ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್

ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್

Tingalu – September 2009

9ಎ.ಕೆ.ರಾಮಾನುಜನ್ ಕನ್ನಡದಲ್ಲಿ ಬರೆದದ್ದು ಒಂದೇ ಒಂದು ಕಥೆ. ‘ಅಣ್ಣಯ್ಯನ ಮಾನವ ಶಾಸ್ತ್ರ’. ಮೈಸೂರಿನ ಅಣ್ಣಯ್ಯ ಹಿಂದುಧರ್ಮ ಮತ್ತು ಕ್ರಿಯಾವಿಧಿಗಳನ್ನು, ಅಷ್ಟೇ ಎಕೆ, ತನ್ನ ಬಗ್ಗೆಯೇ ತಾನು ತಿಳಿದದ್ದು ಅಮೆರಿಕಾದ ವಿಶ್ವವಿದ್ಯಾನಿಲಯವೊಂದರ ಲೈಬ್ರರಿಯಲ್ಲಿ ಫೆರ್ಗ್ಯುಸನ್ ಎಂಬ ಮಾನವಶಾಸ್ತ್ರ ರಚಿಸಿದ ಪುಸ್ತಕದ ಮೂಲಕ.  ಆ ಫೆರ್ಗುಸನ್ ನ ವಿಸ್ತೃತ ಆವ್ರುತ್ತಿಯೆಂದರೆ ಇದೇ ಅಮೇರಿಕಾದ ಜೋಸೆಫ್ ಕ್ಯಾಂಪ್ಬೆಲ್ ಎಲ್ಲರ ಪ್ರೀತಿಯ ಜೋ. ಈತನೊಬ್ಬ ಪುರಾಣ ಶಾಸ್ತ್ರಜ್ಞ.

ಜೋ ಪ್ರಕಾರ ಪಶ್ಚಿಮವು ಪೂರ್ವವನ್ನು ಸಂಧಿಸುವುದು ಐನ್ ಸ್ಟೀನ್ ನ ಭೌತಶಾಸ್ತ್ರ ನತ್ತು ಭಾರತದ ದರ್ಶನಶಾಸ್ತ್ರದಲ್ಲಿ ಇಪ್ಪತ್ತನೆ ಶತಮಾನದಲ್ಲಿ ಐನ್ ಸ್ಟೀನ್ ನು “ಹೊಸ ಭೌತಶಾಸ್ತ್ರದಲ್ಲಿ ಕ್ಷೇತ್ರ(field) ಮತ್ತು ಭೌತಶಾಸ್ತ್ರ (matter) ಎರಡಕ್ಕೂ ಇಲ್ಲಿ ಎಡೆ ಎಲ್ಲ. ಇಲ್ಲಿ ಕ್ಷೇತ್ರ ಮಾತ್ರ ಸತ್ಯ, ಕ್ಷೇತ್ರದಲ್ಲಿ ಚೈತನ್ಯ ಯಾವಾಗಲೂ ಸಂಚರಿಸುತ್ತದೆ” ಎಂದು ಹೇಳಿದ. ಇದನ್ನೇ ಜೋ ಸಮೀಕರಿಸಿ “ತತ್ತ್ವಮ್ಮಸಿ” ಎಂಬ ಭಾರತೀಯ ಪರಿಕಲ್ಪನೆಗೆ ಹೋಲಿಸಿದ. ಇಲ್ಲಿ ಕೆಲಸ ಮಾಡುವುದು ‘ನಾನೇ ಅದು’, ಅಂದರೆ ಚೈತನ್ಯ. ಮಾನವ ಪ್ರಪಂಚವನ್ನು ಗ್ರಹಿಸುವುದು ದ್ವೈರುಧ್ಯದಿಂದ. ಈ ದ್ವೈರುಧ್ಯವನ್ನು ಮೀರುವುದೇ ಮನುಷ್ಯ ಪ್ರಕೃತಿಯೊಡನೆ ಒಂದಾಗುವ ಕ್ರಿಯೆ. ಈ ತುರೀಯ ಮಟ್ಟವನ್ನು ಮುಟ್ಟುವುದರ ಮೂಲಕ ಅಲ್ಲಿ  ಪೂರ್ಣತ್ವವಿರುತ್ತದೆ. ನಾನು ಬೇರೆ\, ಪ್ರಪಂಚ ಬೇರೆ ಎಂದು ಅಂದುಕೊಂಡ ತಕ್ಷಣ ಪೂರ್ಣತೆಯನ್ನು ಧಿಕ್ಕರಿಸಿದಂತಾಗುತ್ತದೆ. ಇದರ ಮೂಲಕ  ನಮ್ಮನ್ನು ನಾವೇ ಕಬ್ಬಿಣದ ಗೋಡೆ ನಿರ್ಮಿಸಿಕೊಂಡು ಬಂಧಿತರಾಗುತ್ತೇವೆ. ಈ ದ್ವೈರುಧ್ಯಗಳನ್ನು ಕಳಚಿಗೊಂದರೆ ಮಾತ್ರ ಕ್ಷ್ತೆತ್ರವೆಲ್ಲವೂ ಚೈತನ್ಯವಾಗಿ ಪರಿವರ್ತಿತವಾಗುತ್ತದೆ ಎಂಬುದನ್ನು ಜೋ ತನ್ನ ಸೃಷ್ಟಿಪುರಾಣ ಶಾಸ್ತ್ರದ ಅಧ್ಯಯನದಿಂದ ತೋರಿಸಿಕೊಟ್ಟ.

