Browsed by
Category: Articles in other books

ಲೈಂಗಿಕಾತ್ಮಕತೆ ಮತ್ತು ಅಧಿಕಾರ

ಲೈಂಗಿಕಾತ್ಮಕತೆ ಮತ್ತು ಅಧಿಕಾರ

ಕ್ರಿಶ್ಚಿಯನ್ ಧಾರ್ಮ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಿಷೆಲ್ ಫುಕೋನ ಚಿಂತನೆಗಳು

ಈ ದಿನ ನಾನು ನನ್ನ ಪ್ರಮೇಯವನ್ನು ಮಂಡಿಸಲು ಯತ್ನಿಸುತ್ತೇನೆ. ಈಗ ನಾನು ಲೈಂಗಿಕಾತ್ಮಕತೆಯ ಚರಿತ್ರೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಆರು ಸಂಪುಟಗಳಲ್ಲಿ ಬರೆಯಬೇಕೆಂದಿದ್ದೇನೆ . ಲೈಂಗಿಕಾತ್ಮಕತೆಯ ಚರಿತ್ರೆಯನ್ನೇ ಏಕೆ ತೆಗೆದುಕೊಂಡೆ? ಅದಕ್ಕೆ ಕಾರಣ ನನಗೊಂದು ವಿಷಯ ಹೊಳೆದಿತ್ತು. ಫ್ರಾಯ್ಡ್ ನ ಮನೋವಿಶ್ಲೇಷಣೆ ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಚಾರಿತ್ರಿಕ ರೂಪವನ್ನು ಪಡೆದುಕೊಂಡಿತ್ತು, ಅಲ್ಲದೆ ಪಾಶ್ಚಾತ್ಯ ಸಮಾಜದಲ್ಲಿ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು. ಈ ಅಂಚಿಗೆ ತಳ್ಳಲ್ಪಟ್ಟ ವೈದ್ಯರನ್ನು ಆಕರ್ಷಿಸಿತ್ತು. ಒಂದಲ್ಲ ಒಂದು ವಿಧದಲ್ಲಿ ಈ ಸಮಸ್ಯೆಗಳು ವೈದ್ಯರನ್ನು ಕಾಡುತ್ತಿತ್ತು. ಮುಖ್ಯವಾಗಿ, ಹಿಸ್ಟೀರಿಯಾ. ಹಿಸ್ಟೀರಿಯಾ ಒಂದು ರೀತಿಯ ಮರೆವಿನ ಕಾಯಿಲೆ. ವ್ಯಕ್ತಿ ತನ್ನನ್ನು ತಾನೇ ತಪ್ಪು ಅರ್ಥ ಮಾಡಿಕೊಳ್ಳುವ ಅಥವಾ ಇಡೀ ದೇಹವನ್ನೇ ಮರೆತು ಬದುಕುವ ರೀತಿ. ಇದನ್ನು ಫ್ರಾಯ್ಡ್ ಗುರುತಿಸುತ್ತಾನೆ, ಅಲ್ಲದೆ ಒಂದು ಸಿದ್ಧಾಂತಕ್ಕೆ ಬದ್ಧಗೊಳಿಸಿ ಪ್ರಾಯೋಗಿಕ ಪರೀಕ್ಷೆಗೆ ಇದನ್ನು ಒಳಪಡಿಸುತ್ತಾನೆ.

ಹತ್ತೊಂಬತ್ತನೆ ಶತಮಾನದ ಕೊನೆಯಲ್ಲಿ ವಿಜ್ಞಾನಿಗಳು ಪಾಶ್ಚಾತ್ಯ ದೇಶದಲ್ಲಿ ಎರಡು ಸ್ತರಗಳಲ್ಲಿ ಮನುಷ್ಯನ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿದ್ದರು. ಮೊದಲನೆಯದು ಸಾಮಾನ್ಯಸ್ತರ, ವ್ಯಕ್ತಿಗತವಾದದ್ದು. ಇದು ಹಿಸ್ಪೀರಿಯಾಗೆ ಕಾರಣವಾಯಿತು. ಎರಡನೆಯದು ಸಾಂಸ್ಕೃತಿಕ, ಸಾಮಾಜಿಕ, ವೈಜ್ಞಾನಿಕ ಸೈದಾಂತಿಕವಾಗಿ ಲೈಂಗಿಕಾತ್ಮಕತೆಯ ಬಗೆಗಿನ ಅತೀ ಜ್ಞಾನ. ಇವೆರಡೂ ಒಂದಕ್ಕೊಂದು ವಿರುದ್ಧವಾಗೇನಿರಲಿಲ್ಲ, ಇವೆರಡೂ ಪಶ್ಚಿಮದಲ್ಲಿ ಜೊತೆ ಜೊತೆಗೇ ಇದ್ದವು.

ಆದರೆ ಈ ಲೈಂಗಿಕಾತ್ಮಕತೆಯ ಬಿರುಕಿಗೆ ಮನೋವೈಜ್ಞಾನಿಕ ವಿಶ್ಲೇಷಣೆ ನೇರವಾಗಿ ಉತ್ತರಿಸಿಲ್ಲ. ಆದರೆ ಅದನ್ನು ಸಂಪೂರ್ಣ ನಿರ್ಲಕ್ಷಿಸಿಯೂ ಇಲ್ಲ. ಪ್ರಾರಂಭದಲ್ಲಿ ಈ ವೈಯಕ್ತಿಕ ಮನೋವಿಶ್ಲೇಷಣೆ ಪಶ್ಚಿಮದಲ್ಲಿ ಕೆಲವು ತಪ್ಪು ಕಲ್ಪನೆಗಳಿಂದ ಕೂಡಿತ್ತು. ಲೈಂಗಿಕಾತ್ಮಕತೆ ಭಾಷೆಗೆ ಸಾಮಾಜಿಕ ಮುಖವಿರುವುದನ್ನು ಮರೆಯಿತು. ಈ ಭಾಷೆ ತಪ್ಪು ಕಲ್ಪನೆಯ, ಅವೈಜ್ಞಾನಿಕ ವಿಶ್ಲೇಷಣೆ ಲೈಂಗಿಕಾತ್ಮಕತೆಯಾ ಸ್ಥಾನವನ್ನು ಎರಡು ರೀತಿಯಲ್ಲಿ ವಿವರಿಸತೊಡಗಿತು . ಮೊದಲನೆಯದಾಗಿ ಮಕ್ಕಳು ತಮ್ಮ ಹುಟ್ಟಿನ ಬಗ್ಗೆ ಅಥವಾ ಹಂದು ಹೆಣ್ಣಿನ ಬಗ್ಗೆ ಇರುವ ಅಥವಾ ಇಲ್ಲದಿರುವ ಲೈಂಗಿಕಾತ್ಮಕ ಪರಿಕಲ್ಪನೆಯ ಬಗ್ಗೆ ಇದ್ದ ತಿಳುವಳಿಕೆ ಮಾಡಿದ ವಿಶ್ಲೇಷಣೆ. ಫ್ರಯಾಯ್ಡ್ ಈ ರೀತಿಯ ಮಕ್ಕಳಲ್ಲಿ ಇರುವ ಲೈಂಗಿಕಾತ್ಮಕತೆಯಾ ಜ್ಞಾನದ ಬಗ್ಗೆ ಮತ್ತು ಪಾಶ್ಚಿಮಾತ್ಯ ಧರ್ಮದಲ್ಲಿ ಇರುವ ಕಲ್ಪನೆಯ ಬಗ್ಗೆ ಸಂಶೋಧನೆ ನಡೆಸಿದ ಆದರೆ ಈ ಮನೋವೈಜ್ಞಾನಿಕ ವಿಶ್ಲೇಷಣೆಯು ಲೈಂಗಿಕಾತ್ಮಕತೆಯ ಸಿದ್ಧಾಂತಗಳು ಪಾಶ್ಚಾತ್ಯ ಸಮಾಜದಲ್ಲಿ ಹೇಗೆ ಹುಟ್ಟುತ್ತವೆ ಎಂಬುದನ್ನು ಗಮನಿಸಲಿಲ್ಲ ಎಂದು ನನ್ನ ನಂಬಿಕೆ.

ಬೃಹದಾಕಾರವಾಗಿ ಬೆಳೆದು ನಿ೦ತ ಈ ಸಾಮಾಜಿಕ ಲೈಂಗಿಕಾತ್ಮಕತೆ ಸೈಂಟ್ ಅಗಸ್ಟೀನನ ಕಾಲದಷ್ಟು, ಆದರೆ, ಕ್ರಿಶ್ಚಿಯನ್ ಧರ್ಮದ ಪ್ರಾರಂಭದಷ್ಟು ಹಳೆಯದು. ಈ ವಿಷಯವನ್ನು ಕೇವಲ ಮಿಥ್ ಎಂದು ಭಾವಿಸಿ, ಸರಳೀಕರಿಸಿ ಮಾದರಿಗಳ ಮಟ್ಟಕ್ಕೆ ಇಳಿಸಿ ಹೇಳಲು ಬರುವುದಿಲ್ಲ.

ಲೈಂಗಿಕಾತ್ಮಕತೆಯ ಚರಿತ್ರೆಯನ್ನು ರಚಿಸುವ ನನ್ನ ಯೋಜನೆ ಮನೋವಿಶ್ಲೇಷಣೆ ತಪ್ಪು ಎಂದು ಪರಿಗಣಿಸುವುದಿಲ್ಲ. ಈ ಮನೋವಿಶ್ಲೇಷಣೆಯ ಲೈಂಗಿಕತೆಯ ಸಾಮಾಜಿಕ ಸಾಂಸ್ಕೃತಿಕ ಆಯಾಮಗಳ ಜ್ಞಾನ ಅದರ ಮೂಲ ರೂಪದಲ್ಲೇ ಹೇಗೆ ಅತಿಯಾಯಿತು ಎಂದು ತಿಳಿದುಕೊಳ್ಳುವುದಾಗಿದೆ. ಅಲ್ಲದೆ ಈ ಲೈಂಗಿಕಾತ್ಮಕತೆಯನ್ನು ಆಕಾಂಕ್ಷೆಯ ತಾರ್ಕಿಕ ಜ್ಞಾನದ ತಳಹದಿಯಾಗಿ ತಾನೇ ಹೇಗೆ ಪ್ರತಿಫಲನಗೊಳ್ಳುತ್ತದೆ ಎಲ್ಲದು ತಿಳಿಯುವುದಾಗಿದೆ. ಲೈಂಗಿಕಾತ್ಮಕತೆಯ ಜ್ಞಾನ ವಿಮರ್ಶಾತ್ಮಕ ನೆಲೆಯಲ್ಲಿ ತನ್ನನ್ನು ತಾನೇ ಹೇಗೆ ಬಿಚ್ಚಿಟ್ಟುಕೊಳ್ಳುತ್ತದೆ ಎಂದು ತಿಳಿಯುವುದಾಗಿದೆ. ನಾನಿಲ್ಲಿ ಅಭ್ಯಸಿಸುವುದು ಮನೋವಿಶ್ಲೇಷಣೆಗೆ ವಿರುದ್ಧವಾದ ವಾದವನ್ನು ಹುಟ್ಟು ಹಾಕುವುದಿಲ್ಲ. ಲೈಂಗಿಕಾತ್ಮಕತೆಯ ಸಮಸ್ಯೆಯನ್ನು ಅಂದರೆ ಅದರ ಬಗೆಗಿನ ಜ್ಞಾನವನ್ನು ಅದು ಹೇಗೆ ಸಾಮಾಜಿಕ – ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಜ್ಞಾನ ಅತಿಯಾಯಿತು ಎನ್ನುವುದನ್ನು ವಿಶ್ಲೇಷಿಸುವುದಾಗಿದೆ.

ಅಧಿಕವಾದ ಲೈಂಗಿಕಾತ್ಮಕತೆಯ ಸೈದ್ಧಾಂತಿಕ ಜ್ಞಾನವನ್ನು ಅಭ್ಯಸಿಸಬೇಕಾದರೆ ಮೊದಲು ಪಾಶ್ಚಾತ್ಯ ಸಂಸ್ಕೃತಿಯು ಅದರ ಬಗ್ಗೆ ನಡೆಸಿರುವ ಸಂವಾದಗಳನ್ನು ಅಭ್ಯಸಿಸಬೇಕು. ಪಾಶ್ಚಾತ್ಯರಲ್ಲಿ ಇದು ಬಹಳ ಹಿಂದಿನಿಂದಲೂ ‘ವೈಜ್ಞಾನಿಕ’ ಎಂಬಂತೆ ಚರ್ಚಿಸಲ್ಪಟ್ಟಿತ್ತು. ವೈಜ್ಞಾನಿಕ ಅಂದರೆ ಅದೊಂದು ‘ತರ್ಕಬದ್ಧ ಸಂವಾದ ‘ ಎಂದು ನಾನು ತಿಳಿದಿಲ್ಲ. ನಾವು ವೈಜ್ಞಾನಿಕ ಸತ್ಯ ಎಂದು ಈಗ ಪರಿಗಣಿಸಿರುವ ರೀತಿಯಲ್ಲಿ ಅದು ಇರಲಿಲ್ಲ. ಇದನ್ನು ಹದಿನೆಂಟನೆ ಶತಮಾನದ ಅರ್ಥದಲ್ಲಿ ಅಥವಾ ಹದಿನೇಳನೆ ಶತಮಾನದ ಅಥವಾ ಮಧ್ಯಯುಗೀನ ಧಾರ್ಮಿಕ ನೀತಿಯ ಅರ್ಥದಲ್ಲಿ ತೆಗೆದುಕೊಳ್ಳಬೇಕು.

