Browsed by
Author: Administrator

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಪಠ್ಯಕ್ಕೆ ಒಂದು ಅರ್ಥವಿಲ್ಲ. ಅದು ಓದುಗರ ಸೃಷ್ಟಿಗೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ. ಒಂದು ವಿಷಯಕ್ಕೆ ಒಂದು ರಚನೆಯಿದೆ ಎಂದುಕೊಂಡಾ ಕ್ಷಣವೇ ಈ ರಚನೆಯೇ ಪಠ್ಯದ ವಸ್ತು ಎಂದು ಹೇಳಿಬಿಡಬಹುದು . ಇದು ಒಂದು ಕೇಂದ್ರವನ್ನು ಹುಡುಕಿದಂತೆ. ಆದರೆ ಪಠ್ಯದ ಕೇಂದ್ರವು ಯಾವಾಗಲೂ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಕೇಂದ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಇಲ್ಲಿ ಪಠ್ಯವೆಂದರೆ ಯಾವುದಾದರೂ ಒಂದು ನಾಟಕವಾಗಿರಬಹುದು ಅಥವಾ ಯಾವುದೇ ಸಾಹಿತ್ಯ ಕೃತಿಯಾಗಿರಬಹುದು. ಈ ಸಾಹಿತ್ಯ ಕೃತಿಗೆ ಯಾವುದೇ ಒಂದು ರೀತಿಯ ರಚನೆಯಿರುವುದಿಲ್ಲ. ಇದು ಬಹಳ ಮುಖ್ಯವಾದುದು . ಏಕೆಂದರೆ ಮಾತಿನಂತೆ ರಚನೆಗಳೂ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತವೆ. ಹೇಗೆ ಪುನರ್ ಸಾಂದರ್ಭೀಕರಣಕ್ಕೆ ಒಳಗಾಗುತ್ತಾ ಹೊಸ ರೀತಿಯ ಸಾಂಸ್ಕೃತಿಕ ಶೂನ್ಯತೆ ಉಂಟಾಗುತ್ತದೆ. ಸಾಹಿತ್ಯ ಪಠ್ಯ ಸೃಷ್ಟಿಯಾಗುವುದೆಂದರೆ ಇದುವರೆವಿಗೂ ಆ ಸಂಸ್ಕೃತಿಯಲ್ಲಿ ಆ ಅರ್ಥ ಸೃಷ್ಟಿಯಾಗಿಲ್ಲವೆಂದರ್ಥ. ಅರ್ಥ…

Read More Read More

ನವ್ಯತೆ ಕೆಲವು ಪ್ರಶ್ನೆಗಳು

ನವ್ಯತೆ ಕೆಲವು ಪ್ರಶ್ನೆಗಳು

೧೯೫೦, ಅಂದರೆ ಸರಿಯಾಗಿ ಈ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಗೋಕಾಕರು ‘ನವ್ಯ ಕಾವ್ಯ’ದ ಪ್ರಣಾಳಿಕೆಯನ್ನು ಮುಂಬಯಿಯ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಹುಟ್ಟು ಹಾಕಿದುದು ಒಂದು ಚಾರಿತ್ರಿಕ ದಾಖಲೆಯಾಗಿದೆ. “ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ದಿಯನ್ನು ಮುಟ್ಟಿದಾಗ – ಮುಂದೇನೆಂಬ ಪ್ರಶ್ನೆ ಏಳುತ್ತದೆ. ಆ ಪ್ರಶ್ನೆಗೆ ಉತ್ತರ ಇದು, ನವ್ಯ ಕಾವ್ಯ” ಎಂದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಅನಿರ್ವಾರ್ಯರಾಗಿರುವ ‘ನವ್ಯ ದೃಷ್ಟಿ’ಯನ್ನು ಪ್ರತಿಪಾದಿಸಿ, ಅಲ್ಲಿಂದ ೨೫ ವರ್ಷಗಳ ತನಾ ಈ ನವ್ಯ ಕಾವ್ಯದ ರೂಪು ರೇಖೆಗಳ ಪ್ರತಿಪಾದನೆಯನ್ನು ವಿಧಿ ವಿಧಾನಗಳನ್ನು ಕ್ರೂಡ್ಹೀಕರಿಸಿಕೊಂಡು ಬಂದಿರುವ ಕೃತಿ ‘ನವ್ಯತೆ’. ಈ ದೃಷ್ಟಿಯಿಂದ ‘ನವ್ಯತೆ’, ‘ನವ್ಯ ಕಾವ್ಯ’ದ ಒಂದು ಲಾಕ್ಷಣಿಕ ಗ್ರಂಥವಾಗಿ ಬೆಳೆದುಬಂದಿದೆ. ಗೋಕಾಕರು ನವ್ಯ ಕಾವ್ಯದ ಸುಳಿವನ್ನು ಹುಟ್ಟು ಹಾಕುವಾಗ…