ಜೋ ಹುಟ್ಟಿದ್ದು ಮಾರ್ಚ್ ೨೬, ೧೯೦೪ ರಂದು, ನ್ಯುಯಾರ್ಕ್ ನಲ್ಲಿ ; ಒಬ್ಬ ವ್ಯಾಪಾರಿಯ ಮಗನಾಗಿ, ಇವನ ತಾತ ಐರ್ಲೆಂಡಿ ನಿಂದ ಅಮೇರಿಕಾಕ್ಕೆ ಬಂದು ರೈತನಾಗಿದ್ದ. ಅಲ್ಲಿ ಮೂರು ವರ್ಷಗಳ ಮಹಾ ಬರಗಾಲ ಬಂದಾಗ ಈತ ವಲಸೆ ಬಂದಿದ್ದ. ಜೋ ತನ್ನ ಒಂಬತ್ತನೇ ವಯಸ್ಸಿನಲ್ಲಿ ನ್ಯೂಯಾರ್ಕಿನ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಗೆ ಭೇಟಿಕೊಟ್ಟಿದ್ದ. ಅಲ್ಲಿ ಅಮೇರಿಕನ್ ಇಂಡಿಯನ್ ಬುಡಕಟ್ಟು ಜನಾಂಗದ ಪ್ರಾಣಿ ಸಂಕೇತವಾಗಿ ನೆಟ್ಟಿದ್ದ  ಸಂಕೇತವಾದ ಕಂಬವನ್ನು, ಮುಖವಾಡಗಳನ್ನೂ ನೋಡಿ ಆಶ್ಚರ್ಯ ಚಕಿತನಾಗಿದ್ದ. ಬಾಳಿನಲ್ಲಿ ಇವುಗಳ ಅರ್ಥವೇನು?  ಎಂಬ ಪ್ರಶ್ನೆ ಇವನನ್ನು ಬದುಕಿನುದಕ್ಕೂ ಕಾಡತೊಡಗಿತು. ಐದು ಸಂಪುಟಗಳಲ್ಲಿದ್ದ ಆ ಬುಡಕಟ್ಟು ಜನಾಂಗದ ಪುರಾಣ , ಚಾರಿತ್ರಿಕ-ಪುರಾಣ (legends)ಗಳನ್ನು ತನ್ನ ಹದಿಮೂರನೇ ವಯಸ್ಸಿಗಾಗಲೇ ಓದಿ ಮುಗಿಸಿದ್ದ.

ಕ್ಯಾಂಬೆಲ್(೧೯೦೪ – ೧೯೮೭) ತನ್ನ ಶಾಲಾದಿನಗಳನ್ನು ಮುಗಿಸಿ ೧೯೨೪ ರಲ್ಲಿ ತನ್ನ ಕಾಲೇಜಿನ ರಜಾದಿನಗಳಲ್ಲಿ ಹಡಗಿನಲ್ಲಿ ಯೂರೋಪಿಗೆ ಪ್ರಯಾಣ ಬೆಳೆಸುತ್ತಿದ್ದ. ಅಲ್ಲಿ ಭಾರತೀಯ ಯುವ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯ ಪರಿಚಯವಾಯಿತು. ಪರಿಚಯ ಸ್ನೇಹವಾಗಿ ಹಿಂದೂ ಧರ್ಮದ ಬಗ್ಗೆ ಪರಿಚಯವಾಯಿತು. ಜಿಡ್ಡು ಆಲೋಚನೆಗಳು ಬಗ್ಗೆ ಜೋ ಆಕರ್ಷಿತನಾದ.

ನಂತರ ಕಾಲೇಜಿನಲ್ಲಿ ಜೀವಶಾಸ್ತ್ರ, ಗಣಿತ ತೆಗೆದುಕೊಂಡು ಓದುತ್ತಿದ್ದ ಜೋಗೆ ಆ ವಿಷಯಗಳ ಬಗ್ಗೆ ಆಸಕ್ತಿ ಕಡಿಮೆಯಾಯಿತು. ಅದಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಇಂಗ್ಲೀಷ್ ಸಾಹಿತ್ಯದಲ್ಲಿ ಬಿ.ಎ ಮಾಡಿ ಮಧ್ಯಕಾಲೀನ ಸಾಹಿತ್ಯದಲ್ಲಿ ಎಂ.ಎ ಮಾಡಿ ಮುಗಿಸಿದ . ವಿಶ್ವವಿದ್ಯಾಲಯಕ್ಕೆ ಮೊದಲಿಗನಾಗಿ.