ಆಗ ಲೈಂಗಿಕಾತ್ಮಕತೆ ಮತ್ತು ಅದರ ಇಚ್ಚೆ ಹೇಗಿತ್ತೆಂಬ ಊಹೆಯ ಆಧಾರದ ಮೇಲೆ ಆ ಸಂವಾದ ಹೇಗೆ ನಡೆಯುತ್ತಿತ್ತೆಂಬ ಆಧಾರದ ಮೇಲೆ ಪಾಶ್ಚಿಮಾತ್ಯ ಸಮಾಜಗಳು ಹೇಗಿದ್ದವೆಂಬುದನ್ನು ಊಹಿಸಬಹುದಾಗಿದೆ.

ನಾನು ಇಲ್ಲಿ ನನ್ನ ಮೊದಲ ಸಂಪುಟದ ಬರಹವನ್ನು ಪರಾಮರ್ಶಿಸುತ್ತೇನೆ, ನಮ್ಮ ಪಾಶ್ಚಿಮಾತ್ಯ ದೇಶಗಳಲ್ಲಿ ಲೈಂಗಿಕಾತ್ಮಕತೆಯ ಬಗ್ಗೆ ವೈಜ್ಞಾನಿಕವಾಗಿ ನಡೆಸುವ ಸಂವಾದಗಳು ತಳಮಟ್ಟದಲ್ಲಿ ನಡೆಯುತ್ತಿರುತ್ತದೆ. ಆದರೆ ಅದಕ್ಕೊಂದು ವೈಜ್ಞಾನಿಕತೆಯನ್ನು ಆರೋಪಿಸುವುದಿಲ್ಲ. ಇದಕ್ಕೆ ಬದಲಾಗಿ ಅದೊಂದು ಕಲೆ ಎಂದು, ಅದನ್ನು ಸೃಜಿಸುವ ರೀತಿಯನ್ನು ಲೈಂಗಿಕ ಸಂಬಂಧ ಅಥವಾ ಲೈಂಗಿಕ ಅಂಗಾಂಗಗಳ ಮೂಲ ಸಿಗುವ ಸುಖವನ್ನು ಅತೀವವಾಗಿ ಅನುಭವಿಸುವುದನ್ನೂ ವಿವರಿಸುತ್ತದೆ. ಇದನ್ನು ಅನೇಕ ಪೌರಾತ್ಯ ದೇಶಗಳಲ್ಲಿ ನಾವು ಕಾಣಬಹುದು. ರೋಮ್ ಮತ್ತು ಪುರಾತನ ಗ್ರೀಕ್ ಸಂಸ್ಕೃತಿಯಲ್ಲೂ ಇದನ್ನು ಕಾಣಬಹುದು. ಲೈಂಗಿಕ ಸುಖಾನುಭವದ ಹುಡುಕಾಟದ ಅನೇಕ ಸಂವಾದಗಳನ್ನು ಹುಡುಕಬಹುದು. ಆದರೆ ಮಧ್ಯಯುಗೀನ ಪಾಶ್ಚಾತ್ಯ ಸಂವಾದವು ಸಂಪೂರ್ಣ ಭಿನ್ನವಾಗಿದೆ.

ಪಶ್ಚಿಮದಲ್ಲಿ ಪ್ರಚೋದಕ ಕಲೆ ನಮಗೆ ಕಂಡು ಬರುವುದಿಲ್ಲ, ಪ್ರೀತಿ ಮಾಡುವುದು ಹೇಗೆ ಎನ್ನುವುದನ್ನು ವ್ಯಕ್ತಿಗಳು ಕಲಿಯುವುದಿಲ್ಲ. ಸುಖಾನುಭವಕ್ಕೆ ತಮ್ಮನ್ನು ತಾವು ಓಪ್ಪಿಸಿಕೊಳ್ಳುವುದಿಲ್ಲ. ಮತ್ತೊಬ್ಬರಲ್ಲಿ ಈ ಸುಖವನ್ನು ಸೃಷ್ಟಿಸುವುದು ಹೇಗೆ ಎಂದು ಕಲಿಯುವುದಿಲ್ಲ. ಪ್ರೀತಿಯ ಶಿಖರಕ್ಕೆ ಕೊಂಡೊಯ್ಯುವುದು ಗೊತ್ತಿಲ್ಲ, ಮತ್ತೊಬ್ಬರ ಸುಖದ ಮೂಲಕ ತಮ್ಮ ಸುಖವನ್ನು ಹೆಚ್ಚಿಸಿಕೊಳ್ಳುವುದು ಗೊತ್ತಿಲ್ಲ. ಪಾಶ್ಚಾತ್ಯರು ಇದನ್ನು ಕಲಿಯುವುದು ಸುಲಭವಲ್ಲ, ಈ ಪ್ರಚೋದಕ ಕಲೆ ಮತ್ತು ಅದರ ಬಗೆಗಿನ ಚರ್ಚೆ ಆಂತರಿಕವಾಗಿ, ಖಾಸಗಿಯಾಗಿ ಮಾತ್ರ ಇರಬಲ್ಲದು. ಇದರ ಬದಲಾಗಿ ಲೈಂಗಿಕತೆಯನ್ನು ವಿಜ್ಞಾನದ ರೀತಿಯಲ್ಲಿ ಕಲಿಯಲು ಪ್ರಯತ್ನಿಸುತ್ತಾರೆ. ಆದರೆ ಅದರ ಆನಂದವನ್ನಲ್ಲ. ವೈಯಕ್ತಿಕವಾಗಿ ಆ ಆನಂದವನ್ನು ತೀವ್ರವಾಗಿ ಅನುಭವಿಸುವುದಿಲ್ಲ, ಆದರೆ ಅದರ ಸತ್ಯ ಏನು ಎಂಬುದರ ಕಡೆಗೆ ಇರುತ್ತದೆ. ಪಾಶ್ಚಿಮಾತ್ಯರಲ್ಲಿ ಎರಡು ರೀತಿಯ ವಿಶ್ಲೇಷಣೆಗಳಿವೆ. ಎರಡು ರೀತಿಯ ಸಂಶೋಧನೆಗಳಿವೆ. ಅದನ್ನು ಎರಡು ರೀತಿಯ ಸಂಪೂರ್ಣ ಭಿನ್ನ ಸಮಾಜಗಳಲ್ಲಿ ಕಾಣಬಹುದು. ಸ್ವಲ್ಪ ವಿಷಯಾಂತರ ಮಾಡಿ ಹೇಳ ಬಯಸುತ್ತೇನೆ. ಅದೆಂದರೆ ಈ ವಿಷಯವನ್ನು ಸಾಂಸ್ಕೃತಿಕವಾಗಿ ಚಾರಿತ್ರಿಕವಾಗಿ ನನಗಿಂತ ವಿಭಿನ್ನ ಹಿನ್ನೆಲೆಯಲ್ಲಿ ಇರುವ (ಪೌರಾತ್ಯ) ಜನಗಳೊಡನೆ ಚರ್ಚಿಸಬಯಸುತ್ತೇನೆ. ಈ ಬಗ್ಗೆ ಪಾಶ್ಚಾತ್ಯರಿಗೆ ಹೆಚ್ಚು ತಿಳಿದಿಲ್ಲ. ಪೌರಾತ್ಯರಲ್ಲಿರುವ ‘ಪ್ರಚೋದಕ ಕಲೆ’ ಹೇಗೆ ಹುಟ್ಟಿತು ಎಂಬ ವಿಷಯ ತಿಳಿಯಲು ಇಚ್ಛಿಸುತ್ತೇನೆ. ಪೌರಾತ್ಯ ಪಾಶ್ಚಿಮಾತ್ಯ ‘ಪ್ರಚೋದಿತ ಕಲೆ’ಯನ್ನು ಹೋಲಿಸಿ ನೋಡಲು ಕುತೂಹಲಕಾರಿಯಾಗಿದೆ. ಈಗ ಮತ್ತೆ ಪಶ್ಚಿಮದ ಕಡೆಗೆ ತಿರುಗಿನೋಡೋಣ. ಲೈಂಗಿಕಾತ್ಮಕತೆಯ ಚರಿತ್ರೆಯ ಕೃತಿಯಲ್ಲಿ ಅದರ ವಿವಿಧ ಪರಿಕಲ್ಪನೆಗಳನ್ನು ಸಿದ್ದಾಂತಗಳನ್ನು ಹೇಳಿಕೆಗಳನ್ನು ವಿಶ್ವಕೋಶದ ರೀತಿಯಲ್ಲಿ ಹೇಳುವುದು ನನ್ನ ಉದ್ದೇಶವಲ್ಲ. ಪಾಶ್ಚಾತ್ಯ ಯೂರೋಪಿಯನ್ ಸಮಾಜದಲ್ಲಿ ಏಕೆ ಇಷ್ಟೊಂದು ವಿಪರೀತ ಲೈಂಗಿಕ ವಿಜ್ಞಾನ ಹುಟ್ಟಿತು ಎಂದು ವಿಶ್ಲೇಷಿಸುವುದು ನನ್ನ ಗುರಿ. ಯಾವ ಕಾರಣಕ್ಕಾಗಿ ಶತಮಾನಗಳಿಂದ ಇದನ್ನು ಚರ್ಚೆಗೆ ಒಳಪಡಿಸಿದರು ಎಂದೂ ತಿಳಿಯಬೇಕಾಗಿದೆ. ಯೂರೋಪಿಯನ್ನರು ಯಾಕಾಗಿ ಸಹಸ್ರಮಾನಗಳಿಂದ ಲೈಂಗಿಕತೆಯ ಸತ್ಯವನ್ನು ತಿಳಿಯಲು ಆಶಿಸಿದರು. ಲೈಂಗಿಕತೆಯ ಆನಂದವನ್ನು ಏಕೆ ಅನುಭವಿಸಲು ಮುಂದಾಗಲಿಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ತಕ್ಷಣ ನನ್ನ ಮನಸ್ಸಿಗೆ ಬರುವುದು ಫ್ರಾಯ್ಡ್. ಫ್ರಾಯ್ಡ್ನ ಮೂಲಕ ರಾಜಕೀಯ, ಸಾಮಾಜಿಕ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಚಳುವಳಿಗಳಿಂದ ಲೈಂಗಿಕಾತ್ಮಕತೆಯನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದವು, ಶತಶತಮಾನಗಳಿಂದ ಈ ವಿಷಯದ ಬಗ್ಗೆ ಮಾತನಾಡದೆ ಮೌನ ವಹಿಸದ್ದೆವು. ಈಗ ನಾವು ಇದರಿಂದ ಬಿಡುಗಡೆ ಪಡೆಯುವ ಹಾದಿಯಲ್ಲಿದ್ದೇವೆ. ತಿಳುವಳಿಕೆಯನ್ನು ಆಹ್ವಾನಿಸುತ್ತಿದ್ದೇವೆ. ಈ ಹಿಂದೆ ಅನೇಕ ಶತಮಾನಗಳಲ್ಲಿ ಬೂರ್ಜ್ವಾ ನೈತಿಕತೆ ಮತ್ತು ಕ್ರಿಶ್ಚಿಯಾನಿಟಿ ನೈತಿಕತೆ, ಲೈಂಗಿಕಾತ್ಮಕತೆಯ ಬಗ್ಗೆ ಮಾತನಾಡಲು, ಪ್ರಯತ್ನಿಸಲು ಪಾಶ್ಚಿಮಾತ್ಯ ದೇಶಗಳು ತಡೆಹಿಡಿದ್ದವು. ಚಾರಿತ್ರಿಕವಾಗಿ ಈ ಮೂರು ಅಂಶಗಳು ಇದಕ್ಕೆ ಕಾರಣ.

ಮೊದಲ ಚಳುವಳಿ ಗ್ರೀಕ್ ಮತ್ತು ರೋಮ್ ನ ಪ್ರಾಚೀನತೆ. ಇಲ್ಲಿ ಲೈಂಗಿಕಾತ್ಮಕತೆಯನ್ನು ಯಾವ ಕಷ್ಟವೂ ಇಲ್ಲ ಸ್ವಚ್ಛಂದವಾಗಿ , ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಬಹುದಾಗಿತ್ತು. ಪ್ರಚೋದಕ ಕಳೆಯ ಮೂಲಕ ತೋರಿಸಬಹುದಾಗಿತ್ತು. ಆಗ ಕ್ರಿಶ್ಚಿಯನ್ ಧಾರ್ಮ ತನ್ನ ತಲೆ ತೂರಿಸಿತು. ಪಾಶ್ಚಾತ್ಯರಲ್ಲಿ ಮೊದಲ ಬಾರಿಗೆ ಲೈಂಗಿಕಾತ್ಮಕತೆಯ ಬಗ್ಗೆ ವಿರೋಧವನ್ನು ಹೇರಿತು. ಲೈಂಗಿಕ ಭೂಗವನ್ನು ತಿರಸ್ಕರಿಸಿತು. ಇದಕ್ಕೆ ನೈತಿಕತೆಯ ಕಾರಣವನ್ನು ಮುಂದೊಡ್ಡಿತು. ಹದಿನಾರನೇ ಶತಮಾನಾದ ಬೂರ್ಜ್ಜಾ ಸಂಸ್ಕೃತಿಗೆ ತೆರೆದುಕೊಂಡು ಸಾಂಸ್ಕೃತಿಕ ಸ್ವಾಮ್ಯವನ್ನು ಹೇರಿತು. ಇನ್ನೂ ತೀವ್ರವಾಗಿ, ಕ್ರಿಶ್ಚಿಯನ್ ಧರ್ಮದ ಹಿನ್ನೆಲೆವಲ್ಲಿ ಲೈಂಗಿಕಾತ್ಮಕತೆಯ ಮೇಲೆ ಕಡಿವಾಣ ಹಾಕಿತು. ಅಲ್ಲದೆ ಹತ್ತೊಂಬತ್ತನೆಯ ಶತಮಾನದ ತನಕ ಇದನ್ನು ಮುಂದುವರೆಸಿತು . ಹತ್ತೊಂಬತ್ತನೆಯ ಶತಮಾನದಲ್ಲಿ ಫ್ರಾಯ್ಡ್ನ ಮೂಲಕ ಇದರ ಮುಸುಕನ್ನು ತೆರೆಯಲಾಯಿತು.

