ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ

ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ

ಪುಸ್ತಕ ವಿಮರ್ಶೆ

ವ್ಯಕ್ತಿ ಮೂಲತಃ ಕ್ರಿಯಾತ್ಮಕನಾದ ಅವನ ಅಭಿವ್ಯಕ್ತಿಯೂ ಸಹ radical ಆಗಿರುತ್ತದೆ. ಇದರ ಮೂಲಕ ತನ್ನ ಸಮಾಜಕ್ಕೆ ಸ್ಪಂದಿಸುತ್ತಾನೆ. ಈ ರೀತಿ ಸ್ಪಂದಿಸುವುದಕ್ಕಾಗಿ ಒಂದು ಮಾಧ್ಯಮವನ್ನು ಕಂಡುಕೊಳ್ಳುತ್ತಾನೆ.ಸಮಾಜದ ಸಂಕೀರ್ಣತೆಯೊಡನೆ ಬೆರೆತು ಸಂಕೀರ್ಣ ಅನುಭವವನ್ನು ಪಡೆಯುತ್ತಾನೆ.

l2ಸಮಕಾಲೀನ ಸಮಸ್ಯೆಯನ್ನು ಅಭಿವ್ಯಕ್ತಿಸುವಾಗ ತಕ್ಷಣ ಯಾವ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆಗ ಆತ ಬುದ್ದಿವಂತನಾಗಿದ್ದರೆ suggestive ಆಗುತ್ತಾನೆ. ಈ ರೀತಿ suggestive ಆಗಿ ಸಮಾಜಕ್ಕೆ ತನ್ನ ಮಾಧ್ಯಮದಿಂದ ಜನರನ್ನು ಯೋಚನೆಗೆ ತೊಡಗಿಸುತ್ತಾನೆ. ಈ ರೀತಿ ಲಂಕೇಶರು ತಮ್ಮ ಮಾಧ್ಯಮಗಳನ್ನು ಬದಲಾಯಿಸುತ್ತಾ ಬಂದು ಈಗ ಒಂದು ವಿಶಾಲ canvas ಉಳ್ಳ ಮಾಧ್ಯಮವನ್ನು ತಲುಪಿದ್ದಾರೆ. ಸಾಹಿತ್ಯ ಕೇವಲ ‘ವಿದ್ಯಾವಂತ’ ರಿಗೆ ಮಾತ್ರ ತಲುಪುವ ಮಾಧ್ಯಮ. ಆದರೆ ಸಿನಿಮಾ ಶ್ರಾವಣ – ದೃಶ್ಯಗಳಿಂದ ಕೂಡಿದ್ದು ‘ವಿದ್ಯಾವಂತ’ ಅವಿದ್ಯಾವಂತರವರೆಗೂ ತಲುಪುವ ಮಾಧ್ಯಮ. ಈ ಮಾಧ್ಯಮವನ್ನು ಬಳಸಿಕೊಂಡಾಗ ಸಿನಿಮಾ ಲಿಪಿಕಾರ ಆತನ ಅಭಿವ್ಯಕ್ತಿಗೆ ಹೇಗೆ ಹೊಂದಿಕೊಳ್ಳುತ್ತಾನೆ ಎಂಬುದು ಮುಖ್ಯ , ಇದರ ಆಧಾರದ ಮೇಲೆ ಅವನ ಸೋಲು ಗೆಲುವು ನಿಂತಿರುವುದು.