೧೯೨೭ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿಧ್ಯಾರ್ಥಿವೇತನದ ಮೇಲೆ ಯುರೋಪಿಗೆ ಹೋಗಿ ಫ್ರೆಂಚ್ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿದ ನಂತರ ಜರ್ಮನಿಗೆ ಹೋಗಿ ಜರ್ಮನ್ ಭಾಷೆ ಕಲಿಯುವುದರ ಜೊತೆಗೆ ಸಂಸ್ಕೃತದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ. ಇಲ್ಲಿ ಮನಃಶಾಸ್ತ್ರಜ್ಞ ಯುಂಗನ ಪರಿಚಯವಾಯಿತು. ಯುಂಗನ ಪುರಾಣದ ಬಗೆಗಿನ ಅಧ್ಯಯನ ಇವನ ಗಮನ ಸೆಳೆಯಿತು. ಆತನ “ಸಾಂಘಿಕ ಸುಪ್ತ ಪ್ರಜ್ಞೆ” ಪರಿಕಲ್ಪನೆಯನ್ನು ಗಹನವಾಗಿ ಅದ್ಯಯನ ಮಾಡಿದ. ಆತನ “ಮಾತ್ರುಕಾಮಾದರಿ” (archetypes) ಯನ್ನು ಪುರಾಣಕ್ಕೆ ಅನ್ವ್ಯಯಿಸುವ ಹೊಳವು ಸಿಕ್ಕಿತು. ಅಲ್ಲದೆ ಯುಂಗ್ ಪುರಾಣ ಮತ್ತು ಮನಸ್ಸಿನ ನಡುವೆ ಇರುವ ಸಂಬಂಧವನ್ನು ಚೆನ್ನಾಗಿ ಸ್ತಾಪಿಸಿದ್ದ. ಇಷ್ಟು ಹೊತ್ತಿಗಾಗಲೇ ಆತನು ಭಾರತೀಯ ಪುರಾಣ, ಬೌದ್ದಧರ್ಮ , ಬುಡಕಟ್ಟು ಜನಾಂಗಗಳು, ಪುರಾಣಗಳ ಅಧ್ಯಯನವನ್ನು ಪ್ರಾರಂಭಿಸಿದ್ದ.

೧೯೨೯ರಲ್ಲಿ ಯುರೋಪಿನಿಂದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಬಂದು ಸಂಸ್ಕೃತ ಸಾಹಿತ್ಯ ಮತ್ತು ಆಧುನಿಕ ಕಲೆಯ ಮೇಲೆ ತನ್ನ ಮಹಾ ಪ್ರಬಂಧ ಬರೆಯಲು ತಯಾರಿ ನಡೆಸಿದ. ಆದರೆ ಆತನ ಗೈಡ್ ಆ ವಿಷಯವನ್ನು ಅನುಮೋದಿಸಲಿಲ್ಲ . ಇದರಿಂದ ನಿರಾಸೆಗೊಂಡ ಜೋ ತನ್ನ ಜೀವಮಾನದಲ್ಲೇ ಡಾಕ್ಟೊರೇಟ ಪದವಿ ಮಾಡುವುದಿಲ್ಲವೆಂದು ನಿರ್ಧರಿಸಿದ,

ಇದಾದ ಕೇವಲ ಎರಡು ವಾರಗಳಲ್ಲಿ ಅಮೇರಿಕಾದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು. ಯಾವ ಕೆಲಸವೂ ಇಲ್ಲದ ಜೋ ತನ್ನ ಕೊಠಡಿಗೆ ಬಂಧಿತನಾದ. ಆತ ತನಗೆ ಬೇಕಾದ ಮಾನವಶಾಸ್ತ್ರ, ಮನಃಶಾಸ್ತ್ರ, ಪುರಾತತ್ವಶಾಸ್ತ್ರ ಮತ್ತು ಪುರಾನಶಾಸ್ತ್ರಗಳ ಬಗ್ಗೆ ಓದತೊಡಗಿದ.

