Browsed by
Tag: Tingalu

ಜ್ಯಾಕ್ ಲೆಕಾಂ

ಜ್ಯಾಕ್ ಲೆಕಾಂ

ತಿಂಗಳು – ಏಪ್ರಿಲ್ ೨೦೧೦ ೧೯೭೦ರ ದಶಕದಿಂದ ಸ್ತ್ರೀವಾದವು  ಅನೇಕ ಮಜಲುಗಳನ್ನು ದಾಟಿ ಒಂದು ವಿಶಾಲ ಸಾಂಸ್ಕೃತಿಕ-ಮನೋವೈಜ್ಞಾನಿಕ ವಿಶ್ಲೇಷಣೆಯ ತಳಹದಿಯ ಮೇಲೆ ರೂಪಿತಗೊಳ್ಳುತ್ತಿವೆ . ಅಲ್ಲಿಯ ತನಕ ಸ್ತ್ರೀವಾದವು ಬೇರೆ ಬೇರೆ ಆಯಾಮಗಳಲ್ಲಿ ತನ್ನ ಬರುವಿಕೆಯನ್ನು ಗೊತ್ತುಪಡಿಸಿತ್ತು. ಉದಾರವಾದಿ ಮತ್ತು  ಸಮಾಜವಾದಿ ಸ್ತ್ರೀವಾದವು ಗಂಡು –ಹೆಣ್ಣಿನ ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ ತಾರತಮ್ಯ ದೃಷ್ಟಿಕೋನವನ್ನು ಮುಂಚೂಣಿಗೆ ತಂದಿತು. ಇಲ್ಲಿ ಗಂಡಿನಂತಯೇ ಹೆಣ್ಣಿಗೂ ಎಲ್ಲಾ ರಂಗಗಳಲ್ಲೂ ಅವಕಾಶ ಸಿಗಬೇಕು. ಸಮಾನತೆಯನ್ನು ಕಾನೂನಿನ ಮೂಲಕ ತರಬೇಕು.  ಆರ್ಥಿಕವಾಗಿ ಗಂಡಿಗೆ ಸರಿಸಮಾನನಾಗಿ ನಿಲ್ಲಬೇಕು. ವರ್ಗ ಮತ್ತು ಲಿಂಗಾಧಾರಿತ ತಾರತಮ್ಯಗಳು ಹೋಗಬೇಕೆಂದು ಹೋರಾಡಿತು. ಗಂಡು – ಹೆಣ್ಣಿನ ಅಸಾಮಾನತೆಗೆ ಬಂಡವಾಳಶಾಹಿಯೇ ಕಾರಣವಾದ್ದರಿಂದ ಅದನ್ನು ನಿರ್ನಾಮ ಮಾಡಬೇಕೆಂದು ನಂಬಿತ್ತು. ಎರಡನೇ ರೀತಿಯ ಸ್ತ್ರೀವಾದವು ಹೆಣ್ಣು ಒಂದು ಶಕ್ತಿ. ಹೆಣ್ಣಿನ…

Read More Read More

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ತಿಂಗಳು –ನವೆಂಬರ್ ೨೦೦೯ ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ…

Read More Read More

ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ

ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ

Tingalu – August 2009 ೧೯೮೩ ರ ಡಿಸೆಂಬರ್ ತಿಂಗಳ ಚುಮುಚುಮು ಚಳಿಗಾಲ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಾಲ್ಕು ವಾರಗಳ ಕಾಲ’ ಸಂಜ್ಞಾಶಾಸ್ತ್ರ ಮತ್ತು ಸಂರಚನವಾದ ‘ದ ಅಂತರ್ರಾಷ್ಷ್ಟ್ರೀಯ ಶಿಬಿರ ಏರ್ಪಟಿಸಿತ್ತು . ವಿಶ್ವದ ದಿಗ್ಗಜ ಭಾಷಾಶಾಸ್ತ್ರಜ್ಞರು ಬಂದಿಳಿದ್ದಿದ್ದರು . ಅಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗಿತ್ತು . ನಮ್ಮಂಥ ಕಿರಿಯರಿಗೆ ಬೌದ್ಧಿಕ ಹಬ್ಬ . ೮೦ ವರ್ಷದ ಋಷಿ ಸದೃಶ ಅಮೇರಿಕಾದ ಡೇವಿಡ್ ಸಾವನ್ , ಜರ್ಮನಿಯ ರೋಲಾನ್ಡ್ ಪೋಸ್ನರ್ . ಕೆನಡಾದ ಟೊರೊಂಟೋ ವಿಶ್ವವಿದ್ಯಾಲಯದ ಪಾಲ್  ಬ್ಯುಸ್ಸಾಕ್ , ಫ್ರಾನ್ಸಿನ ಕ್ರಾಮವೆಲ್, ಭಾರತದ ಅಶೋಕ ಕೇಲ್ಕರ್ , ಆರ್ .ಏನ್ .ಶ್ರೀವಾಸ್ತವ ಮುಂತಾದ ವಿದ್ವಾಂಸರ ಸಂಗಮವಾಗಿತ್ತು . ಇವರೆಲ್ಲರ ಜೊತೆಯಲ್ಲಿ ನಾವು ಬಹುನಿರೀಕ್ಷೆಯಲ್ಲಿದ್ದ ಮತ್ತೊಬ್ಬ ವಿದಾಂಸ ಫ್ರಾನ್ಸಿನ ಮಿಶೆಲ್ ಫುಕೋ…

