ್ಲ. ಕತ್ತಲಲ್ಲಿ ದೀಪ ಆರದಂತೆ ಸೆರಗಿನಿಂದ ಮರೆಮಾಡಿಕೊಂಡು ಎಚ್ಚರಿಕೆಯಿಂದ ಕಾಪಾಡಿಕೊಂಡಿದ್ದಾಳೆ ಸುಶೀಲ.

ನಾರಾಯಣನ ಒಳಗಿದ್ದ ಕಾಮದ ಮೃಗ ಹೊರಬಂದು ಸುಶೀಳನನ್ನು ಕೆಡೆಸಿದಾಗಲೂ, ಸುಶೀಲ ಈ ಹೊಲಸು ಶರೀರವನ್ನು ಮುಟ್ಟಬೇಡಿ ಎಂದು ಹೇಳಿದರೂ ಭುಜಂಗಯ್ಯ ಅವಳನ್ನು ಎಳೆಯ ಮಗುವೋ ಎಂಬಂತೆ ಎದೆಗೊತ್ತಿಕೊಂಡು ಮೃದುವಾಗಿ ಮೈದಡವಿ ಸಂತೈಸುತ್ತಾನೆ. ಬೆಳಕು ಇಂಗಿದ ಕಣ್ಣುಗಳಿಗೆ ಒಂದೊಂದೇ ದೃಶ್ಯ ಕಟ್ಟಿಕೊಂಡರೂ ಅಪ್ಪಿದ ಕೈಗಳು ಇನ್ನೂ ಬಿಗಿಯಾಗುತ್ತವೆ. ಹೀಗೆ ಸುಶೀಲ ಭುಜಂಗಯ್ಯನ ಮನಸ್ಸಿನ ಒಳಗೆ ಇಳಿದು ಬಿಡುತ್ತಾಳೆ. ‘ಒಳಗು – ಹೊರಗು’ಗಳ ಪರಿಕಲ್ಪನೆಯನ್ನು ಇಲ್ಲವಾಗಿಸಿ ಒಂದಾಗಿ ಬಿಡುತ್ತಾಳೆ.

(ಆ)ಸುಶೀಲಳ ಮೇಲೆ ವಿಷಕಾರುತ್ತಿದ್ದ ನಾರಾಯಣ ಅವಳನ್ನು ಕೆಡಸಿದ. ಆದರೆ ಭುಜಂಗಯ್ಯನ ಹೊರಕಣ್ಣು ಹೋಗಿದ್ದರು ವೇದಾಂತದ ಒಳಗಣ್ಣು ತೆರೆದುಗೊಂಡಿತ್ತು. ನಾರಾಯಣ ಹಾವುಕಚ್ಚಿ ವಿಷವೇರಿ ಬಿದ್ದಿದ್ದಾಗ ನಿಜವಾಗಿ ಹಾವಿನ ವಿಷವನ್ನು ಹೊರತೆಗೆಯುವ ಶಕ್ತಿಯಿದ್ದ ಹಸಿರು ಔಷಧಿ ಅವನ ಹತ್ತಿರ ಮುಗಿದುಹೊಗಿದ್ದರೂ ತನ್ನ ಮನೆ ಬಾಗಿಲಿಗೇ ಬಂದಿರುವ ಜೀವವನ್ನು ಉಳಿಸಲೇಬೇಕೆಂಬ ಶಂಕರ ಕೊರೆದಿದ್ದ ಕಾಲಿನ ಗಾಯಕ್ಕೆ ಬಾಯಿಹಚ್ಚಿ ವಿಷವನ್ನು ಹೀರಿ ಹೀರಿ ತಂಬಾಳೆಗೆ ಉಗುಳುತ್ತಾನೆ. ಸುಸ್ತಾದರೂ ಅವನಲ್ಲಿದ್ದ ‘ವಿಷ’ವನ್ನು ಹೊರಹಾಕುತ್ತಾನೆ. ಆದರೆ ಗಂಡಾಂತರದಿಂದ ಪಾರಾದ ನಾರಾಯಣ ಕಣ್ಣು ಬಿಡುತ್ತಿದ್ದಂತೆ ಭುಜಂಗಯ್ಯನ ಹೊಟ್ಟೆಯಲ್ಲಿ ಉರಿ ಸಂಕಟ ಪ್ರಾರಂಭವಾಗುತ್ತದೆ. ರೆಕ್ಕೆ ಮುರಿದುಬಿದ್ದ ಹಕ್ಕಿಯಂತೆ ಭುಜಂಗಯ್ಯನು ಚೀರುತ್ತಾ ಸುಶೀಲಳನ್ನು ಬರಸೆಳೆದುಕೊಂಡು ಪ್ರಾಣಬಿಡುತ್ತಾನೆ.

ಹೀಗೆ ನಾರಾಯಣ ಒಳಗೆ ತುಂಬಿದ್ದ ‘ನಿಷಯ’ದ ವಿಷವನ್ನು ತಾನು ನೀಲಕಂಠನಂತೆ ಹೀರಿ ತನ್ನ ಪ್ರಾಣವನ್ನು ಅರ್ಪಿಸಿಬಿಡುತ್ತಾನೆ. ಆಗ ಮಾತ್ರ ಒಳಗು-ಹೊರಗಿನ ಪ್ರಶ್ನೆ ಏಳದೆ ಭೇದ-ಭಾವ ಕರಗಿಹೋಗುತ್ತದೆ.

ಭಾಗ-೩

‘ಭುಜಂಗಯ್ಯ…’,’ಪರಸಂಗ…’ದಂತೆಜನಪ್ರಿಯ ಕಾದಂಬರಿ, ಅದರಲ್ಲೂ ಮಲಯಾಳಂ ಭಾಷೆ ಭಾಷಾಂತರಗೊಂಡ ಈ ಕಾದಂಬರಿ ಕೇರಳದ ಜನತೆಯೊಡನೆ ಅತ್ಯಂತ ಹೆಚ್ಚಿನ ಜನಪ್ರೀಯತೆಯನ್ನು ಗಳಿಸಿತು. ಅದಕ್ಕೆ ಸಾಕ್ಷಿಯಾಗಿ ಮಲಯಾಳಂ ಭಾಷೆಯಲ್ಲಿ ಇಂಗ್ಲಿಶ್ ಭಾಷೆಯಲ್ಲಿ ಕೃಷ್ಣನಿಗೆ ಬರುತ್ತಿದ್ದ ಪತ್ರಗಳೇ ಸಾಕ್ಷಿ. ನಮ್ಮಲ್ಲಿ ಜನಪ್ರಿಯ ಕಾದಂಬರಿಗಳಿಗೆ ಬರವಿಲ್ಲ. ಅವುಗಳನ್ನು ಓದಲು ತೆರೆಯುತ್ತಿದ್ದಂತೆಯೇ ಆ ಕಾದಂಬರಿ ಯಾವ ರೀತಿ ಕೊನೆಗೊಳ್ಳಬಹುದು ಎಂಬುದನ್ನು ಯಾವ ಯಾವ ಪಾತ್ರಗಳು ಯಾವ ಯಾವ ರೀತಿ ಪಡೆದುಕೊಳ್ಳುತ್ತವೆ ಎಂದು ಹೆಚ್ಚು ಕಡಿಮೆ ಹೇಳಿಬಿಡಬಹುದು. ಇವುಗಳು ಫಾರ್ಮುಲಾ ಕಾದಂಬರಿಗಳೆಂದೇ ವಿಮರ್ಶಾವಲಯದಲ್ಲಿ ಗುರುತಿಸಲ್ಪಟ್ಟಿವೆ.

ಆದರೆ ‘ಭುಜಂಗಯ್ಯ….’ ಕಾದಂಬರಿ ಈ ರೀತಿಯ ಯಾವುದೇ ‘ಟೈಪ್’ ಆದ ಕಾದಂಬರಿಯಲ್ಲ. ಅದರಲ್ಲೂ ಹಳ್ಳಿಯ ಬದುಕಿನ ‘ಅಥೆಂಟಿಕ್’ ಪ್ರಪಂಚವನ್ನು ಪರಿಚಯಿಸಿಕೊಡುತ್ತದೆ. ಕಾದಂಬರಿಕಾರ ತನಗೆ ಗೊತ್ತಿರುವುದನ್ನು ಓದುಗನಿಗೆ ತಿಳಿಸಿಕೊಡುವ ಉತ್ಸಾಹ, ತವಕಗಳು ಇವೆ. ಆದ್ದರಿಂದ ಅದು ‘ಟೈಪ್ಡ’ ಜನಪ್ರಿಯ ಕಾದಂಬರಿಗಳಿಗಿಂತ ಭಿನ್ನವಾದ ಕಥೆ(story)ಯಾಗಿದೆ. ಆದರೂ ಆ ಅನುಭವವನ್ನು ನಿರೂಪಿಸುವ ಪ್ರಕ್ರಿಯೆಯಲ್ಲಿ ‘ಆಹಾ!’ ಎನ್ನುವ ತನ್ಮಯತೆಯಿಂದ ಕಾದಂಬರಿಕಾರ ತೊಡಗಿಕೊಂಡಿದ್ದಾನೆಯೋ ಅನ್ನಿಸದೆ ಇರದು. ಈ ಕಾದಂಬರಿಯಲ್ಲಿ ಮೌಖಿಕ ಸಂಪ್ರದಾಯ ನವ್ಯದ ಬುದ್ಧಿಗೋಚರ(intellectual) ಪ್ರಪಂಚಕ್ಕೆ ‘ವಿರುದ್ದ’ವಾಗಿ ಬಂದಿದೆ ಎಂದು ಗೊತ್ತಾಗುತ್ತದೆ. ಭಾಗ ೨ ವಿಶ್ಲೇಷಣೆ ಅದನ್ನು ತೋರಿಸಿಕೊಟ್ಟಿದೆ. ಆದರೆ ಈ ‘elements’ ಕೇವಲ ಅಲಂಕಾರಿಕವಾಗಿ ಸುಮ್ಮನೆ ಬಂದಿದೆಯೇ ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಮೌಖಿಕ ಸಂಪ್ರದಾಯದ ಭಾಷೆಯ ನಾದ, ಲಯ , ಸಂಗೀತ, ಭಾಷಾತನ್ಮಯತೆ ಕಥಾನಕಕ್ಕೆ(narration) ಬೇರೆಯ ತಿರುವನ್ನು ಕೊಡುವ ಸಾಧ್ಯತೆ ಏಕೆ ಬರಲಿಲ್ಲ. ಕೇವಲ ‘ಕಚ್ಚಾ’ ಆಗಿಯೇ ಉಳಿದುಬಿಡುತ್ತದೆ ಎನಿಸುತ್ತದೆ. ಮೌಖಿಕ ಸಂಪ್ರದಾಯದ ವಿವಧ ಆಯಾಮಗಳನ್ನು ತುಂಬಿಕೊಂಡು ಸ್ತರ ಸಾಧ್ಯತೆಗಳನ್ನು ಗಾಢವಾಗಿ ಕಲಕುವ ಮನಸ್ಸನ್ನು ಕೊಡಲು ಸಾಧ್ಯವಾಗಿಲ್ಲವೇಕೆ? ಕೇವಲ ಸರಳರೇಖಾತ್ಮಕವಾಗಿ ಕಥಾನಕ ಜರುಗುವುದಿಲ್ಲ ಅನ್ನಿಸುತ್ತದೆ. ಏಕೆಂದರೆ ಮೌಖಿಕ ಸಂಪ್ರದಾಯದ ಮನಸ್ಸನ್ನು ಕೇವಲ ಒಂದು ಗೆರೆಯ ತಿರುವಿನಲ್ಲಿ ಸಮರ್ಥವಾಗಿ ಹಿಡಿಯುವ ದೇವನೂರರ ‘ಕುಸುಮಬಾಲೆ’ ನಮ್ಮ ಕಣ್ಣಮುಂದಿದೆ. ಸ್ವಲ್ಪದ್ದರಲ್ಲಿ ಅಗಾಧವಾದದ್ದನ್ನು ತೋರಿಸುತ್ತದೆ. ಆದರೆ’ ಭುಜಂಗಯ್ಯ….’ ಓದುವ ತನಕ ಜೊತೆಯಲ್ಲಿದ್ದು ಆಮೇಲೆ ಓದುಗನ ಕೈಬಿಡುವುದಿಲ್ಲ ಅನ್ನಿಸುತ್ತದೆ. ಭುಜಂಗಯ್ಯ ಕಾದಂಬರಿ ಅಷ್ಟು ಗಾತ್ರವಾಗಿ ಬೆಳೆಯುವುದಕ್ಕೂ ಇವೇ ಕಾರಣಗಳಾಗಬಹುದು.

ಇದೇ ರೀತಿ ತೇಜಸ್ವಿಯವರ ಕರ್ವಾಲೋ ಅರ್ಧಕ್ಕಿಂತ ಹೆಚ್ಚು ಹರಟೆಯೇ ಆಗಿ ಬೆಳೆದಿದೆ. ಆರರ ಮುಂದೆ ಒಂಭತ್ತು ಸೊನ್ನೆ ಹಾಕಿದಷ್ಟು ವರ್ಷಗಳ ಹಿಂದಿನ ಜೀವಿಯನ್ನು ಅಲ್ಲಿಂದ ಆದ ಜೀವವಿಕಾಸವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ತೊಡಗಿದಾಗ ಆ ಕಾದಂಬರಿ ಪಡೆದುಕೊಳ್ಳುವ ಆಯಾಮ, ಹಚ್ಚುವ ಚಿಂತನೆ, ನಿಗೂಢತೆ, ಆಶ್ಚರ್ಯ, ಹರಟೆಗೂ ಬೇರೆ ಬೇರೆ ಆಯಾಮ ಒದಗಿಸಿವೆ. ಇವೆಲ್ಲವೂ ‘ಭುಜಂಗಯ್ಯ’ನಲ್ಲಿ ಏಕಿಲ್ಲ ಎನ್ನಿಸುತ್ತದೆ. ಆದರೆ ಶ್ರೀಕೃಷ್ಣ ಅವರು ಬರೆದ ‘ಸುಟ್ಟತಿಕದ ದೇವರು’ ನೀಳ್ಗತೆಯಲ್ಲಿ ಇದೇ ‘ಮೌಖಿಕ ಸಂಪ್ರದಾಯವೂ’ ಪಡೆದುಕೊಳ್ಳುವ ಗಟ್ಟಿತನದ ಸುಳಿವು ಕಾಣುತ್ತದೆ. ಈ ದೃಷ್ಟಿಯಲ್ಲಿ ‘ಭುಜಂಗಯ್ಯ….’ ಮುಂದೆ ಶ್ರೀಕೃಷ್ಣ ಬರೆಯಬಹುದಾಗ ಕಥೆ ಅಥವಾ ಕಾದಂಬರಿಗೆ ನಡೆಸಿದ ‘workshop’ ಎಂದೆನ್ನಿಸುತ್ತದೆ.

ಕಾದಂಬರಿಯ ಮುಖ್ಯ ಪರಿಕಲ್ಪನೆ. ‘ಒಳಗು-ಹೊರಗು’ ಇದೂ ಕನ್ನಡ ಕಾದಂಬರಿಗಳಲ್ಲಿ ಅನೇಕ ಬಾರಿ ಬರುವ ಕಲ್ಪನೆ. ಇದು ‘ಭುಜಂಗಯ್ಯ’ದಲ್ಲಿ ಉದ್ದಕ್ಕೂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸರಾಗವಾಗಿ ಹಿಡಿದಿಡಬಹುದಾಗಿದೆ. ಇದೆ ರೀತಿಯ ವಸ್ತುವನ್ನು ಕುವೆಂಪು ಅವರ ‘ಮಲೆಗಳಲ್ಲಿ ಮಧುಮಗಳು’ ಕೆಲವು ಭಾಗಗಳಲ್ಲಿ ಎಷ್ಟು ಸಂಕೀರ್ಣವಾಗಿ ಹಿಡಿದಿಟ್ಟಿದೆ ಅನ್ನಿಸುತ್ತದೆ(ಬೀಸೋಕಲ್ ನಾಗರೀಕತೆ, ಕ್ರಿಶ್ಚಿಯನ್ ಧರ್ಮ ಇತ್ಯಾದಿ, ಒಳಗೇ ಇರುವ ಹಿಂದೂಧರ್ಮ ಅದನ್ನು ಬದಲಾಯಿಸಿಕೊಳ್ಳಲು ಅದರೊಳಗಿಂದಲೇ ಸೋಸಿ ತೆಗೆಯುವ ವಿಧಾನ ಇತ್ಯಾದಿ). ಈ ರೀತಿ ನೋಡಿದಾಗ ‘ಭುಜಂಗಯ್ಯ….’ ಟೈಪ್ಡ ಆದ ಜನಪ್ರಿಯ ಕಾದಂಬರಿಗಿಂತ ಉತ್ತಮವಾಗಿ ಆದರೆ ಮೌಖಿಕ ಸಂಪ್ರದಾಯದ ಸಾಧ್ಯತೆಗಳನ್ನು ಬಳಸಿಕೊಂಡಿರುವ ಕುಸುಮಬಾಲೆ, ಕರ್ವಾಲೋಗಳ ಮಟ್ಟಕ್ಕೆ ಏರದ ಕಾದಂಬರಿಯಾಗಿ ಉಳಿದುಕೊಳ್ಳುತ್ತದೆ.