ಶ್ರವಣ ದೃಶ್ಯ ಮಾಧ್ಯಮದ ಮತ್ತೊಂದು ಅಂಶ ಮನಸ್ಸಿನಲ್ಲಿರುವುದನ್ನು ತೆರೆಯ ಮೇಲೆ ಹೇಗೆ ಮೂಡಿಸುವುದು(visualization) ಎಂಬುದು. ಈ ಶಕ್ತಿ ಲಂಕೇಶರಿಗೆ ಮೂಲತಹವಾಗಿ ತಿಳಿದುಬಂದಿದೆ ಎಂಬುದನ್ನು ಅವರ ‘ಪಲ್ಲವಿ’ ಮತ್ತು ‘ಅನುರೂಪ’ಗಳನ್ನೂ ನೋಡಿದಾಗ ತಿಳಿಯುತ್ತದೆ. ಉದಾಹರಣೆಗೆ ‘ಅನುರೂಪ’ದ ಪ್ರಿನ್ಸಿಪಾಲರು ಕಾಲೇಜಿನಲ್ಲಿ ಬಹಳ ಶಿಸ್ತು (strict) ಎನ್ನುವುದನ್ನು ಸ್ಥಾಪಿಸಲು ಎಷ್ಟು ಸೂಕ್ಷ್ಮ ವಿವರಗಳನ್ನು ಇದ ಸುತ್ತ ನೇಯ್ದಿದ್ದಾರೆ  ! ಉಪಾಧ್ಯಾಯರು ಪಾಠ ಮಾಡುವುದನ್ನು ಪ್ರಿನ್ಸಿಪಾಲರು ಕದ್ದು ಪರೀಕ್ಷಿಸುವುದು, ಹುಡುಗರು ಕಾಲೇಜು ಆವರಣದಲ್ಲಿ ಉಚ್ಚೆ ಹುಯ್ದದ್ದಕ್ಕೆ , ಕಾಲೇಜಿಗೆ ಹೊತ್ತಾಗಿ ಬಂದಿದ್ದಕ್ಕೆ, ಹುಡುಗಿಯೊಡನೆ ಓಡಾಡುತ್ತಾನೆ ಎನ್ನುವುದಕ್ಕೆಲ್ಲ fine ಹಾಕುವುದು. ಎಲ್ಲರನ್ನೂ ಕುರಿಯಂತೆ ಬೆಳೆಸುವುದನ್ನು ಬಹಳ ಚೆನ್ನಾಗಿ ಕಟ್ಟಿದ್ದಾರೆ. ಇದನ್ನು ಬರೀ ಮಾತಿನಲ್ಲಿ ಹೇಳಿಸಬಿಡಬಹುದಾಗಿತ್ತು. ಆದರೆ ಮೇಲೆ ಹೇಳಿದ ವಿಷಯವನ್ನು ಸ್ಥಾಪಿಸಲು ಲಂಕೇಶರು ಪಟ್ಟಿರುವ ಶ್ರಮ ಅಗಾಧವಾದದ್ದು ಮತ್ತು ಪರಿಣಾಮಕಾರಿಯಾದದ್ದು . ಇದನ್ನು ಸಾಧಿಸುವುದು ಕಷ್ಟವಾದುದು. ನೂರು ಪದಗಳಲ್ಲಿ ಹೇಳುವುದನ್ನು ಪರಿಣಾಮಕಾರಿಯಾಗಿ ಒಂದೇ ದೃಶ್ಯದಲ್ಲಿ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಬಹುದು ಎಂದು ಹೇಳಿಕೊಳ್ಳುವ ಮಾಧ್ಯಮದಲ್ಲಿ ಮಾತಿನಲ್ಲಿ ನಿಸ್ಸತ್ವವಾಗಿ ಹೇಳುವುದನ್ನು ಅದೇ ಸಿನಿಮಾ ಮಾಧ್ಯಮದಲ್ಲಿ ಸ್ಫಳಕಾರಿಯಾಗಿ ಸಾಧಿಸುವುದೂ ಎಷ್ಟು ಕಷ್ಟ ಎಂಬುದು ತಿಳಿಯುತ್ತದೆ. ಇದೇ ಲಂಕೇಶರ ಮಹತ್ವಪೂರ್ಣವಾದ (visualiztion), ಈ ರೀತಿಯ visualization ಇಲ್ಲದಿದ್ದರೆ ‘ಕಾಲೇಜುರಂಗ’ದಂತಹ ಸೂಕ್ಷ್ಮವಸ್ತು (suble theme) ಹೇಗೆ ನಿಸಿಮಾ ಮಾಧ್ಯಮದಲ್ಲಿ ನಿರ್ಜೀವವಾಗುತ್ತದೆ ಎಂಬುದನ್ನು ಕಾಣಬಹುದು.

