Browsed by
Category: ತಿಂಗಳು ಪತ್ರಿಕೆ ಲೇಖನಗಳು

ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್

ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್

Tingalu – September 2009 ಎ.ಕೆ.ರಾಮಾನುಜನ್ ಕನ್ನಡದಲ್ಲಿ ಬರೆದದ್ದು ಒಂದೇ ಒಂದು ಕಥೆ. ‘ಅಣ್ಣಯ್ಯನ ಮಾನವ ಶಾಸ್ತ್ರ’. ಮೈಸೂರಿನ ಅಣ್ಣಯ್ಯ ಹಿಂದುಧರ್ಮ ಮತ್ತು ಕ್ರಿಯಾವಿಧಿಗಳನ್ನು, ಅಷ್ಟೇ ಎಕೆ, ತನ್ನ ಬಗ್ಗೆಯೇ ತಾನು ತಿಳಿದದ್ದು ಅಮೆರಿಕಾದ ವಿಶ್ವವಿದ್ಯಾನಿಲಯವೊಂದರ ಲೈಬ್ರರಿಯಲ್ಲಿ ಫೆರ್ಗ್ಯುಸನ್ ಎಂಬ ಮಾನವಶಾಸ್ತ್ರ ರಚಿಸಿದ ಪುಸ್ತಕದ ಮೂಲಕ.  ಆ ಫೆರ್ಗುಸನ್ ನ ವಿಸ್ತೃತ ಆವ್ರುತ್ತಿಯೆಂದರೆ ಇದೇ ಅಮೇರಿಕಾದ ಜೋಸೆಫ್ ಕ್ಯಾಂಪ್ಬೆಲ್ ಎಲ್ಲರ ಪ್ರೀತಿಯ ಜೋ. ಈತನೊಬ್ಬ ಪುರಾಣ ಶಾಸ್ತ್ರಜ್ಞ. ಜೋ ಪ್ರಕಾರ ಪಶ್ಚಿಮವು ಪೂರ್ವವನ್ನು ಸಂಧಿಸುವುದು ಐನ್ ಸ್ಟೀನ್ ನ ಭೌತಶಾಸ್ತ್ರ ನತ್ತು ಭಾರತದ ದರ್ಶನಶಾಸ್ತ್ರದಲ್ಲಿ ಇಪ್ಪತ್ತನೆ ಶತಮಾನದಲ್ಲಿ ಐನ್ ಸ್ಟೀನ್ ನು “ಹೊಸ ಭೌತಶಾಸ್ತ್ರದಲ್ಲಿ ಕ್ಷೇತ್ರ(field) ಮತ್ತು ಭೌತಶಾಸ್ತ್ರ (matter) ಎರಡಕ್ಕೂ ಇಲ್ಲಿ ಎಡೆ ಎಲ್ಲ. ಇಲ್ಲಿ ಕ್ಷೇತ್ರ ಮಾತ್ರ ಸತ್ಯ, ಕ್ಷೇತ್ರದಲ್ಲಿ…