ಕುವೆಂಪು ಅವರ ಕಾದಂಬರಿಗಳಲ್ಲಿನ ಜೀವನ ಸಂವೃದ್ಧಿ ಭುಜಂಗಯ್ಯನಲ್ಲಿ ಕಾಣಬಹುದು. ಈ ಸಂವೃದ್ದ ಜೀವನಾನುಭವಕ್ಕೆ ಬೇರೊಂದು ಬೌದ್ಹಿಕ ಆಯಾಮದ ಬೆಸುಗೆ ‘ಭುಜಂಗಯ್ಯ…….’ನಲ್ಲಿ ಸಾಧ್ಯವಾಗುವುದಿಲ್ಲವೇನೋ ಅನ್ನಿಸುತ್ತದೆ. ಈ ಅನುಭವಗಳಿಗೆ ಅನುರಣನ ಶಕ್ತಿ(vibratory power) ಇಲ್ಲವಾಗುತ್ತದೆ. ‘ಕುಸುಮ ಬಾಲೆ’ಯಲ್ಲಿ ಬರುವ ಮಂಚದ ಉಪಕಥೆ ಕೇವಲ ಮಂಚದ ಉಪಕಥೆಯಾಗುವುದಿಲ್ಲ. ಬೇರೆ ಬೇರೆ ಹಂತದಲ್ಲಿ ಓದುಗರನ್ನು ಕಾಡಿಸುತ್ತದೆ.

ಕ್ರಿಶನ್ ಭಾವನೆಯ ಹಂತದಲ್ಲಿ ಓದುಗನನ್ನು ಕಾದಿಸುವಂತೆ ಚಿಂತನೆಯ ಮಟ್ಟದಲ್ಲಿ ಕಾಡಿಸುವುದಿಲ್ಲ. ಆದರೆ ಚಿಂತನೆಯ ಮಟ್ಟದಲ್ಲೇ ಬೆಳೆಯುವ ಕಾದಂಬರಿಗಳಿಗಿಂತ ಅನೇಕ ವೇಳೆ ಕೃಷ್ಣ ಬರವಣಿಗೆ ಮೇಲು ಸ್ಥರದ್ದಾಗಿರುತ್ತದೆ. ಏಕೆಂದರೆ ಚಿಂತನಾ ಪ್ರಧಾನ ನವ್ಯ ಕಾದಂಬರಿಯಲ್ಲಿ ‘ಚಿಂತನ’ವನ್ನು ಬಿಟ್ಟ ಅನುಭವವನ್ನು ನೋಡಿದರೆ ಏನೇನೂ ಇಲ್ಲ ಅನ್ನುವಂತಾಗಿಬಿಡಬಹುದು.

ಕೃಷ್ಣನ ಕಾದಂಬರಿಯನ್ನು ಓದಿ ಮುಗಿಸಿದ ನಂತರ ನಿಬ್ಬೆರಗಾಗುವ ಅನುಭವದ ದ್ರವ್ಯ ಓದುಗರಲ್ಲಿ ಉಂಟಾಗುತ್ತದೆ. ಕಾದಂಬರಿಯನ್ನು ಪೋಷಕಭಾವ(patronizing tone)ನಲ್ಲಿ ನೋಡಬೇಕಾಗುತ್ತದೆ. ಆದರೆ ತೇಜಸ್ವಿ – ಮಹಾದೇವರ ಕೃತಿಗಳನ್ನು ಪೋಷಕ ಭಾವದಿಂದ ನೋಡಲಾಗುವುದಿಲ್ಲ. ಅವು “ನನ್ನನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡೆ” ಎಂದು ಪ್ರಶ್ನೆ ಹಾಕುತ್ತಲೇ ಇರುತ್ತವೆ.

ಈ ಎಲ್ಲಾ ಸಾಧ್ಯತೆಗಳ ತಿರುವುಗಳನ್ನು ತನ್ನದಾಗಿಸಿಕೊಳ್ಳುವ ಲಕ್ಷಣಗಳು ಶ್ರೀಕೃಷ್ಣರ ‘ಸುಟ್ಟತಿಕದ ದೇವರು’ ನೀಳ್ಗತೆಯಲ್ಲಿ ಸ್ವಲ್ಪ ಸ್ವಲ್ಪ ಬೆಳೆದುಬಂದಿದೆ. ಭಾವ-ಬುದ್ದಿಗಳ ಸಂಗಮ ಕಾಡುತ್ತದೆ. ಬೇರೆ ಸ್ತರಕ್ಕೆ ನೆಗೆಯುತ್ತಿರುವ ಅನುಭವ ಓದುಗರಿಗಾಗುತ್ತದೆ. ಈ ಒಂದು ಆಯಾಮ ಪಡೆದುಕೊಳ್ಳುವ ಹೊತ್ತಿನಲ್ಲೇ ಕೃಷ್ಣನ ಬರವಣಿಗೆ ನಿಂತೇ ಹೋಯಿತಲ್ಲ ಎನ್ನಿಸುತ್ತದೆ.

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

‘ಗೆಂಡಗಯ್ಯ’, ಇದು ಗೆಳೆಯ ಶಿವತೀರ್ಥನ್ ರವರ ‘ಗೆರೆಗಳು’ ಕವನ ಸಂಕಲನದ ವಿಶಿಷ್ಟ ಕವನ.. ಈ ಇಹದ ಪರಿಪಾಟಲನ್ನು ಕಂಡು ಉಂಡು, ಕಾಣದಂತೆ ತನ್ನ ಕಾಯಕವನ್ನು ನಡೆಸುತ್ತಿರುವ, ಒಳಗಣ್ಣನ್ನು ಸದಾ ತೆರೆದುಕೊಂಡು

ಎಸೆದು ಗಾಳ ಬೀಸಿ ಬಲೆ

ಕಾಯ್ತು ಕುಂತವ್ನೆ ಸಂತ

ಎಂಬ ‘ಇರ’ವಿನ  ‘ಅರಿವ’ನ್ನು ತೆರದಿಡುವ ಕವನ

ಈ ಸಂತನಿಗೆ ತನ್ನ ಸುತ್ತೆಲ್ಲ ಇರುವ ಪ್ರಪಂಚ ‘ಅಭಾವದ’ ಪ್ರಪಂಚವೆಂದು ಗೊತ್ತು. ನೋವು, ಯಸನ, ತಳಮಳ, ಬಯಕೆ, ಹಸಿವು ಮತ್ತು ದಾವಿನಿಂದ ಪರಿತಪಿಸುಸುತ್ತಿರುವ ಪ್ರಪಂಚ. ಕವನದ ಪಾರಂಭವೇ ಹೀಗಾಗುತ್ತದೆ : ತನ್ನ ಜನರ ಯಾ೦ತ್ರಿಕ ಪ್ರಾರಂಭವಾಗುವುದೇ ‘ಅಲಾರಾಂ ಕೋಳಿ ಕೂಗ್ತು !’ ಆದರೆ ಇಹದ ಕಷ್ಟವನ್ನು ಮರೆತು ತನ್ನಷ್ಟಕ್ಕೆ ತಾನೇ ಕುಂತ ಸಂತನಲ್ಲ ಇವ. ತನ್ನ ಜನತೆಯ ದೈನಂದಿನ ಪರದಾಟಗಳ ಅನುಭವದ ಮೊತ್ತವಾಗಿ ‘ನೆಪ್ಪಾ ಗಿ ಕುಂತವ್ನೆ ಈ ಸಂತ’. ತನ್ನ ಮನೋಮಯ ಜಗತ್ತಿನಲ್ಲಿ ಅವು ಜೀವಂತ.

ಜನಾಂಗದ ಕಾಯಕದ ಮೂಲ ದ್ರವ್ಯದ ಅಭಾವ : ಮನಸಿನ ಅಭಾವ, ಕನಸಿನ ಅಭಾವ, ಅನ್ನದ ಅಭಾವ

ಮೀನು ಸೀಗಡಿ ನಳ್ಳಿ ಸಿಕ್ತೇ

ಇತ್ತು ಸೊಪ್ಪು ಅಂಬ್ಲೀ ದಕ್ತೆ

ವೊತ್ತು ಕಂತೋಯ್ತು

ಉಳಿದಿರುವುದು ,

ಬರಿಗಣ್ಣು ಬರಿಬಾಯಿ ಬರಿಗೈ

ಬರಿಕುಕ್ಕೆ ಬರಿ ಬರಿದೆ

ಕೆಲಸಮಾಡುವವರ ಕೈ ಬರಿದಾದರೂ

ತಿಪ್ಪೆ ಕಸ ಕೊಚ್ಚೆ ನೀರು

ಯೆಕ್ಕಿ ಏರೆ ಉಳ ಗಾಳಕ್ಕೆ

ಎಸೆದು ಗಾಳ ಬೀಸಿ ಬಲೇ

ಕಾಯ್ತ ಕುಂತವ್ನೆ ಸಂತ

ಇಹದ-ಅಧಾತ್ಮದ ಶಕ್ತಿಯ ಮಾಧ್ಯಮವಾಗಿ, ಕರ್ಮಯೋಗಿಯಾಗಿ ಬರಿ ಬಲೆಯನ್ನು ಮಾತ್ರ ಕಾಯ್ತು ಕುಂತವನು ಈತ ಸಂತ. ಇವೆಲ್ಲ ನೆಪ್ಪಾಗಿ ಕುಂತವ್ನೆ ಸಂತ

ಎಲ್ಲ ಬರಿಬರಿಯಾಗಿರುವಾಗ ಈತನು ‘ಬರೀದೆ ಕುಂತವ್ನೆ ಸಂತ’.

ಇಟ್ಟಂಗೆ ಇರ್ತೀವಿ ಸಾಪಾಳ್ಸ್ ಬ್ಯಾಡ

ಸಂತೆ ಮಾಡಾಕೆ ದಮ್ಮೂಡೀನೇ ಸೊನ್ನೆ

ಸೊನ್ನೆ ಕುಂತವ್ನೆ ಸಂತ

ಎಲ್ಲರಲ್ಲೂ ದೈನ್ಯ, ಎಲ್ಲೆಲೂ ಶೂನ್ಯ. ಈ ಸಂತ ಕುಂತಿರುವುದು ಈ ಶೂನ್ಯವನ್ನೇ ಸಂಪಾದಿಸಿಕೊಂಡಂತೆ.

ಓದುಗರ ಮನದಲ್ಲಿ ಈ ಸಂತ , ಬೆಳೆದುಕೊಂಡು ಹೋಗುವ ರೀತಿ ವಿಶಿಷ್ಟ. ಈತನಿಗೆ ಅನೇಕ ಮುಖಗಳು ಮೂಡಲಾರಂಭಿಸುತ್ತವೆ .

ಬೆಸ್ತ ಜನಾಂಗದ ಜೀವನಾಡಿಗೆ ಮೂಲಧಾರೆಯಾದ ಗಂಗೆ ತೋರ ತೋರ ಮಾಪುರವಾಗಿ ಇಳಿದರೆ ಜೀವರಾಶಿಗಳಿಗೆ ಜೀವವಾಗುತ್ತದೆ . ಅಭಾವವೆಲ್ಲ ಸಮೃದ್ಧಿಯಾಗುವುದರ ಜೊತೆಗೆ ಜೀವಿಗಳ ಜೀವಕ್ಕೆ ಚಾಲನಶಕ್ತಿ ಉಂಟಾಗುತ್ತದೆ. ಪ್ರಕೃತಿ ತುಂಬಿ ಸೆಲೆಯಾಡಲು ಪ್ರಾರಂಭಿಸುತ್ತದೆ. ‘ನಳ್ಳಿ ,ಸೀಗಡಿ ಮೀನಹೊಳೆ’ ಜೀವದ ಹೊಳೆಯನ್ನು ಹರಿಸುತ್ತವೆ. ತನ್ನ ಜನಾಂಗಕ್ಕೂ ಮಿಕ್ಕಿ ಉಳಿದವರಿಗೂ ಅದನ್ನು ಹಂಚಿ ಬಿಡುತ್ತದೆ. ಈಗ ಸಂತನಿಗೆ ಮತ್ತೊಂದು ಮುಖ.

ಉಂಡ್ರೂ ಕುಂತವ್ನೆ ಸಂತ

ಇಲ್ಲಿ ಕಷ್ಟಸುಖಗಳು ಒಟ್ಟಿಗೆ ತೆಗೆದುಕೊಳ್ಳುವ ಸಂತನಾಗಿ ಬೆಳೆಯುತ್ತಾನೆ. ಆದರೂ ಈ ಸಂತ ಮೌನಿ – ಈ ಮೌನ ಹಿಂದಿನ ಮೌನದಂತಲ್ಲ. ‘ತಾಪ ತಪಿಸಿ ಒಡಮೂಡಿದ್ದು ‘ ಆ ಮೌನವೇ ಜನತೆಗೆ ಮಾತಾಗುತ್ತದೆ. ತನಗೆ ತಾನೇ ಮಾತಾಗುತ್ತದೆ. ಈಗ ಜನತೆಯ ನೆಲೆ ಪ್ರಕೃತಿಯ ಜೀವಾಧಾರಿತ ಸೆಲೆಯಾಗುತ್ತದೆ. ಪ್ರಕೃತಿ ಮೂಲ ಗಂಗೆ ಕೊಟ್ಟದ್ದನ್ನು ಸಂಸ್ಕೃತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತದೆ . ಇದಿಷ್ಟು ಇಹದ ಚರಿತೆ .

ಎರಡನೇ ಭಾಗದ ಕವನ ‘ಈಡುಗಾಯಿ ಮತ್ತೊಂದು ‘. ಈ ಭಾಗ ಇಹದ ಚರಿತೆಯಿಂದ ಪುರಾಣದ ಚರಿತೆಗೆಸರಿಯುವ ಕ್ರಮದಲ್ಲಿದೆ. ಇಲ್ಲಿ ಬೆಸ್ತ ಜನಾಂಗದ ಆದಿ ಅಯ್ಯನ ಪಿರ್ಕವಾಗಿ ಗುರುತಿಸಿಕೊಳ್ಳುವ ಕ್ರಮವಿದೆ. ಗೆಂಡಗಯ್ಯ ಈ ಜನಾಂಗದ ಮೂಲ ಪುರುಷಮಾತ್ರವಲ್ಲ ‘ಮಾಬಾರತದ ಮೂಲ ಯಾಸ, ಸತ್ಪತಿ ಅವ್ವ, ಪರಾಸರ ಅಯ್ಯ. ಇಲ್ಲಿ ಕುಂತ ಸಂತನೂ ಅಯ್ಯ’ – ವಂಶದ ಮೂಲ ಪುರುಷನ ಮೈಯನ್ನು ಪಡೆದವ. ಅದರೂ ಕಣ್ಣಿಗೆ ಕಾಣಿಸುವ ಮೂರ್ತ .

ಇಹದ ಜೀವವನ್ನೂ, ತನ್ನ ಹುಟ್ಟಿನ ಮೂಲವನ್ನೂ ಬಂಧಿಸುವ ಸೇತು. ಇವೆರಡಕ್ಕೂ ಮಾಧ್ಯಮವಾಗಿ ಈ ಸಂತ ಬೆಳೆಯುತ್ತಾನೆ. ಈ ಜಗತ್ತಿನಲ್ಲಿ ಎಲ್ಲವೂ ಲೀಲೆ. ತನಗೆ ತಾನೇ ಆಗುವ ಲೀಲೆ.

ತನಗೆ ತಾನೇ ಆಡ್ತ

ಬಲೆ ಬೀಸ್ತ

ಗಾಳ ಆಕ್ತ

ತಪಿಸ್ತ ಕುಂತವ್ನೆ ಸಂತ

ಇಲ್ಲಿ ಈ ಸಂತ ಪೌರಾಣಿಕ ಕಾಲಕ್ಕೆ ಜಿಗಿಯುವ ಸಂತ. ಈತ ಜನಾಂಗದ ಮೂಲಕ್ಕೆ ಗಾಳ ಹಾಕ್ತಾ, ‘ಆ ಕಾಲವನ್ನು’ ಈ ಕಾಲಕ್ಕೆ ಕೂಡಿಸಾಡುವ ಮಾಧ್ಯಮವಾಗಿ “ಈ ಸಂತ ತಪಿಸ್ತ ಕುಂತ.”

