Browsed by
Tag: Articles

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಭುಜಂಗಯ್ಯನ ದಶಾವತಾರಗಳು: ತುಡಿವ ಮನ ಕುಪಿತ ಜನ

ಪುಸ್ತಕ: ಪುಸ್ತಕ ಪ್ರಪಂಚ ಪೀಠಿಕೆ: ಶ್ರೀಕೃಷ್ಣ ಆಲನಹಳ್ಳಿಯ ಮೊದಲ ಕಾದಂಬರಿ ‘ಕಾಡು’ ಈಗಾಗಲೇ ಕನ್ನಡ ಕಾದಂಬರಿ ಸಂಸ್ಕೃತಿಯ ಪ್ರಜ್ಞಾತಲವನ್ನು ಮುಟ್ಟಿರುವ ಕೃತಿ. ಈ ಕೃತಿಯ ಪ್ರಮುಖ ಪಾತ್ರವಾದ ಪುಟ್ಟ ಬಾಲಕ ಕಿಟ್ಟಿಯ ಮುಗ್ದ ಮನಃಪಟಲದ ಮೇಲೆ ಬೆಳೆದವರ ಲೋಕ ಮೂಡಿಸುವ ಕ್ರೌರ್ಯದ ಬರೆಗಳು ಮಾಸುವುದೇ ಇಲ್ಲ. ಈ ಕಾದಂಬರಿಯಲ್ಲಿ ವಿವರಗಳೆಲ್ಲವೂ ಭೌತಿಕ(physical details) ವಲಯಕ್ಕೆ ಸೇರಿದ್ದು ಅವು ಓದುಗನ ಬೌದ್ದಿಕ(intellectual) ವಲಯಕ್ಕೆ ದಾಟುತ್ತಾ ಅರ್ಥವೈಶಾಲ್ಯತೆಯನ್ನು ಪಡೆದುಕೊಳ್ಳುತ್ತ್ತಾ ಹೋಗುತ್ತವೆ. ಈ ಕಾದಂಬರಿ ‘ನವ್ಯ’ದಿಂದ ಪಡೆದುಕೊಂಡದ್ದನ್ನು ದಕ್ಕಿಸಿಕೊಂಡಿದೆ. ನಂತರ ಬರೆದ ‘ಪರಸಂಗದ ಗೆಂಡೆತಿಮ್ಮ’,’ಕಾಡು’ವೀಣೆ ಕಿಟ್ಟಿಯ ಮುಗ್ಧತೆಯ ಮುಂದುವರೆದ ರೂಪ. ‘ಗೆಂಡೆತಿಮ್ಮ’ನ ಮುಗ್ದತೆಯನ್ನು ಮರಂಕಿಯ ‘ನಾಗರೀಕ’ ಪ್ರಪಂಚ ಮತ್ತು ಅವನೇ ತನಗರಿವಿಲ್ಲದಂತೆ ಹರಡಿದ ನಾಗರೀಕತೆಯಿಂದ ಗೌವ್ವಳ್ಳಿಯ ಜನ ಅವನ ಮುಗ್ದತೆಯನ್ನು ಚೂರುಚೂರುಮ್ ಆದಿ ಹಾಕುತ್ತಾರೆ. ಈ ಕಾದಂಬರಿಯಲ್ಲಿ…