ಹೀಗೆ ಪಶ್ಚಿಮದಲ್ಲಿ ಲೈಂಗಿಕಾತ್ಮಕತೆಯ ಬಗ್ಗೆ ಚಾರಿತ್ರಿಕವಾಗಿ ಯೋಜನಾ ಬದ್ಧತೆಯಿಂದ ನಿರೋಧವನ್ನು ಹೇರಲಾಯಿತು, ಅದುಮಿಡಲಾಯಿತು, ತಿರಸ್ಕರಿಸಲಾಯಿತು . ಚರ್ಚಿನಿಂದ ಹೊರಗಿಡಲಾಯಿತು. ಕ್ರಿಶ್ಚಿಯನ್ ಧಾರ್ಮ ಇದನ್ನು ಯೋಜನ್ನ ಬದ್ದವಾಗಿ ಹೇರಿತು. ಲೈಂಗಿಕಾತ್ಮಕತೆಯ ತ್ರೈಸ್ಕಾರವನ್ನು ತಿಳಿಯುವ ನನ್ನ ಈ ಅಧ್ಯಯನದಲ್ಲಿ ಈ ರೀತಿಯ ಪ್ರಯತ್ನವಾಗಿದೆ. ಲೈಂಗಿಕಾತ್ಮಕತೆಯ ಚರಿತ್ರೆಯನ್ನು ರಚಿಸುವಲ್ಲಿ ನಿರ್ಬಂಧ ಮತ್ತು ಪ್ರಚೋದನೆಯ ಹಿನ್ನೆಲೆ ಏನು ಎಂದು ತಿಳಿಯುವುದು ಮುಖ್ಯ.

ಪಾಲ್ ಮೈನೆ ಎಂಬ ಚರಿತ್ರೆಕಾರನು ಕ್ರಿಶ್ಚಿಯಾನಿಟಿ ಮುಂಚೆ ಇದ್ದ ರೋಮ್ ನ ಲೈಂಗಿಕಾತ್ಮಕತೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾನೆ. ಆತ ಅನೇಕ ಪ್ರಮುಖ ಆವಿಷ್ಕಾರಗಳನ್ನು ಮಾಡಿದ್ದಾನೆ. ಅವುಗಳನ್ನು ನಾವು ಪರಿಗಣಿಸಬೇಕು.

ಲೈಂಗಿಕಾತ್ಮಕತೆಯ ಬಗ್ಗೆ ಕ್ರಿಶ್ಚಿಯನ್ ನೀತಿಯನ್ನು ಗುಣಗಳನ್ನು ತಿಳಿಯಬೇಕಾದರೆ ವೇಗನ್ ನ ಗ್ರೀಕ್ ಅಥವಾ ರೋಮನ್ ನೀತಿಗಳನ್ನು ಹೋಲಿಸಿ ನೋಡಬೇಕು. ಮೊತ್ತ ಮೊದಲಾಗಿ ಕ್ರಿಶ್ಚಿಯಾನಿಟಿ ಪುರಾತನ ಸಮಾಜದ ಮೇಲೆ ಅನೇಕ ನಿಯಮಗಳನ್ನು ಹೇರಿತು. ಎರಡನೆಯದಾಗಿ, ಜೇವಸೃಷ್ಟಿಯು ಒಂದು ಕ್ರಿಯೆ ಅಷ್ಟೇ. ಮೂರನೆಯದಾಗಿ, ಎಲ್ಲಕ್ಕಿಂತ ಮಿಗಿಲಾಗಿ ಕೇವಲ ಲೈಂಗಿಕ ಭೋಗವನ್ನು ಲೈಂಗಿಕ ಭೋಗವು ಎಂದು ಪರಿಗಣಿಸಬೇಕುಂಬು ಕೆಡುಕಿನದು. ಎಷ್ಟು ಕೆಡುಕೆಂದರೆ ಅದನ್ನು ಸಂಪೂರ್ಣ ನಿಷೇಧಿಸಬೇಕು. ಅದ್ಕಕೆ ಕನಿಷ್ಠ ಆದ್ಯತೆಯನ್ನು ನೀಡಬೇಕು. ಎಷ್ಟೆಂದರೆ ಮಕ್ಕಳನ್ನು ಪಡೆಯುವಷ್ಟು. ಈ ಮಕ್ಕಳನ್ನು ಮದುವೆಯ ಮೂಲಕವೇ ಪಡೆಯಬೇಕು. ಅದು ಮಾನ್ಯವಾಗಿರಬೇಕು, ಈ ಮೂರು ಗುಣಗಳನ್ನು ಕ್ರಿಶ್ಚಿಯನ್ ಧರ್ಮವನ್ನು ನಿರ್ಧರಿಸುತ್ತವೆ. ಪಾಲ್ ಮೈನೆಯ ಅಧ್ಯಯನ ಲೈಂಗಿಕಾತ್ಮಕತೆಯ ಈ ಮೂರು ಮುಖ್ಯ ಧ್ಯೇಯಗಳು ರೋಮನ್ ಪ್ರಪಂಚದಲ್ಲಿ ಕ್ರಿಶ್ಚಿಯಾನಿಟಿ ಮುಂಚೆಯೂ ಇದ್ದವೆಂದು ತಿಳಿಸುತ್ತದೆ.

ಮದುವೆಯಾಗುವುದು, ಹೆಂಡತಿಯನ್ನು ನೋಡಿಕೊಳ್ಳುವುದು, ಅವಳನ್ನು ಮಾತ್ರ ಪ್ರೀತಿಸಿ ಮಕ್ಕಳನ್ನು ಪಡೆಯುವುದು . ಲೈಂಗಿಕ ಭೋಗದಿಂದ ಬಿಡುಗಡೆ ಪಡೆಯಲೆತ್ನಿಸುವುದು ಇವೆಲ್ಲವನ್ನೂ ಆಗಿನ ಕಾಲದ ರೋಮನ್ ಚಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧಾರ್ಮ ವಿರೋಧಿಸಲಿಲ್ಲ ಎಂದು ಹೇಳಬಹುದು. ಬಹುಪತ್ನಿತ್ವ , ವಿವಾಹ ಬಾಹಿರ ಸಂಬಂಧ ಇವೆಲ್ಲ ಕ್ರಿಶ್ಚಿಯನ್ ಧರ್ಮದ ಮುಂಚೆಯೇ ಅನುಸರಿಸಲ್ಪಟ್ಟಿತ್ತು ಎಂದು ಹೇಳಬಹುದು. ಕೆಲವು ಶ್ರೀಮಂತರು , ಕೆಲವು ವಿಶೇಷ ಸೌಲಭ್ಯ ಪಡೆದವರು ಈ ನಿಯಮವನ್ನು ಅನುಸರಿಸಬೇಕಾಗಿರಲಿಲ್ಲ.

ಅಂದರೆ ಕ್ರಿಶ್ಚಿಯನ್ ಧರ್ಮವು ಲೈಂಗಿಕಾತ್ಮಕತೆಯ ಚರಿತ್ರೆಯಲ್ಲಿ ಯಾವ ಪಾತ್ರವನ್ನೂ ವಹಿಸಲಿಲ್ಲವೆಂದು ಅರ್ಥವೇ? ಕ್ರಿಶ್ಚಿಯನ್ ಧಾರ್ಮ ಇದರಲ್ಲಿ ತನ್ನ ಪಾತ್ರವನ್ನು ವಹಿಸಿಲ್ಲದೇ ಇರಬಹುದು. ಆದರೆ ಅದು ಲೈಂಗಿಕ ನೈತಿಕತೆಯಲ್ಲಿ ಹೊಸ ತಂತ್ರವನ್ನು ಬಳಸಿತು. ರೋಮ್ ಚಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧಾರ್ಮ ಪ್ರವೇಶಿಸಿ ಬಹಳ ಬೇಗ ಪ್ರಭುತ್ವದ ಧರ್ಮವಾಯಿತು. ಧರ್ಮಾಧಿಕಾರದ ತಂತ್ರವನ್ನು ಬಳಸಿತು. ನೈತಿಕ ಹಾಗೂ ಧಾರ್ಮಿಕ ನಿಷೇಧಕ್ಕಿಂತ ಅಧಿಕಾರದ ಪ್ರಭಾವವನ್ನು ಹೇರುವುದಕ್ಕೆ ಲೈಂಗಿಕಾತ್ಮಕತೆಯನ್ನು ವಿಶ್ಲೇಷಿಸಬೇಕು . ಈಗ ಪ್ರಶ್ನೆ ಏನೆಂದರೆ ಕ್ರಿಶ್ಚಿಯನ್ ಧಾರ್ಮ ರೋಮನ್ ಚಕ್ರಾಧಿಪತ್ಯದೊಳಗೆ ಪ್ರಯೋಗಿಸಿದ ಅಧಿಕಾರದ ಹೊಸ ತಂತ್ರವೇನೆಂಬುದು.

ಈ ಅಧಿಕಾರವನ್ನು ಏನೆಂದು ಕರೆಯಬಹುದು. ಇದು ಸಮಾಜದಲ್ಲಿ ಇರುವ ಸಾಮಾನ್ಯ ವ್ಯಕ್ತಿಗಳ ವರ್ಗ. ಈ ವರ್ಗ ಸಮಾಜದಲ್ಲಿ ತಮ್ಮ ಅಂತಸ್ತೇನು ಎಂದು ಗುರುತಿಸಿಕೊಂಡಿರುವುದಿಲ್ಲ. ಇವರು ಬುದ್ದಿವಂತಿಕೆ, ನೈತಿಕ ಅರ್ಹತೆ ಎಂದರೇನು ಏನು ಗೊತ್ತಿಲ್ಲದ ಜನ. ಕ್ರಿಶ್ಚಿಯನ್ ಧರ್ಮದಲ್ಲಿ ಪ್ಯಾಸ್ಟರ್ ನ ಪಾತ್ರವೊಂದಿದೆ. ಕುರಿಗಾಹಿಗಳು ಎಂದು ಇವರನ್ನು ಕರೆಯಬಹುದು. ಉಳಿದ ವ್ಯಕ್ತಿಗಳು ಕುರಿಗಳು ಅಥವಾ ಕುರಿಮಂದೆ ಎಂದು ಹೇಳಬಹುದು. ಈ ರೀತಿಯ ಪೌರತಂತ್ರವನ್ನು ಸೃಷ್ಟಿಸಿ ಪ್ರಾಚೀನ ರೋಮ್ ನ ಸಮಾಜದ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸಿದರು. ನನ್ನ ಪ್ರಕಾರ ಇದೊಂದು ಬಹಳ ಪ್ರುಮುಖ ತಂತ್ರ.

ಇದರ ಪರಿಣಾಮವೆಂದರೆ ಪ್ರಾಚೀನ ಗ್ರೀಕ್ ಮತ್ತು ರೋಮಿನಲ್ಲಿ ಕೆಲವು ವ್ಯಕ್ತಿಗಳು ಕುರಿಗಾಹಿಯ ಪಾತ್ರವನ್ನು ವಹಿಸಿ ಉಳಿದವರನ್ನು ಅವರ ಜೀವನ್ ಪೂರ್ತ ಹುಟ್ಟಿನಿಂದ ಸಾವಿನವರೆಗೆ ನಿಯಂತ್ರಿಸಬಹುದೆಂಬ ಕಲ್ಪನೆ ಇರಲಿಲ್ಲ. ಗ್ರೀಕ್ ಮತ್ತು ರೋಮ್ ನ ಸಾಹಿತ್ಯದಲ್ಲಿ ‘ಕುರಿಗಾಹಿ’ ಎಮ್ಬ ಪರಿಕಲ್ಪನೆಯೇ ಇರಲಿಲ್ಲ. ‘ರಾಜ’ ಏನಂದ್ರೆ ಯಾರು ಎಂದು ಪಿಲಾಟೆಯೋ ತನ್ನನ್ನು ತಾನೇ ಕೇಳಿಕೊಂಡು ಅದಕ್ಕೆ ಈ ರೀತಿ ಉತ್ತರ ಕೊಟ್ಟಿದ್ದಾನೆ. ಅವನು ಕುರಿಗಾಹಿಯ ಬಗ್ಗೆ ಮಾತನಾಡುವುದಿಲ್ಲ. ಅವನು ರಾಜನೆಂದರೆ ನೇಕಾರನೆಂದು ಕರೆದು, ಈ ನೇಕಾರ ಸಮಾಜದ ವ್ಯಕ್ತಿಗಳನ್ನು ದಾರಕ್ಕೆ ಹೋಲಿಸುತ್ತಾನೆ. ಈ ನೇಕಾರ ದಾರವನ್ನು ನೇಯ್ದು ಸುಂದರ ಬಟ್ಟೆಯನ್ನು ನೇಯುವವನು ಎಂದು ಕರೆದಿದ್ದಾನೆ. ಪ್ರಭುತ್ವ, ಪಠಣ, ಇದು ಬಟ್ಟೆ, ಪ್ರಜೆಗಳು ಈ ಬಟ್ಟೆಯ ದಾರ. ಅಲ್ಲಿ ಕುರಿ ಮಾತು ಕುರಿಗಾಹಿಯ ಪರಿಕಲ್ಪನೆ ಇರಲಿಲ್ಲ.