ಇಲ್ಲಿ ಮೊದಲ ಭಾಗದ ದೈನಂದಿನ ಚರಿತ್ರೆ, ಜನಾಂಗದ ಚರಿತೆಯಾಗಿ , ಕ್ರಿಯಾವಿಧಿಯಾಗಿ ಪುರಾಣವಾಗಿ ಪರಿವರ್ತಿತವಾಗುತ್ತದೆ. ಜನಪದರು ತಮ್ಮ ಜನಾಂಗವನ್ನು ಕೈಹಿಡಿದು ನಡೆಸಿಕೊಂಡು ಹೋಗುವ ತಮ್ಮ ಮೂಲಪುರುಷನ  ಶಕ್ತಿ, ಸಾಮರ್ಥ್ಯ ಕಾಣುವುದರ ಜೊತೆಗೆ ಅನಾದಿಯಿಂದ ಇಲ್ಲಿಯವರೆವಿಗೂ ತಲೆ ತಲಾಂತದಿಂದ ಜೀವಿಗಳ ವಂಶಮಾಲೆಯನ್ನು ಪೋಣಿಸುವ, ಸೇರಿಸುವ ಶಕ್ತಿಯ ಈ ಸಂತ ಮಹಾಂತನಾಗುತ್ತಾನೆ. ಆದ್ದರಿಂದಲೇ

ನೀ ಯಾ ಲೋಕ ಕಂತೆ

ನೀ ಯಾ ಪಾಕ ಉಂಡೆಯೊ

ಅದನ್ನು ನಾನೂ ಕಾಣ್ತೀನಿ

ಅನ್ನುವ ಛಲ ಸೆಳೆತ ಈ ಜನಾಂಗಕ್ಕೆ ಮೂಡುತ್ತದೆ.

ಗಂಗಾಮತಸ್ಥರ ಮೂಲ ಮಾತೃ ಪ್ರಧಾನ ಮೂಲ. ಇವರ ಸಾಂಸ್ಕೃತಿಕ ಲೋಕವೆಲ್ಲ ಡುಂಡಿಮಾದವ್ವ, ವಳಗೆರೆ ವುಚ್ಚಿ , ಪಟ್ಟಲದಮ್ಮ ಇವರೆಲ್ಲ ಸ್ಥಳೀಯ ದೇವರುಗಳು . ಇಂಥ ಹೆಣ್ಣು ದೇವತೆಗಳನ್ನೇ ಇವರು ಕರೆಯುವುದು . ಇಲ್ಲಿ ಪುರಾಣ ritual ಆಗಿ ಪರಿವರ್ತಿತವಾಗುತ್ತದೆ. ritual ನ ಕೆಲಸವೇ ಪುರಾಣವನ್ನು ಆಗಮಾಡಿಕೊಡುವ ಕೆಲಸ. ಅದಕ್ಕೆ

ಜಗ್ಗು ಜಗ್ಗು ಜಗ್ಗು ಜಗ್ಗು

ಜಗ್ಗುಣಕ್ಕಣ್ ಜಗ್ಗುಣಕ್ಕಣ್

ಭಾವ ಅಭಿನಯವಾಗುತ್ತದೆ.
ಪೂಜೆವೊತ್ತು ಪೂಜೆ ಕುಣಿ
ಪಿಪೊಜೆ ಬಳ್ಸಿ ಪೂಜೆ ಕುಣಿ
ನಾ ತಡೀಲಾರೆ ನಾ ಕುಣೀಲಾರೆ
ನಾ ಕುಣೀತೀನಿ ನಾ ತಡೀತೀನಿ
ಉಕ್ಕಿ ಬರುವ ಜೀವನೋತ್ಸಾಹ. ‘ನಡೀತೀನಿ’ ಎಂಬ ನಿರ್ಧಾರ ಕಾಣುತ್ತದೆ. ಇಡೀ ಜನಾಂಗದ ಶಕ್ತಿಯಾಗುತ್ತದೆ. ಅಲ್ಲದೆ ಜೀವನವನ್ನು ಕೊಂಡೊಯ್ಯುವ ಶಕ್ತಿಯೂ ಆಗುತ್ತದೆ.
ಈ ಲೋಕ ಅಬೂ(ಭೂ)ತವಾಗುತ್ತದೆ. ವರ್ತಮಾನ ಭವಿಷ್ಯವಾಗುತ್ತದೆ. ಇಹದ ಮನುಷ್ಯನ ಕಾಲದ ಪರಿಕಲ್ಪನೆಯನ್ನು ಮೀರುತ್ತದೆ. ಇಲ್ಲಿ ಭೂತ-ವರ್ತಮಾನ-ಭವಿಷ್ಯದ ಕಾಲಗಳಿಲ್ಲ. ಇವೆಲ್ಲ ಕಾಲಗಳ ಸಂಯೋಜನೆಯಾಗಿ ‘ಪುರಾಣ ಕಾಲ’ದ ಪ್ರಜ್ಞೆಯಾಗುತ್ತದೆ.
ಈ ಕಾಲದ ‘ಕೋಡೀಲೆ ಮಗ್ನ ಕುಂತವ್ನೆ ಸಂತ’
ಈ ಕವನ ಮುಂದುವರೆಯುತ್ತಾ ಗಂಗೆಯ ಧರಿಸಿದ ‘ಮಾದಯ್ಯ’ನ ಪ್ರಪಂಚಕ್ಕೆ. ಈ ಜನಾಂಗದ ಮೂಲ ಪ್ರಪುರುಷ ಗೆಂಡಗಯ್ಯನನ್ನು ಸೃಷಿಸಿದ ಪ್ರಪಂಚಕ್ಕೆ (ಮಲೆ ಮಾದೇಶ್ವರನ ಪುರಾಣದಲ್ಲಿ ಬರುವಂತೆ) ಗಾಳ  ಹಾಕಿ ಸಿಕ್ಕಿಸುತ್ತದೆ. ಈ ‘ಮಾದಯ್ಯ’ನೋ ಬಹಳ ಮೂರ್ತನಾದವನು
ಸುತ್ತೇಳು ಮಲೆ ಮಾದಯ್ಯ
ಮುತ್ತಿರುವ ಕಾಡು ಮಾದಯ್ಯ
ವೂಲಿವಾನ ಮಾದಯ್ಯ
ಅಕ್ಕಿ ಚಿಲಿಮಿಲಿ ಮಾದಯ್ಯ
ಕಾವಿ ಕೌಪೀನ ಮಾದಯ್ಯ
……………………..
ಕೆಂದೂಳಿ ಬಟ್ಟು ಮಾದಯ್ಯ
ಅವನ ದೇಹ ಮಾತ್ರ ‘ಮಾಟ ಚೆಮ್ಬೊನ್ನು ಮಾದಯ್ಯ ‘, ಪ್ರ್ರಾಯಶಃ ಜನಾಂಗದ ಮನದಲ್ಲಿ ಕುಂತಿರುವ ಸಂತನೂ ಇಂಥವನೇ.
ಈ ಲೋಕದಲ್ಲಿ ಅದು ಬೇರೆ ಇದು ಬೇರೆ ಇಲ್ಲ.

ಮಂದಿ ದೊಂದಿಕುಣಿತ

ದೊಂದಿ ಮಂದಿ ಕುಣಿತ

ಮಂದಿ ದೊಂದಿಯಾಗಿ ದೊಂದಿ ಮಂದಿಯಾಗಿ ಕುಣೀತಾರೆ. ಎರಡು ಒಂದಾಗಿ ಒಂದು ಎರಡಾಗಿ ಕೊನೆಗೆ ಒಂದೇ ಆಗುವಂತಹ ಪ್ರಪಂಚ. ಭೇದಭಾವಕ್ಕೆ ಎಡೆಯಿಲ್ಲ. ಇಂಥ ಜೀವ ತಂತು ಒಂದನ್ನು ಇನ್ನೊಂದು ಅಖಂಡವಾಗಿ ಹಿಡಿಯುವಂಥದ್ದು. ಅದಕ್ಕಾಗಿ

ಒಕ್ಕಳ ಕುಡಿಕಾಯೊ

ಒಡ್ಲು ಗುಡ್ಲು ಕಾಯೊ

ಮಾನ ಮರ್ವಾದಿ ಕಾಯೊ

ಎಂಬ ಪ್ರ್ರಾರ್ಥನೆ . ಇದು ವ್ಯಕ್ತಿಯ ಪ್ರಾರ್ಥನೆಯಲ್ಲ. ಸಮಷ್ಟಿಯ ಪ್ರಾರ್ಥನೆ. ಇಲ್ಲೂ ಸಹ ‘ಅಂಗಂಗೆ ಕುಂತವ್ನೆ ಸಂತ’.

ಆದ್ದರಿಂದಲೇ ಈ ಮೂಲ ಪುರುಷ ಈ ಗೆಂಡಗಯ್ಯ

ಬಿತ್ತನೆ ಬೀಜ, ರತ್ನ ಸಾಜ.

ಈ ಮೂಲ ಬಿತ್ತನೆಯಿಂದಲೇ ಹೊಸ ಸೃಷ್ಟಿ, ಹೊಸ ಧ್ವನಿ ಹೊಸ ಉತ್ಸಾಹ, ಹೊಸ ಹೂವು, ಹೊಸ ಹಣ್ಣು -ಕಾಯಿ-ಹೀಗೆ ಬಿತ್ತನೆಯೊದಗಿಸಿದ ಸಂತ ‘ಮಾಗಿ ಕುಂತ ಸಂತ’ನಾಗಿ ಬೆಳೆಯುತ್ತಾನೆ , ಅನಾದಿಯಾಗಿದ್ದಾನೆ. ಇಲ್ಲೆಲ್ಲವೂ ಪ್ರಕೃತಿ -ಸಂಸ್ಕೃತಿಯಾಗುತ್ತಿದೆ, ಸಂ-ವೃದ್ಧಿಯಾಗುತ್ತಿದೆ. ಅಲ್ಲದೆ ಈ ಜನಾಂಗ ಯಾವುದರ ಕಡೆ ತುಡಿಯಬೇಕು , ಯಾವುದು ಜೀವವನ್ನು ನಡೆಸುವ ಚಾಲಕ ಶಕ್ತಿ (driving force) ಆಗುತ್ತದೆ ಎಂಬುದನ್ನು ನಿರ್ದೇಶಿಸುತ್ತದೆ.

ಎಲೆಬಾಳೆ ವೂವು ವೊಂಬಾಳೆ

ಎಳನೀರು ತಳಿಗೆ ತಂಬಿಟ್ಟು

ತುಪ್ಪಾದ ಕಜ್ಜಾಯ ಕಪ್ಪೂರ ಜೋತಿ

ಎತ್ತಿ ಮಾಡ್ತೀವಿ ತಂಪು

ಇದಕ್ಕಾಗಿಯೇ ಗೆಂಡಗಯ್ಯ ಜೀವಂತವಾಗಿದ್ದಾನೆ. ಸಂತನಾಗಿದ್ದಾನೆ. ಈ ಪುರುಷನ ತಳಿ ಬೆಳೆಯುತ್ತಿದೆ. ಇದನ್ನು ಗಮನಿಸುತ್ತಾ ”ತದೇಕ ಕುಂತವ್ನೆ ಸಂತ-ಮಹಂತ. ಹಿಂಗೆ ಕುಂತ ಸಂತನ ಇರ’ವು ಅವನು ಮೌನವಾಗಿದ್ದರೂ

ತಾಪ ತಪಿಸಿ ಒಡಮೂಡಿದ್ದೇ ಮಾತು

‘ಆಗು’ತ್ತದೆ.

ಹೀಗೆ ಉದ್ದಕ್ಕೂ ಮಾತನಾಡದೆ ಕುಂತ ಸಂತ ಈ ಪ್ರಾಪಂಚಿಕವಾದ ಭೌತದ ನೆಲೆಯಿಂದ ಮೂಲ ನೆಲೆಗೆ ಕರೆದೊಯ್ಯುವವನಾಗುತ್ತಾನೆ, ಸಾರ್ವತ್ರಿಕವಾಗುತ್ತಾನೆ.

ಈ ‘ಗೆಂಡಗಯ್ಯ’ ಕವನ ಪ್ರಸ್ತುತವಾಗುವುದು ಈ ರೀತಿ ಬೆಳೆಯುವುದರಿಂದ. ಈ ಮೂಲಕ ಸ್ವಾತಂತ್ರೋತ್ರರ ಭಾರತದ ‘ಇರವು’ (State) ಅನ್ನು ಪರಿಕಿಸುವ ರೀತಿ ಭಿನ್ನವಾಗುತ್ತದೆ, ಮುಖ್ಯವಾಗುತ್ತದೆ. ಈ ಕಾವ್ಯ ಪ್ರಪಂಚದ ಧ್ವನಿ (voice) ಭೌತಿಕ ಪ್ರಪಂಚದಲ್ಲಿದ್ದಂತೆ ವಸ್ತು ನಿರ್ದೇಶಕಗಳಾಗುವುದಿಲ್ಲ , ಕಾವ್ಯಧ್ವನಿಯಾಗುತ್ತದೆ. ಇವೆಲ್ಲ ‘ಆಗು’ವುದು ಈ ಕವನದಲ್ಲಿ ಕುಂತ ಸಂತನಂತೆ, ಸಾಕ್ಷೀ ಪ್ರಜ್ಞೆಯಲ್ಲಿ. ಸ್ವಾತಂತ್ರಪೂರ್ವದಲ್ಲಿ ನಮ್ಮ ನಾಡಿನ ಜನತೆಯ ಈ ಸಾಕ್ಷ್ಮೀ ಪ್ರಜ್ಞೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡ ಸಂತ ಗಾಂಧೀ, ಇದನ್ನು ಒಂದು ಧನಾತ್ಮಕ ‘ಶಕ್ತಿ’ಯಾಗುವಂತೆ ಮಾಡಿದವರು ಗಾಂಧೀ . ಸ್ವಾತಂತ್ರ್ಯಾನಂತರ ಈ ಜನತಂತ್ರದಲ್ಲಿ ಇಡೀ ಇಡಿಯಾದಾದೆಲ್ಲ ಬಿಡಿಬಿಡಿಯಾಯ್ತು. ಶಕ್ತಿ ರಾಜಕೀಯ(power politics)ನಲ್ಲಿ ಚೆಲ್ಲಾಪಿಲ್ಲಿಯಾಯ್ತು. ಈ ದೇಶದ ಅವಕಾಶ (Space) ಒಂದಾದರೂ, ಪ್ರಜ್ಞೆಯಲ್ಲಿ ಮಾನಸಿಕವಾಗಿ ಒಂದಾಗಲಿಲ್ಲ. ಈ ಸ್ಥಿತಿಯಲ್ಲಿ ಸಾಂಸ್ಕೃತಿಕ ಅವಕಾಶ (cultural Space) ಈ ದೇಶವನ್ನು ಕಲ್ಪಿಸಿಕೊಳ್ಳುವ ಶಕ್ತಿಯಾಗುವುದು ಇಂಥ ‘ಚಾಲಕ ಶಕ್ತಿ’ಯನ್ನು ಪ್ರತಿಯೊಂದು ಜನಾಂಗವೂ ಧನಾತ್ಮಕವಾಗಿ ರೂಪಿಸಿಕೊಳ್ಳುವುದರ ಮೂಲಕ. ಆದ್ದರಿಂದಲೇ ಈ ಕವನದಲ್ಲೆಲ್ಲಾ ಇನ್ನೊಂದು ಜನಾಂಗದ ಬಗ್ಗೆ ಮೌನವೇ ಕಾಣುತಿದೆ. ಅವರವರು ತಮ್ಮ ಮಾನಸಿಕ ಅವಕಾಶ (mental Space) ಸೃಷ್ಟಿಸಿಕೊಳ್ಳಲುಜಾಗ ಮಾಡಿಕೊಡುತ್ತದೆ. ಈ ಪ್ರತ್ಯೇಕತೆ ಮತ್ತು ಏಕತೆ “ಮಂದಿದೊಂದಿ ಕುಣಿತ /ದೊಂದಿಮಂದಿ ಕುಣಿತವಾಗುತ್ತದೆ.” ಏಕಕಾಲದಲ್ಲಿ ಭಿನಾಭಿನ್ನತೆಗಳೆರಡೂ ಇರುತ್ತದೆ ಎಂಬುದನ್ನು ತಂದುಕೊಡುವುದರ ಜೊತೆಗೆ ಧನಾತ್ಮಕ ಶಕ್ತಿಯಾಗಿ ಬೆಳೆಯುವ ಪರಿಯನ್ನು ಈ ಸಾಂಸ್ಕೃತಿಕ ಪಠ್ಯ ಸೃಷ್ಟಿಸಿಕೊಡುತ್ತದೆ.

