ವಿಶ್ವಮಾನವ ಜೋಸೆಫ್ ಕ್ಯಾಂಪ್ ಬೆಲ್
Tingalu – September 2009 ಎ.ಕೆ.ರಾಮಾನುಜನ್ ಕನ್ನಡದಲ್ಲಿ ಬರೆದದ್ದು ಒಂದೇ ಒಂದು ಕಥೆ. ‘ಅಣ್ಣಯ್ಯನ ಮಾನವ ಶಾಸ್ತ್ರ’. ಮೈಸೂರಿನ ಅಣ್ಣಯ್ಯ ಹಿಂದುಧರ್ಮ ಮತ್ತು ಕ್ರಿಯಾವಿಧಿಗಳನ್ನು, ಅಷ್ಟೇ ಎಕೆ, ತನ್ನ ಬಗ್ಗೆಯೇ ತಾನು ತಿಳಿದದ್ದು ಅಮೆರಿಕಾದ ವಿಶ್ವವಿದ್ಯಾನಿಲಯವೊಂದರ ಲೈಬ್ರರಿಯಲ್ಲಿ ಫೆರ್ಗ್ಯುಸನ್ ಎಂಬ ಮಾನವಶಾಸ್ತ್ರ ರಚಿಸಿದ ಪುಸ್ತಕದ ಮೂಲಕ. ಆ ಫೆರ್ಗುಸನ್ ನ ವಿಸ್ತೃತ ಆವ್ರುತ್ತಿಯೆಂದರೆ ಇದೇ ಅಮೇರಿಕಾದ ಜೋಸೆಫ್ ಕ್ಯಾಂಪ್ಬೆಲ್ ಎಲ್ಲರ ಪ್ರೀತಿಯ ಜೋ. ಈತನೊಬ್ಬ ಪುರಾಣ ಶಾಸ್ತ್ರಜ್ಞ. ಜೋ ಪ್ರಕಾರ ಪಶ್ಚಿಮವು ಪೂರ್ವವನ್ನು ಸಂಧಿಸುವುದು ಐನ್ ಸ್ಟೀನ್ ನ ಭೌತಶಾಸ್ತ್ರ ನತ್ತು ಭಾರತದ ದರ್ಶನಶಾಸ್ತ್ರದಲ್ಲಿ ಇಪ್ಪತ್ತನೆ ಶತಮಾನದಲ್ಲಿ ಐನ್ ಸ್ಟೀನ್ ನು “ಹೊಸ ಭೌತಶಾಸ್ತ್ರದಲ್ಲಿ ಕ್ಷೇತ್ರ(field) ಮತ್ತು ಭೌತಶಾಸ್ತ್ರ (matter) ಎರಡಕ್ಕೂ ಇಲ್ಲಿ ಎಡೆ ಎಲ್ಲ. ಇಲ್ಲಿ ಕ್ಷೇತ್ರ ಮಾತ್ರ ಸತ್ಯ, ಕ್ಷೇತ್ರದಲ್ಲಿ…