ಸಿನಿಮಾಕ್ಕಾಗಿಯೇ ಬರೆದ ಕಥೆಗಳು ಯಾವುವು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಸಂಸ್ಕಾರ , ವಂಶವೃಕ್ಷ , ಕಾಡು ಮುಂತಾದ ಕಾದಂಬರಿಗಳ ಸಿನೆಮಾಗಳಾದಾಗ ಹೊರಬಿದ್ದ ಪ್ರತಿಕ್ರಿಯೆಗಳು, ಆದರೆ ಲಂಕೇಶರು ಸಿನೆಮಾಕ್ಕಾಗಿಯೇ ಕಥೆಯನ್ನು ಬರೆದು ಅದರಲ್ಲೇ ಬಹುಪಾಲು ಯಶಸ್ಸು ಗಳಿಸಿರುವ್ದು ಶ್ಲಾಘನೀಯ ಮತ್ತು ಆವರೇ ಹೇಳಿಕೊಂಡಿರುವಂತೆ ಅವರು ಈಗ ಸಿನೆಮಾ ಮಾಧ್ಯಮದ ಮೂಲಕ ಬರೆಯುತ್ತಿರುವುದು ಅವರ ಅಭಿವ್ಯಕ್ತಿಯ ವಿಕಾಸವನ್ನು ಸೂಚಿಸುತ್ತದೆ. ಸತ್ತ ಹಾವುಗಳನ್ನು ಕಲಾತ್ಮಕವಾಗಿ ಹೊಡೆಯಲು ಪ್ರಯತ್ನಪಡುವ ‘ಪ್ರಾಯೋಗಿಕ’ ಎಂದು ಹೇಳಿಕೊಂಡು ಕುಣಿಯುವ ಜನರಿಗೆ ‘ಅನುರೂಪ’ ಒಂದು ಒಳ್ಳೆಯ ಸವಾಲನ್ನು ಎಸೆಯುತ್ತದೆ. ಮುಂದೆ ಈ ಜನರು ಇದಕ್ಕೆ ಯಾವ ರೀತಿಯ ‘ಸಿನಿಮೀಯಾ’ಪ್ರತಿಕ್ರಿಯೆಯನ್ನು ಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಲಂಕೇಶರು ‘ಪಲ್ಲವಿ’ಯಾ ನಾಯಕಿ ಹತ್ತಿರ ‘ಈ ಕಥೆ ನನ್ನದು ಆಗಿರಬಹುದು , ನಿಮ್ಮದು ಆಗಿರಬಹುದು (ನಿಮ್ಮ ಜೀವನದಲ್ಲೂ ನೀವು ಯಾರನ್ನಾದರೂ ಪ್ರೀತಿಸಿರಬಹುದು . ಆದರೆ ನಾನೇನೂ ಹೇಮಮಾಲಿನಿ ಅಲ್ಲ, ಮಾಲ ಸಿಂಹ ಅಲ್ಲ, ನಾನು ಪ್ರೀತಿಸುವವನು ಧರ್ಮೇಂದ್ರ ಅಲ, ರಾಜೇಶ್ ಖನ್ನ ಅಲ್ಲ, ಆದರೂ ನಾವಿಬ್ಬರೂ ಪ್ರೀತಿಸುವುದು ತಪ್ಪೇ .” )ಎಂದು ಹೇಳಿಸಿ ಪ್ರೇಕ್ಷಕರನ್ನು ಒಳಗು(involve) ಮಾಡುತ್ತಾರೆ. ಆದರೆ ಅಷ್ಟೇ ಸುಲಭವಾಗಿ ಸಿನೆಮಾದ ಅಂತರ ಧ್ವನಿ ಬಹುತೇಕ ನೋಡುಗರನ್ನು ಒಳಗು ಮಾಡಿಸುವುದಿಲ್ಲ. ಈ ರೀತಿ ಮಾಡಿಸದೆ thesis ನಲ್ಲೆ anti-thesis ತಂದಿದ್ದಾರೆ. ಇದು ‘ಪಲ್ಲವಿ’ಯಾ ಪರಿಮಿತಿ ಕೂಡ. ಆದರೆ ‘ಅನುರೂಪ’ದಲ್ಲಿ ಮಾವೋ ಮೂಲಕ ಮಾರ್ಕ್ಸಿಸಂ ಬಗ್ಗೆ ಹೇಳಿಸಿ ಅದು ಈ ನೆಲದಲ್ಲಿ ಸಾದ್ಯವಿಲ್ಲ ಎಂದು ಮೊದಲಲ್ಲಿ ವಾದಿಸಿ ಕೊನೆಗೆ ನಾಯಕ ಒಬ್ಬಂಟಿಯಾಗಿ ಹೋರಾಡಲಾರದ ಮುಳುಗುತ್ತಿರುವ ಸೂರ್ಯದೊಡನೆ ಮುಳುಗಿ ಹೋಗುತ್ತಿರುವುದನ್ನು ತೋರಿಸಿದಾಗ ಇದೆ anti-thesis ಸ್ಥಾಪಿತವಾಗಿದೆ ಎಂದೂ ಅಥವಾ ನಮ್ಮ ಸಮಾಜ ಇನ್ನೂ ಈ ಯಾವ ಪ್ರತಿಕ್ರಿಯೆಗೂ ಸ್ಪಂದಿಸಲು ಹದವಾಗಿಲ್ಲವೆಂದು ಮೇಲು ನೋಟಕ್ಕೆ ಅನ್ನಿಸಿದರು ಅದು ಅ ರೀತಿ ಆಗುವುದಿಲ್ಲ. ಏಕೆಂದರೆ ಈಗಿನ ನಮ್ಮ ಸಮಾಜದಲ್ಲಿ ಶಂಕರನಂಥ ಯುವಕರು ಪಡುತ್ತಿರುವ ಪರಿಭ್ರಮಣೆಯೇ ಒಂದು ಸೀಮಿತ ಆಗಿರುವಾಗ ಮತ್ತು ಶಂಕರನೇ ತಯಾರು ಮಾಡಿದ ವಿದ್ಯಾರ್ಥಿಗಳು ಅವನ ಮೇಲೆ ಎರಗಿಬಿದ್ದಾಗ ತನ್ನತಹ ಅಂದರೆ ಸಮಾಜಕ್ಕೆ ಪ್ರತಿಕ್ರಿಯೆ ತೋರಿಸುವ ಅನೇಕ ಯುವಕರನ್ನು ತಯಾರು ಮಾಡಿದ್ದಾನಲ್ಲ ಎನ್ನಿಸುತ್ತದೆ. ಇಲ್ಲಿ ಶಂಕರನ ಸೋಲು ಲಂಕೇಶರ ಸೋಲು ಲಂಕೇಶರ ಜಯ ಎಂಬುದನ್ನು ಗಮನಿಸಬೇಕು. ಈ ದೃಷ್ಟಿಯಿಂದ ಲಂಕೇಶರು ಅನುರೂಪದಲ್ಲಿ ಪಲ್ಲವಿಗಿಂತ ಒಂದು ಹೆಜ್ಜೆ ಮುಂದೆ ಬಂದಿದ್ದಾರೆ ಎನ್ನಿಸುತ್ತದೆ.