ಅಂತೆಯೇ ಒಂದು ಜನಾಂಗವನ್ನು ಒಗ್ಗೂಡಿಸುವುದು, ಬಡತನವನ್ನು ಸಾಂಸ್ಕೃತಿಕ ಶ್ರೀಮಂತಿಕೆಯಾಗಿ ಪರಿವರ್ತಿಸುವುದು , ಒಂದೆಡೆ ಎಲ್ಲರನ್ನೂ ಹಿಡಿದಿಡುವುದು, ಇವೆಲ್ಲವೂ ಪೌರಾಣಿಕ ಮತ್ತು ಕ್ರಿಯಾವಿಧಿ(ritual)ಗಳ ಪ್ರಜ್ಞೆಯಾಗುವುದು ಈ ಕವನದ ಮೂಲಕ ನಮಗೆ ದೊರೆಯುತ್ತದೆ. ಈ ಪೌರಾಣಿಕ ಪ್ರಜ್ಞೆ ‘ಅಭೂತ’ವಾಗುವುದು, ಅಖಂಡ ಕಾಲವಾಗಿ ಬೆಳೆಯುವುದು . ಇಂಥ ಜನಾಂಗ ಈ ದೇಶದ ಚರಿತ್ರೆಯಲ್ಲಿ , ಮೌಖಿಕ ಸಂಪ್ರದಾಯದ ಸಮುದಾಯದ ಭಾಷೆಯಿಂದ ಪಡೆದುಕೊಂಡದ್ದು , ಮೂರ್ತವಾದದ್ದನು ಈ ಕವನ ಬೆಳೆಯುವ ರೀತಿಯೇ ನಿರ್ದೇಶಿಸುತ್ತದೆ. ಇದು ದೇಶಿಯಾಗುತ್ತದೆ.

ಇಲ್ಲಿ ದಿನ ದಿನದ ಜನಸಾಮಾನ್ಯರ ಚರಿತ್ರೆ, ಚರಿತೆಯಾಗಿ, ಪುರಾಣವಾಗಿ, ಪರಿವರ್ತಿತವಾಗಿ-ಜನಪದರು ತಮ್ಮ ತಮ್ಮ ಮೌಖಿಕ ಸಂಪ್ರದಾಯದ ಚರಿತ್ರೆಯನ್ನು ಸೃಷ್ಟಿಸಿಕೊಳ್ಳುವ ಮನಸ್ಸನ್ನು ನಮ್ಮ ಮುಂದೆ ಕವಿ ತೆರಿದಿಟ್ಟಿದ್ದಾರೆ. ಇಲ್ಲಿ ಅಲಿಖಿತ ಚರಿತ್ರೆ ಲಿಖಿತವಾಗುತ್ತದೆ. ತಲೆ ತಲಾಂತರದಿಂದ ಬದುಕಿ , ಬಾಳಿ ಬಂದ ಜೀವತಂತುವನ್ನು- ಗೆಂಡಗಯ್ಯನನ್ನು-ಈ ಜೀವ ಮೂಲವನ್ನು ಅರಸುವ ಚಿತ್ರವನ್ನು ಕಟ್ಟಿ ಕೊಡುವುದರ ಮೂಲಕ ಶಿವತೀರ್ಥನ್ ಅವರ ಸಾಮುದಾಯಕ ಚಿತ್ರಣ ಒಳ್ಳೆಯ ಮನಸ್ಸಿನ ತುಡಿತವಾಗುತ್ತದೆ. ಈ ದೇಶದ ಪ್ರತಿಯೊಂದು ಸಮುದಾಯವು ತನ್ನಲ್ಲಿ ಅಡಗಿರುವ ಜೀವಶಕ್ತಿಯನ್ನು ಹೊರಹಾಕುವ, ಸಹಬಾಳ್ವೆಯ ಚಿತ್ರಣವಾಗುತ್ತದೆ. subaltern ಚರಿತ್ರೆಯಾಗುತ್ತದೆ . ಈ ಸಂತನ ‘ಸರ್ವಸಾಕ್ಷಿ ಪ್ರಜ್ಞೆ’ಯನ್ನು ಕುಂತು ನೋಡುವ ಮನಸ್ಸು, ನಮ್ಮ ಸಮಾಜಕ್ಕೆ ಬೇಕಾಗಿದೆ. ಈ ದೃಷ್ಟಿಯಿಂದ ಈ ಕವನ ಪ್ರತ್ಯೇಕವಾದ ಮನೋ ಕೋಶವನ್ನು ತೆರೆಯುತ್ತದೆ . ಅದಕ್ಕಾಗಿಯೇ ಇದು ಶಕ್ತಿ ರಾಜಕೀಯವಾಗದೆ ‘ಸಾಂಸ್ಕೃತಿಕ ಚರಿತ್ರೆ’ಯಾಗಿದೆ ತಿಳಿ ನೀರಾಗಿದೆ. ಈ ಕದಡಿದ ಸಮಾಜಕ್ಕೆ ತಿಳಿವನ್ನು ಕೊಡುವ ಮಾದರಿಯಾಗಿದೆ.

ಆದ್ದರಿಂದಲೇ `ಗೆಂಡಗಯ್ಯ’ನ ಪುರಾಣ ಪ್ರಜ್ಞೆ ಈ ಬಹು ಜನಾಂಗಗಳು ಬದುಕುವ ನಮ್ಮ ದೇಶದಲ್ಲಿ “ಮೂಲಭೂತವಾದಿ’ಗಳನ್ನು ಸೃಷ್ಟಿಸುವ ಪ್ರಜ್ಞೆ ಆಗುವುದಿಲ್ಲ. ಇಲ್ಲಿಯ ಸಂತನಾಗಲೀ, ಗೆಂಡಗಯ್ಯನಾಗಲಿ, ಸಕಲ ಜೀವಿಗಳನ್ನು ಸೃಷ್ಟಿಸುವ ‘ಗಂಗೆ’ ಯಾಗಲೀ ಪ್ರತ್ಯಕ್ಷವಾಗುವುದು ಅವುಗಳ ಅವತರಣಿಕೆಗಳಿಂದ.

ಇಂಥ ಪುರಾಣಗಳ ಪ್ರಜ್ಞೆ ಸಮಾಜವನ್ನು ಸ್ಥಗಿತಮಾಡಲು ಬಿಡುವುದಿಲ್ಲ. ಈ ಪ್ರಜ್ಞೆ ಜನಾಂಗದ ಶಕ್ತಿಯನ್ನು ಧನಾತ್ಮಕವಾಗಿ ಮುಂದುವರೆಸಿಕೊಂಡು ಹೋಗುವ ಸಾಧನವಾಗಿ ಇರುತ್ತದೆ. ಈ ಪ್ರಜ್ಞೆ ಈ ಪ್ರಪಂಚದ ತಾರ್ಕಿಕ ಅನುಭವದ್ದಲ್ಲ. ಇಲ್ಲಿ ಚರಿತ್ರೆ ಚರಿತೆಯಾಗಿ ಕಾಣುತ್ತದೆ. ಇಂಥವು ಜೀವನಕ್ಕೆ ಒಂದು ಉದ್ದೇಶವನ್ನೂ ಬದುಕಿಗೆ ಇಚ್ಛಾಶಕ್ತಿಯನ್ನು ತುಂಬುತ್ತವೆ. ಅಲ್ಲದೆ ಜನಸಮುದಾಯದ ಭಾಷೆ ಎಂದರೇನು ಎಂಬುದನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ದೇವನೂರು ಮಹಾದೇವರ ‘ಕುಸುಮಬಾಲೆ’ಯಾ ನಂತರ ಬಂದ ಸಮಷ್ಟಿ ಪ್ರಜ್ಞೆಯ ಕವನವಾಗುತ್ತದೆ.

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಪಠ್ಯಕ್ಕೆ ಒಂದು ಅರ್ಥವಿಲ್ಲ. ಅದು ಓದುಗರ ಸೃಷ್ಟಿಗೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ. ಒಂದು ವಿಷಯಕ್ಕೆ ಒಂದು ರಚನೆಯಿದೆ ಎಂದುಕೊಂಡಾ ಕ್ಷಣವೇ ಈ ರಚನೆಯೇ ಪಠ್ಯದ ವಸ್ತು ಎಂದು ಹೇಳಿಬಿಡಬಹುದು . ಇದು ಒಂದು ಕೇಂದ್ರವನ್ನು ಹುಡುಕಿದಂತೆ. ಆದರೆ ಪಠ್ಯದ ಕೇಂದ್ರವು ಯಾವಾಗಲೂ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಕೇಂದ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಇಲ್ಲಿ ಪಠ್ಯವೆಂದರೆ ಯಾವುದಾದರೂ ಒಂದು ನಾಟಕವಾಗಿರಬಹುದು ಅಥವಾ ಯಾವುದೇ ಸಾಹಿತ್ಯ ಕೃತಿಯಾಗಿರಬಹುದು. ಈ ಸಾಹಿತ್ಯ ಕೃತಿಗೆ ಯಾವುದೇ ಒಂದು ರೀತಿಯ ರಚನೆಯಿರುವುದಿಲ್ಲ. ಇದು ಬಹಳ ಮುಖ್ಯವಾದುದು . ಏಕೆಂದರೆ ಮಾತಿನಂತೆ ರಚನೆಗಳೂ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತವೆ. ಹೇಗೆ ಪುನರ್ ಸಾಂದರ್ಭೀಕರಣಕ್ಕೆ ಒಳಗಾಗುತ್ತಾ ಹೊಸ ರೀತಿಯ ಸಾಂಸ್ಕೃತಿಕ ಶೂನ್ಯತೆ ಉಂಟಾಗುತ್ತದೆ.