10ಸರ್ ಜೇಮ್ಸ್ ಫ್ರೇಜೆರ್ ೧೯೮೦ರಲ್ಲಿ ಬರೆದ ಮಾನವಶಾಸ್ತ್ರದ ಪುಸ್ತಕ ಇವನನ್ನು ಆಕರ್ಷಿಸಿತು. ಆದರೆ ಆತನ ಚಿಂತನೆ ಜೋಗೆ ಅಷ್ಟಾಗಿ ಹಿಡಿಸಲಿಲ್ಲ . ಆತ ತನ್ನ ‘ಗೋಲ್ಡನ್ ಬೊ’ ಎಂಬ ಪ್ರಸಿದ್ದ ಮಾನವಶಾಸ್ತ್ರದ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾನೆ . “ಮೈಥಾಲಜಿ (ಪುರಾಣಶಾಸ್ತ್ರ) ಬರುವ ಮೂಢ ನಂಬಿಕೆ ಕೊನೆಗೆ ಆಧುನಿಕ ವಿಜ್ಞಾನದಿಂದ ಅಳಿಸಿ ಹೋಗುತ್ತದೆ. ಮಿಥ್ ನ ನೆಲೆ ಕಣ್ಕಟ್ಟು(magic) ಮನುಷ್ಯ ತರ್ಕಬದ್ದವಾದ ಬುದ್ದಿಯನ್ನು ಬೆಳೆಸಿಕೊಳ್ಳುವುದರ ಮೂಲಕ ಈ ಮಿಥ್ ಗಳು ಅರ್ಥಹೀನವಾಗುತ್ತವೆ. ಯಾವುದೇ ಸಂಪ್ರದಾಯ ಅಥವಾ ನಂಬಿಕೆಯನ್ನು ತರ್ಕಹೀನ ಎಂದು ತೋರಿಸುವುದರ ಮೂಲಕ ಅದು ಕಣ್ಮರೆಯಾಗುತ್ತದೆ. ಏಕೆಂದರೆ ಎಲ್ಲಾ ಕ್ರಿಯಾವಿಧಿಗಳೂ ಮನಸ್ಸಿಗೆ ಸಂಬಂಧಿಸಿದ್ದು ಎಂದು ನಂಬುತ್ತೇವೆ. ಅದ್ದರಿಂದ ಅದು ನಿಜವೆಂದು ತಿಳಿಯುತ್ತೇವೆ. ವೈರಿಯ ಪ್ರತಿಮೆಯನ್ನು ಮಾಡಿ ಅದನ್ನು ಕೊಂಡರೆ ವೈರಿ ಸಾಯುತ್ತಾನೆ ಎಂದು ತಿಳಿಯುತ್ತೇವೆ ಇದು ಸುಳ್ಳು, ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮೂಢನಂಬಿಕೆ ಮತ್ತು ಧರ್ಮ ಇಲ್ಲವಾಗುತ್ತದೆ. ಮನುಷ್ಯನ ಅಭಿವೃಧಿ ಆಗ ಸಾಧ್ಯವಾಗುತ್ತದೆ”.

ಈ ಹೇಳಿಕೆ “ಜೋ” ನ ನಂಬುಗೆಯನ್ನು ಅಲ್ಲಾಡಿಸಿತು. ಆದರೆ ಅದಕ್ಕೆ ಅವನಿಗೆ ಉತ್ತರ ಸಿಕ್ಕಿದ್ದು ಇಡೀ ಸಮಯದಲ್ಲಿ ಸಿಗ್ಮಂಡ್ ಫ್ರಾಯ್ಡ್ ಮತ್ತು ಕಾರ್ಲಯುಂಗ್ (೧೮೮೫) ಹಿಸ್ಟಿರಿಯಾ , ಆಫೇಸಿಯ , ಕನಸು-ಮಿಥ್ ಇವುಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ , ಯುಂಗ್ ‘ಮಿಥ್ ಎಂದರೆ ಅದೊಂದು ಸಾಂಘಿಕ ಕನಸು , ಕನಸೆಂದರೆ ಅದೊಂದು ವೈಯಕ್ತಿಕ ಮಿಥ್” ಎಂದು ತಮ್ಮ ವಾದವನ್ನು ಮುಂದಿಟ್ಟು ವಿಶ್ಲೇಷಿಸಿದ್ದರು. ಪ್ರಮುಖವಾಗಿ ಯುಂಗನು ಮೈಥಾಲಜಿ ಮತ್ತು ಧರ್ಮ ಇವುಗಳನ್ನು ಧನಾತ್ಮಕವಾಗಿ ನೋಡಿದ್ದನು . ನಮ್ಮ ಇಂದ್ರಿಯಗಳು ತಮ್ಮದೇ ಆದ ಉದ್ದೇಶಪೂರ್ವಕ ಕಾರ್ಯಗಳನ್ನು ಹೊಂದಿವೆ. ಕೆಲವನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಬಹುದು . ಮತ್ತೆ ಕೆಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ತಮ್ಮ ದಿನನಿತ್ಯದ ಬೇಡಿಕೆಗಳಿಗೆ ಮೇಲ್ಮೈ ಪ್ರಜ್ಞೆ ಸ್ಪಂದಿಸುತ್ತಿರುತ್ತದೆ. ಆದರೆ ಆಂತರಿಕ ಬೇಡಿಕೆಗಳಿಗೆ  ಸ್ಪಂದಿಸಲು ಸಾಧ್ಯವಾಗುವುದಿಲ್ಲ . ಯುಂಗನ ಪ್ರಕಾರ ನಾವು ನಮ್ಮ ಮಿಥ್ಗಳನ್ನು ಸರಿಯಾಗಿ ‘ಓದಿಕೊಂಡಾಗ’ ಮಾತ್ರ ಅವು ನಮ್ಮ ಸುಪ್ತ ಪ್ರಜೆಯನ್ನು ಮರಳಿ ಮೇಲ್ಮೈಗೆ ತರಬಲ್ಲವು. ಆದರೆ ಸಾಮಾನ್ಯ ಭಾಷೆಯಂತಿರುವುದಿಲ್ಲ . ಅದು ಸಂಕೇತ ಮತ್ತು ರೂಪಕಗಳಿಂದ ಕೂಡಿರುತ್ತದೆ. ಮಿಥ್ ನಮ್ಮ ಮನಸ್ಸಿನ ಶಕ್ತಿಯನ್ನು ಉದ್ಬ್ಹೊದಿಸಿ , ಗುರುತಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವಂತೆ ಮಾಡುತ್ತದೆ. ಈ ಪ್ರಜ್ಞೆ ಆದಿಮಾನವನಿಂದ ಇಂದಿನ ಆಧುನಿಕ ಮನುಷ್ಯನವರೆವಿಗೂ ಸಹಸ್ರಾರು ವರ್ಷಗಳಿಂದ ಕೆಲಸ ಮಾಡುತ್ತಿವೆ . ಈ ಪ್ರಜ್ಞೆಯನ್ನು ಯಾವ ವಿಜ್ಞಾನವೂ ಸ್ಥಾನಪಲ್ಲಟಗೊಳಿಸಲಾರದು . ಮಿಥ್ ಗಳ ಅಧ್ಯಯನದ ಮೂಲಕ ನಮ್ಮ ಒಳಗಿನ ತನ್ನತನವನ್ನು ಕಂಡುಕೊಳ್ಳಬಹುದು. “ಜೋ ಇದನ್ನು ಕಂಡುಕೊಂಡು ಪ್ರಪಂಚದ ನಾನಾ ಕಡೆಯಾ ಮಿಥ್ ಗಳನ್ನೂ ಸಂಗ್ರಹಿಸಿ ಅಭ್ಯಾಸಮಾಡತೊಡಗಿದ.