ಅಂದರೆ ಕುರಿಗಾಹಿಯಾಗಿ ಕುರಿಯ ಮಂದೆಯ ಗೌರವಕ್ಕೆ ಪಾತ್ರನಾಗುವ ಮುಂದಾಳು ಎಂಬ ಪರಿಕಲ್ಪನೆ ರೋಮ್ ಜಗತ್ತಿನದಲ್ಲ. ಇದು ಪೂರ್ವ ಮೆಡಿಟೆರೇನಿಯನ್ ಪ್ರಪಂಚದ್ದು. ಈ ಪರಿಕಲ್ಪನೆಯನ್ನು ಈಜಿಪ್ಟಿನಲ್ಲಿ ಕಾಣಬಹುದು. ಅದರಲೂ ಹೀಬ್ರೂ ಸಮಾಜದಲ್ಲಿ ‘ಕುರಿಮಂದೆ’ ಮತ್ತು ‘ಕುರಿಗಾಹಿ’ ಪರಿಕಲ್ಪನೆ ಆ ಸಮಾಜದ ಮೂಲಭೂತ ಪರಿಕಲ್ಪನೆಯಾಗಿತ್ತು. ದೇವರು ತನ್ನ ಪ್ರಜೆಗಳನ್ನು ಕಾಯುವ ಕುರುಬ. ಜೆಹೋವಾಹದ ಜನರು ಕುರಿಮಂದೆ. ಇಸ್ರೇಲಿನ ಮೊದಲ ದೊರೆ ಡೇವಿಡ್ ದೇವರ ಕೈಯಿಂದ ಜನರನ್ನು ಕುರಿಮಂದೆಯಾಗಿಯೂ ಅವರನ್ನು ಕಾಯುವ ಕುರುಬನಾಗಿ ತಾನು ಕಾರ್ಯನಿರ್ವಹಿಸುವ ಹೊಣೆಯನ್ನು ಹೊತ್ತುಕೊಳ್ಳುತ್ತಾನೆ. ಈ ಜ್ಯುಯಿಷ್ ಜನರಿಗೆ ಮುಕ್ತಿ ಸಿಗುವುದು ಅಂದರೆ ಮಂದೆಯನ್ನು ಮತ್ತೆ ದೇವರ ಹತ್ತಿರ ಕಳುಹಿಸುವುದನ್ನು ಈ ಕುರುಬ ಗ್ಯಾರಂಟಿ ಮಾಡುತ್ತಾನೆ. ಆದ್ದರಿಂದ ಈ ಕುರಿಗಾಹಿಯ ಕಥೆ ಪೂರ್ವ ಮೆಡಿಟರೇನಿಯನ್ ಸಮಾಜದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ಆಗ ಈ ವ್ಯವಸ್ಥೆ ಗ್ರೀಕರಲ್ಲಾಗಲಿ , ರೋಮನ್ನರಲ್ಲಾಗಲೀ ಇರಲಿಲ್ಲ.

ಈಜಿಪ್ಟ್ ಅಸ್ಪೀರಿಯಾದ.ಹೀಬ್ರೂಗಳಲ್ಲಿ ಬೆಳೆದು ಬಂದ ಈ ಪ್ಯಾಸ್ಪೋರಲ್ ಅಧಿಕಾರ ಶಕ್ತಿ ಅಂದರೆ ಏನು ? ಅದನ್ನು ಹೇಗೆ ತಿಳಿಯಬಹುದು ಎಂದು ನೋಡೋಣ, ಪ್ಯಾಸ್ಟೊರಲ್ ಅಧಿಕಾರದ ಗುಣಲಕ್ಷಣಗಳನ್ನು ಹೀಗೆ ಹೇಳಬಹುದು. ಈ ಅಧಿಕಾರವು ಮಾಮೂಲು ಪರಂಪರಾಗತ ರಾಜಕೀಯ ಅಧಿಕಾರಕ್ಕೆ ವಿರುದ್ಧವಾದುದು, ಇದು ದೇಶದ ಮೇರೆಯಲ್ಲಿ ಮಾತ್ರ ಹಬ್ಬವುದಿಲ್ಲ, ಕುರುಬ ಮೇರೆಯನ್ನು ಆಳುವುದಿಲ್ಲ. ಆತ ಅಸಂಖ್ಯತ ವ್ಯಕ್ತಿಗಳನ್ನ ಆಳುತ್ತಾನೆ. ಕುರಿ, ದನ, ಪ್ರಾಣಿಗಳನ್ನು ಆಳುತ್ತಾನೆ. ನಿರಂತರ ಚಲನೆಯಲ್ಲಿರುವ ಮಂದೆಯನ್ನು ಆಳುತ್ತಾನೆ. ಹೀಗೆ ಜಂಗಮ ಸ್ಥಿತಿಯಲ್ಲಿರುವ ಪ್ರಾಣಿಗಳನ್ನು ಆಳುತ್ತಿರುತ್ತಾನೆ.

ಇದೇ ಆ ಕುರುಬನ ಪಾತ್ರ. ಇಲ್ಲಿ ಗೆಲುವು ಸೋಲಿನ ಪ್ರಶ್ನೆಯೇ ಇಲ್ಲ. ಏಕೆಂದರೆ ಇಲ್ಲಿ ದೇಶದ ಮೇರೆಗಳೇ ಇರುವುದಿಲ್ಲ. ಆದ್ದರಿಂದ ಯುದ್ಧ ಮಾಡಿ ಕೊಳ್ಳೆಹೊಡೆದು ಸಂಪಾದಿಸಿದ ಐಶ್ವರ್ಯವಿಲ್ಲ. ಅ೦ತೆಯೇ ಗುಲಾಮರೂ ಇಲ್ಲಿ ವೈರಿಗೆ ತೊಂದರೆ ಕೊಡುವುದು ಈ ಕುರುಬನ ಕರ್ತವ್ಯವಲ್ಲ. ಇಲ್ಲಿ ಕಾವಲುಗಾರ ಕಾಯಲ್ಪಟ್ಟ ಪ್ರಾಣಿಗಳಿಗೆ ಒಳಿತನ್ನ ಮಾಡುವುದು ಮುಖ್ಯ. ಅಂದರೆ ಭೌತಿಕವಾಗಿ ಒಳಿತನ್ನ ಮಾಡುವುದು. ಕುರಿಗಳಿಗೆ ಚೆನ್ನಾಗಿ ಮೇವು ಉಣಿಸುವುದು, ಹುಲ್ಲುಗಾವಲನ್ನು ಹುಡುಕಿಕೊಡುವುದು, ಕುಡಿಯಲು ನೀರು ಒದಗಿಸುವುದಷ್ಟೇ . ಹೀಗೆ ಈ ಅಧಿಕಾರ ವ್ಯಕ್ತಿಗಳಿಗೆ ಮತ್ತು ಗುಂಪಿಗೆ ಆಧಾರವಾಗಿರುವುದು. ಇಲ್ಲಿ ಪರಂಪರಾಗತ ರಾಜ್ಯದಲ್ಲಿರುವ ಆಢಳಿತದಂತೆ ವೈರಿಗಳ ಮೇಲೆ ಜಂತುಗಳಿಸಿ ಸಂಪಾದಿಸುವ ಅಧಿಕಾರವಲ್ಲ, ಇದು ಒಂದು ರೀತಿಯಲ್ಲಿ ಫಲಾನುಭವಿಗಳ ಅಧಿಕಾರ.

ಮೂರನೇ ರೀತಿಯ ಪ್ಯಾಸ್ಪೋರಲ್ ಅಧಿಕಾರ ಈ ನಾಗರಿಕತೆಯಲ್ಲಿ ಹುಟ್ಟಿದ್ದೆಂದರೆ ಮಂದೆಗೆ ಬದುಕಲು ಬೇಕಾದ ಮೂಲಾಧಾರಗಳನ್ನು ಒದಗಿಸುವುದು. ಇಲ್ಲಿ ಕುರುಬನಿಗೆ ಒಂದು ನೈತಿಕ ಗುಣವಿರಬೇಕಾಗುತ್ತದೆ, ಆತ ಭಕ್ತಿಯಿಂದಿರಬೇಕಾಗುತ್ತದೆ. ಸಮಯ ಬಿದ್ದರೆ ಕುರಿಗಳಿಗಾಗಿ ತನ್ನ ಜೀವವನ್ನು ತ್ಯಾಗ ಮಾಡಿಯಾದರೂ ಅವನ್ನು ರಕ್ಷಿಸಬೇಕಾಗುತ್ತದೆ. ಬೈಬಲ್ ಪಠ್ಯದಲ್ಲಿ ಇದಕ್ಕೆ ಸಂಬಂಧಪಟ್ಟ ಅನೇಕ ಸುಪ್ರಸಿದ್ದ ದೃಷ್ಟಾಂತಗಳಿವೆ. ಒಳ್ಳೆಯ ಕುರುಬ ಕುರಿಗಳಿಗಾಗಿ ತನ್ನ ಪ್ರಾಣವನ್ನೇ ಕೊಡುತ್ತಾನೆ. ಪಾರಂಪರಿಕ ಅಧಿಕಾರದಲ್ಲಿ ಈ ತಂತ್ರ ಹಿಂದು ಮುಂದಾಗುತ್ತದೆ. ಅಲ್ಲಿ ಒಬ್ಬ ಒಳ್ಳೆಯ ನಾಗರಿಕ ಎನ್ನಿಸಿಕೊಳ್ಳಬೇಕಾದರೆ ತನ್ನ ರಾಜನಿಗೆ ತನ್ನ ಪ್ರಾಣವನ್ನು ಕೊಡುತ್ತಾನೆ. ಪಾಸ್ಟೊರಲ್ ಅಧಿಕಾರದಲ್ಲಿ ಕುರುಬ ತನ್ನ ಪ್ರಾಣವನ್ನು ಕೊಡಲು ಸಿದ್ಧನಾಗಿರುತ್ತಾನೆ.

“ಸಾಮಾನ್ಯವಾಗಿ ಪಶ್ಚಿಮದ ಮನುಷ್ಯನಿಗೆ ಜೀವನ ಎಂಬುದರ ಅರ್ಥವೇನು? ಅದರಲ್ಲುವು ಈ ರೀತಿಯ ಪ್ಯಾಸ್ಟೋರಲ್ ಅಧಿಕಾರದ ಹಿನ್ನೆಲೆಯಲ್ಲಿ ಏನು ಎಂದು ತಿಳಿಯಬೇಕು . ಮೊದಲನೆಯದಾಗಿ ಪ್ಯಾಸ್ಟೋರಲ್ ನ ಇರುವು ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತಿ ಪಡೆಯುವ ಮಾರ್ಗವನ್ನು ಕಡ್ಡಾಯವಾಗಿ ತಿಳಿಸಿಕೊಡಬೇಕು. ಪಶ್ಚಿಮದ ಕ್ರಿಶ್ಚಿಯನರಲ್ಲಿ ತಾನಿ ವೈಯಕ್ತಿಕವಾಗಿ ಮುಕ್ತಿಯನ್ನು ಕಾಣಬೇಕಾಗುತ್ತದೆ. ಅಲ್ಲಿ ಆಯ್ಕೆಯ ಪ್ರಶ್ನೆಯಿಲ್ಲ”

ಕೊನೆಯದಾಗಿ ಬಹಳ ಮುಖ್ಯವಾದ ಗುಣವೆಂದರೆ- ಈ ಪಾಸ್ಟೊರಲ್ ಅಧಿಕಾರ ವ್ಯಕ್ತಿಗತ ಅಧಿಕಾರ, ಅಂದರೆ ರಾಜ ಅಥವಾ ಮ್ಯಾಜಿಸ್ಟ್ರೇಟನು ತನ್ನ ರಾಜ್ಯವನ್ನು, ಮೇರೆಯನ್ನು ಪಟ್ಟಣವನ್ನು ಪ್ರಜೆಗಳನ್ನು ಕಾಪಾಡುವ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ. ಇಲ್ಲಿ ಪ್ಯಾಸ್ಟರನು ವ್ಯಕ್ತಿಗಳನ್ನು ಒಬ್ಬೊಬ್ಬನನ್ನಾಗಿ ಕಾಯುತ್ತಾನೆ. ಇದು ಜಾಗತಿಕ ಅಧಿಕಾರವಲ್ಲ. ಕುರುಬನು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮುಕ್ತಿಗೆ ಕೆಲಸ ಮಾಡಬೇಕು. ಈ ವಿಷಯವನ್ನು ಈಜಿಪ್ಟ್, ಅಸ್ಪೀರಿಯನ್ನ ಅನೇಕ ಪಠ್ಯಗಳಲ್ಲಿ ಕಾಣಬಹುದು. ಅಂದರೆ, ಅಧಿಕಾರ ಅಸಂಖ್ಯಾತ ವ್ಯಕ್ತಿಗಳ ಮೇಲೆ ಪಸರಿಸುತ್ತದೆ . ಒಂದು ಕೇಂದ್ರದಿಂದ ಮತ್ತೊಂದು ಚಲಿಸುವ ವ್ಯಕ್ತಿಗಳಿಗಾಗಿ ತ್ಯಾಗ ಮಾಡುವ ಅಧಿಕಾರವಿರುತ್ತದೆ.

ರೋಮನ್ ಸಾಮ್ರಾಜ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯಾಗಿ ಕ್ರಿಶ್ಚಿಯನ್ ಧಾರ್ಮ ಬಂಡ ಕ್ಷಣದಲ್ಲೇ ಮೇಲೆ ಹೇಳಿದೆ ರೀತಿ ಅಧಿಕಾರವನ್ನು ಚಲಾಯಿಸಿತು . ಈ ಬದಲಾವಣೆ ಹೇಗೆ ಗಟ್ಟಿಯಾಗಿ ಆಯಿತೆಂದು ಹೇಳಬಹುದು. ಕ್ರಿಶ್ಚಿಯನ್ ಧರ್ಮವು ಹೇಗೆ ಚರ್ಚ್ ಆಗಿ ಬೆಳೆಯಿತು, ಚರ್ಚ್ ಒಳಗೆ ಹೇಗೆ ಫ್ರಿಸ್ಟ್ಗಳು ತಮ್ಮ ಸ್ಥಾನವನನ್ನು ಭದ್ರಪಡಿಸಿಕೊಂಡರು, ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಎತ್ತಿಕೊಂಡರು. ಎಷ್ಟು ಪರಿಣಾಮಕಾರಿಯಾಗಿ ‘ಕುರಿಗಾಹಿ’ಗಳಾದರು ಎಂಬುದನ್ನು ವಿಶ್ಲೇಷಿಸಬೇಕಾಗುತ್ತದೆ. ಕ್ರಿಶ್ಚಿಯನ್ ಸಮಾಜದಲ್ಲಿ ಮೂರನೇ ಶತಮಾನದಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಒಂದು ಶಕ್ತಿಯಾಗಿ ಚಾರಿಟಿಕವಾಗಿ ಬೆಳೆಯಿತು. ಇದರಿಂದ ಲೈಂಗಿಕಾತ್ಮಕತೆಯ ಮೇಲೆ ಬೀರಿದ ಪರಿಣಾಮವನ್ನು ವಿಶ್ಲೇಷಿಸಬೇಕಾಗುತ್ತದೆ.