ಸಾಹಿತ್ಯ ಪಠ್ಯ ಸೃಷ್ಟಿಯಾಗುವುದೆಂದರೆ ಇದುವರೆವಿಗೂ ಆ ಸಂಸ್ಕೃತಿಯಲ್ಲಿ ಆ ಅರ್ಥ ಸೃಷ್ಟಿಯಾಗಿಲ್ಲವೆಂದರ್ಥ. ಅರ್ಥ ಭಾಷೆಗಾಗಿ ಕಾಯುತ್ತಾ ಕುಳಿತಿರುತ್ತದೆ. ಯಾವುದೇ ಪಠ್ಯವೂ ಏಕ  ಸಾಪೇಕ್ಷಕವಾಗಿಯೂ, ಸಾರ್ವತ್ರಿಕವಾಗಿಯೂ ಇರುತ್ತದೆ. ಒಬ್ಬ ಬರಹಗಾರ ಪಠ್ಯವನ್ನು ಸೃಷ್ಟಿಸಿವುದು ವೈಯಕ್ತಿಕ ನೆಲೆಯಲ್ಲಿ. ಆದರೆ ಅದೇ ಕಾಲದಲ್ಲಿ ಅದು ಇನ್ನೊಬ್ಬರಿಗೂ ಅರ್ಥವಾಗುತ್ತಿರುತ್ತದೆ. ನೂರರಷ್ಟು ಅರ್ಥವಾಗದಿರಬಹುದು. ಅರ್ಥವಾಗುತ್ತದೆ ಎನಿಸುತ್ತಿರುವಾಗಲೇ ನಿಗೂಢ ನಿಗೂಢವಾಗಿಯೂ ಇದೆ ಎನಿಸುತ್ತದೆ. ಭಾಷೆ ನಮಗೆ ಅರ್ಥವಾಗುತ್ತಿದೆ ಎನಿಸುತ್ತಿರುವಾಗಲೇ ಎಲ್ಲಿಯೋ ಅರ್ಥವಾಗಿರುವುದಿಲ್ಲ . ಸಾಹಿತ್ಯ ಕೃತಿಯೂ ಹಾಗೆಯೇ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ.
ಈ ದೃಷ್ಟಿಯಲ್ಲಿ ನೋಡಿದಾಗ ಪಠ್ಯದಲ್ಲಿ ಪಠ್ಯ ಸೃಜಿಸುವವನ ಅರ್ಥ ಮತ್ತು ಓದುಗರ ಅರ್ಥ ಎಂಬುದಿಲ್ಲ. ಯಾವುದೇ ಪಠ್ಯದಲ್ಲಿ ಒಂದು ಅರ್ಥವಿರುವುದಿಲ್ಲ. ಒಂದು ಪಠ್ಯದಲ್ಲಿ ಅರ್ಥದ ವಿವಿಧ ಛಾಯೆಗಳು ಮಾತ್ರ ಇರುತ್ತವೆ. ನಾವು ಈಗ ಏನನ್ನು ಗುರುತಿಸುತ್ತಿದ್ದೇವೆಯೋ ಅಷ್ಟನ್ನು ಮಾತ್ರ ಗುರುತಿಸಕೊಳ್ಳಬಹುದು . ಒಂದು ವಸ್ತು ಅಥವಾ ಪಠ್ಯವನ್ನು ಓದಿದಾಗ, ಒಂದು ಕತೆಯನ್ನು ಅಥವಾ ಒಂದು ನಾಟಕವನ್ನು ಓದಿದಾಗ, ನಮಗೆ ಸದ್ಯದ ಅರ್ಥ ಮಾತ್ರ ಸಿಗುತ್ತಿರುತ್ತದೆ. ಉಳಿದ ಅರ್ಥಗಳೆಲ್ಲ ಗಾಳಿಯಲ್ಲಿ ತೇಲಾಡಿದಂತೆ ಇರುತ್ತದೆ. ಹಿಂದೆ ಹೇಳಿದಂತೆ ಯಾವುದೇ ಸಂಜ್ಞೆಯು ತನ್ನ ಶುದ್ಧ ಸ್ಥಿತಿಯಲ್ಲಿರುವುದಿಲ್ಲ. ಏಕೆಂದರೆ ಯಾವುದೇ ಒಂದು ಪಠ್ಯ ಎಂದ ತಕ್ಷಣ ಅದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮಗಳು ಬಂದು ಬಿಡುತ್ತವೆ. ಯಾವುದೇ ಪಠ್ಯವೇ ಆಗಲಿ, ಓದಾಗಲಿ ಈ ಅರ್ಥದಲ್ಲಿ ಸಾಚಾ ಆಗಿರುವುದಿಲ್ಲ. ಈ ರೀತಿಯ ಸಂದರ್ಭವನ್ನು ಸೃಷ್ಟಿಸಿಕೊಳ್ಳುವುದೆಂದರೆ ಒಂದು ರೀತಿಯ ಒಂದು ಓದುವಿಗೂ ಮತ್ತೊಂದು ಓದಿವಿಗೂ ನೂರಕ್ಕೆ ನೂರರಷ್ಟು ಅನುಗುಣವಾಗಿ ಅರ್ಥದ ವಿವಿಧ ಛಾಯೆಗಳನ್ನು ಮಾತ್ರ ಓದುಗ ಗುರುತಿಸಿಕೊಳ್ಳಬಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ವಿಮರ್ಶಕರು ಏನು ಮಾಡುತ್ತಿದ್ದಾರೆಂದರೆ ಯಾವುದೇ ಒಂದು ಸಾಹಿತ್ಯ ಕೃತಿಯಲ್ಲಿ ಒಂದು ಅರ್ಥವನ್ನು ಮಾತ್ರ ಕಾಣುವುದಕ್ಕೆ ಪ್ರಾರಂಭಿಸುತ್ತಾರೆ. ನಾನ ಮೊದಲೇ ಹೇಳಿದಂತೆ ಭಾಷೆಗೆ ಒಂದು ಅರ್ಥವಿರುವುದಿಲ್ಲ. ಯಾವಾಗ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತಿರುತ್ತದೋ ಆಗ ಅನೇಕ ಅರ್ಥಗಳು ಹೊರಡುತ್ತಿರುತ್ತವೆ.
ಈಗ ಉದಾಹರಣೆಗೆ ಮನೋವೈಜ್ಞಾನಿಕ ವಿಮರ್ಶಕರು ಏನು ಮಾಡುತ್ತಾರೆಂದರೆ ಸಾಹಿತ್ಯ ಕೃತಿಯನ್ನು ಮನೋವೈಜ್ಞಾನಿಕ ವಿಶ್ಲೇಷಣೆಯ ಉದಾಹರಣೆಯಾಗಿ ತೆಗೆದುಕೊಂಡು ಅಷ್ಟಕ್ಕೇ ಮಾತ್ರ ತಮ್ಮ ಅರ್ಥವನ್ನು ಸಂಕುಚಿತಗೊಳಿಸುತ್ತಾರೆ. ಒಂದು ರೀತಿಯಲ್ಲಿ ಬರಹಗಾರನ ವೈಯಕ್ತಿಕ ಮಾನಸಿಕ ಸ್ಥಿತಿಯನ್ನು ಹುಡುಕುವುದಕ್ಕೆ ಪ್ರಯತ್ನಿಸುತ್ತಾರೆ.  ವಿಮರ್ಶೆ ಅಲ್ಲಿ ಮಿತಿಗೊಳಿಸಿಕೊಳ್ಳುತ್ತದೆ. ಅಸ್ತಿತ್ವವಾದಿ ವಿಮರ್ಶೆ ಪಠ್ಯವನ್ನು ಒಂದು ಯೋಜನೆಯೆಂದು ಭಾವಿಸುತ್ತದೆ. ಒಂದು ಪಠ್ಯ ಹೇಗೆ ಯೋಜಿತವಾಗಿದೆ ಎನ್ನುವುದನ್ನು ನೋಡುತ್ತದೆ. ಮಾರ್ಕ್ಸ್ ವಾದಿ  ವಿಮರ್ಶೆ ಸಾಮಾಜಿಕ ಚಾರಿತ್ರಿಕ ಅರ್ಥವನ್ನು ಮಾತ್ರ ಹುಡುಕುತ್ತಾ ಹೋರಾಡುತ್ತದೆ. ಈ ರೀತಿ ನಮ್ಮ ವಿಮರ್ಶೆಗಳು ಏನು ಮಾಡುತ್ತಿವೆಯೆಂದರೆ ಪಠ್ಯವನ್ನು ಒಂದು closed text ಆಗಿ ನೋಡುತ್ತಿವೆ. ಆದರೆ ಪ್ರತಿ ಸಲ ಯಾವುದೇ ಟೆಕ್ಸ್ಟ್ retexutal ಆಗಿರುತ್ತದೆ. ಈಗ ಉದಾಹರಣೆಗೆ ಕಂಬಾರರು ಜಾನಪದ ಅಥವಾ myth ಬಳಸುತ್ತಾರೆ. myth ಬಳಸುವ ಉದ್ದೇಶ ಅದರ ಮೂಲಕ ಇನ್ನೊಂದೇನನ್ನೂ ಹೇಳುವುದು. ಆ myth  ಅಲ್ಲಿ ಒಂದು ಸಂದರ್ಭವನ್ನು ತೆಗೆದು ಇನ್ನೊಂದು ಸಂದರ್ಭಕ್ಕೆ ಅದನ್ನು ಸಂಯೋಜಿಸಿದಾಗ ಹೊರಡುವ ಅರ್ಥವೇ ಬೇರೆಯಾಗಿರುತ್ತದೆ.
 ಈಗ ಉದಾಹರಣೆಗೆ ಅವರ “ಜೋಕುಮಾರ ಸ್ವಾಮಿ”ಯಲ್ಲಿ ಬರತಕ್ಕಂತಹ ಪಡುವಲಕಾಯಿ myth ತೆಗೆದುಕೊಂಡರೆ ಅದು ಕೇವಲ ನಮಗೆ ಪಡುವಲಕಾಯಿ myth ಆಗಿ ಉಳಿಯುವುದಿಲ್ಲ. ಏಕೆಂದರೆ ಅಲ್ಲಿ ಕಂಬಾರರ ನಾಟಕದ  ಪಠ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಿರುತ್ತದೆ. ಅದು ಕೇವಲ ಜಾನಪದವಾಗಬೇಕಾಗಿಲ್ಲ. ಅದನ್ನು ಪರಿಗಣನೆಗೆ ತೆಗೆದುಕೊಂಡಾಗ ಅದು ಪುನಃ ಪುನರ್ ಸಾಂದರ್ಭೀಕರಣಕ್ಕೆ ಒಳಗಾದಾಗ ಅದರ ಅರ್ಥವೇ ಬೇರೆಯಾಗಿರುತ್ತದೆ . ಆದ್ದರಿಂದ ಅದು ಕೇವಲ ಜಾನಪದವಾಗಿಯೇ ಉಳಿದುಕೊಂಡಿರುವುದಿಲ್ಲ. ಅದು ಜಾನಪದಕ್ಕಿಂತ ಬೇರೆಯದಾಗಿ ಬೇರೆಯ ಅರ್ಥಗಳನ್ನೇ ಹೊರಡಿಸುವುದಕ್ಕೋಸ್ಕರವಾಗಿಯೇ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಲೇ  ಇರುತ್ತದೆ. ಆದ್ದರಿಂದ ಪಠ್ಯವನ್ನು ಗ್ರಹಿಸಿದ ತಕ್ಷಣ ಅದಕ್ಕೆ ಅನೇಕ ಅರ್ಥದ ಸ್ಥಳಾವಕಾಶವಿದ್ದೇ ಇರುತ್ತದೆ.
ಆದ್ದರಿಂದ ಪಠ್ಯ ಬಹುರೂಪಿ. ಸೈದ್ಧಾಂತಿಕವಾಗಿ  ಅನುಭವಕ್ಕೆ ಬಂದಿದ್ದೆಲ್ಲವನ್ನು ಹೇಳಬಹುದಾದರೂ ವಿಜ್ಞಾನದ ದೃಷ್ಟಿಯಿಂದ ನಾವು ಒಂದು ಸಂದರ್ಭವನ್ನು ಸೃಷ್ಟಿಸಿಕೊಂಡು ಏನನ್ನು ಹೇಳುತ್ತಿದ್ದೇವೆ ಎನ್ನುವುದಕ್ಕೆ ಒಂದು ಆವರಣವನ್ನು ಸೃಷ್ಟಿಸಿಕೊಳ್ಳುತ್ತೇವೆ. ಹೀಗೆ ಸೃಷ್ಟಿಸಿಕೊಂಡ ಆವರಣದಿಂದ ಸಂವಾದ ಕ್ರಿಯೆ ಸರಿಯಾಗಿ ನಡೆಯುವ ನೆಲೆ ಸ್ಥಾಪಿತವಾಗಿದೆಯೆಂದ ಮೇಲೆ ಅನುಭವವನ್ನು ಹಿಗ್ಗಿಸಲು ಪ್ರಯತ್ನಿಸುತ್ತೇವೆ. ಆದರೆ ಅರ್ಥವೂ ಸಂದರ್ಭಕ್ಕೆ ತಕ್ಕಂತೆ ಸಂಕುಚಿತಗೊಳ್ಳುತ್ತಲೇ ವೈಶಾಲ್ಯತೆಯನ್ನು ಪಡೆಯುತ್ತದೆ. ಸಂಕುಚಿತತೆ ಮತ್ತು ವೈಶಾಲ್ಯತೆ ಎರಡೂ ಒಟ್ಟೊಟ್ಟಿಗೆ ನಡೆಯುತ್ತಿರುತ್ತದೆ. ಇದೆ ರೀತಿ ಒಂದು ಸಾಹಿತ್ಯ ಪಠ್ಯದಲ್ಲೂ ಅದಕ್ಕೆ ಯಾವ ಓದು ಅರಾಜಕವಾಗಿರುವುದಿಲ್ಲ. ಆದ್ದರಿಂದ ಪಠ್ಯ ಮತ್ತು ಸಂದರ್ಭ ಬಹಳ ಮುಖ್ಯ. ಇದು ಅರ್ಥ ಪ್ರಸರಣ ಕ್ರಿಯೆ ನಡೆಯುವ ವಿಧಾನ. ಮಾರ್ಕ್ಸ್ ವಾದಿಗಳು ಹೇಳಿದಂತೆ ಥೀಸಿಸ್ ಮತ್ತು ಆಂಟಿಥೆಸಿಸ್ ಎರಡು ಸಿಂಥೆಸಿಸ್ ಆಗುವುದಿಲ್ಲ. ಭಾಷೆಯಲ್ಲಿ ಸೂಚಿ ಇರುತ್ತದೆ. ಸೂಚ್ಯ ಇರುತ್ತದೆ. ಇಲ್ಲಿ ಸೂಚ್ಯ ನಿರ್ದಿಷ್ಟವಾಗಿ ಕಂಡುಬಂದರೂ ಸೂಚಕ ನಿರ್ದಿಷ್ಟವಲ್ಲ. ಸೂಚ್ಯ ಮತ್ತು ಸೂಚ್ಯ ಮತ್ತು ಸೂಚಕ ಒಂದರಲ್ಲಿ ಒಂದು ಬೆರೆತುಕೊಳ್ಳುವುದಿಲ್ಲ. ಅದು ಕೇವಲ ಮೈ ಮತ್ತು ಮನಸ್ಸೆಂದು, ಆತ್ಮ ಮತ್ತು ದೇಹಗಳೆಂದು ಎರಡಾಗಿ ಒಡೆದಂತೆ ಆಗಿರುತ್ತದೆ, ಬೆಸುಗೆಯಾಗುತ್ತಿರುತ್ತದೆ ಮತ್ತು ಬಿಚ್ಚಿಕೊಳ್ಳುತ್ತಿರುತ್ತದೆ. ಇದೊಂದು ಸತತವಾದ ಪ್ರಕ್ರಿಯೆಯಾಗಿ ನಡೆಯುತ್ತಿರುತ್ತದೆ.
ಪಠ್ಯ ಈ ರೀತಿ ಕೆಲಸ ಮಾಡುತ್ತಿರುತ್ತದೆ. ಆದ್ದರಿಂದ ಯಾವುದೇ ಒಂದು ಪಠ್ಯದಲ್ಲಿ ಒಂದು ಕೇಂದ್ರವಿರುವುದಿಲ್ಲ. ಕೇಂದ್ರ ಬದಲಾಗುತ್ತಲೇ ಇರುತ್ತದೆ. ಕೃತಿ ಒಂದೇ ಆದರೂ ಅದರ ಕೇಂದ್ರ ಮಾತ್ರ ಬೇರೆ ಬೇರೆಯಾಗುತ್ತಿರುವುದು ಬಹಳ ಮುಖ್ಯವಾಗಿ ಗಮನಿಸಬಹುದಾದ ಅಂಶ.
ಇನ್ನೊಂದು ಉದಾಹರಣೆ ಕೊಡಬೇಕಾದರೆ ಕೃಷ್ಣ ಕಂಸನನ್ನು ಕೊಲ್ಲುವುದಕ್ಕೆ ಬಂದಾಗ ಜಟ್ಟಿಗಳಿಗೆ ಮೇರು ಪರ್ವತದಂತೆ ಕಂಡನು. ಬ್ರಾಹ್ಮಣರಿಗೆ ಇನ್ನೊಂದು ರೀತಿ ಕಂಡನು. ಕಂಸನಿಗೆ ಮತ್ತೊಂದು ರೀತಿ ಕಂಡನು . ಕೃಷ್ಣ ಒಬ್ಬನೇ ಆದರೂ ಅವನ ಕಾಣುವಿಕೆ ಬೇರೆ ಬೇರೆಯಾಗಿದ್ದಂತೆ ಪಠ್ಯವೂ ಸಹ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುವುದಿಲ್ಲ. ಸಂದರ್ಭ ಇದನ್ನು ನಿರ್ಧರಿಸುತ್ತಾ ಹೋಗುತ್ತಿರುತ್ತದೆ. ಹಾಗಾದರೆ ಈ ಅರ್ಥದಲ್ಲಿ ಪಠ್ಯವೆಂದರೇನು ಎನ್ನುವುದಕ್ಕೆ ನಾವು ಸ್ವಲ್ಪ ವಿಶ್ಲೇಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಪಠ್ಯ ಮತ್ತು ಕೃತಿ ಬೇರೆ ಬೇರೆ ಎಂದು ನೋಡಬೇಕಾಗುತ್ತದೆ. ಕೃತಿಯೆಂದರೆ ನಾವು ಕೈಗಳಲ್ಲಿ ಹಿಡಿದುಕೊಳ್ಳುವಂತಹ ಒಂದು ಅಷ್ಟು. ಅದರಲ್ಲಿ ಪುಟಗಳಿರುತ್ತವೆ. ಆದರೆ ಪಠ್ಯ ಭಾಷೆಯಲ್ಲಿ ಆಗಿರುತ್ತದೆ. ಅದು ಯಾವುದೇ ಪಠ್ಯವಾಗಿರಬಹುದು . ಕೃತಿಗೂ, ಭಾಷೆಗೂ ಈ ವ್ಯತ್ಯಾಸವಿರುತ್ತದೆ. ಕೃತಿ ಹಾಳೆಗಳಲ್ಲಿ ಮುದ್ರಿತವಾಗಿ ಕಪಾಟಿನಲ್ಲಿ ಜಾಗ ಪಡೆಯುವ ಒಂದು ವಸ್ತು. ಪಠ್ಯ ಒಂದು ವಿಧಾನಾತ್ಮಕವಾದ ಕ್ಷೇತ್ರ. ಕೃತಿಯನ್ನು ಕೈಗಳಲ್ಲಿ ಹಿಡಿದರೆ ಪಠ್ಯವನ್ನು ಭಾಷೆಯಲ್ಲಿ ಹಿಡಿಯಬೇಕಾಗುತ್ತದೆ. ಅದು ಭಾಷೆಯಲ್ಲದೆ ಬೇರೆಯಲ್ಲ. ಅದರ ಇರುವಿಕೆ ಭಾಷೆಯಲ್ಲಿಯೇ, ಪಠ್ಯ ಭಾಷೆಯನ್ನೂ ಪುನರ್ ವಿಂಗಡಿಸುತ್ತದೆ. ಒಂದು ಬಾಷೆಯೆನ್ನುವುದು ಅದರಲ್ಲಿರುವುದಿಲ್ಲ. ಇದು ಬಹಳ ಮುಖ್ಯ .