ಇದಕ್ಕೆ ಪುರಾತತ್ವಶಾಸ್ತ್ರದ ಹೊಸ ಉತ್ಖನನಗಳ ಬಗೆಗೆ ಅಧ್ಯಯನ ನಡೆಸಿದ. ತನ್ನ ಮಿಥ್ ನ ಅಧ್ಯಯನಕ್ಕೆ ವಿವಿಧ ಶಾಸ್ತ್ರಗಳ ಪೂರ್ಣದೃಷ್ಟಿಯನ್ನು ತೊಡಿಸಿದ. ಈ ಪುಸ್ತಕಗಳನ್ನೆಲ್ಲ ಪಡೆಯಲು ಜೋನಲ್ಲಿ ಹಣವಿರಲಿಲ್ಲ. ಆದರೆ ಆ ಪುಸ್ತಕಗಳನ್ನು ಕೇಳಿದಾಗ ಪುಸ್ತಕ ಅಂಗಡಿಯನ್ನು ತಪ್ಪದೆ ಕಳುಹಿಸುತ್ತಿದ್ದ. ಹಣದ ಬಗ್ಗೆ ಚಕಾರವೆತ್ತದೆ. ೧೯೩೪ ರಲ್ಲಿ ಈತನ ಅಧ್ಯಾಪಕ ಸಾರಾಲಾರೆನ್ಸ್ ಕಾಲೇಜಿನಲ್ಲಿ ಇವನಿಗೆ ಒಂದು ಕಾಲೇಜಿನಲ್ಲಿ ಉಪನ್ಯಾಸಕನ ಹುದ್ದೆಯನ್ನು ಕೊಡಿಸಿದ. ಆಗ ಆ ಪುಸ್ತಕಗಳ ಸಾಲವನ್ನು ತೀರಿಸಿದ.

ಜೋ ಒಬ್ಬ ಉತ್ತಮ ಅಧ್ಯಾಪಕನಾಗುವುದರ ಜೊತೆಗೆ ತನ್ನ ಅಧ್ಯಯನವನ್ನು ಮುಂದುವರಿಸಿದ . ಸ್ವಾಮಿ ನಿಖಿಲಾನಂದರ ಜೊತೆ ಸೇರಿ ಒಂದು ಸಾವಿರ ಪುಟಗಳ ;’ದಿ ಗಾಸ್ಪೆಲ್ ಆಫ್ ರಾಮಕೃಷ್ಣ’ ಎಂಬ ಪುಸ್ತಕವನ್ನು ಇಂಗ್ಲೀಷ್ ಗೆ ಭಾಷಾಂತರಿಸಿದ. ಅಲ್ಲದೆ ತನ್ನ ಗುರು ಎಂದು ಪರಿಗಣಿಸಿದ್ದ ಹೆನ್ರಿಕ್ ಚಿಮ್ಮರ್ ನ ‘ಫಿಲಾಸಫೀಸ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಸಂಪಾದಿಸಿದ. ಅಲ್ಲದೆ ಅವನದೇ ‘ದಿ ಆರ್ಟ್ ಆಫ್ ಇಂಡಿಯನ್ ಏಷ್ಯಾ ‘ ಎಂಬ ಎರಡು ಸಂಪುಟಗಳನ್ನು ಸಂಪಾದಿಸಿದ. ‘tolingan ಫೌಂಡೇಶನ್ ‘ ಪ್ರಕಾಶನಕ್ಕೆ ಯುಂಗನ ಪುಸ್ತಕಗಳನ್ನು ಸಂಪಾದಿಸಿದ.