Read More Read More

ಶ್ರುತಿ-ಕೃತಿ ಸಹಯೋಗ ಕನ್ನಡ ನೆಲದಲ್ಲಿ ಡೆರಿಡಾ

ಶ್ರುತಿ-ಕೃತಿ ಸಹಯೋಗ ಕನ್ನಡ ನೆಲದಲ್ಲಿ ಡೆರಿಡಾ

Tingalu – Febraury 2010 “ಕತೆ ಹಿರಿದಾದರೂ ಆ ಕತೆಯ ಮೈಗೆಡಲೀಯದೆ – ಈ ಹಿಂದೆ “ಸಮಸ್ತ। ಭಾರತ’ವನ್ನು (ಹೀಗೆ) ಅಪರೂರ್ವವಾಗಿ ಸಲ್ಲುವಂತೆ (ಸ್ವಾಗತರ್ಹವಾಗುವಂತೆ) ಹೇಳಿದ ಕವೀಶ್ವರರಿಲ್ಲ. “ವರ್ಣಕ”ವು ಕತೆಯಲ್ಲಿ ಔಚಿತ್ಯ ಪಡೆಯುವಂತೆ ಹೇಳುವುದಾದರೆ – ಪಂಪನೇ ಹೇಳುವ(ಅಂಥವ)ನು ಎಂದು ಪಂಡಿತರೆ ಬಿಡದೆ ಪ್ರಶಂಸೆ ಮಾಡಲು ಈ ಆಗ ನಾನು ಈ ಪ್ರಬಂಧವನ್ನು ಹೇಳಲು ಪ್ರಾರಂಭಿಸಿದೆ (೧.೧೧)ಲಲಿತಪದ, ಪ್ರಸನ್ನ ಕವಿತಾಗುಣ – ಇವು ಎರಡೂ ಇಲ್ಲದೆ ಬರೆಯುವನೆಂದು ಕಾವ್ಯವನ್ನು ಹೇಳಿದ ಬೆಪ್ಪರ ಕೃತಿಬ೦ದವಾದರೋ ಬರೆಯುವರ (ಅಂದರೆ ಪ್ರತಿ ಎತ್ತುವರ) ಕೈಗಳ ಹಾಳು, ನುಣ್ಣನೆಯ ತಾಳೆಯ ಗರಿಗಳ ಹಾಳು, ಹೇಳಿಸಿದರೆ ಅರ್ಥದ  ಹಾಳು – ಎಂಬಂತೆ (ಕಾವ್ಯವನ್ನು) ಹೇಳಿ ಬೀಗಿ ಬಿರಿದು, ಕೀರ್ತಿಗೆ ಆಶೆ ಪಡುವ ದುಷ್ಕಮಿಯೂ ಒಬ್ಬ ಕವಿ ಎಂಬ  ಲೆಕ್ಕವೇ? (೧.೧೨)…

Read More Read More

ಮಿಖೈಲ್ ಬಖ್ತಿನ್

ಮಿಖೈಲ್ ಬಖ್ತಿನ್

tingalu – may 2009 ಇತ್ತೀಚಿನ ಕನ್ನಡಸಾಹಿತ್ಯವನ್ನು ಅರ್ಥೈಸುವ ವಿಧಾನಗಳಲ್ಲಿ ರೂಪವಾದ, ಸಂರಚನವಾದ, ರಚನೋತ್ತರವಾದ, ಓದುಗ-ಪ್ರತಿಕ್ರಿಯಾಸಿದ್ಧಾಂತ , ಮಾರ್ಕ್ಸ್ವಾದ, ಮನೋವೈಜ್ಞಾನಿಕ ಸಿದ್ಧಾಂತ, ದೇಸೀವಾದ, ಕಥಾನಕ ಮುಂತಾದ ಪರಿಕಲ್ಪನೆಗಳು  ಹೇರಳವಾಗಿ ಪ್ರಯೋಗವಾಗುತ್ತಿದೆ. ಈ ಪರಿಕಲ್ಪನೆಗಳು ಅನೇಕ ವಾಡ-ವಿವಾದಗಳನ್ನು ಸೃಷ್ಟಿಸಿದೆ. ಆದರೂ ಪ್ರತ್ಯಕ್ಷವಾಗಿಯೋ , ಪರೋಕ್ಷವಾಗಿಯೋ ಸಾಂಸ್ಕೃತಿಕ ಪಟ್ಯಗಳ ವಿಶ್ಲೇಷಣೆಯಿಂದ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಈ ಸಿದ್ಧಾಂತಗಳು ಪಶ್ಚಿಮದಿಂದ ಬಂದಿದ್ದರಿಂದ ನಮ್ಮ ಭಾರತೀಯ ಸಾಹಿತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ನಮ್ಮದೇ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇಲ್ಲದೆ ಇಲ್ಲ . ಪಾಶ್ಚಿಮಾತ್ಯ ದೇಶಗಳಲ್ಲಿ ೨೦ನೆ ಶತಮಾನದ ಆದಿಯಲ್ಲಿ ಸಾಹಿತ್ಯ ಕೃತಿಗಳನ್ನು ನೋಡುವ ಮತ್ತು ವಿಶ್ಲೇಷಿಸುವ ದಿಕ್ಕಿನಲ್ಲಿ ಅರಿವಿನ ಸ್ಫೋಟ ಕಂಡುಬಂದಿತು. ಮುಖ್ಯವಾಗಿ ಭಾಷಾಶಾಸ್ತ್ರಜ್ಞ ಫ್ಹರ್ಡಿನಾಂದ್ ದಿ ಸೇಸ್ಯುರ್ ಭಾಷಾಸ್ತ್ರದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಇಡೀ ಮಾನವಶಾಸ್ತ್ರವನ್ನೇ ಹೊಸ ದಿಕ್ಕಿನೆಡೆಯಿಂದ ನೋಡುವಂತೆ ಮಾಡಿದ….

Read More Read More