 ಈಗ ಕಂಬಾರರ ಸಾಹಿತ್ಯದಲ್ಲಿ ಭಾಷೆ ಎಂದ ತಕ್ಷಣ ಅದರಲ್ಲಿ ಜಾನಪದದ ಸೊಗಡಿದೆ ಅಥವಾ ಉತ್ತರ ಕರ್ನಾಟಕದ ಭಾಷೆಯನ್ನೂ ಬಳಸುತ್ತಾರೆ ಎಂದು ನಾವು ತಿಳಿದು ಕೊಂಡಿರುತ್ತೇವೆ . ಆದರೆ ಇದು ಹಾಗೆ ಆಗುವುದಿಲ್ಲ. ಅಲ್ಲಿ ನಾನಾ ರೀತಿಯ ಭಾಷೆಗಳು ಬೆರೆತುಕ್ಕೊಳ್ಳುತ್ತಿರುತ್ತವೆ ಮತ್ತು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಿರುತ್ತವೆ. ಹೀಗಿರುವುದರಿಂದ ಅದು ಕಂಬಾರರ ಪಠ್ಯವಾಗುತ್ತದೆ. ಇದನ್ನು ನಾವು ಪಠ್ಯ ಎಂದು ತಿಳಿದು ಓದಬೇಕಾಗುತ್ತದೆಯೇ ವಿನಃ ಕೃತಿ ಎಂದು ಓದುವುದಕ್ಕಾಗುವುದಿಲ್ಲ. ಕೃತಿ ಒಂದು ನಿರ್ದಿಷ್ಟ ವಸ್ತು. ಆದರೆ ಪಠ್ಯವೆನ್ನುವುದು ಒಂದು ನಿರ್ದಿಷ್ಟ ವಸ್ತುವಲ್ಲ. ಅದು ಅಮೂರ್ತವಾದುದು . ನಮ್ಮ ಮನಸ್ಸಿನಲ್ಲಿ ರೂಪುಗೊಳ್ಳುವಂತಹದು. ಆದ್ದರಿಂದ ಭಾಷ ದೃಷ್ಟಿಯಲ್ಲಿ ನೋಡಿದಾಗ ಯಾವುದೇ ಕೃತಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಅಲ್ಲಿ ಅನೇಕ ಭಾಷೆಗಳು ಕೂಡಿಕೊಂಡಿರುವುದನ್ನು ನಾವು ನೋಡಬೇಕಾಗುತ್ತದೆ. ಈಗ ಉದಾಹರಣೆಗೆ ಮಹಾದೇವರವರ “ಕುಸುಮ ಬಾಲೆ”ಯಲ್ಲಿ ಬೇರೆ ಬೇರೆ ರೀತಿಯ ಭಾಷೆಗಳಿವೆ. ಅಲ್ಲಿ ಬ್ರಾಹ್ಮಣರ ಭಾಷೆಯಿದೆ, ಹರಿಜನರ ಭಾಷೆಯಿದೆ. ಲಿಂಗಾಯಿತರ ಭಾಷೆಯಿದೆ, ಮಾರ್ಕ್ಸ್ ವಾದಿಗಳ ಭಾಷೆಯಿದೆ. ಎಲ್ಲಾ ಭಾಷೆಗಳೂ ಇವೆ. ಇವೆಲ್ಲವೂ ಕೂಡಿಕೊಂಡು ಅದೊಂದು ಪಠ್ಯವಾಗಿದೆ. ನಾವು ವಿಮರ್ಶಕರು, ಸಾಮಾನ್ಯವಾಗಿ ಇದು ನಂಜನಗೂಡಿನ ಭಾಷೆ, ಕಂಬಾರರ ಬಗೆಗೆ ಹೇಳಬೇಕೆಂದರೆ ಇದು ಧಾರವಾಡದ ಭಾಷೆ ಎಂದು ಹೇಳುತ್ತೇವೆ. ಆದರೆ ವಾಸ್ತವವಾಗಿ ಇದು ನಿಜವಲ್ಲ. ಅವು ಪುನರ್ ಸಂದರ್ಭೀಕರಣಕ್ಕೊಳಗಾಗಿ ಪಠ್ಯದ ಭಾಷೆಯಾಗಿ ಮಾತ್ರವಾಗಿರುತ್ತವೆ . ಆದ್ದರಿಂದ ಕೆಲವೊಂದು ಪದಗಳನ್ನು ತೆಗೆದುಕೊಂಡು ನಾವು ಇದು ಧಾರವಾಡದ ಭಾಷೆ ಅಥವಾ ಇದು ನಂಜನಗೂಡಿನ ಭಾಷೆ ಎಂದು ಹೇಳಲಿಕ್ಕಾಗುವುದಿಲ್ಲ. ಪುನರ್ ಸಂದರ್ಭೀಕರಣಕ್ಕೊಳಗಾದಾಗ ಅದರಲ್ಲಿ ಬೇರೆ ಬೇರೆ ಭಾಷೆಗಳಿರುತ್ತವೆ. ಒಬ್ಬ ಕಳ್ಳನ ಭಾಷೆಯಿರಬಹುದು, ಒಬ್ಬ ಯೋಗಿಯ ಭಾಷೆಯಿರಬಹುದು. ಒಬ್ಬ ಬ್ಯಾಪಾರಿಯ ಭಾಷೆಯಿರಬಹುದು. ಈ ಎಲ್ಲ ಭಾಷೆಗಳ ಮಿಳಿತವಾಗಿ ಒಂದು ಪಠ್ಯವಾಗಿರುತ್ತದೆ. ಪಠ್ಯ ಭಾಷೆಯನ್ನೂ ಪುನರ್ ವಿಂಗಡಿಸುತ್ತದೆ . ಪ್ರತಿ ಪಠ್ಯವೂ ಒಂದು ಅರ್ಥದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅಂತರ್  ಪಠ್ಯಗಳಿಂದ ಕೂಡಿರುತ್ತದೆ . ಇದು ಬಹಳ ಮುಖ್ಯವಾದುದು .
ಪಠ್ಯ ಸೃಷ್ಟಿಯ ಮೂಲ ಉದ್ದೇಶ ಜ್ಞಾನ ಪ್ರಸರಣ. ಜ್ಞಾನ ಪ್ರಸರಣ ಕ್ರಿಯೆ ಕಾಲಾನುಕ್ರಮದಲ್ಲಿ ಸರಳ ರೇಖಾತ್ಮಕವಾಗಿ ನಡೆಯುವುದಿಲ್ಲ. ಪ್ರಸಾರಣವು ಪ್ರಜ್ಞಾಪೂರ್ವಕವಾಗಿಯಾಗಲಿ ಅಥವಾ ಅಪ್ರಜ್ಞಾಪೂರ್ವಕವಾಗಿಯಾಗಲೀ ಒಂದು ಗುಂಪಿನ ಶಕ್ತಿಯೊಡನೆ ನೆರೆ ಸಂಪರ್ಕವನ್ನು ಹೊಂದಿರುತ್ತದೆ. ಅದು ಅಗೋಚರವಾಗಿ, ವಿರಳವಾಗಿ ಕಾಣಿಸಿಕೊಳ್ಳುತ್ತಿರುತ್ತದೆ . ಈ ಶಕ್ತಿ ಸರ್ವಾಂತರ್ಮಿಯಾಗಿರುತ್ತದೆ. ಯಾವುದೇ ಸಂಸ್ಕೃತಿಯು, ಅದು ವಸಾಹತುಶಾಯಿಯದ್ದಾಗಿರಲಿ ಅಥವಾ ಆಳುವವರದ್ದಾಗಿರಲಿ, ಏಕ ಕಾಲದಲ್ಲಿ ಅಂತರ್ ಸಂಸ್ಕೃತಿಗಳಲ್ಲಿ ಪ್ರಕಟಗೊಳ್ಳುವುದಿಲ್ಲ. ಪ್ರಸಾರಣಗೊಂಡರೂ ಅದು ರೂಪುಗೊಳ್ಳುವುದಿಲ್ಲ. ಇದನ್ನು ನಾವು ಹೆಚ್ಚು ಹೊರಗಡೆಯಿಂದ ಎರವಲು ಪಡೆಯುತ್ತಿದ್ದೇವೆ ಎನ್ನುವ ಅಭಿಪ್ರಾಯವಿದೆ.
ಈಗ ಉದಾಹರಣೆಗೆ ಕಂಬಾರರು ಜಾನಪದದ ಎರವಲು ಪಡೆಯುತ್ತಾರೆ ಎನ್ನುತ್ತೇವೆ . ಇದು ನಿಜವಲ್ಲ. ಇಲ್ಲಿ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಾ ಇರುತ್ತದೆ. ಒಂದು ರೀತಿಯ ಚರಿತ್ರೆಯನ್ನು ಬದಲಾಯಿಸುತ್ತಿರುತ್ತದೆ . ಈ ಹಿನ್ನೆಲೆಯಲ್ಲಿ “ಸಿರಿ ಸಂಪಿಗೆ” ನಾಟಕದೊಳಗಿನ ಒಂದೆರಡು ಮಾತುಗಳನ್ನು ಇಲ್ಲಿ ಗಮನಿಸೋಣ. ಇದು ಹೇಗೆ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಪರಿಶೀಲಿಸೋಣ. ಭಾಷೆ ಬೇರೆ ಬೇರೆಯಾಗಿರುವುದೆಂದು ನಾನು ಹೇಳಿದೆನು. ಒಬ್ಬ ಹುಚ್ಚನ ಭಾಷೆಯಿರುತ್ತದೆ, ಒಬ್ಬ ಪ್ರವಾದಿಯ ಭಾಷೆಯಿರುತ್ತದೆ, ಒಬ್ಬ ವಿಜ್ಞಾನಿಯ ಭಾಷೆಯಿರುತ್ತದೆ, ಒಬ್ಬ ರಾಜಕಾರಣಿಯ ಭಾಷೆಯಿರುತ್ತದೆ.  ಈ ಎಲ್ಲಾ ಭಾಷೆಗಳೂ ಒಂದು ರೀತಿಯಲ್ಲಿ ಒಂದು ಪಠ್ಯದಲ್ಲಿ ಕೆಲಸ ಮಾಡುತ್ತಿರುತ್ತವೆ . ಕಂಬಾರರ “ಸಿರಿ ಸಂಪಿಗೆ”ಯಲ್ಲಿ  ಸಹ ಕೆಲಸ ಮಾಡುತ್ತಿರುವ ಭಾಷೆ ಯಾವುದೆಂದರೆ ಒಂದು ಪ್ರವಾದಿಯ ಭಾಷೆ ಮತ್ತು ಇನ್ನೊಂದು ಹುಚ್ಚನ ಭಾಷೆ. ಹುಚ್ಚನ ಭಾಷೆ ಅಥವಾ ಪ್ರವಾದಿಯ ಭಾಷೆ ನಮಗೆ ಏಕೆ ಅರ್ಥವಾಗುವುದಿಲ್ಲವೆಂದರೆ ಅದನ್ನು ನಮ್ಮ ಕ್ರಮದ ಸಾಂದರ್ಭೀಕರಣಕ್ಕೆ ಒಳಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.
ಈಗ ಭಾಗವತ ಹೇಳುವಂತಹದು “ಕುಲದೇವರವತರಿಸಿ ಕಾರಣಿಕ ಹೇಳಿದರು – ಎಲೆಗೆ, ಉಂಟವಗೆರಡು ದೋಷ, ಸನ್ಯಾಸಿಯಾಗುವನು  – ಧ್ವನಿ , ಭಂಗವಾದಾಗ ಅನುಜ ಸತ್ತಾಗ” ಈ ಒಂದು ಪ್ರವಾದಿ ಭಾಷೆಯನ್ನೂ ತಾಯಿ ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ, ಮಗ ಸತ್ತು ಹೋಗುತ್ತಾನೆ ಎನ್ನುವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾಳೆ. ಅದಕ್ಕಾಗಿ ಅವಳು ಏನು ಮಾಡುತ್ತಾಳೆಂದರೆ ನೀರಿನಲ್ಲಿ ನೆರಳು ನೋಡಿದ ಹಾಗೇ ಅವನಿಗೆ ಒಬ್ಬ ತಮ್ಮನಿಲ್ಲದಿರುವುದರಿಂದ ಅವನು ಸಾಯುವ ಸಾಧ್ಯತೆ ಕಡಿಮೆ ಎಂದು ಸಮಾಧಾನಪಟ್ಟುಕೊಳ್ಳುತ್ತಾಳೆ.
ಹೀಗಾಗಿ ಆ ಧ್ವನಿಗೆ ಅರ್ಥ ಬರುವುದು ಕೊನೆಯಲ್ಲಿ . ಈ ಒಗಟೆಲ್ಲಾ ಈ ಆಪಮ್ಭ್ರಂಶ ವೈರುಧ್ಯಗಳೆಲ್ಲಾ ಅಳಿದು “ಓ ಹೌದು ನಾನು ಹೀಗನ್ನಬಾರದಿತ್ತು ನಿನ್ನ ಮಾತನ್ನು ನಾನು ನಂಬುತ್ತೇನೆ” ಎಂದು ತಾಯಿ ಹೇಳುವಾಗ ಮಾತ್ರ ಅದು contextual ಆಗುತ್ತದೆ ಮತ್ತು ಅದರ ಅರ್ಥ ಅಲ್ಲಿ ಸೃಷ್ಟಿಯಾಗುತ್ತದೆ. ಈ ರೀತಿ ಕಂಬಾರರು ಭಾಷೆಯನ್ನು – ನಮ್ಮ ಕ್ರಮದಲ್ಲಿಲ್ಲದ ಭಾಷೆಯನ್ನೂ – ಬಳಸಿಕೊಂಡು ಅದನ್ನೊಂದು ಕ್ರಮಕ್ಕೆ ಅಳವಡಿಸಿಕೊಳ್ಳಲು ನೋಡುತ್ತಾರೆ. ಇದೆ ರೀತಿ ಬೇರೆ ನಾಟಕಗಳಲ್ಲೂ ಮಾಡುತ್ತಾರೆ. “ನಾಯಿ ಕಥೆ” ಎನ್ನುವ ನಾಟಕದಲ್ಲಿಯೂ ಅಷ್ಟೇ. ನಾಯಿ ಮಗ ಮಾತನಾಡಲು ಯಾವ ಅವಕಾಶವೂ ಇಲ್ಲ. ಆದರೆ ಕೊನೆಯಲ್ಲಿ ಮಾತ್ರ ಅವನು ಮಾತನಾಡುತ್ತಾನೆ. ಅವನ ಮೌನವನ್ನು ಮುರಿದು ಮಾತನಾಡಿಸುವ ಕ್ರಿಯೆಯನ್ನು ಕಂಬಾರರು ಇಲ್ಲಿ ಮಾಡುತ್ತಾರೆ. ಹೀಗೆ ಮೌನವನ್ನು ಮಾತನಾಡಿಸುವ ಕ್ರಿಯೆಯನ್ನು, ಪಠ್ಯವನ್ನು ಸೃಷ್ಟಿಸುವ ಕ್ರಿಯೆಯಾಗಿ ಕಂಬಾರರು ಕಂಡುಕೊಂಡಿದ್ದಾರೆ. ಅವರ ಪಠ್ಯಗಳಲ್ಲಿ ಮುಖ್ಯವಾಗಿ ಈ ವೈರುಧ್ಯಗಳು ಒಂದರ ಮೇಲೊಂದು ಆಗುವುದನ್ನು ಕಾಣುತ್ತೇವೆ . ಸರ್ಪ ಗರುಡಗಳೆಲ್ಲಾ ಮಿಳಿತಗೊಂಡು ಅದು ಒಂದೇ ಆಗುವುದನ್ನು ಕಾಣುತ್ತೇವೆ.
ಆದ್ದರಿಂದ ಕಂಬಾರರು ಸೃಷ್ಟಿಸುವಂತಹ ಸಾಹಿತ್ಯದಲ್ಲಿ ಬಾಷೆಯ ಮಿತಿಯನ್ನು ಕಂಡುಕೊಳ್ಳುವುದರೊಂದಿಗೆ ಭಾಷೆಯ ಶಕ್ತಿಯನ್ನು ಸಹ ಅವರು ತೋರಿಸುತ್ತಾರೆ. ಯಾವುದೇ ಬರಹವೂ ಭಾಷೆಯ ಮಿತಿಯಾಗುವಂತೆ, ಭಾಷೆಯ ಶಕ್ತಿಯೂ ಆಗುತ್ತದೆ. ಪ್ರತಿಯೊಬ್ಬ ಬರಹಗಾರನು ಎದುರಿಸುವ ಈ ಒಂದು ಪ್ರಶ್ನೆ ಈ ಭಾಷೆಯಲ್ಲಿಯೇ ಉಳಿಯ ತಕ್ಕಂತಹದು ಭಾಷೆಯನ್ನೂ ಬಿಟ್ಟು ಪಠ್ಯ ಇರುವುದಿಲ್ಲ. ಪಠ್ಯವೆಲ್ಲಾ ಭಾಷೆಯೇ ಆಗಿರುತ್ತದೆ. ಆದರೆ ಅದು ಸೃಜಿಸುವ ಅರ್ಥಗಳು ಅನಂತವಾಗಿರುತ್ತವೆ. ನಾವು ಈ ಅನಂತವಾದ ಅರ್ಥಗಳನ್ನು ಒಂದು ಸಂದರ್ಭಕ್ಕೊಳಪಡಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಿರುತ್ತೇವೆ.
ಕಂಬಾರರು ತಮ್ಮ ನಾಟಕಗಳಲ್ಲಿ ಪ್ರಮುಖವಾಗಿ ಬಳಸುವ ತಂತ್ರ ಭಾಷೆಯ ತಂತ್ರವಾಗಿರುತ್ತದೆ. ಆದ್ದರಿಂದ ನಾವು ಕಂಬಾರರ ಭಾಷೆಯನ್ನೂ ಭಾಷೆ ಎಂದಾಗ, ಕೇವಲ ಅದರ ಪದಗಳನ್ನಲ್ಲ , ಆ ಪದಗಳೆಲ್ಲಾ ಹೇಗೆ ಪುನರ್   ಸಂದರ್ಭೀಕರಣಕ್ಕೊಳಗಾಗಿ ಹೊಸ ಅರ್ಥವನ್ನು – ವಿವಿಧ ರೀತಿಯಲ್ಲಿ, ವಿವಿಧ ಕೇಂದ್ರಗಳಲ್ಲಿ , ನೆಲೆಗಳಲ್ಲಿ ನಿಂತು ನೋಡಿದಾಗ ಹೇಗೆ ಕೊಡುತ್ತದೆ – ಎನ್ನುವುದನ್ನು ನೋಡಬಹುದು. ಹೀಗೆ ಸ್ಥೂಲವಾಗಿ ನಾನು ಭಾಷೆ ಎನ್ನುವ ಪರಿಕಲ್ಪನೆಯನ್ನು ಕಂಬಾರರ ಕೆಲವು ನಾಟಕಗಳಿಗೆ ಅನ್ವಯಿಸಿ ಹೇಳಿದ್ದೇನೆ.
ನವ್ಯತೆ ಕೆಲವು ಪ್ರಶ್ನೆಗಳು