ಸಾಮಾನ್ಯವಾಗಿ ಪಶ್ಚಿಮದ ಮನುಷ್ಯನಿಗೆ ಜೀವನ ಎಂಬುದರ ಅರ್ಥವೇನು? ಅದರಲ್ಲೂ ಈ ರೀತಿಯ ಪ್ಯಾಸ್ಟೋರಲ್ ಅಧಿಕಾರದ ಹಿನ್ನೆಲೆಯಲ್ಲಿ ಎಂದು ಎಂದು ತಿಳಿಯಬೇಕು. ಮೊದಲನೆಯದಾಗಿ ಪ್ಯಾಸ್ಟೊರಾಲ್ ನ ಇರುವು ಪ್ರತಿಯೊಬ್ಬ ವ್ಯಕ್ತಿಗೂ ಮುಕ್ಕಾಟಿ ಪಡೆಯುವ ಮಾರ್ಗವನ್ನು ಕಡ್ಡಾಯವಾಗಿ ತಿಳಿಸಿಕೊಡಬೇಕು. ಪಶ್ಚಿಮ ಕ್ರಿಶ್ಚಿಯನ್ನರಲ್ಲಿ ತಾನು ವೈಯಕ್ತಿಕವಾಗಿ ಮುಕ್ತಿಯನ್ನು ಕಾಣಬೇಕಾಗುತ್ತದೆ. ಅಲ್ಲಿ ಆಯ್ಕೆಯ ಪ್ರಶ್ನೆಯಿಲ್ಲ. ಕ್ರಿಶ್ಚಿಯನ್ ಸಮಾಜದಲ್ಲಿ ವ್ಯಕ್ತಿಯು ‘ನನಗೆ ಮುಕ್ತಿ ಬೇಡ’ ಎಂದು ಹೇಳುವ ಸ್ವಾತಂತ್ರ್ಯವಿಲ್ಲ. ಪ್ರತಿಯೊಬ್ಬನೂ ಮುಕ್ತಿಯನ್ನು ಪಡೆಯಬೇಕು. ‘ನಿನ್ನನ್ನು ಕಾಪಾಡಲಾಗುವುದು’ ಎಂದರೆ ನಿನ್ನ ಉಳಿಸಿಕೊಳ್ಳಲು ನೀನು ಧಾರ್ಮ ಹೇಳುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಇದೆ ಪ್ರಪಂಚದಲ್ಲಿ ನಿನ್ನನ್ನು ನವಿ ಶಿಕ್ಷಿಸುವ ಹಕ್ಕನ್ನು ಪಡೆದಿದ್ದೇವೆ ಎಂಬ ಅಧಿಕಾರ ಚರ್ಚಿಗೆ ಇದೆ. ಆದ್ದರಿಂದ ಇದೊಂದು ರೀತಿಯಲ್ಲಿ ಐಚ್ಛಿಕವಾಗಿ ಮುಕ್ತಿ ಪಡೆಯುವ ಅಥವಾ ಪಡೆಯದೇ ಇರುವ ಹಕ್ಕು ಇಲ್ಲಿ ಇಲ್ಲ.

ಎರಡನೆಯದಾಗಿ , ಈ ಅನೈಚ್ಛಿಕ ಮುಕ್ತಿಯನ್ನು ತನ್ನಿಂದ ತಾನೇ ಪಡೆಯಲಾಗುವುದಿಲ್ಲ. ಅಧಿಕಾರವನ್ನು ಮಾನ್ಯ ಮಾಡಿದಾಗ ಮಾತ್ರ ಇದು ಸಾಧ್ಯ. ಮಾನ್ಯ ಮಾಡುವುದೆಂದರೆ ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕ್ರಿಯೆಯನ್ನು ಪ್ಯಾಸ್ಟರನಿಗೆ ತಿಳಿಸಲೇಬೇಕು. ಒಪ್ಪಿಗೆ ಕೊಡುವುದು ಅಥವಾ ಬಿಡುವುದು ಪ್ಯಾಸ್ಟರನಿಗೆ ಬಿಟ್ಟಿದ್ದು. ಅಂದರೆ ಹಳೆಯ ಕಾಲದ ಅಧಿಕಾರದ ಪರಿಧಿಯ ರಚನೆಯೊಳಗೆ ಬರಬೇಕು . ಹೆಚ್ಚು ಕಡಿಮೆಯಾದರೆ ಅಥವಾ ನಿಯಮ ಉಲ್ಲಂಘನೆಯಾದರೆ ಶಿಕ್ಷೆ ಮಾಡುವ ಅಧಿಕಾರವೂ ಇರುತ್ತದೆ. ಇದಕ್ಕಾಗಿ ಶಿಕ್ಷೆಯ ರೀತಿ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತಿರುತ್ತದೆ. ಆಗ ವ್ಯಕ್ತಿಯ ಮುಕ್ತಿಗಾಗಿ ಹೆಚ್ಚು ಹೆಚ್ಚು ನಿಯಂತ್ರಣವನ್ನು ಈ ವ್ಯವಸ್ಥೆ ಹೊಂದುತ್ತಾ ಹೋಗುತ್ತದೆ

ಮೂರನೆಯದಾಗಿ, ಕ್ರಿಶ್ಚಿಯನ್ ಸಮಾಜದಲ್ಲಿ ಪ್ಯಾಸ್ಟರನು ವ್ಯಕ್ತಿಗಳನ್ನು ವಿಧೇಯತೆಯಿಂದಿರಲು ಸಂಪೂರ್ಣ ನಿಯಂತ್ರಣವನ್ನು ಹೊಂದಬಹುದು . ಇದು ಇನ್ನೂ ಮುಖ್ಯವಾದ ಅಧಿಕಾರ. ಗ್ಯಾಲೋ ರೋಮನ್ ಸಮಾಜವು ಈ ನಿಯಮಗಳನ್ನು ತಿಳಿದಿತ್ತು . ಆದರೆ ಪ್ರಾಚೀನ ಗ್ರೀಕ್ ಅಥವಾ ರೋಮನ್ ಸಮಾಜವು ಸಂಪೂರ್ಣವಾದ ನಿಯಂತ್ರಣವನ್ನು ಜನರ ಮೇಲೆ ವಿಧೇಯತೆಯನ್ನು ತರುವ ಅಧಿಕಾರವನ್ನು ಹೊಂದಿರಲಿಲ್ಲ.

ಆದರೆ ಈ ಅಧಿಕಾರವನ್ನು ಕ್ರಿಶ್ಚಿಯನ್ ಸಮಾಜ ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿತು. ಪ್ಯಾಸ್ಟರನು ವ್ಯಕ್ತಿಗಳ ಮೇಲೆ ತನ್ನ ಸಂಪೂರ್ಣ ಅಧಿಕಾರವನ್ನು ಚಲಾಯಿಸಬಹುದು. ಪ್ಯಾಸ್ಟರನ ಆಳ್ವಿಕೆಯ ಅಧಿಕಾರ ಎಷ್ಟಿರುತ್ತದೆಂದರೆ ಅವನು ಹೇಳಿದ್ದೆ ಆಜ್ಞೆ ಮಾಡಿದ್ದೆ ನಿಯಮ. ಕ್ರಿಶ್ಚಿಯನ್ ಧರ್ಮದಲ್ಲಿ ಯಾವ ಜೀವನದಲ್ಲಿ ಫಲಿತಾಂಶದ ನಿರೀಕ್ಷೆಗಾಗಿ ಕಾನೂನನ್ನು ಅನುಸರಿಸುವುದಿಲ್ಲ ಅಥವಾ ಯಾವ ಸಾಮಾಜಿಕ ಅಭಾಸಕ್ಕೂ ಆತ ಗೌರವಕ್ಕೂ ಪಾತ್ರನಾಗಲು ಸಾಧ್ಯವಿಲ್ಲ, ಈ ಧರ್ಮದಲ್ಲಿ ನಿಜವಾದ ಗೌರವವೆಂದರೆ ವಿಧೇಯವಾಗಿ ಬಾಳುವುದು, ವಿಧೇಯತೆಯೇ ಅವನ ಮೂಲ ನಿಯಮ. ಪ್ಯಾಸ್ಟರನಿಗೆ ಮಾತ್ರ ವಿಧೇಯನಾಗಿರಬೇಕು . ವಿಧೇಯತೆಯನ್ನು ಅಂತರ್ಗತ ಮಾಡಿಕೊಂಡಿರಬೇಕು. ನನಗೆ ಆಜ್ಞೆಯನ್ನು ಕೊಡುವವನಿಗೆ ನಾನು ವಿಧೇಯಕನಾಗಿರುತ್ತಾನೆ. ಅದೇ ದೇವರಿಗೆ ವಿಧೇಯಕನಾಗಿರುವುದು ಎಂದು ನಂಬಿರುತ್ತೇನೆ. ಪ್ಯಾಸ್ಟರನ್ನ ಇಚ್ಛೆ – ದೇವರ ಇಚ್ಚೆ.

ಕೊನೆಯದಾಗಿ ಮೊದಲ ಸಮಸ್ಯೆಗೆ ಪುನಃ ಬರಬೇಕಾಗುತ್ತದೆ. ಅದೆಂದರೆ ಲೈಂಗಿಕಾತ್ಮಕತೆಯ ಚರಿತ್ರೆ ಪ್ಯಾಸ್ಟರನ್ನು ಸತ್ಯ ಮತ್ತು ಸತ್ಯವನ್ನು ಸೃಷ್ಟಿಸುವ ಸಂಪೂರ್ಣ ತಂತ್ರ ಮತ್ತು ವಿಧಾನವನ್ನು ತನ್ನ ಜೊತೆ ತಂದ, ಕ್ರಿಶ್ಚಿಯನ್ ಪ್ಯಾ ಸ್ಟರನ್ನು, ವಿವೇಕವನ್ನು ಬೋಧಿಸುವವನಾಗಿರುತ್ತಾನೆ. ಸತ್ಯವನ್ನು ಹೇಳುವ ಗುರುವಾಗಿರುತ್ತಾನೆ. ಪುರಾತನ ತತ್ವಜ್ಞಾನಿಯಾಗಿರುತ್ತಾನೆ. ಆದನ್ನು ಬೋಧಿಸುತ್ತಾನೆ.ಅವನು ಸತ್ಯವನ್ನು , ಬರವಣಿಗೆಯನ್ನು ನೀತಿಯನ್ನು ಭೋದಿಸುತ್ತಾನೆ . ಹೀಗೆ ಆತ ಒಬ್ಬ ಗುರು . ಆದರೆ ಕ್ರಿಶ್ಚಿಯನ್ ಪ್ಯಾಸ್ಟರನು ಇನ್ನೊಂದು ಅರ್ಥದಲ್ಲೂ ಗುರು. ಅವನು ತನ್ನ ಜವಾಬ್ದಾರಿಯನ್ನು ತಿಳಿದಿರಬೇಕಾಗುತ್ತದೆ. ಅವನ ಕುರಿಗಳು ಏನೇನು ಮಾಡುತ್ತವೆ. ಅವನ ಮಂದೆ ಯಾವ ಕ್ಷಣದಲ್ಲಿ ಏನೇನು ಮಾಡುತ್ತಿರುತ್ತದೆ ಎಂದು ತಿಳಿದಿರಬೇಕು, ಪ್ರತಿಯೊಬ್ಬ ವ್ಯಕ್ತಿಯ ಆತ್ಮದೊಳಗೆ, ಹೃದಯದಲ್ಲಿ ಇರುವ ಗುಟ್ಟಗಳನ್ನಿಲ್ಲಿ ತಿಳಿದಿರಬೇಕು. ಕ್ರಿಶ್ಚಿಯನ್ ಧರ್ಮದ ಪ್ಯಾಸ್ಟರ್ ತನ್ನ ಧರ್ಮವನ್ನು ಪಾಲಿಸಲು ವ್ಯಕ್ತಿಗಳ ಅಂತರಾತ್ಮವನ್ನು ತಿಳಿದಿರಬೇಕು.

ವ್ಯಕ್ತಿಯ ಅಂತರಾತ್ಮದ ಜ್ಞಾನ ಎಂದರೇನು? ಅದೇನೆಂದರೆ ಪ್ಯಾಸ್ಟರನು ವ್ಯಕ್ತಿಯ ಮನಸ್ಸನ್ನು ವಿಶ್ಲೇಷಣೆ ಮಾಡುವ ವಿಧಾನ, ಹೊಳಹು , ಏನು ನಡೆಯುತ್ತದೆ ಎಂಬುದರ ಪರಿವೆ ಇರಬೇಕು. ಕ್ರಿಶ್ಚಿಯನ್ನಾದವನು ತನ್ನ ಆತ್ಮದಲ್ಲಿ ನಡೆಯುತ್ತಿರುವ ಗುತ್ತಿನ ವ್ಯಾಪಾರವನ್ನು ತಿಳಿಸಬೇಕು. ಅಂದರೆ ಯಾವಾಗಲೂ ತಪ್ಪೊಪ್ಪಿಗೆಯನು ಮಾಡಿಕೊಳ್ಳಬೇಕು. ಈ ನಿರಂತರ ತಪ್ಪೊಪ್ಪಿಗೆ ಸತ್ಯವನ್ನು ಹೊರಗೆಡುಹುತ್ತದೆ. ಈ ತಪ್ಪೊಪ್ಪಿಗೆ, ಸತ್ಯಶೋಧ ಇವೆಲ್ಲ ಮನಸ್ಸಿನ , ಆತ್ಮದ ಮೂಲಕ ನಡೆಯುತ್ತಿರುತ್ತದೆ. ಈ ಸತ್ಯ ಕುರುಬನಿಗೂ , ಮಂದೆಗೂ ನಡುವೆ ಬಾಂಧ್ಯವ್ಯವನ್ನು ಬೆಸೆಯುತ್ತದೆ.