ಬರೇ ಮಾತುಗಳಿಗೆ ಒತ್ತುಕೊಟ್ಟು ನಟರ ಬಾಯಿಯಲ್ಲಿ ಮಾತುಗಳನ್ನೇ ತುಂಬಿ ಹೇಳಬೇಕಾದ ವಿಷಯವನ್ನು ನಿಸ್ಸತ್ವಗೊಳಿಸುವ ನಿಜ ಜೀವನದಿಂದ ಬೇರೆಯೇ l1ಆದ ಜಗತ್ತನ್ನು ಸೃಷ್ಟಿಸುವ ಕಮರ್ಷಿಯಲ್ ಚಿತ್ರಗಳು ಅದರಿಂದ ಹೊರಬಿದ್ದು, ಮೂಕರೇ ಏನೋ ಎನ್ನಿಸುವಂತೆ ಮಾಡಿ ಕಲಾತ್ಮಕ ಸಿನಿಮಾಗಳನ್ನು ಸೃಷ್ಟಿಸ ಹೊರಟವರಿಬ್ಬರಿಗೂ ಲಂಕೇಶ್ ಅನುರೂಪದಲ್ಲಿ ಕೈಕೊಟ್ಟು ಮೊನಚಾದ ಮಾತುಗಳಿಂದಲೂ ಕಲಾತ್ಮಕ ಸಿನೆಮಾದವರ ಕಲಾತ್ಮಕ ಅಭಿವ್ಯಕ್ತಿಯನ್ನೂ (aristic expression) ಉಳಿಸಿಕೊಂಡು ಬಂದಿರುವದು ಕಾಣದ ಸಿನೆಮಾದ ವಿಪರ್ಯಾಸ(extremities)ದ ಕಂದರವನ್ನು ಬಂಧಿಸುವ ಸೇತುವೆಯಾಗಿದೆ. ಅಂದ ಮಾತ್ರಕ್ಕೆ ಈ ರೀತಿ compromise ಮಾಡಿಕೊಂಡು ತಯಾರುಮಾಡಿದ ಸಿನೆಮಾಗಳಿಲ್ಲವೆಂದಲ್ಲ. ಉದಾಹರಣೆಗೆ ಸಿದ್ದಲಿಂಗಯ್ಯನವರ ‘ಭೂತಯ್ಯನ ಮಗ ಅಯ್ಯು’ ಇದು ಎಲ್ಲಾ ವರ್ಗಗಳಿಗೂ ಪ್ರಿಯವಾಯಿತು. ಆದರೆ ಈ ರೀತಿಯ compromisationನ ಭರದಲ್ಲಿ ಮೂಲಭೂತವಾಗಿ ಏನು ಹೇಳುಬೇಕೆಂದಿರುವರೋ ಅದನ್ನು ಮರೆತಿರುವುದು. ಈ ದೃಷ್ಟಿಯಿಂದ ನೋಡಿದಾಗಲೂ ಅನುರೂಪ ಅಸಫಲತೆಯನ್ನು ಕಾಣದೆ ಸಫಲತೆಯನ್ನು ಕಂಡಿರುವುದು . ಆದರೆ ಇಲ್ಲಿಯೂ ಮತ್ತೊಂದು ಪ್ರಶ್ನೆ ಎದ್ದು ಕಕಾಣುತ್ತದೆ ಅದೆಂದರೆ ಅನುರೂಪದಂತಹ compromise ಚಿತ್ರವೂ ‘ಕಲಾತ್ಮಕ’ ಚಿತ್ರದಂತೆಯೇ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗದೆ ಇರುವುದು. ಏಕೆಂದರೆ ಮೊದಲೇ ತಿಳಿಸಿರುವಂತೆ ಸಿನೆಮಾ ಒಂದು ಶಕ್ತಿಯುತ ಮಾಧ್ಯಮ. ಅದು ಹೆಚ್ಚು ಜನರನ್ನು ತಲುಪುವಂತಹುದು . ಇದು ಶೈಕ್ಷಿಣಕವಾಗಿ (educative) ಹೆಚ್ಚು ಜನರನ್ನು ಎಚ್ಚರಿಸಬೇಕು. ಅಂದರೆ ಯಾವ ವರ್ಗವನ್ನು ಎಚ್ಚರಿಸಬೇಕೋ ಆ ವರ್ಗಕ್ಕೆ ಚಿತ್ರ ಎಷ್ತರಮಟ್ಟಿಗೆ ಹತ್ತಿರವಾಗಿದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ಅತೀ ಬುದ್ದಿವಂತಿಕೆಯನ್ನು ಬಿಟ್ಟು ಇನ್ನು ಸ್ವಲ್ಪ ಸಡಿಲವಾಗಬೇಕಾಗುತ್ತದೆ.