Read More Read More

ಕಥೆಗಳಲ್ಲಿ ತಂತ್ರ ಮತ್ತು ಅಭಿವ್ಯಕ್ತಿ

ಕಥೆಗಳಲ್ಲಿ ತಂತ್ರ ಮತ್ತು ಅಭಿವ್ಯಕ್ತಿ

ಪುಸ್ತಕ: ಆಲೆಮನೆ ಒಂದರ್ಥದಲ್ಲಿ ಪ್ರತಿಯೊಂದು ಕ್ರಿಯಾತ್ಮಕ ಬರಹವೂ ಒಂದು ಸಮಾಜ. ಸಂಸ್ಕೃತಿ ಮತ್ತು ಚರಿತ್ರೆಯೋಡನೆ, ಒಟ್ಟಿನಲ್ಲಿ ಜೀವದೊಡನೆ ಸೂಕ್ಷ್ಮವಾಗಿ ನಡೆಸುವ ಸಂವಾದವಾಗುವುದರ ಜೊತೆಗೆ ವ್ಯಾಖ್ಯಾನವೂ ಆಗಿರುತ್ತದೆ. ಕ್ರಿಯಾತ್ಮಕ ಬರಹಗಾರ ಸಮಾಜವನ್ನು ಭಿನ್ನವಾಗಿ ಗ್ರಹಿಸಿ ಅದನ್ನು ಪ್ರಸ್ತುತಪಡಿಸುವುದಕ್ಕಾಗಿ, ಓದುಗರೊಡನೆ ಸಂವಹನ ನಡೆಸುವುದಕ್ಕಾಗಿ ವಿಭಿನ್ನವಾಗಿ ಭಾಷೆಯನ್ನೂ ಬಳಸುತ್ತಾನೆ. ಏಕೆಂದರೆ ಸಾಹಿತ್ಯಕ್ಕೆ ಭಾಷೆಯೇ ದ್ರವ್ಯ. ಕಥೆಗಾರ ತಾನು ಅಂದುಕೊಂಡ ಪರಿಣಾಮವನ್ನು ಒಡ ಮೂಡಿಸಲು, ಈವರೆಗೂ ಓದುಗನ ಅನುಭವಕ್ಕೆ ಬಾರದಿರುವ ರೀತಿಯಲ್ಲಿ ಹೇಳಲು ಪ್ರಯತ್ನಿಸುತ್ತಾನೆ. ಹೀಗೆ ಹೇಳುವಾಗ ಸಾಮಾನ್ಯ ಭಾಷೆ ಸಾಕಾಗದಿದ್ದಾಗ ಮೇಲ್ನೋಟಕ್ಕೆ ಅಸಂಬದ್ದಿವಾಗಿ ಕಾನುವನ್ತೆಯೂ ಚಿತ್ರಿಸುತಾನೆ. ಸಾಮಾನ್ಯ ಕ್ರಮವನ್ನು ಬಿಟ್ಟು ವಿಶಿಷ್ಟ ಕ್ರಮವನ್ನು ಅನುಸರಿಸುತ್ತಾನೆ. ಹೀಗೆ ತಾನು ನಿರೀಕ್ಷಿಸಿದ ಪರಿಣಾಮವನ್ನು ಉಂಟು ಮಾಡಲು ಬಳಸುವ ವಿಧಾನವನ್ನು ತಂತ್ರ ಎಂದು ಕರೆಯಬಹುದು. ಹಾಗೆ ನೋಡಿದರೆ ತಂತ್ರ, ಸಂವಿಧಾನ, ಸಂಕೇತ,…