Read More Read More

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು

‘ಗೆಂಡಗಯ್ಯ’, ಇದು ಗೆಳೆಯ ಶಿವತೀರ್ಥನ್ ರವರ ‘ಗೆರೆಗಳು’ ಕವನ ಸಂಕಲನದ ವಿಶಿಷ್ಟ ಕವನ.. ಈ ಇಹದ ಪರಿಪಾಟಲನ್ನು ಕಂಡು ಉಂಡು, ಕಾಣದಂತೆ ತನ್ನ ಕಾಯಕವನ್ನು ನಡೆಸುತ್ತಿರುವ, ಒಳಗಣ್ಣನ್ನು ಸದಾ ತೆರೆದುಕೊಂಡು ಎಸೆದು ಗಾಳ ಬೀಸಿ ಬಲೆ ಕಾಯ್ತು ಕುಂತವ್ನೆ ಸಂತ ಎಂಬ ‘ಇರ’ವಿನ  ‘ಅರಿವ’ನ್ನು ತೆರದಿಡುವ ಕವನ ಈ ಸಂತನಿಗೆ ತನ್ನ ಸುತ್ತೆಲ್ಲ ಇರುವ ಪ್ರಪಂಚ ‘ಅಭಾವದ’ ಪ್ರಪಂಚವೆಂದು ಗೊತ್ತು. ನೋವು, ಯಸನ, ತಳಮಳ, ಬಯಕೆ, ಹಸಿವು ಮತ್ತು ದಾವಿನಿಂದ ಪರಿತಪಿಸುಸುತ್ತಿರುವ ಪ್ರಪಂಚ. ಕವನದ ಪಾರಂಭವೇ ಹೀಗಾಗುತ್ತದೆ : ತನ್ನ ಜನರ ಯಾ೦ತ್ರಿಕ ಪ್ರಾರಂಭವಾಗುವುದೇ ‘ಅಲಾರಾಂ ಕೋಳಿ ಕೂಗ್ತು !’ ಆದರೆ ಇಹದ ಕಷ್ಟವನ್ನು ಮರೆತು ತನ್ನಷ್ಟಕ್ಕೆ ತಾನೇ ಕುಂತ ಸಂತನಲ್ಲ ಇವ. ತನ್ನ ಜನತೆಯ ದೈನಂದಿನ ಪರದಾಟಗಳ ಅನುಭವದ ಮೊತ್ತವಾಗಿ ‘ನೆಪ್ಪಾ…

Read More Read More

ನವ್ಯತೆ ಕೆಲವು ಪ್ರಶ್ನೆಗಳು

ನವ್ಯತೆ ಕೆಲವು ಪ್ರಶ್ನೆಗಳು

೧೯೫೦, ಅಂದರೆ ಸರಿಯಾಗಿ ಈ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಗೋಕಾಕರು ‘ನವ್ಯ ಕಾವ್ಯ’ದ ಪ್ರಣಾಳಿಕೆಯನ್ನು ಮುಂಬಯಿಯ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಹುಟ್ಟು ಹಾಕಿದುದು ಒಂದು ಚಾರಿತ್ರಿಕ ದಾಖಲೆಯಾಗಿದೆ. “ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ದಿಯನ್ನು ಮುಟ್ಟಿದಾಗ – ಮುಂದೇನೆಂಬ ಪ್ರಶ್ನೆ ಏಳುತ್ತದೆ. ಆ ಪ್ರಶ್ನೆಗೆ ಉತ್ತರ ಇದು, ನವ್ಯ ಕಾವ್ಯ” ಎಂದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಅನಿರ್ವಾರ್ಯರಾಗಿರುವ ‘ನವ್ಯ ದೃಷ್ಟಿ’ಯನ್ನು ಪ್ರತಿಪಾದಿಸಿ, ಅಲ್ಲಿಂದ ೨೫ ವರ್ಷಗಳ ತನಾ ಈ ನವ್ಯ ಕಾವ್ಯದ ರೂಪು ರೇಖೆಗಳ ಪ್ರತಿಪಾದನೆಯನ್ನು ವಿಧಿ ವಿಧಾನಗಳನ್ನು ಕ್ರೂಡ್ಹೀಕರಿಸಿಕೊಂಡು ಬಂದಿರುವ ಕೃತಿ ‘ನವ್ಯತೆ’. ಈ ದೃಷ್ಟಿಯಿಂದ ‘ನವ್ಯತೆ’, ‘ನವ್ಯ ಕಾವ್ಯ’ದ ಒಂದು ಲಾಕ್ಷಣಿಕ ಗ್ರಂಥವಾಗಿ ಬೆಳೆದುಬಂದಿದೆ. ಗೋಕಾಕರು ನವ್ಯ ಕಾವ್ಯದ ಸುಳಿವನ್ನು ಹುಟ್ಟು ಹಾಕುವಾಗ…