ಅನಂತರ ನಾಲ್ಕು ವರ್ಷಗಳ ಕಾಲ ತನ ಮೊದಲ ಕೃತಿ “ದಿ ಹೀರೋ ವಿಥ್ ಥೌಸಂಡ್ ಫೇಸಸ್” ಅನ್ನು ರಚಿಸಿದ. ೧೯೪೮ ರಲ್ಲಿ ರಚಿಸಿದ ಈ ಕೃತಿಯಲ್ಲಿ ಇಡೀ ಪ್ರಪಂಚದ ಮೂಲೆ ಮೂಲೆಗಳಿಂದ ಸಂಗ್ರಹಿಸಿದ ಪುರಾಣಗಳನ್ನು ಒಟ್ಟಿಗೆ ತಂದು ಅದರಲ್ಲಿರುವ ಸಂಕೇತಗಳು ಮತ್ತು ರೂಪಕಗಳು ತಮ್ಮಷ್ಟಕ್ಕೆ ತಾವೇ ಬಿಚ್ಚಿಕೊಳ್ಳುವಂತೆ ವಿಶ್ಲೇಷಿಸಿರುವ ಕೃತಿ. ಇದು ಸಹಸ್ರಾರು ವರ್ಷಗಳಿಂದ ಮನುಷ್ಯ ಕಂಡುಕೊಂಡ ಮೂಲ ಸತ್ಯಗಳು ಆಶ್ಚರ್ಯಕರ ರೀತಿಯಲ್ಲಿ ಒಂದೇ ತರಹ ಇರುವುದು. ಇದರಿಂದ ಪೌರಾತ್ಯ –ಪಾಶ್ಚಾತ್ಯ , ಹಳೆ-ಹೊಸ, ಸಾಂಪ್ರದಾಯಿಕ – ಆಧುನಿಕ ಎಂಬ ದ್ವಿವಾದವ್ರುತ್ತಿಯಿಂದ ಬಿಡುಗಡೆಗೊಳಿಸಿದಂತಾಗಿದೆ. ಈ ಮೂಲ ಮಾತೃಕೆ (archy) ಗಮನಿಸಿದಾಗ ಇಲ್ಲಿ ಜಾತಿ- ವರ್ಗ-ವರ್ಣ ಇತ್ಯಾದಿಗಳೆಲ್ಲ ಮಾಯವಾಗಿ ಮಾನವತ್ವ ಮಾತ್ರ ಮೈದುಂಬಿ ಬಂದಿರುವುದು ಗೊತ್ತಾಗುತ್ತದೆ. ಈ ನಾಯಕನ ಮಿಥ್ ನಲ್ಲಿ ನಾಯಕನು ಸಾಮಾನ್ಯ ಪ್ರಪಂಚದಿಂದ ಅಸಾಮಾನ್ಯ, ಆಶ್ಚರ್ಯಕರ , ನಿಗೂಢ ಪ್ರಪಂಚವನ್ನು ಪ್ರವೇಶಿಸುತ್ತಾನೆ . ಅಲ್ಲಿ ಅಸಾಮಾನ್ಯ ಬಲಗಳನ್ನು ಎದುರಿಸಿ ಗೆಲುವನ್ನು ಪಡೆಯುತ್ತಾನೆ. ಇಂಥಹ ನಿಗೂಢ ಪ್ರಪಂಚದಲ್ಲಿ ಸಾಹಸಮಾಡಿ ತನ್ನ ಸಮಾಜದ ಜನರಿಗೆ ಬೇಕಾದ ವರವನ್ನು ಕೊಡುವ ಶಕ್ತಿಯನ್ನು ಪಡೆದುಕೊಂಡು ಬರುತ್ತಾನೆ.

ಈ ಪುಸ್ತಕ ದೇಶ-ವಿದೇಶದ ಕಲಾಕಾರರು, ಸಂಗೀತಗಾರರು, ಚಲನಚಿತ್ರಕಾರರ ಮೇಲೆ ಪ್ರಭಾವ ಬೀರಿದೆ. ೧೯೪೮ರಲ್ಲಿ ಪ್ರಕಟವಾದ ಈ ಪುಸ್ತಕ ಆ ವರ್ಷದಲ್ಲಿ ಅಮೇರಿಕಾದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕೃತಿ ಎಂಬ ಮನ್ನಣೆಗೆ ಪಾತ್ರವಾಯಿತು. ಅಲ್ಲದೆ ೧೯೭೭ರಲ್ಲಿ ಜಾರ್ಜ್ ಲೂಕಾಸ್ ಎಂಬ ಚಲನಚಿತ್ರ ನಿರ್ದೇಶಕ ‘ಸ್ಟಾರ್ ವಾರ್ಸ್ ‘ ಎಂಬ ಚಿತ್ರ ತ್ರಿವಳಿಯನ್ನು ತೆಗೆದು ಇಡೀ ಜಗತ್ತನ್ನೇ ದಂಗು ಬಡಿಸಿದ. ಈ ಚಿತ್ರಕ್ಕೆ ಪ್ರೇರಕನಾದ ಜೋ ನನ್ನು ಆತ ಸ್ಮರಿಸಿರುವುದೇ ಅಲ್ಲದೆ ಅವನಿಗೆ ಅದನ್ನು ಅರ್ಪಿಸಿ ಮೊದಲ ಪ್ರದರ್ಶನಕ್ಕೆ ಕ್ಯಾಲಿಫೋರ್ನಿಯಾಗೆ ಜೋನನ್ನು ಆಹ್ವಾನಿಸಿ ಗೌರವಿಸುತ್ತಾನೆ . ಪುರಾತನ ಪುರಾಣದ ವಸ್ತು ಮತ್ತು ಸಂಕೇತಗಳನ್ನು ಆಟ ಸಮಕಾಲೀನ ಪ್ರತಿಮೆಗಳಲ್ಲಿ ತೋರಿಸಿದ್ದ ಜೋ ಈ ಸಿನೆಮಾ ನೋಡಿ ಪುಳಕಗೊಂಡು ಅಭಿಜಾತ ಪೌರಾಣಿಕ ಕಥೆಯನ್ನು ಅತ್ಯಂತ ಶಕ್ತಿಯುತವಾಗಿ ಹೆಣೆದಿದ್ದಾನೆ. ಇದನ್ನೇ ಗೊಯತೆ ತನ್ನ ಫೌಸ್ಟ್ ಕೃತಿಯಲ್ಲಿ ಹೇಳಿದ್ದು.