ನವ್ಯತೆ ಕೆಲವು ಪ್ರಶ್ನೆಗಳು

೧೯೫೦, ಅಂದರೆ ಸರಿಯಾಗಿ ಈ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಗೋಕಾಕರು ‘ನವ್ಯ ಕಾವ್ಯ’ದ ಪ್ರಣಾಳಿಕೆಯನ್ನು ಮುಂಬಯಿಯ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಹುಟ್ಟು ಹಾಕಿದುದು ಒಂದು ಚಾರಿತ್ರಿಕ ದಾಖಲೆಯಾಗಿದೆ. “ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ದಿಯನ್ನು ಮುಟ್ಟಿದಾಗ – ಮುಂದೇನೆಂಬ ಪ್ರಶ್ನೆ ಏಳುತ್ತದೆ. ಆ ಪ್ರಶ್ನೆಗೆ ಉತ್ತರ ಇದು, ನವ್ಯ ಕಾವ್ಯ” ಎಂದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಅನಿರ್ವಾರ್ಯರಾಗಿರುವ ‘ನವ್ಯ ದೃಷ್ಟಿ’ಯನ್ನು ಪ್ರತಿಪಾದಿಸಿ, ಅಲ್ಲಿಂದ ೨೫ ವರ್ಷಗಳ ತನಾ ಈ ನವ್ಯ ಕಾವ್ಯದ ರೂಪು ರೇಖೆಗಳ ಪ್ರತಿಪಾದನೆಯನ್ನು ವಿಧಿ ವಿಧಾನಗಳನ್ನು ಕ್ರೂಡ್ಹೀಕರಿಸಿಕೊಂಡು ಬಂದಿರುವ ಕೃತಿ ‘ನವ್ಯತೆ’. ಈ ದೃಷ್ಟಿಯಿಂದ ‘ನವ್ಯತೆ’, ‘ನವ್ಯ ಕಾವ್ಯ’ದ ಒಂದು ಲಾಕ್ಷಣಿಕ ಗ್ರಂಥವಾಗಿ ಬೆಳೆದುಬಂದಿದೆ.
ಗೋಕಾಕರು ನವ್ಯ ಕಾವ್ಯದ ಸುಳಿವನ್ನು ಹುಟ್ಟು ಹಾಕುವಾಗ ಆಗಲೇ ಎರಡು ಜಾಗತಿಕ ಯುದ್ದಗಳು ಅವುಗಳ ಪರಿಣಾಮ, ಭಾರತೀಯ ಜೀವನದ ಸಂಕೀರ್ಣತೆ, ಪಾಶ್ಚಿಮಾತ್ಯ ಸಂಸ್ಕೃತಿ, ಸಾಹಿತ್ಯಗಳನ್ನು ಅರಗಿಸಿಕೊಳ್ಳುವಾಗಿನ ತೊಳಲಾಟ ಅವರ ಗಮನ ಸೆಳಿದಿತ್ತು. ಆ ಹೊತ್ತಿಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಮಾನವನ ದೃಷ್ಟಿ ಮಲಿನವಾದಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮಲಿನಗೊಂಡಿರುವುದನ್ನು ಗುರುತಿಸಿ , ಈ ಸಂದರ್ಭದಲ್ಲಿ ‘ಒಂದು ನವ ಮಾನವತಾದೃಷ್ಟಿ ಸಾಹಿತ್ಯದ ನವ್ಯ ಜೀವನದ ದೃಷ್ಟಿಯಾಗಬೇಕು. ಈ ಜೀವನದ ದೃಷ್ಟಿ ನವ್ಯ ಸಾಹಿತ್ಯದಲ್ಲಿ ಮೊಳೆತು ಸಕಲ ಸೃಷ್ಟಿಯನ್ನೇ ದಿವ್ಯವಾಗಿಸಬೇಕು ಎಂಬ ಬಯಕೆ ಗೋಕಾಕರದಾಗಿತ್ತು. ಆಧುನಿಕ ಸಾಹಿತ್ಯ (ರಮ್ಯ ನವೋದಯ) ಮಾರ್ಗ ಈ ದೃಷ್ಟಿಯನ್ನು ತಟ್ಟಲು ಅಸಹಾಯಕವಾಗಿದೆ. ಆದ್ದರಿಂದ ಸಹಜವಾಗಿಯೇ ‘ನವ್ಯ ಕಾವ್ಯ’ ಕನ್ನಡದಲ್ಲಿ ಅನಿವಾರ್ಯ ಎಂಬ ವಾದವನ್ನು ಮಂಡಿಸಿದರು.
ಇಂದಿನ ಸಂಕೀರ್ಣ ಸಮಾಜದ ಬದುಕಿಗೆ ತಕ್ಕಂತೆ ವೈಜ್ಞಾನಿಕ, ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಜಾಗತಿಕ ರಾಜಕಾರಣ, ವಿಶ್ವ ಬಾಂಧವ್ಯ – ಮೊದಲಾದ ಚಲನವಲನಗಳನ್ನು ‘ಕುಲ’ಗಳ ಸಮಾಜ ವ್ಯ್ವವಸ್ಥೆಯಿಂದ ಹಿಡಿದು ಮಾರ್ಕ್ಸ್ ವಾದದ ತನಕ ಎಲ್ಲದರ ಪರಿಚಯವಾಗಿ ವಿಶ್ವ ಚದುರಂಗದಾಟ ಮನಸ್ಸನ್ನು ಸೆಳೆದಿರಬೇಕು. ಪ್ರಾಚೀನ, ಅವಾರ್ಚೀನ ದರ್ಶನ ಸಂಗ್ರಹಗಳು ನಮ್ಮದಾಗಬೇಕು. ಪ್ರಜಾಪ್ರಭುತ್ವ, ಸಮಾಜವಾದ, ಮಾರ್ಕ್ಸ್ ವಾದ, ಸರ್ವಾಧಿಕಾರತ್ವ , ನಿರಂಕುಶ ಸಮಾಜವಾದ ಇವೈದು ಆಧುನಿಕ ಸಮಾಜದ ದರ್ಶನಗಳು. ಸತ್ಯ, ಸೌಂದರ್ಯ, ಪ್ರೇಮ, ಕಲ್ಯಾಣ, ಮಂಗಳ – ಈ ಐದು ಆದರ್ಶಗಳು ವ್ಯಕ್ತಿಯ ಜೀವನದ ಐದು ಸೂತ್ರಗಳಾಗಬೇಕೆಂದು, ಇವು ನವ್ಯಕಾವ್ಯದ ದ್ರವ್ಯವಾಗಬೇಕೆಂದು ಕರೆಯಿತ್ತರು. ‘ಸಾಹಿತ್ಯವು ಬರೀ ಸತ್ಯ ಇಲ್ಲವೇ ಸೌಂದರ್ಯಕ್ಕೆ ಅಂಟಿಕೊಂಡು ನಿಲ್ಲದೆ ಮೇಲೆ ಹೇಳಿದ ಸಮ್ಯಕ್ತ್ವವನ್ನು ಚಿತ್ರಿಸಬೇಕಾಗಿದೆ. ಐದು ಅಮೃತ ತತ್ವಗಳ ಸಮೀಕರಣವಾಗಬೇಕಾಗಿದೆ . ಈ ಸಮೀಕರಣವೇ ನವ್ಯ ಸಾಹಿತ್ಯದ ಸೂತ್ರವಾಗಬೇಕಾಗಿದೆ ಎಂದು ಹೇಳಿದರು.
ಈ ರೀತಿಯ ಸಾಹಿತ್ಯದ ನವ್ಯ ಜೀವನದೃಷ್ಟಿ ಸಹಜವಾಗಿಯೇ ಆಗಿದ್ದು ಸಾಹಿತ್ಯ ಕ್ರಮದಿಂದ ಭಿನ್ನವಾದ ತತ್ವ, ದೃಷ್ಟಿ, ವಸ್ತು ಹೊಸ ಪ್ರಜ್ಞೆಗಳನ್ನೊಳಗೊಂಡ ಹೊಸ ಸಾಹಿತ್ಯವನ್ನು ನಿರೀಕ್ಷಿಸುವಂತೆ ಈ ಮಾತುಗಳು ಕಾಣುತ್ತವೆ. ಆದರೆ ಹೀಗೆ ನವ್ಯಕಾವ್ಯದ ಹೊಲವನ್ನು ಹುಟ್ಟು ಹಾಕಿದ ಗೋಕಾಕರೇ “ವಾಸ್ತವಿಕ ಇಲ್ಲವೇ ಅವಾಸ್ತವಿಕ ಪ್ರಜ್ಞೆಯು ‘ನವ್ಯ’ವೆಂದು ನಾವು ಗೆರೆ ಎಳೆಯಲಾರೆವು. ಪ್ರಜ್ಞೆಯು ಪರಂಪರಾನುಗತಿಕವಾದುದು. ಈ ನವ್ಯ ಇಲ್ಲದೆ ನವೀನ ಪ್ರಜ್ಞೆ ಬರೀ ನವ್ಯ ಕಾವ್ಯದಲ್ಲಿಯಷ್ಟೇ ಏಕೆ, ಆಧುನಿಕ (ರಮ್ಯ,ನವೋದಯ) ಕಾವ್ಯದಲೂ ವ್ಯಕ್ತವಾಗಬಹುದು. ಬಹಳವಾಗಿ ನಾವಿಷ್ಟು ಹೇಳಬಲ್ಲೆವು. ಪರಂಪರಾನುಗತಿಕ ಪ್ರಜ್ಞೆಗಿಂತ ನವೀನ ಪ್ರಜ್ಞೆಯೇ ನವ್ಯಕಾವ್ಯದಲ್ಲಿ ವಾಡಿಕೆಯಾಗಬಲ್ಲದು. ಇಂದಿನ ಪ್ರಜ್ಞೆ ಹೊಸತು ನಿಜ. ಆದರೆ ಅದು ಬರೀ ನವ್ಯಕಾವ್ಯದಲ್ಲೇ ಮೂಡಬೇಕಾಗಿಲ್ಲ” ಎಂದು ಸರ್ವಗ್ನನಲ್ಲೂ ಮತ್ತಿತರ ಪ್ರಾಚಿನ ಸಾಹಿತಿಗಳೂ ಆಯಾ ಕಾಲಕ್ಕೆ ತಕ್ಕ ನವ್ಯತೆಯನ್ನು ಕಾಣಬಹುದೆಂದು ಹೇಳಿರುವುದು ಮೇಲಿನ ಅವರ ನವ್ಯಕಾವ್ಯದ ತಾತ್ವಿಕ ತಳಹದಿಯನ್ನೇ ಅಲ್ಲಾಡಿಸುವಂತಹುದು. ಕೊನೆಗೆ ‘ಸಮನ್ವಯ’ದ ಘೋಷಣೆಯ ೧೫ನೇ ವಿಭಾಗದಲ್ಲಿ “ನವ್ಯ ಸಾಹಿತ್ಯ ನವೋದಯ ಸಾಹಿತ್ಯದ ಒಂದು ಅವಸ್ಥೆ ಮಾತ್ರ; ತನಗೆ ತಾನೇ ಪ್ರತ್ಯೇಕೆ ಮಾರ್ಗವಲ್ಲ. ಉದ್ದೀಪನ – ಪ್ರೇರಣೆಗಳ ದೃಷ್ಟಿಯಿಂದಲೂ ಇದು ಸಮರ್ಥನೀಯ” ಎಂದು ಹೇಳಿರುವುದಂತೂ ಗೋಕಾಕರು ‘ನವ್ಯಕಾವ್ಯ’ಕ್ಕೆ ಕರೆಕೊಡುವ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಆದ್ದರಿಂದಲೇ ಏನೋ ಗೋಕಾಕರು ‘ನವ್ಯಕಾವ್ಯ’ ಎಂದರೆ ಅದು ಕೇವಲ ‘ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯವೆಂಬರ್ಥದಲ್ಲಿ ಉಪಯೋಗಿಸಿದ್ದೇನೆ…..
“ಶೈಲಿ ಮತ್ತು ವಾಕ್ಸರಣಿಯಲ್ಲಿ ಆಧುನಿಕವಾಗಿದುದ್ದರ ಕಡೆಗೆ ಹೆಚ್ಚು ಸಹಾನುಭೂತಿಯುಳ್ಳ ವಿಶಿಷ್ಟವಾದ ವೈಚಾರಿಕ ವಿಧಾನವೇ ನವ್ಯ” ಎಂದು ವ್ಯಾಖ್ಯಾನಿಸಿ ನವ್ಯ ಕಾವ್ಯದ ದೃಷ್ಟಿಯನ್ನು ಇಷ್ಟಮಟ್ಟಿಗೆ ಮಾತ್ರ ಇಳಿಸಿ ಬಿಟ್ಟಿದ್ದಾರೆ(reduced) ಎನ್ನಿಸುತ್ತದೆ.
ಇನ್ನು ಗೋಕಾಕರು ಹೇಳುವ ಇಂದಿನ ಸಾಮಾಜಿಕ ಸಂಕೀರ್ಣತೆಯ ಬಗ್ಗೆ ಒಂದು ಮಾತು ಹೇಳಬಹುದು. ಸಾಮಾಜಿಕ ಸಂಕೀರ್ಣತೆ ಎಂಬುದು ಕೇವಲ ಇಂಡಿಯನ್ ಕಾಲದ ಲೇಖಕರು ಮಾತ್ರ ಎದುರಿಸಬೇಕಾಗಿರುವ ಸಮಸ್ಯೆ ಇಲ್ಲ. ಎಲ್ಲಾ ಕಾಲದಲ್ಲಿಯೂ ಲೇಖಕರು ಇದನ್ನು ಶಕ್ತಿಗೆ ತಕ್ಕಂತೆ ಎದುರಿಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಜೈನನಾದ ಪಂಪ ಜೈನ ಪರಂಪರೆಯ ವಸ್ತುವನ್ನು ಬಿಟ್ಟು ವೈದಿಕ ಪರಂಪರೆಯ ಭಾರತದ ಕಥಾ ವಸ್ತುವನ್ನು ಆಯ್ದುಕೊಳ್ಳುವಾಗಲೀ ಆಟ ವೈದಿಕ ಮತಾನುಯಾಯಿ ರಾಜ ಅರಿಕೇಸರಿಯ ಅಸ್ಥಾನದಲ್ಲಿದ್ದುದಾಗಲೀ ಕಥಾ ನಾಯಕನನ್ನು ಅರಿಕೇಸರಿಗೆ ಸಮೀಕರಿಸಿಕೊಂಡು ರಾಜ ಭಕ್ತಿಯಿಂದ ಬಾಗಬೇಕಾಗಿ ಬಂದದ್ದಾಗಲೀ ಆ ಕಾಲದ ಒಬ್ಬ ಸೃಜನಶೀಲ ವ್ಯಕ್ತಿ ಎದುರಿಸಬೇಕಾದ ಸಂಕೀರ್ಣಗಳಲ್ಲವೇ? ಆದ್ದರಿಂದ ಸಂಕೀರ್ಣತೆ ಎಂಬುದು ಕೇವಲ ಸ್ವಾತಂತ್ರೋತ್ತರ ಭಾರತದ ಬರಹಗಾರನ ಸಮಸ್ಯೆ ಮಾತ್ರ ಅಲ್ಲ, ಎಲ್ಲಾ ಕಾಲದಲ್ಲೂ ತನ್ನದೇ ಆದ ವಿಶಿಷ್ಟ ಸಂಕೀರ್ಣತೆಗಳನ್ನು ಬರಹಗಾರ ಎದುರಿಸಿಕೊಂಡೇ ಬಂದಿರುತ್ತಾನಲ್ಲವೇ? ಒಂದೊಂದು ಕಾಲದ ಸಂಕೀರ್ಣತೆಯೂ ಒಂದೊಂದು ತರನದ್ದಿರಬಹುದೇ ವಿನಃ ಸಂಕೀರ್ಣತೆಯನ್ನು ಎದುರಿಸದೇ ಕವಿ ಕಾವ್ಯವನ್ನು ರಚಿಸಲಾರ. ಅಂದಮೇಲೆ ಇಂದಿನ ಲೇಖಕ ಮಾತ್ರ ಸಂಕೀರ್ಣತೆಯನ್ನು ಎದುರಿಸಬೇಕಾಗಿ ಬಂದಿದೆ ಎಂಬ ಗೋಕಾಕರ ವಾದ ಸಮಂಜಸವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ.