Read More Read More

ಕುವೆಂಪು ಅವರ ವೈಚಾರಿಕತೆ

ಕುವೆಂಪು ಅವರ ವೈಚಾರಿಕತೆ

ಪುಸ್ತಕ: ಕುವೆಂಪು ಅವರ ವೈಚಾರಿಕತೆ : ಕೆಲವು ಟಿಪ್ಪಣಿಗಳು “Science is even more changeable than theology” “Galileo said that the earth moves and that the sun is fixed. The inquistion said that the earth is fixed and the sun moves and newtonian astronomers adopting an absolute theory of space, said that both the sun and the earth move. But now we say that any one of these three statements are equally true, provided that you haved fixed your sense of ’rest’ and…

Read More Read More

ಜಾನಪದ ಮತ್ತು ಅರ್ಥ

ಜಾನಪದ ಮತ್ತು ಅರ್ಥ

ಪುಸ್ತಕ: ಸುವರ್ಣ ಜಾನಪದ ಲೆವಿಸ್ತ್ರಾಸ್ ನ ಪ್ರಕಾರ ಮಿಥ್ ನ ಅರ್ಥ ಸೃಷ್ಟಿಯಾಗಿವುದು ಅವುಗಳ ಆಂತರಿಕ ವ್ಯವಸ್ಥೆಯಲ್ಲಿರುವ ದ್ವಿಧಾವೃತ್ತಿಯಲ್ಲಿ(binary opposition) (ಲೆವಿಸ್ತ್ರಾಸ್ ೧೯೭೮) ಈ ದ್ವಿಧಾವೃತ್ತಿಗಳು ಮಿಥ್ ನ ಆಂತರಿಕ ವ್ಯವಸ್ಥೆಯನ್ನು ವಿವರಿಸುತ್ತವೆ. ಭಾಷೆಯಲ್ಲಿ ಧ್ವನಿಗಳು ಹೇಗೋ ಜಾನಪದ ಪಠ್ಯಗಳಲ್ಲಿ ದ್ವಿಧಾವೃತ್ತಿಗಳು ಹಾಗೆ ವರ್ತಿಸುತ್ತಿರುತ್ತವೆ. ಈ ದ್ವಿಧಾವೃತ್ತಿಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ಅರಿತುಕೊಳ್ಳುವುದೇ ಸಾಂಸ್ಕೃತಿಕ ಪದ್ಯಗಳ ರಚನೆಯನ್ನು ಅರಿಯುವ ವಿಧಾನ. ಈ ದ್ವಿಧಾವೃತ್ತಿಗಳು ಸಂಧಿಸುವಲ್ಲೇ ಅರ್ಥ ಅಡಗಿ ಕುಳಿತ್ತಿರುತ್ತದೆ. ಇದನ್ನು ಲೆವಿಸ್ತ್ರಾಸ್ ಗುರುತಿಸುತ್ತಾನೆ. ಆದರೆ, ದ್ವಿಧಾವೃತ್ತಿಗಳು ಯಾವುದೇ ಕಥಾನಕದಲ್ಲೂ ಒಂದರ ಮೇಲೊಂದು ಆಡುತ್ತಿರುತ್ತದೆ.ಈ ರೀತಿ ಆಡುವ ಕ್ರಿಯೆಯೇ ದ್ವಿಧಾವೃತ್ತಿಗಳು ಸಂಧಿಸುವ ತಾಣ. ದ್ವಿಧಾವೃತ್ತಿಗಳು ಒಂದರ ಮೇಲೊಂದು ಆಡುವುದರಿಂದ ರಚನೆಗೆ ಚಾಲನೆ ಸಿಗುತ್ತದೆ. ಈ ಚಲನೆಯಿಂದ ಅರ್ಥಗಳು ರೂಪಾಂತರಕ್ಕೆ ಒಳಗಾಗುತ್ತಿರುತ್ತವೆ. ಇದನು…

Read More Read More