ಹಾಗೆಂದಾಕ್ಷಣ  ಈಗಿರುವ ಯಾವ ಕಲಾತ್ಮಕತೆಯನ್ನೂ ತ್ಯಾಗಮಾಡದೆ  ಜನಗಳಿಗೆ ತಲುಪುವ ಹಾಗೆ (communicate) ಚಿತ್ರವನ್ನು ತರುವ ನಿಜವಾದ ಪ್ರಯತ್ನ ನಡೆಸಿದರೆ ಲಂಕೇಶರು ತುಳಿದಿರುವ ಹಾದಿ ಸುಗುಮವಾಗುತ್ತದೆ. ಈ ರೀತಿಯಿಂದೊಂದು ರೀತಿಯ ಬುದ್ದಿ ಜೀವಿಗಳೇ ಕೇಂದ್ರೀಕೃತ (centralize) ಆಗಿರುವ ಚಿತ್ರಗಳು ವಿಕೇಂದ್ರಕರಣವಾಗಿ ಹೆಚ್ಚು ಜನರನ್ನು ಆಲೋಚಿಸಲು ಹಚ್ಚಬೇಕು. ಆದರೆ ಇದನ್ನು ಹೇಗೆ ಸಾಧಿಸಬೇಕೆಂಬುದನ್ನು ಈಗ ಸಧ್ಯಕ್ಕೆ ಹೇಳುವುದು ಕಷ್ಟವಾಗುತ್ತದೆ. ಆದರೆ ಲಂಕೇಶ್ ಅವರು ಈ ರೀತಿಯ ತೊಳಲಾಟದಿಂದ (conflict) ಅನುರೂಪದಲ್ಲಿ ಒಂದು ಸುತ್ತು ಬಿಡಿಸಿಕೊಂಡು ಬಂದಿರುವುದೇ ದೊಡ್ಡ ಸಾಹಸವಾಗಿದೆ ಮತ್ತು ಸಮಾಧಾನ ಕೊಡುವಂಥದ್ದು , ಭರವಸೆಯನ್ನು ಮೂಡಿಸುವಂಥದ್ದು ಆಗಿದೆ.

Leave a Reply

Your email address will not be published. Required fields are marked *