ಈಗ ನಾವು ಲೈಂಗಿಕಾತ್ಮಕತೆಯ ಸಮಸ್ಯೆಯ ಕಡೆಗೆ ಬರಬಹುದು . ಕ್ರಿಶ್ಚಿಯನ್ ಧರ್ಮಕ್ಕೂ ಇದಕ್ಕೂ ಮೂರನೇ ಶತಮಾನದಿಂದಲೂ ಇರುವ ಸಂಬಂಧವನ್ನು ನೋಡಬಹುದು. ಆಗಾಗಲೇ ರೋಮನ್ ಸಮಾಜವು ತನ್ನ ನೈತಿಕತೆಗೆ ಸಂಬಂಧಿಸಿದಂತೆ ಏಕಪತ್ನಿತ್ವ, ಲೈಂಗಿಕತೆ, ಸಂತಾನ ಇದರ ಬಗ್ಗೆ ನಾನು ಆಗಲೇ ಹೇಳಿದಂತೆ ಒಪ್ಪಿಕೊಂಡಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ ಈ ಮಾದರಿ ತನ್ನ ಮುಂದೆ ಇತ್ತು ಇದರ ಹಿಂದೆ ಇದ್ದದ್ದು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಪ್ರಚಲಿತವಿದ್ದ ಸನ್ಯಾಸಿ ಜೀವನದ ಮಾದರಿ. ಪೂರ್ವ ಮೆಡಿಟರೇನಿಯನ್ ಭಾಗದಲ್ಲಿದ್ದ ಕ್ರಿಶ್ಚಿಯನ್ ಸನ್ಯಾಸಿಗಳು ಈ ಹಿಂದೂ ಮತ್ತು ಬೌದ್ದ ಸನ್ಯಾಸಿ ಜೀವನ ಕ್ರಮವನ್ನು ಅಭಾಸ ಮಾಡಿಕೊಂಡರು. ನಾಗರಿಕ ಸಮಾಜವು ಒಪ್ಪಿಕೊಂಡಿದ್ದ ಕೆಲವು ನೈತಿಕ ನೇಮಗಳನ್ನು ಸನ್ಯಾಸತ್ವಗಳನ್ನು ಸ್ವೀಕರಿಸಿದರು. ಆದರೆ ಕ್ರಿಶ್ಚಿಯನ್ ಧರ್ಮ ಡೋಲಾಯಮಾನ ಸ್ಥಿತಿಯಲ್ಲಿತ್ತು, ಒಂದು ಕಡೆ ಬೌದ್ಧ ಧರ್ಮದ ಸನ್ಯಾಸದ ಮಾದರಿಯನ್ನು ಕರಗತ ಮಾಡಿಕೊಳ್ಳಲು ಯತ್ನಿಸಿತು. ಮತ್ತೊಂದು ಕಡೆ ರೋಮನ್ ಸಾಮ್ರಾಜ್ಯದ ನಾಗರಿಕ ಸಮಾಜದ ಮಾದರಿಯನ್ನೂ ಇಟ್ಟುಕೊಂಡಿತ್ತು.

ಇದರ ಫಲಿತಾಂಶವೇನಾಯಿತೆಂದರೆ ಸನ್ಯಾಸದಲ್ಲಿ ಈ ಭೌತಿಕ ಪ್ರಪಂಚದ ತಿರಸ್ಕಾರ ಮತ್ತು ನಾಗರೀಕ ಸಮಾಜದ ಆಸೆ ಇವೆರಡರ ಮಧ್ಯೆ ಕ್ರಿಶ್ಚಿಯನ್ ಧರ್ವು ಹೊಯ್ದಾಡತೊಡಗಿತು. ಇದರ ಮಧ್ಯೆ ವ್ಯಕ್ತಿಗಳನ್ನು ಅವರ ಲೈಂಗಿಕಾತ್ಮಕತೆಯ ಮೇಲೆ ನಿಯಂತ್ರಣ ಹೇರುವುದರ ಮೂಲಕ ತನ್ನ ಅಧಿಕಾರವನ್ನು ಸ್ಥಾಪಿಸಿತು. ವ್ಯಕ್ತಿಗಳ ಲೈಂಗಿಕಾತ್ಯಕತೆಯ ಪ್ರಚೋದನೆ ಮತ್ತು ಅದರೊಳಗೆ ಬೀಳುವ ಆಕಾಂಕ್ಷೆ ಇದರ ಮೇಲೆ ಆಟವಾಡಿತು, ಮತ್ತು ದೇಹದ ಕಾಮನೆಯಿಂದ ಉಂಟಾಗುವ ಎಲ್ಲ ಅಪೇಕ್ಷೆಗಳನ್ನು ತಿರಸ್ಕರಿಸುವುದಾಗಿತ್ತು ಈ ದೇಹದ ಸುಖ, ಅದರ ಲೈಂಗಿಕ ಆಕಾಂಕ್ಷೆ, ಸಮಾಜದಲ್ಲಿ ಅದರ ಕ್ರಿಯೆಯ ಅವಶ್ಯಕತೆ, ಸಂಸಾರ , ವಂಶಾಭಿವೃದ್ಧಿ ಇವುಗಳನ್ನು ಪ್ರಶ್ನಿಸಬೇಕಾಗಿತ್ತು. ಅಂದರೆ ಈ ದೇಹ ಸಂಪೂರ್ಣವಾಗಿ ಕೆಟ್ಟದ್ದು ಎಂದೂ ಹೇಳಬರುತ್ತಿರಲಿಲ್ಲ, ಆದರೆ ಲೈಂಗಿಕತೆಯನ್ನು ನಿಯಂತ್ರಿಸಬೇಕಾಗಿತ್ತು. ಅದಕ್ಕಾಗಿ ಒಂದು ಒಪ್ಪಿತವಾದ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.

ಕ್ರಿಶ್ಚಿಯನ್ ಧರ್ಮವು ಈ ರೀತಿಯಲ್ಲಿ ಸನ್ಯಾಸ ಮತ್ತು ನಾಗರಿಕ ಸಮಾಜದ ನಡುವಿನ ನೈತಿಕತೆಯನ್ನು ಸ್ಥಾಪಿಸಿಕೊಳ್ಳಬೇಕಾಯಿತು.

(ಮಿಷಲ್ ಫುಕೊ (೧೯೨೬-೧೯೭೪): ಈತ ಮುಖ್ಯವಾಗಿ ಲೈಂಗಿಕಾತ್ಮಕತೆ ಮತ್ತು ಸ್ತ್ರೀ ವಿಮೋಚನಾ ಚಳುವಳಿಯ ಚಿಂತನಾಕ್ರಮದ ಮುಂಚೂಣಿಯಲ್ಲಿದ್ದ ವಿದ್ಯಾಮ್ಸ. ಲೈಂಗಿಕಾತ್ಮಕತೆಯ ಬಗ್ಗೆ ಆರು ಸಂಪುಟಗಳಲ್ಲಿ ಬರೆಯ ಹೊರಟಿದ್ದ ಫುಕೋ ಮೂರು ಸಂಪುಟಗಳನ್ನು ಮಾತ್ರ ಪೂರ್ತಿಗೊಳಿಸಿದ. ಮೇಲಿನ ಚಿಟನೆಗಳು ಇವನ sexuality and knowledge ಗ್ರಂಥವನ್ನು ಆಧರಿಸಿವೆ . ಈತ ೨೦ನೇ ಶತಮಾನದ ವಿಶ್ವದ ಐದು ಪ್ರಮುಖ ವಿದ್ವಾಂಸರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದ ಫ್ರಾನ್ಸ್ ದೇಶದ ಮಹಾನ್ ಚಿಂತಕ )

ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ

ಲಂಕೇಶ್ – ಮಾಧ್ಯಮ ಮತ್ತು ಅಭಿವ್ಯಕ್ತಿ

ಪುಸ್ತಕ ವಿಮರ್ಶೆ

ವ್ಯಕ್ತಿ ಮೂಲತಃ ಕ್ರಿಯಾತ್ಮಕನಾದ ಅವನ ಅಭಿವ್ಯಕ್ತಿಯೂ ಸಹ radical ಆಗಿರುತ್ತದೆ. ಇದರ ಮೂಲಕ ತನ್ನ ಸಮಾಜಕ್ಕೆ ಸ್ಪಂದಿಸುತ್ತಾನೆ. ಈ ರೀತಿ ಸ್ಪಂದಿಸುವುದಕ್ಕಾಗಿ ಒಂದು ಮಾಧ್ಯಮವನ್ನು ಕಂಡುಕೊಳ್ಳುತ್ತಾನೆ.ಸಮಾಜದ ಸಂಕೀರ್ಣತೆಯೊಡನೆ ಬೆರೆತು ಸಂಕೀರ್ಣ ಅನುಭವವನ್ನು ಪಡೆಯುತ್ತಾನೆ.

l2ಸಮಕಾಲೀನ ಸಮಸ್ಯೆಯನ್ನು ಅಭಿವ್ಯಕ್ತಿಸುವಾಗ ತಕ್ಷಣ ಯಾವ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆಗ ಆತ ಬುದ್ದಿವಂತನಾಗಿದ್ದರೆ suggestive ಆಗುತ್ತಾನೆ. ಈ ರೀತಿ suggestive ಆಗಿ ಸಮಾಜಕ್ಕೆ ತನ್ನ ಮಾಧ್ಯಮದಿಂದ ಜನರನ್ನು ಯೋಚನೆಗೆ ತೊಡಗಿಸುತ್ತಾನೆ. ಈ ರೀತಿ ಲಂಕೇಶರು ತಮ್ಮ ಮಾಧ್ಯಮಗಳನ್ನು ಬದಲಾಯಿಸುತ್ತಾ ಬಂದು ಈಗ ಒಂದು ವಿಶಾಲ canvas ಉಳ್ಳ ಮಾಧ್ಯಮವನ್ನು ತಲುಪಿದ್ದಾರೆ. ಸಾಹಿತ್ಯ ಕೇವಲ ‘ವಿದ್ಯಾವಂತ’ ರಿಗೆ ಮಾತ್ರ ತಲುಪುವ ಮಾಧ್ಯಮ. ಆದರೆ ಸಿನಿಮಾ ಶ್ರಾವಣ – ದೃಶ್ಯಗಳಿಂದ ಕೂಡಿದ್ದು ‘ವಿದ್ಯಾವಂತ’ ಅವಿದ್ಯಾವಂತರವರೆಗೂ ತಲುಪುವ ಮಾಧ್ಯಮ. ಈ ಮಾಧ್ಯಮವನ್ನು ಬಳಸಿಕೊಂಡಾಗ ಸಿನಿಮಾ ಲಿಪಿಕಾರ ಆತನ ಅಭಿವ್ಯಕ್ತಿಗೆ ಹೇಗೆ ಹೊಂದಿಕೊಳ್ಳುತ್ತಾನೆ ಎಂಬುದು ಮುಖ್ಯ , ಇದರ ಆಧಾರದ ಮೇಲೆ ಅವನ ಸೋಲು ಗೆಲುವು ನಿಂತಿರುವುದು.