Read More Read More

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

ಮಾನವತಾವಾದಿ ಮಾನವ ಶಾಸ್ತ್ರಜ್ಞ – ಕ್ಲಾಡ್ ಲೆವಿ ಸ್ಟ್ರಾಸ್

Tingalu – June 2009 ೨೦ ನೇ ಶತಮಾನದ ಬುದ್ದಿಜೀವಿಗಳಲ್ಲಿ ಅತ್ಯಂತ ಪ್ರಮುಖನೆಂದು ಪರಿಗಣಿಸಲ್ಪಟ್ಟವನು ಕ್ಲಾಡ್ ಲೆವಿ ಸ್ಟ್ರಾಸ್. ಹೋದ ವರ್ಷ ತನ್ನ ನೂರನೇ ಜನ್ಮದಿನವನ್ನು ಆಚರಸಿಕೊಂಡ. ಇಡೀ ಜಗತ್ತಿನ ಚಿಂತಕರು ಇವನ ನೂರನೇ ಹುಟ್ಟುಹಬ್ಬವನ್ನು ಅತ್ಯಂತ ವಿಜ್ರುಂಭಣೆಯಿಂದ ಆಚರಿಸಿದರು. ಫ್ರಾನ್ಸ್ನಲ್ಲಿ ಇಡೀ ವರ್ಷವನ್ನು ಆತನ ಶತಮಾನೋತ್ಸವ ವರ್ಷವೆಂದು ಪರಿಗಣಿಸಿ ೧೯೮ ವಿದ್ವಾಂಸರಿಂದ ಅವನ ಜೀವನ ಮತ್ತು ಕೃತಿಗಳ ಮೇಲೆ ಲೇಖನಗಳನ್ನು ಬರೆಸಿದರು . ಕೇವಲ ಆರು ವಾರಗಳಲ್ಲಿ ಈ ಪುಸ್ತಕದ ಇಪ್ಪತ್ತು ಸಾವಿರ ಪ್ರತಿಗಳು ಮಾರಾಟವಾದವು. ಫ್ರಾನ್ಸಿನ ಪ್ರತಿಷ್ಠಿತ ಪ್ರಕಾಶನ ಇನ್ನು ಬದುಕಿರುವ ವಿದ್ವಾಂಸನೊಬ್ಬನ ಬಗ್ಗೆ ಪ್ರಕಟಿಸಿದ ಮೊದಲ ಕೃತಿಯಿದು. ಹೀಗೆ ಈತನು ಬದುಕಿರುವಾಗಲೇ ದಂತಕತೆಯಾಗಿದ್ದಾನೆ. ಬೌದ್ದಧರ್ಮದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಈತ ಭಾರತದ ಎಲ್ಲೋರಾ ಮತ್ತು ಅಜಂತಾ ದೇವಾಲಯಗಳಿಗೆ…

Read More Read More

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

ಅಮೆಜಾನ್ ಕಾಡಿನಲೊಬ್ಬ ಮಹಾ ಮಾಂತ್ರಿಕ ‘ಗುಡ್ಡ’

Tingalu – June 2009 ನೂರಕ್ಕೆ ತೊಂಬತ್ತು ಭಾಗ ಔಷದಿ ಸಸ್ಯಗಳು ನಮ್ಮ ಬುಡಕಟ್ಟು ಜನಾಂಗಗಳು ವಾಸಿಸುವ ಕಾಡುಗಳಲ್ಲಿ ಸಿಗುವಂತವು. ಆದರೆ ಅಧುನಿಕ ಬದುಕಿನ ದಾಪುಗಾಲಿಗೆ ಸಿಕ್ಕಿ ಬಹುಪಾಲು ಕಾಡುಗಳು ನಾಶವಾಗುತ್ತಿವೆ. ಕಾಡಿನ ಮೂಲ ಜ್ಞಾನವಿರುವುದು ಬುಡಕಟ್ಟು ಜನಾಂಗಗಳಲ್ಲಿ. ಸಾವಿರಾರು ವರ್ಷಗಳಿಂದ ಇವರು ಕಾಡಿನಲ್ಲಿ ಬದುಕುತ್ತ , ತಮಗೆ ಬರುತ್ತಿರುವ ಅನೇಕ ಖಾಯಿಲೆಗಳನ್ನು ವಾಸಿಮಾಡಲು ಈ ಕಾಡಿನ ಸಸ್ಯಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಪ್ರಪಂಚದಲ್ಲಿ ಒಂದು ನಿಮಿಷಕ್ಕೆ ೧೦೦ ಎಕರೆಯಷ್ಟು ಅರಣ್ಯ ನಾಶವಾಗುತ್ತಿದೆ . ಪ್ರಪಂಚದಲ್ಲಿರುವ ಸಸ್ಯದಲ್ಲಿ ಶೇ .೧೦ ನಿರ್ನಾಮವಾಗುತ್ತಿವೆ. ಕಾಡಿನಲ್ಲಿದ್ದ ಬುಡಕಟ್ಟು ಜನಾಂಗದವರನ್ನು  ಕಾಡಿನಿಂದ ಹೊರಗೆ ಹಾಕುವುದರ ಮೂಲಕ ಅವರಿಗಿದ್ದ ಜಾನಪದ ವೈದ್ಯ ಜ್ಞಾನವನ್ನು ನಾಶ ಮಾಡಲಾಗುತ್ತಿದೆ. ಈ ಜ್ಞಾನಪದ್ಧತಿಯನ್ನು ಕಾಪಾಡಿಕೊಂಡು ಬರುತ್ತಿರುವವರು ಮುಖ್ಯವಾಗಿ ಬುಡಕಟ್ಟು ಜನಾಂಗದ…

Read More Read More