‘ನವ್ಯ ಕಾವ್ಯವೆಂದರೆ ಅದು ಕೇವಲ ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯ’ವೆಂದರ್ಥದಲ್ಲಿ ಗೋಕಾಕರು ಉಪಯೋಗಿಸಿರುವುದು ಇನ್ನೊಂದು ರೀತಿಯ ಸಂಶಯಕ್ಕೆ ಎಡೆಮಾಡಿಕೊಡುತ್ತದೆ, ಏಕೆಂದರೆ ಕಾವ್ಯದ ರೂಪ ಬದಲಾವಣೆಯಾಗುವುದು ಕವಿಯ ತಾತ್ವಿಕ ಚಿಂತನೆ, ಕಾವ್ಯದ ವಸ್ತು ದೃಷ್ಟಿಕೋನ ಇವುಗಳನ್ನು ಅವಲಂಭಿಸುರುತ್ತದೆ. ಇವು ಹೊಸತಾದಾಗ ಮಾತ್ರ ಅದಕ್ಕೆ ವಿಶಿಷ್ಟ ರೀತಿಯ ತಂತ್ರ ವಿಧಾನವನ್ನು ಕಾವ್ಯದ ದ್ರವ್ಯವೇ ಹುಡುಕಿಕೊಳ್ಳಲು ಪ್ರಯತ್ನಿಸುತ್ತದೆ. ಆಗ ವಿಶೇಷ ತಂತ್ರಕ್ಕೆ ಬೆಲೆ ಇರುತ್ತದೆ. ಇಲ್ಲದಿದ್ದರೆ ಈ ‘ವಿಶೇಷ ತಂತ್ರ’ಕ್ಕೆ ಯಾವ ಬೆಲೆಯೂ ಬರುವುದಿಲ್ಲ. ಅದು ಕೇವಲ ರೂಪದೊಡನೆ ಆಟವಾಡಿದಂತಾಗುತ್ತದಲ್ಲವೇ? ಈ ರೀತಿಯ ಹೇಳಿಕೆಯಿಂದ ಗೋಕಾಕರು ಹೇಳುವ ಕಾವ್ಯ ಪ್ರಜ್ಞೆ, ದ್ರವ್ಯ, ಇವೆಲ್ಲಕ್ಕೂ ವಿರೋಧವಾದ ಧೋರಣೆಯೂ ಆಗಿ ಕಂಡು ಬಂದಾಗುತ್ತದೆ ಎನ್ನಿಸುತ್ತದೆ.
ಈ ಕೆಲವು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಗೋಕಾಕರು ಕರೆ ಕೊಟ್ಟ ನವ್ಯಕಾವ್ಯದ ರೀತಿ ಮತ್ತು ನವೋದಯ ಮತ್ತು ನವ್ಯಕಾವ್ಯಕ್ಕೆ ಇರುವ ವ್ಯತ್ಯಾಸಗಳ ಬಗೆಗೆ ಚರ್ಚಿಸಬಹುದು.
ನವ್ಯತೆಯ ಲಕ್ಷಣಗಳು
ಗೋಕಾಕರ ಪ್ರಕಾರ ;ನವ್ಯತೆಯು ಬರೀ ಕಾಲಮಾನ – ಪರಿಸ್ಥಿತಿಗಳಿಂದ ಬಂದ ಮಾರ್ಪಾಟಲ್ಲ. ಅದು ಕಾವ್ಯದ ವಿಧಾನ. ರೀತಿ ಇಲ್ಲವೇ ಸೂಕ್ಷ್ಮ ಶರೀರದಲ್ಲಾಗುವ ಮಾರ್ಪಾಟು. ಕಾವ್ಯ ಆತ್ಮ ಯಾವಾಗಲೂ ಒಂದೇ, ದರ್ಶನ ಇಲ್ಲವೇ ಕಾಣ್ಕೆಯೇ ಈ ಆತ್ಮ. ಅದನ್ನು ಒಡಮೂಡಿಸುವಾಗ ಕವಿಯು ಬಗೆಬಗೆಯ ಕಾವ್ಯ ಸಾಮಗ್ರಿಯನ್ನು ಉಪಯೋಗಿಸುತ್ತಾನೆ.
ನವ್ಯಕಾವ್ಯದಲ್ಲಿ(೧)ಬಳಕೆಯ ಮಾತು (೨)ಛಂದಸ್ಸಿನಲ್ಲಿಯ ನವೀನ ಪ್ರಯೋಗ (೩) ಪ್ರತಿಮಾ ಪ್ರಧಾನತೆ (೪) ವಾಸ್ತವಿಕ ಚಿತ್ರದೃಷ್ಟಿ (5)ಪಾರಿಭಾಷಿಕ ಶೈಲಿ (6) ವಸ್ತುವಿನ ಆಯ್ಕೆಯಲ್ಲಿ ಸ್ವಾತಂತ್ರ್ಯ (೭) ಬುದ್ದಿ ಪ್ರಧಾನತೆ (೮) ವ್ಯಕ್ತತೀತ ಮೌಲ್ಯಗಳೇ ಪ್ರಧಾನತೆ ಇರುತ್ತದೆಂದು ಹೇಳಿದ್ದಾರೆ.
ಇವುಗಳಲ್ಲಿ ಮೊದಲು ಐದು ಲಕ್ಷಣಗಳಲ್ಲಿ ಆಧುನಿಕ ಕಾವ್ಯವು ಆಸ್ಥೆ ವಹಿಸಿದ್ದನ್ನು ಗೋಕಾಕರು ಗುರುತಿಸುತ್ತಾರೆ. ಆದರೆ ‘ನವ್ಯ ಪ್ರಜ್ಞೆ’ ಬೆಳೆಯುವುದು ಮಾತ್ರ ಇವುಗಳೆಲ್ಲದರ “ಸಮಯಯೋಚಿತ ಪ್ರಜ್ಞೆ” ಮಾತ್ರ ಎಂದು ಹೇಳಿ, ಆಧುನಿಕ ಕಾವ್ಯದಲ್ಲೂ ಸಮಕಾಲಿನತೆಯನ್ನು ತೋರಿಸಿದ್ದಾರೆ. ಆದ್ದರಿಂದ ‘ನವ್ಯತೆ’ ಆಧುನಿಕ ಕಾವ್ಯ ಮಾರ್ಗದ ಒಂದು ಅವಸ್ಥಾಂತರ ಮಾತ್ರ ಆಗುತ್ತದೆ ಎಂದು ಹೇಳಬಹುದೇ ವಿನಃ ಇವೆಲ್ಲಾ ಲಕ್ಷಣಗಳು ನವ್ಯಕಾವ್ಯಕ್ಕೆ ಮಾತ್ರ ವಿಶಿಷ್ಟವಾದವು ಎಂದು ಹೇಳಲಾಗುವುದಿಲ್ಲ.
ನವೋದಯ ಮತ್ತು ನವ್ಯದ ವ್ಯತ್ಯಾಸಗಳು
ಗೋಕಾಕರ ದೃಷ್ಟಿಯಲ್ಲಿ ನವ್ಯಕಾವ್ಯ ನವೋದಯ ಕಾವ್ಯಕ್ಕಿಂತ ಹೇಗೆ ಭಿನ್ನ ಎಂಬುದನ್ನು ಈ ರೀತಿ ಸಂಗ್ರಹಿಸಬಹುದು.
(೧)ರೋಮ್ಯಾಂಟಿಕ್ ಕವಿಗಳು ತಮ್ಮ ಅನುಭವವನ್ನು ಹೆಚ್ಚು ವ್ಯಕ್ತಿನಿಷ್ಥವಾಗಿ, ವರ್ಣಕವಾಗಿ, ಭಾವಮಯವಾಗಿ ಸಾಧಿಸುತ್ತಾರೆ. ನವ್ಯ ಕವಿ ಇದನ್ನು ಹೆಚ್ಚು ನಾಟ್ಯಾತ್ಮಕವಾಗಿ, ವಸ್ತುಕವಾಗಿ, ಬುದ್ದಿ ಪ್ರಧಾನವಾಗಿ ಸಾಧಿಸುತ್ತಾನೆ.
(೨)ಎರಡು ಮಾರ್ಗಗಳಲ್ಲಿಯೂ ಅಪೂರ್ಣತೆಯುಂಟು, ಎರಡು ಮಾರ್ಗಗಳಲ್ಲಿಯೂ ಮಹೋನ್ನತಿ ಸಾಧ್ಯ.
(೩)ರೋಮ್ಯಾಂಟಿಕ್ ಕವಿಗೆ ವರ್ಣಕತೆ ಹೆಚ್ಚು ಪ್ರಿಯವಾದರೆ ನವ್ಯ ಕವಿ ವಸ್ತುಕತೆಗೆ ಹೆಚ್ಚಾಗಿ ಒಲಿಯುತ್ತಾರೆ.
(೪)ನವ್ಯ ಕವಿಗೆ ಯುಗಮಾನದ ಪ್ರಜ್ಞೆಯನ್ನು ಕುರಿತು ಮಿತಿಮೀರಿದ ಅಭಿಮಾನವಿರುತ್ತದೆ. ಸಾರ್ವಕಾಲಿಕ ಮೌಲ್ಯಗಳು ಅವನನ್ನು ಹೆಚ್ಚಾಗಿ ಆಕರ್ಷಿಸಿರುವ ಸಂಭವವಿದೆ. ಇದೇ ಕಾರಣದ ಮೂಲಕ ನವ್ಯ ಕವಿಯು ಪ್ರತಿಮಾ ದೃಷ್ಟಿ ರೋಮ್ಯಾಂಟಿಕ್ ಸೃಷ್ಟಿಗಿಂತ ಬೇರೆಯಾಗಿರುತ್ತದೆ.
(೫)ಅಂತಃಸ್ಪುರಣ ಕಾವ್ಯದ ಜೀವಾಳ ರೋಮ್ಯಾಂಟಿಕ್ ನ ಕಾವ್ಯದಲ್ಲಿ ಭಾವನಾವೇಶದಿಂದ ಇದು ಮುಚ್ಚಿ ಹೋಗಬಹುದು. ನವ್ಯಕವಿಯ ಬುದ್ಧಿ ಹೆಚ್ಚು ಚುರುಕಾಗಿರುತ್ತದೆ. ಅವನ ಅಂತಃಸ್ಪುರಣ ಅವನಲ್ಲಿಯ ಬೌದ್ಹಿಕ ವ್ಯಾಪಾರದ ಅತಿರೇಖದ ಮೂಲಕ ಸ್ಪುಟವಾಗದೇ ಹೋಗಬಹುದು.
(೬) ಭಾಷಾ ಪ್ರಯೋಗ ಹಾಗೂ ನಾದಗ್ರಹಣ ವಿಷಯದಲ್ಲಿಯೂ ಸಹ ಅವರ ದಾರಿಗಳು ಟಿಸಿಲೊಡದಿವೆ. ಭಾಷೆ ರೋಮ್ಯಾಂಟಿಗನಿಗೆ ಪ್ರಿಯತಮೆಯ ಅಂತ:ಪುರವಾಗಿದ್ದರೆ,ನವ್ಯಕವಿಗೆ ಅದು ಕುಸ್ತಿಯ ಕಣವಾಗಿರಬಹುದು.
(೭) ತಾಳ ಮತ್ತು ಲಯ: ರೋಮ್ಯಾಂಟಿಕ್ ಕವಿಯ ಸೂಕ್ಷ್ಮ ತಾಳ ಲಯಗಳು ಅವನು ತುಳಿಯುವ ರಹದಾರಿಯಲ್ಲಿ ಅಲ್ಲಲ್ಲಿ ಅರಳುತ್ತದೆ. ನವ್ಯ ಕವಿ ತಾನು ಗುರುತಿಸಿದ ಸೂಕ್ಷ್ಮಲಯಗಳ ಛಾನ್ದಸಿಕ ದೇಹವನ್ನು ತನ್ನ ಅನುಭವಕ್ಕೆ ಕೊಡಲು ಹವಣಿಸುತ್ತಾನೆ.
(೮)ರಚನಾಕೌಶಲ್ಯದಿಂದ ನವ್ಯಕವಿ ಮೂರ್ತಿಶಿಲ್ಪದ ಮಾದರಿ ಒಲಿದಿದ್ದರೆ, ರೋಮ್ಯಾಂಟಿಕ್ ಕವಿ ಚಿತ್ರ ಶಿಲ್ಪದ ವಿಧಾನವನ್ನು ಮೆಚ್ಚಿದ್ದಾನೆ.
ಈ ರೀತಿಯ ಭಿನ್ನತೆಗಳನ್ನು ಗೋಕಾಕರು ಸೂಚಿಸ್ದಾಗ ಈ ಕೆಳಗಿನ ಪ್ರಶ್ನೆಗಳು ಏಳುವುದು ಸಹಜ.
(೧)ಯಾವುದೇ ಕಾವ್ಯದಲ್ಲೂ ‘ವರ್ಣಕತೆ’ ಅಥವಾ ‘ವಸ್ತುಕತೆ’ ಎಮಬ್ ವಿಭಾಗ ಮಾಡುವುದು ಸರಿಯೇ? ಎಲ್ಲಾ ಉತ್ತಮ ಕಾವ್ಯದಲ್ಲೂ ಇವೆಲ್ಲದರ ಹದನಾದ ಮಿಳಿತವೇ ಉತ್ಕ್ರುಷ್ಟವಲ್ಲವೇ?
(೨)ಸಾರ್ವಕಾಲಿಕ ಮೌಲ್ಯವಿರುವುದರಿಂದಲೇ ಅಲ್ಲವೇ ಶತಮಾನಗಳಿಂದ ಕೃತಿಗಳು ಉಳಿದು ಬಂದಿರುವುದು? ಇದು ನವ್ಯಕ್ಕೆ ಹೇಗೆ ಪ್ರತ್ಯೇಕವಾಗಿದೆ?
(೩)ಕಾವ್ಯದಲ್ಲಿ ‘ಭಾವ ಇಷ್ಟು’,’ಬುದ್ಧಿ ಇಷ್ಟು’ ಎಂದು ಬೇರ್ಪಡಿಸಿ ತೋರಿಸಲಾಗುವುದೇ?
(೪)ತಾನು ಸೃಷ್ಟಿಸಿದ ಕವನದ ಆಶಯಕ್ಕೆ ಕಾರ್ಯಕಾರಿ ಸಂಬಂಧವನ್ನು ಕಲ್ಪಿಸುವುದರಲ್ಲಿ ಪ್ರತಿಯೊಬ್ಬ ಶಕ್ತಿಯುತ ಕವಿಗೂ ಭಾಷೆ ಸವಾಲನ್ನು ಎಸೆಯುವುದಿಲ್ಲವೇ? ಇಲ್ಲದಿದ್ದರೆ ಕವಿ ಭಾಷೆಯನ್ನು ಕಾವ್ಯವಾಗಿ ಮಾಡಲು, ಹಿಗ್ಗಿಸಿಕೊಳ್ಳಲು ಯಾವ ಕಾಲದಲ್ಲಾದರೂ ಪ್ರಯತ್ನಿಸುವುದಿಲ್ಲವೇ? ಇದೆ ಪ್ರಶ್ನೆಯನ್ನು ‘ತಾಳ ಲಯ’ಗಳಿಗೂ ಹಾಕಬಹುದಲ್ಲವೇ?
(೫) ಮತ್ತು ಕೊನೆಯದಾಗಿ ಈ ಎಲ್ಲಾ ಪ್ರಶ್ನೆಗಳನ್ನೂ ಯಾವುದೇ ಕಾಲದ ಉತ್ತಮವಲ್ಲದ ಕವಿ ಮತ್ತು ಉತ್ತಮ ಕವಿಗಳಿಗೆ ಹಾಕಬಹುದಲ್ಲದೆ ನವ್ಯ ಮತ್ತು ರೋಮಂಟಿಗರಿಗೆ ಮಾತ್ರ ಹಾಕಿಕೊಳ್ಳಬೇಕೇ?
ಈ ಎಲ್ಲಾ ಹಿನ್ನೆಲೆಗಳಿಂದ ನೋಡಿದಾಗ “ಗೋಕಾಕರ ಕಾವ್ಯ ಮೀಮಾಂಸೆ ತಪ್ಪೆಂದು ಹೇಳಲಾಗದಿದ್ದರೂ ಅದು ನವ್ಯ ಕಾವ್ಯದ ರೀತಿ ಹೇಗಾಗುತ್ತದೆಂಬುದು ಎಷ್ಟು ಯೋಚಿಸಿದರು ಬಗಹರಿಯಲಾರದು. ವಿಶಾಲದ ದರ್ಶನದಲ್ಲಿಯೇ ನವ್ಯತೆ ಇರುತ್ತಿದ್ದರೆ ನಮ್ಮ ಮೊದಲ ತಲೆಮಾರಿನ ಕವಿಗಳ ಕಾವ್ಯ ನವ್ಯ ಏಕಲ್ಲ” ಎಂಬ ಕೀರ್ತಿನಾಥ ಕುರ್ತುಕೋಟಿಯವರ ಅಭಿಪ್ರಾಯ ಸಮಂಜಸವೇ ಆಗಿದೆ.
“ಕಾವ್ಯದ ರೂಪ ಮತ್ತು ಭಾಷೆಯ ಮಟ್ಟಿಗೆ ಅವರು ನವ್ಯತೆ ತಂದರು, ಕಾವ್ಯಧೋರಣಗೆ ಸಮಬಂಧಿಸಿದಂತೆ ನವೋದಯ ಮಾರ್ಗದೊಂದಿಗೆ ಮೂಲಭೂತ ಜಗಳ ಇವರಿಗೆ ಇರಲಿಲ್ಲ. ಆದ್ದರಿಂದ ಅವರ ನವ್ಯತೆ ಪ್ರಜ್ಞೆಯಾಗಿ ಮೂಡದೆ ಪ್ರತಿಜ್ಞೆಯಾಗಿ ಬಂದಿತು” ಎಂಬ ಜಿ.ಹೆಚ್.ನಾಯಕರ ಹೇಳಿಕೆಗೂ “ಅವರು ಕಲ್ಪಿಸಿಕೊಂಡ ನವ್ಯಕಾವ್ಯ ನವೋದಯ ಕಾವ್ಯಕ್ಕಿಂತ ಭಿನ್ನ ಮನೋಧರ್ಮ್ಮದ್ದಲ್ಲ, ಅದರ ವಿಸ್ತರಣ ಮಾತ್ರ” ಎಂಬ ಎಲ್.ಎಸ್.ಶೇಷಗಿರಿರಾವ್ ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಕಾಗಿದೆ.

ಕೀರ್ತಿನಾಥ ಕುರ್ತುಕೋಟಿ(೧೯೭೫) ನವ್ಯಕಾವ್ಯ ಪ್ರಯೋಗ ಎರಡನೇ ಆವೃತಿ ಪುಟ ೪೩
ಜಿ.ಹೆಚ್.ನಾಯಕ(೧೯೭೩) ಸಮಕಾಲೀನ ಪುಟ ೯೧
ಎಲ್.ಎಸ್.ಶೇಷಗಿರಿರಾವ್(೧೯೭೩) ಹೊಸಗನ್ನಡ ಸಾಹಿತ್ಯ (ಸಾಮಾನ್ಯನಿಗೆ ಕಾಣದ ಸಾಹಿತ್ಯ ಚರಿತ್ರೆ) ಬೆಂಗಳೂರು ವಿ.ವಿ.ಬೆಂಗಳೂರು.