Read More Read More

ಉಯ್ಯಾಲೆ- ತಂತ್ರ ನಿರ್ವಹಣೆ

ಉಯ್ಯಾಲೆ- ತಂತ್ರ ನಿರ್ವಹಣೆ

ಪುಸ್ತಕ :ಚದುರಂಗ- ವ್ಯಕ್ತಿ ,ಅಭಿವ್ಯಕ್ತಿ ಯಾವುದೇ ಒಂದು ಕೃತಿ ಮೈದಾಳುವುದು ಓದುಗ ಕೃತಿಯೊಡನೆ ಸಂವಾದ ನಡೆಸಲು ಪಾರಂಭಿಸಿದಾಗ ಮಾತ್ರ. ಕೃತಿಕಾರ ತನ್ನ ಕೃತಿ ರಚನೆಯೆ ಸಂದರ್ಭದಲ್ಲಿ ತನ್ನ ಸಮಾಜ ಇದುವರೆವಿಗೂ ಕಂಡಿರದ ಹೊಸ ಅನುಭವವನ್ನು ಭಾಷೆಯು ಮೂಲಕ ಹಿಡಿದುಕೊಡಲು ಯತ್ನಿಸುತ್ತಾ ನೆ. ಇದುವರೆವಿಗೂ ಭಾಷೆಯು ಮೂಲಕ ಕಂಡರಿಯದ ಅನುಭವವನ್ನೂ ತನ್ನ ಸಮಾಜ ಸಂಸ್ಕೃತಿಗೆ ಅಂದರೆ ‘ಸಂಭವನೀಯ ಓದುಗನಿಗೆ ‘ ಕೊಡಲು ಕೃತಿಕಾರ ಪ್ರಯತ್ನಿಸುತ್ತಾನೆ. ಕೃತಿಕಾರ ಕಂಡ ಹೊಸಕಾಣ್ಕೆ , ಕೃತಿಯ ಮೂಲಕವಾದುದರಿಂದ -ಅಂದರೆ, ಭಾಷೆಯ ಮೂಲಕವಾದುದರಿಂದ – ಈ ಕಾಣ್ಕೆಯನ್ನು ಭಾಷೆಯಲ್ಲಿಯೂ ತುಂಬಿಕೊಡಲು ಯತ್ನಿಸುತ್ತಾನೆ. ಆದ್ದರಿಂದ ಭಾಷೆಯು ಯಾವಾಗಲು ಬರಹಗಾರನಿಗೆ ಸವಾಲಾಗಿಯೇ ಉಳಿಯುತ್ತದೆ. ಒಂದು ಹೊಸ ಕೃತಿಯನ್ನು ರಚಿಸುವಾಗ ಲೇಖಕ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾಪಿತವಾಗಿರುವ ಕೆಲವು ನಿಯಮಗಳನ್ನು ಮುರಿಯುತ್ತಾನೆ. ಮೇಲ್ನೋಟಕ್ಕೆ ಒಂದಕ್ಕೊಂದು…

Read More Read More

ಕುವೆಂಪು ಅವರ ವೈಚಾರಿಕತೆ

ಕುವೆಂಪು ಅವರ ವೈಚಾರಿಕತೆ

ಪುಸ್ತಕ: ಕುವೆಂಪು ಅವರ ವೈಚಾರಿಕತೆ : ಕೆಲವು ಟಿಪ್ಪಣಿಗಳು “Science is even more changeable than theology” “Galileo said that the earth moves and that the sun is fixed. The inquistion said that the earth is fixed and the sun moves and newtonian astronomers adopting an absolute theory of space, said that both the sun and the earth move. But now we say that any one of these three statements are equally true, provided that you haved fixed your sense of ’rest’ and…

Read More Read More