ಶ್ರವಣ ದೃಶ್ಯ ಮಾಧ್ಯಮದ ಮತ್ತೊಂದು ಅಂಶ ಮನಸ್ಸಿನಲ್ಲಿರುವುದನ್ನು ತೆರೆಯ ಮೇಲೆ ಹೇಗೆ ಮೂಡಿಸುವುದು(visualization) ಎಂಬುದು. ಈ ಶಕ್ತಿ ಲಂಕೇಶರಿಗೆ ಮೂಲತಹವಾಗಿ ತಿಳಿದುಬಂದಿದೆ ಎಂಬುದನ್ನು ಅವರ ‘ಪಲ್ಲವಿ’ ಮತ್ತು ‘ಅನುರೂಪ’ಗಳನ್ನೂ ನೋಡಿದಾಗ ತಿಳಿಯುತ್ತದೆ. ಉದಾಹರಣೆಗೆ ‘ಅನುರೂಪ’ದ ಪ್ರಿನ್ಸಿಪಾಲರು ಕಾಲೇಜಿನಲ್ಲಿ ಬಹಳ ಶಿಸ್ತು (strict) ಎನ್ನುವುದನ್ನು ಸ್ಥಾಪಿಸಲು ಎಷ್ಟು ಸೂಕ್ಷ್ಮ ವಿವರಗಳನ್ನು ಇದ ಸುತ್ತ ನೇಯ್ದಿದ್ದಾರೆ  ! ಉಪಾಧ್ಯಾಯರು ಪಾಠ ಮಾಡುವುದನ್ನು ಪ್ರಿನ್ಸಿಪಾಲರು ಕದ್ದು ಪರೀಕ್ಷಿಸುವುದು, ಹುಡುಗರು ಕಾಲೇಜು ಆವರಣದಲ್ಲಿ ಉಚ್ಚೆ ಹುಯ್ದದ್ದಕ್ಕೆ , ಕಾಲೇಜಿಗೆ ಹೊತ್ತಾಗಿ ಬಂದಿದ್ದಕ್ಕೆ, ಹುಡುಗಿಯೊಡನೆ ಓಡಾಡುತ್ತಾನೆ ಎನ್ನುವುದಕ್ಕೆಲ್ಲ fine ಹಾಕುವುದು. ಎಲ್ಲರನ್ನೂ ಕುರಿಯಂತೆ ಬೆಳೆಸುವುದನ್ನು ಬಹಳ ಚೆನ್ನಾಗಿ ಕಟ್ಟಿದ್ದಾರೆ. ಇದನ್ನು ಬರೀ ಮಾತಿನಲ್ಲಿ ಹೇಳಿಸಬಿಡಬಹುದಾಗಿತ್ತು. ಆದರೆ ಮೇಲೆ ಹೇಳಿದ ವಿಷಯವನ್ನು ಸ್ಥಾಪಿಸಲು ಲಂಕೇಶರು ಪಟ್ಟಿರುವ ಶ್ರಮ ಅಗಾಧವಾದದ್ದು ಮತ್ತು ಪರಿಣಾಮಕಾರಿಯಾದದ್ದು . ಇದನ್ನು ಸಾಧಿಸುವುದು ಕಷ್ಟವಾದುದು. ನೂರು ಪದಗಳಲ್ಲಿ ಹೇಳುವುದನ್ನು ಪರಿಣಾಮಕಾರಿಯಾಗಿ ಒಂದೇ ದೃಶ್ಯದಲ್ಲಿ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಬಹುದು ಎಂದು ಹೇಳಿಕೊಳ್ಳುವ ಮಾಧ್ಯಮದಲ್ಲಿ ಮಾತಿನಲ್ಲಿ ನಿಸ್ಸತ್ವವಾಗಿ ಹೇಳುವುದನ್ನು ಅದೇ ಸಿನಿಮಾ ಮಾಧ್ಯಮದಲ್ಲಿ ಸ್ಫಳಕಾರಿಯಾಗಿ ಸಾಧಿಸುವುದೂ ಎಷ್ಟು ಕಷ್ಟ ಎಂಬುದು ತಿಳಿಯುತ್ತದೆ. ಇದೇ ಲಂಕೇಶರ ಮಹತ್ವಪೂರ್ಣವಾದ (visualiztion), ಈ ರೀತಿಯ visualization ಇಲ್ಲದಿದ್ದರೆ ‘ಕಾಲೇಜುರಂಗ’ದಂತಹ ಸೂಕ್ಷ್ಮವಸ್ತು (suble theme) ಹೇಗೆ ನಿಸಿಮಾ ಮಾಧ್ಯಮದಲ್ಲಿ ನಿರ್ಜೀವವಾಗುತ್ತದೆ ಎಂಬುದನ್ನು ಕಾಣಬಹುದು.

ಸಿನಿಮಾಕ್ಕಾಗಿಯೇ ಬರೆದ ಕಥೆಗಳು ಯಾವುವು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಸಂಸ್ಕಾರ , ವಂಶವೃಕ್ಷ , ಕಾಡು ಮುಂತಾದ ಕಾದಂಬರಿಗಳ ಸಿನೆಮಾಗಳಾದಾಗ ಹೊರಬಿದ್ದ ಪ್ರತಿಕ್ರಿಯೆಗಳು, ಆದರೆ ಲಂಕೇಶರು ಸಿನೆಮಾಕ್ಕಾಗಿಯೇ ಕಥೆಯನ್ನು ಬರೆದು ಅದರಲ್ಲೇ ಬಹುಪಾಲು ಯಶಸ್ಸು ಗಳಿಸಿರುವ್ದು ಶ್ಲಾಘನೀಯ ಮತ್ತು ಆವರೇ ಹೇಳಿಕೊಂಡಿರುವಂತೆ ಅವರು ಈಗ ಸಿನೆಮಾ ಮಾಧ್ಯಮದ ಮೂಲಕ ಬರೆಯುತ್ತಿರುವುದು ಅವರ ಅಭಿವ್ಯಕ್ತಿಯ ವಿಕಾಸವನ್ನು ಸೂಚಿಸುತ್ತದೆ. ಸತ್ತ ಹಾವುಗಳನ್ನು ಕಲಾತ್ಮಕವಾಗಿ ಹೊಡೆಯಲು ಪ್ರಯತ್ನಪಡುವ ‘ಪ್ರಾಯೋಗಿಕ’ ಎಂದು ಹೇಳಿಕೊಂಡು ಕುಣಿಯುವ ಜನರಿಗೆ ‘ಅನುರೂಪ’ ಒಂದು ಒಳ್ಳೆಯ ಸವಾಲನ್ನು ಎಸೆಯುತ್ತದೆ. ಮುಂದೆ ಈ ಜನರು ಇದಕ್ಕೆ ಯಾವ ರೀತಿಯ ‘ಸಿನಿಮೀಯಾ’ಪ್ರತಿಕ್ರಿಯೆಯನ್ನು ಕೊಡುತ್ತಾರೋ ಕಾದು ನೋಡಬೇಕಾಗುತ್ತದೆ.

ಲಂಕೇಶರು ‘ಪಲ್ಲವಿ’ಯಾ ನಾಯಕಿ ಹತ್ತಿರ ‘ಈ ಕಥೆ ನನ್ನದು ಆಗಿರಬಹುದು , ನಿಮ್ಮದು ಆಗಿರಬಹುದು (ನಿಮ್ಮ ಜೀವನದಲ್ಲೂ ನೀವು ಯಾರನ್ನಾದರೂ ಪ್ರೀತಿಸಿರಬಹುದು . ಆದರೆ ನಾನೇನೂ ಹೇಮಮಾಲಿನಿ ಅಲ್ಲ, ಮಾಲ ಸಿಂಹ ಅಲ್ಲ, ನಾನು ಪ್ರೀತಿಸುವವನು ಧರ್ಮೇಂದ್ರ ಅಲ, ರಾಜೇಶ್ ಖನ್ನ ಅಲ್ಲ, ಆದರೂ ನಾವಿಬ್ಬರೂ ಪ್ರೀತಿಸುವುದು ತಪ್ಪೇ .” )ಎಂದು ಹೇಳಿಸಿ ಪ್ರೇಕ್ಷಕರನ್ನು ಒಳಗು(involve) ಮಾಡುತ್ತಾರೆ. ಆದರೆ ಅಷ್ಟೇ ಸುಲಭವಾಗಿ ಸಿನೆಮಾದ ಅಂತರ ಧ್ವನಿ ಬಹುತೇಕ ನೋಡುಗರನ್ನು ಒಳಗು ಮಾಡಿಸುವುದಿಲ್ಲ. ಈ ರೀತಿ ಮಾಡಿಸದೆ thesis ನಲ್ಲೆ anti-thesis ತಂದಿದ್ದಾರೆ. ಇದು ‘ಪಲ್ಲವಿ’ಯಾ ಪರಿಮಿತಿ ಕೂಡ. ಆದರೆ ‘ಅನುರೂಪ’ದಲ್ಲಿ ಮಾವೋ ಮೂಲಕ ಮಾರ್ಕ್ಸಿಸಂ ಬಗ್ಗೆ ಹೇಳಿಸಿ ಅದು ಈ ನೆಲದಲ್ಲಿ ಸಾದ್ಯವಿಲ್ಲ ಎಂದು ಮೊದಲಲ್ಲಿ ವಾದಿಸಿ ಕೊನೆಗೆ ನಾಯಕ ಒಬ್ಬಂಟಿಯಾಗಿ ಹೋರಾಡಲಾರದ ಮುಳುಗುತ್ತಿರುವ ಸೂರ್ಯದೊಡನೆ ಮುಳುಗಿ ಹೋಗುತ್ತಿರುವುದನ್ನು ತೋರಿಸಿದಾಗ ಇದೆ anti-thesis ಸ್ಥಾಪಿತವಾಗಿದೆ ಎಂದೂ ಅಥವಾ ನಮ್ಮ ಸಮಾಜ ಇನ್ನೂ ಈ ಯಾವ ಪ್ರತಿಕ್ರಿಯೆಗೂ ಸ್ಪಂದಿಸಲು ಹದವಾಗಿಲ್ಲವೆಂದು ಮೇಲು ನೋಟಕ್ಕೆ ಅನ್ನಿಸಿದರು ಅದು ಅ ರೀತಿ ಆಗುವುದಿಲ್ಲ. ಏಕೆಂದರೆ ಈಗಿನ ನಮ್ಮ ಸಮಾಜದಲ್ಲಿ ಶಂಕರನಂಥ ಯುವಕರು ಪಡುತ್ತಿರುವ ಪರಿಭ್ರಮಣೆಯೇ ಒಂದು ಸೀಮಿತ ಆಗಿರುವಾಗ ಮತ್ತು ಶಂಕರನೇ ತಯಾರು ಮಾಡಿದ ವಿದ್ಯಾರ್ಥಿಗಳು ಅವನ ಮೇಲೆ ಎರಗಿಬಿದ್ದಾಗ ತನ್ನತಹ ಅಂದರೆ ಸಮಾಜಕ್ಕೆ ಪ್ರತಿಕ್ರಿಯೆ ತೋರಿಸುವ ಅನೇಕ ಯುವಕರನ್ನು ತಯಾರು ಮಾಡಿದ್ದಾನಲ್ಲ ಎನ್ನಿಸುತ್ತದೆ. ಇಲ್ಲಿ ಶಂಕರನ ಸೋಲು ಲಂಕೇಶರ ಸೋಲು ಲಂಕೇಶರ ಜಯ ಎಂಬುದನ್ನು ಗಮನಿಸಬೇಕು. ಈ ದೃಷ್ಟಿಯಿಂದ ಲಂಕೇಶರು ಅನುರೂಪದಲ್ಲಿ ಪಲ್ಲವಿಗಿಂತ ಒಂದು ಹೆಜ್ಜೆ ಮುಂದೆ ಬಂದಿದ್ದಾರೆ ಎನ್ನಿಸುತ್ತದೆ.

ಬರೇ ಮಾತುಗಳಿಗೆ ಒತ್ತುಕೊಟ್ಟು ನಟರ ಬಾಯಿಯಲ್ಲಿ ಮಾತುಗಳನ್ನೇ ತುಂಬಿ ಹೇಳಬೇಕಾದ ವಿಷಯವನ್ನು ನಿಸ್ಸತ್ವಗೊಳಿಸುವ ನಿಜ ಜೀವನದಿಂದ ಬೇರೆಯೇ l1ಆದ ಜಗತ್ತನ್ನು ಸೃಷ್ಟಿಸುವ ಕಮರ್ಷಿಯಲ್ ಚಿತ್ರಗಳು ಅದರಿಂದ ಹೊರಬಿದ್ದು, ಮೂಕರೇ ಏನೋ ಎನ್ನಿಸುವಂತೆ ಮಾಡಿ ಕಲಾತ್ಮಕ ಸಿನಿಮಾಗಳನ್ನು ಸೃಷ್ಟಿಸ ಹೊರಟವರಿಬ್ಬರಿಗೂ ಲಂಕೇಶ್ ಅನುರೂಪದಲ್ಲಿ ಕೈಕೊಟ್ಟು ಮೊನಚಾದ ಮಾತುಗಳಿಂದಲೂ ಕಲಾತ್ಮಕ ಸಿನೆಮಾದವರ ಕಲಾತ್ಮಕ ಅಭಿವ್ಯಕ್ತಿಯನ್ನೂ (aristic expression) ಉಳಿಸಿಕೊಂಡು ಬಂದಿರುವದು ಕಾಣದ ಸಿನೆಮಾದ ವಿಪರ್ಯಾಸ(extremities)ದ ಕಂದರವನ್ನು ಬಂಧಿಸುವ ಸೇತುವೆಯಾಗಿದೆ. ಅಂದ ಮಾತ್ರಕ್ಕೆ ಈ ರೀತಿ compromise ಮಾಡಿಕೊಂಡು ತಯಾರುಮಾಡಿದ ಸಿನೆಮಾಗಳಿಲ್ಲವೆಂದಲ್ಲ. ಉದಾಹರಣೆಗೆ ಸಿದ್ದಲಿಂಗಯ್ಯನವರ ‘ಭೂತಯ್ಯನ ಮಗ ಅಯ್ಯು’ ಇದು ಎಲ್ಲಾ ವರ್ಗಗಳಿಗೂ ಪ್ರಿಯವಾಯಿತು. ಆದರೆ ಈ ರೀತಿಯ compromisationನ ಭರದಲ್ಲಿ ಮೂಲಭೂತವಾಗಿ ಏನು ಹೇಳುಬೇಕೆಂದಿರುವರೋ ಅದನ್ನು ಮರೆತಿರುವುದು. ಈ ದೃಷ್ಟಿಯಿಂದ ನೋಡಿದಾಗಲೂ ಅನುರೂಪ ಅಸಫಲತೆಯನ್ನು ಕಾಣದೆ ಸಫಲತೆಯನ್ನು ಕಂಡಿರುವುದು . ಆದರೆ ಇಲ್ಲಿಯೂ ಮತ್ತೊಂದು ಪ್ರಶ್ನೆ ಎದ್ದು ಕಕಾಣುತ್ತದೆ ಅದೆಂದರೆ ಅನುರೂಪದಂತಹ compromise ಚಿತ್ರವೂ ‘ಕಲಾತ್ಮಕ’ ಚಿತ್ರದಂತೆಯೇ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗದೆ ಇರುವುದು. ಏಕೆಂದರೆ ಮೊದಲೇ ತಿಳಿಸಿರುವಂತೆ ಸಿನೆಮಾ ಒಂದು ಶಕ್ತಿಯುತ ಮಾಧ್ಯಮ. ಅದು ಹೆಚ್ಚು ಜನರನ್ನು ತಲುಪುವಂತಹುದು . ಇದು ಶೈಕ್ಷಿಣಕವಾಗಿ (educative) ಹೆಚ್ಚು ಜನರನ್ನು ಎಚ್ಚರಿಸಬೇಕು. ಅಂದರೆ ಯಾವ ವರ್ಗವನ್ನು ಎಚ್ಚರಿಸಬೇಕೋ ಆ ವರ್ಗಕ್ಕೆ ಚಿತ್ರ ಎಷ್ತರಮಟ್ಟಿಗೆ ಹತ್ತಿರವಾಗಿದೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ಅತೀ ಬುದ್ದಿವಂತಿಕೆಯನ್ನು ಬಿಟ್ಟು ಇನ್ನು ಸ್ವಲ್ಪ ಸಡಿಲವಾಗಬೇಕಾಗುತ್ತದೆ.