ಪುರಾಣಗಳು ಮನುಷ್ಯ ಜೀವನದ ಅಧ್ಯಾತ್ಮಕ ಶಕ್ತಿಯನ್ನೂ ಪಡೆಯಲು ಇರುವ ಕೀಲಿಕೈ . ಪುರಾಣಗಳಿಂದ ಅರ್ಥ ಕಾಣುವುದು ಜೀವನದ ಗುರಿಯಲ್ಲ. ಅರ್ಥವನ್ನು ಅನುಭವಿಸುವುದು. ವಿಶ್ವಕ್ಕೆ ಏನು ಅರ್ಥವಿದೆ?ಅದರ ಪಾಡಿಗೆ ಅದು ಇದೆ. ನಾವು ಅರ್ಥವನ್ನು ಹಚ್ಚುತ್ತೇವೆ. ಪುರಾಣಗಳನ್ನು ಓದಬೇಕು. ಅವು ಹೇಗೆ ಮನಸ್ಸಿನ ಒಳಗೆ ಹೋಗುವುದು ಹೇಗೆ ಎಂದು ಹೇಳಿಕೊಡುತ್ತದೆ. ಅದು ಅನುಭವ ಎಂದರೇನು ಎಂದು ಹೇಳಿಕೊಡುತ್ತದೆ.

ಪುರಾಣಗಳು ಸಾಹಿತ್ಯ ಮತ್ತು ಕಲೆಗಳ ಹಿಂದೆ ಏನಿದೆ ಎಂದು ಹೇಳಿಕೊಡುತ್ತವೆ. ಪುರಾಣಗಳ ಜೀವನದ ವಿವಿದ ಘಟ್ಟಗಳನ್ನು ತಿಳಿಸಿಕೊಡುತ್ತದೆ. ಬಾಲ್ಯದಿಂದ ಯೌವನಕ್ಕೆ ಕಾಲಿಡುವಾಗಿನ ಆಚರಣೆಗಳು, ಮದುವೆಯೆಂಬ ಆಚರಣೆ- ಇದು ಜೀವನದ ಜವಾಬ್ದಾರಿಯನ್ನು ಹೊರುವ ಘಟ್ಟ. ಹುಟ್ಟು , ಬದುಕು – ಸಾವು ಇವುಗಳನ್ನು ಆಚರಿಸುವಂತೆ ಮಾಡುವುದೇ ಪುರಾಣ.

ಈ ಹೊಸಕಾಲದ ಮಾಧ್ಯಮಗಳ ಮೂಲಕ ಪುರಾಣಗಳು ಸೃಷ್ಟಿಯಾಗುತ್ತಿವೆಯೇ ಹೊಸಕಾಲದ ಯಂತ್ರಗಳನ್ನು ಪುರಾಣಗಳು ಒಳಗೊಳ್ಳುತ್ತಿವೆಯೇ ಎಂದು ಜೋನನ್ನು ಕೇಳಿದರೆ ಹೌದು ಎನ್ನುತ್ತಾನೆ. ಬಸ್ಸು, ಕಾರು ಇತ್ಯಾದಿಗಳು ಆಗಲೇ ಪುರಾಣದೊಳಗೆ ಬಂದಿವೆ, ಕನಸಿನೊಳಗೆ ಇಳಿದಿವೆ. ವಿಮಾನಗಳಂತೂ ಸರಿಯೋ ಸರಿ – ಈ ಭೂಮಿಯಿಂದ ಬಿಡುಗಡೆ ಪಡೆಯುವ ಹಕ್ಕಿಯನ್ನು ಸಂಕೇತಿಸುವುದೇ ವಿಮಾನ – ‘ ಲೋಹದ ಹಕ್ಕಿ’. ಅಂತೆಯೇ ಆಯುಧಗಳು ಕೂಡ. ಬಾಣದ ಪಾತ್ರವನ್ನು ಈಗ ಪಿಸ್ತೂಲು ತೆಗೆದು ಕೊಳ್ಳುತ್ತದೆ. ಪ್ರತಿಯೊಂದು ಪುರಾಣವು ಶಕ್ತಿ , ಅಧಿಕಾರ ಇತ್ಯಾದಿಗಳ ವಿರುದ್ದ ಹೋರಾಡುತ್ತವೆ. ಅಂತೆಯೇ ಹೊಸ ಕಾಲ ಕಥೆಯೂ ನಡೆಯುವುದು.

ಹೊಸಕಾಲಕ್ಕೆ ಬೇಕಾಗಿರುವ ಹೊಸ ಪುರಾಣವೆಂದರ ಒಬ್ಬ ವ್ಯಕ್ತಿ ಒಂದು ಜನಾಂಗದವರೊಡನೆ ಗುರುತಿಸಿಕೊಳ್ಳುವುದಲ್ಲ. ಇಡೀ ಗ್ರಹದ ಜೊತೆ ಗುರುತಿಸಿಕೊಳ್ಳುವ ಪುರಾಣ ಬೇಕಾಗುತ್ತದೆ. ಹೀಗೆ ಮನುಷ್ಯ ಈಗ ‘ವಿಶ್ವಮಾನವ’ನಾಗಬೇಕಾಗಿದೆ.

ಪುರಾಣಗಳು ನಮ್ಮ ಎಚ್ಚರಗೊಳ್ಳುತ್ತಿರುವ ಪ್ರಜ್ಞೆಗೆ ವಿಶ್ವದ ನಿಗೂಢತೆಯೊಡನೆ ಸಂಪರ್ಕ ಸೃಷ್ಟಿಸುತ್ತದೆ. ವಿಶ್ವದ ಒಂದು ಚಿತ್ರವನ್ನು ಕೊಡುತ್ತದೆ. ಪ್ರಕೃತಿಯೊಡನೆ ಮನುಷ್ಯನ ಸಂಬಂಧವನ್ನೂ ತಿಳಿಸುತ್ತದೆ. ಅಂತೆಯೇ ಕೆಲವು ಸಾಮಾಜಿಕ ಮತ್ತು

ನೈತಿಕ ಕ್ರಮವನ್ನು ಪ್ರತಿಪಾದಿಸುತ್ತವೆ. ಹುಟ್ಟಿನಿಂದ ಸಾವಿನವರೆಗೂ ಹಾಡು ಹೋಗುವ ಘಟ್ಟಗಳನ್ನು ತಿಳಿಸುತ್ತವೆ. ಇದನ್ನು ತನ್ನ ಮತ್ತೊಂದು ಕೃತಿ ‘ Transformations of Myths Through Time‘ ಎಂಬ ಕೃತಿಯಲ್ಲಿಜೋ ತೋರಿಸಿಕೊಟ್ಟಿದ್ದಾನೆ.

ಈ ಬಹುಮುಖಿ ಸಂಸ್ಕೃತಿಯ ಪ್ರಪಂಚದಲ್ಲಿ ಸಾವಿರಾರು ದೈವಗಳಿವೆ. ಆದ್ದರಿಂದ ದೈವಗಳಿಗೆ ನಾನಾ ಮುಖವಾಡಗಳಿವೆ . ಈ ಮುಖವಾಡಗಳು ಅನೇಕ ನಿಗೂಢತೆಯನ್ನು ಮುಚ್ಚಿಕೊಳ್ಳುತ್ತವೆ. ಇನ್ನು ಅನೇಕವನ್ನು ಬಿಚ್ಚಿಡುತ್ತವೆ. ಇವೆಲ್ಲವೂ ವ್ಯಕ್ತಗೊಳ್ಳುವುದು ಈ ದೇವರ ಮುಖವಾಡಗಳಿಂದ. ಈ ತತ್ವವನ್ನು ಆಧಾರವಾಗಿಟ್ಟುಕೊಂಡು ನಾಲ್ಕು ಪ್ರಮುಖ ಕೃತಿಗಳನ್ನು ಜೋ ರಚಿಸಿದ್ದಾನೆ. ೧.ಆದಿಮಾನವ ಪುರಾಣ ೨.ಪೌರಾತ್ಯ ಪುರಾಣ ೩.ಪಾಶ್ಚಾತ್ಯ ಪುರಾಣ ೪.ಸಾಹಿತ್ಯದಲ್ಲಿ ಪುರಾಣ ಎಂಬ ಕೃತಿಗಳು.

೧೯೫೩ ರಲ್ಲಿ ಭಾರತಕ್ಕೆ ಪ್ರಧಾನಿ ನೆಹರೂರವರ ಅತಿಥಿಯಾಗಿ ಬಂದು ಹಿಂದುಧರ್ಮ ಮತ್ತು ಬೌಧ್ಧರ್ಮಗಳನ್ನು ಕಡು ಹಿಂದಿರುಗಿದ್ದ ಜೋಸೆಫ್ ಕ್ಯಾಂಬೆಲ್ ಇಡೀ ವಿಶ್ವದ ಮಿತ್ರನಾಗಿದ್ದಾನೆ . ತನ್ನ ಮಿಥ್ ಗಳ ಅಧ್ಯಯನದ ಮೂಲಕ.

Leave a Reply

Your email address will not be published. Required fields are marked *