ಹಾಗೆಂದಾಕ್ಷಣ  ಈಗಿರುವ ಯಾವ ಕಲಾತ್ಮಕತೆಯನ್ನೂ ತ್ಯಾಗಮಾಡದೆ  ಜನಗಳಿಗೆ ತಲುಪುವ ಹಾಗೆ (communicate) ಚಿತ್ರವನ್ನು ತರುವ ನಿಜವಾದ ಪ್ರಯತ್ನ ನಡೆಸಿದರೆ ಲಂಕೇಶರು ತುಳಿದಿರುವ ಹಾದಿ ಸುಗುಮವಾಗುತ್ತದೆ. ಈ ರೀತಿಯಿಂದೊಂದು ರೀತಿಯ ಬುದ್ದಿ ಜೀವಿಗಳೇ ಕೇಂದ್ರೀಕೃತ (centralize) ಆಗಿರುವ ಚಿತ್ರಗಳು ವಿಕೇಂದ್ರಕರಣವಾಗಿ ಹೆಚ್ಚು ಜನರನ್ನು ಆಲೋಚಿಸಲು ಹಚ್ಚಬೇಕು. ಆದರೆ ಇದನ್ನು ಹೇಗೆ ಸಾಧಿಸಬೇಕೆಂಬುದನ್ನು ಈಗ ಸಧ್ಯಕ್ಕೆ ಹೇಳುವುದು ಕಷ್ಟವಾಗುತ್ತದೆ. ಆದರೆ ಲಂಕೇಶ್ ಅವರು ಈ ರೀತಿಯ ತೊಳಲಾಟದಿಂದ (conflict) ಅನುರೂಪದಲ್ಲಿ ಒಂದು ಸುತ್ತು ಬಿಡಿಸಿಕೊಂಡು ಬಂದಿರುವುದೇ ದೊಡ್ಡ ಸಾಹಸವಾಗಿದೆ ಮತ್ತು ಸಮಾಧಾನ ಕೊಡುವಂಥದ್ದು , ಭರವಸೆಯನ್ನು ಮೂಡಿಸುವಂಥದ್ದು ಆಗಿದೆ.

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ತಿಂಗಳು –ನವೆಂಬರ್ ೨೦೦೯

21ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ ಈಚಿನದೆಂದು ಕಂಡು ಬರುತ್ತದೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಖಂಡಗಳಲ್ಲಿ ಬದುಕಿರುವ ಅನೇಕ ಸಮಾಜದಲ್ಲಿ ಇನ್ನು ತಮ್ಮ ಭಾಷೆಯನ್ನೂ ಬರವಣಿಗೆಗೆ ಅಳವಡಿಸಿಕೊಂಡಿಲ್ಲ . ಅಂದರೆ ನಮ್ಮ ಇತಿಹಾಸ ರಚನೆ ಕೇವಲ ಪಾರ್ಶ್ವಿಕವಾದದ್ದು.

ಮೇಲೆ ಹೇಳಿದ ಎಲ್ಲಾ ರೀತಿಯ ಚರಿತ್ರೆಗಳನ್ನೂ ಬದಿಗಿರಿಸಿ ಇಡೀ ನಮ್ಮ ಜಗತ್ತನ್ನು ಒಂದು ಘಾತಕವೆಂದು ಪರಿಗಣಿಸಿ ವಿವಿಧ ಜ್ಞಾನ ಶಾಖೆಗಳಾದ ಪುರಾತತ್ವಶಾಸ್ತ್ರ , ಮಾನವಶಾಸ್ತ್ರ, ಭಾಷಾಶಾಸ್ತ್ರ, ಪ್ರಾಣಿಶಾಸ್ತ್ರ , ವಿಕಸನ ಜೀವಶಾಸ್ತ್ರ , ಭೂಗರ್ಭಶಾಸ್ತ್ರ ಇವೆಲ್ಲದರ ಹದವಾದ ಪಾಕದಿಂದ ಜೇರ್ಡ್ ಡೈಮಂಡ್ ಗನ್ಸ್, ಜರ್ನ್ಸ್, ಸ್ಟೀವ್, ದೇ ಫೇಟ್ಸ್ ಆಫ್ ಹ್ಯೂಮನ್ ಸೊಸೈಟಿ ಎಂಬ ಪುಸ್ತಕವನ್ನು ೧೯೯೭ರಲ್ಲಿ ರಚಿಸಿಕೊಟ್ಟಿದ್ದಾನೆ. ಐದು ನೂರು ಪುಟಗಳ ಈ ಪುಸ್ತಕದ ಹರವು ಅಪಾರವಾದದ್ದು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಚರಿತ್ರೆಯನ್ನು ಇನ್ನೂ ವಿಜ್ಞಾನವೆಂದು ಪರಿಗಣಿಸಿಲ್ಲ. ಅದನ್ನು ಸಾಮಾಜಿಕ ಅಧ್ಯಯನದ ಒಂದು ಭಾಗವೆಂದೇ ಪರಿಗಣಿಸಲಾಗಿದೆ. ಅಲ್ಲದೆ ಚರಿತ್ರೆಕಾರರೆ ಅದನ್ನು ವಿಜ್ಞಾನವೆಂದು ಪರಿಗಣಿಸಿಲ್ಲ. ಚರಿತ್ರೆಯೆಂದರೆ ಕೆಲವು ವಿಷಯಗಳ ವಿಸ್ತಾರವಾದ ಮಂಡನೆ ಎಂದೂ ಒಂದಾದನಂತರ ಮತ್ತೊಂದು ಸಂಗತಿಯನ್ನು ಪೇರಿಸಿಡುವುದು ಎಂದು ಭಾವಿಸಿದ್ದಾರೆ ಎಂಬುದು ಜೇರ್ಡ್ ನ ಕೊರಗು, ಇದಕ್ಕಾಗಿಯೇ ಈತ ಚರಿತ್ರೆಗೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಅಧ್ಯಯನಗಳನ್ನು ತನ್ನ ಸಾಧನವಾಗಿ ಬಳಸಿಕೊಂಡಿದ್ದಾನೆ.

ಈ ಜೇರ್ಡ್ ಡೈಮಂಡ್ ಮೂಲತಃ ಚರಿತ್ರೆಕಾರನಲ್ಲ. ತನ್ನ ತಂದೆಯಂತೆ ತಾನೂ ಡಾಕ್ಟರ್ ಆಗ ಬಯಸಿದವನು . ಅದಕ್ಕಾಗಿ ಎಳವೆಯಿಂದಲೇ ತಯಾರಿ ನಡೆಸಿದ್ದ. ಇವನ ಇನ್ನೊಂದು ಹವ್ಯಾಸವೆಂದರೆ ಹಕ್ಕಿಗಳ ವೀಕ್ಷಣೆ. ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ಔಷಧಶಾಸ್ತ್ರದ ಓದನ್ನು ಬಿಟ್ಟು ತನ್ನ ಕಾಲೇಜಿನ ವಿಧ್ಯಾಭ್ಯಾಸಕ್ಕೆ ಪ್ರಾಣಿಶಾಸ್ತ್ರವನ್ನು ಆರಿಸಿಕೊಂಡ. ಅತ್ಯಂತ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದ ಈತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರಿ ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ(೧೯೨೧). ನಂತರ ಜೀವವಿಕಾಸವಾದ ಮತ್ತು ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಆಶಿಸಿದ. ಅದೇ ಸಮಯಕ್ಕೆ ಸರಿಯಾಗಿ ಆಸ್ಟ್ರೇಲಿಯಾ ಖಂಡ ಮೇಲ್ಭಾಗದಲ್ಲಿರುವ ಪಾಪುವಾ ನ್ಯುಗಿನಿಯಾ ದ್ವೀಪದಲ್ಲಿ ಅತ್ಯಂತ ಹಳೆಯ ಹಕ್ಕಿಯ ಪಳೆಯುಳಿಕೆ ಕಂಡು ಬಂದಿದೆ ಎಂಬ ಸುದ್ದಿ ಇವನನ್ನು ತಲುಪಿತು. ಈತ ಆ ದ್ವೀಪಕ್ಕೆ ಅತ್ಯಂತ ಉತ್ಶಾಹದಿಂದ ಹೋದ. ಆ ದ್ವೀಪದಲ್ಲಿರುವವರು ಮೂಲನಿವಾಸಿಗಳು ಬುಡಕಟ್ಟು ಸಂಸ್ಕೃತಿಗೆ ಸೇರಿದವರು. ಹೋದ ಮಾರನೆ ದಿನವೇ ಸಮುದ್ರ ದಂಡೆಯಲ್ಲಿ ವಾಕ್ ಮಾಡುತ್ತಿದ್ದಾಗ ಬುಡಕಟ್ಟು ಜನಾಂಗದ ಯಾಲಿ ಎಂಬುವವನ ಭೇಟಿಯಾಯಿತು. ಆತ ಕುತೂಹಲದಿಂದ ಜೇರ್ಡ್ ನನ್ನು ಪರಿಚಯ ಮಾಡಿಕೊಂಡು ಆತ ಅಲ್ಲಿಗೆ ಬಂದ ಕಾರಣ ಕೇಳಿದ. ಅದಕ್ಕೆ ಜೇರ್ಡ್ ‘ಒಂದು ಕಾಲದಲ್ಲಿ ಬದುಕ್ಕಿದ್ದು ಈಗ ಇಲ್ಲವಾಗಿರುವ ಪಕ್ಷಿಯ ಪಳೆಯುಳಿಕೆಯ ಬಗ್ಗೆ ಅಧ್ಯಯನ ಮಾಡಲು ಬಂದಿದ್ದೇನೆ’ ಎಂದ. ಆಶ್ಚರ್ಯಚಕಿತನಾದ ಯಾಲಿ, ‘ಅಲ್ಲಾ ಸ್ವಾಮಿ, ಯಾವುದೋ ಒಂದು ಕಾಲದಲ್ಲಿದ್ದ ಹಕ್ಕಿಯ ಬಗ್ಗೆ ಸಂಶೋಧನೆಗೆ ಬಂದಿದ್ದೀರಲ್ಲ, ಅದೂ ಅಮೆರಿಕಾದಿಂದ, ಇಲ್ಲಿ ಇನ್ನು ನಾವು ಬದುಕಿದ್ದೆವಲ್ಲ, ನಾವು ಯಾವ ಕಾಲದಿಂದ ಇಲ್ಲಿ ಇದ್ದೇವೆ(ಬಿಳಿಯರು ಏಕೆ ನಮ್ಮನ್ನು ಆಳುತ್ತಿದ್ದಾರೆ?) ಹೇಳಿ’ ಎಂದು ಕೇಳಿದ. ಈ ಪ್ರಶ್ನೆ ಜೇರ್ಡ್ ನನ್ನು ಅಚ್ಚರಿಗೊಳಿಸಿದ್ದೆ ಅಲ್ಲದೆ ತಲ್ಲಣಕ್ಕೂ ಈಡುಮಾಡಿತು. ಹೌದಲ್ಲ ಸತ್ತ ಹಕ್ಕಿಯ ಚರಿತ್ರೆಯನ್ನು ಹುಡುಕಿಕೊಂಡು ಬಂದವ ನಾನು. ಆದರೆ ಮಾನವನ ಚರಿತ್ರೆಯನ್ನೇ ತಿಳಿದಿಲ್ಲವಲ್ಲ ನಾನು’ ಎಂಬ ಅರಿವು ಜೇರ್ಡ್ ನಿಗಾಯಿತು.

22ಯಾಲಿ ಹಾಕಿದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳಲು ಹತ್ತು ವರ್ಷಗಳ ನಂತರ ಮಾನವ ಜನಾಂಗದ ಇತಿಹಾಸವನ್ನು ಕಂಡುಹಿಡಿಯಲು ಸರ್ವಸಿದ್ದತೆಗಳನ್ನು ಮಾಡಿಕೊಂಡು ೧೯೭೨ ರಲ್ಲಿ ಮತ್ತೆ ಪಾಪುವಾ ನ್ಯುಗಿನಿಯಾಗೆ ಬಂದ. ಆ ದ್ವೀಪದೇಶ ಆಸ್ಟ್ರೇಲಿಯಾದ ಬಿಳಿಯರ ವಸಾಹತುವಿನಿಂದ ಬಿಡುಗಡೆ ಪಡೆಯುವ ಸಿದ್ದತೆ ನಡೆಸಿತ್ತು. ಅಷ್ಟು ಹೊತ್ತಿಗಾಗಲೇ ಯಾಲಿ ಬುಡಕಟ್ಟು ಜನಾಂಗದ ನಾಯಕನಾಗಿ ಹೊರಹೊಮ್ಮಿದ್ದ.

ಜೇರ್ಡ್ ನ ಚರಿತ್ರೆಯ ದಾರಿ ಭಿನ್ನವಾಗಿತ್ತು. ಚರಿತ್ರೆಯ ಪುನಾಃರಚನೆ ಎಂದರೆ ವಿವಿಧ ವಿಜ್ಞಾನ ಶಾಖೆಗಳ ಜ್ಞಾನದ ಅನಿರ್ವಾರ್ಯತೆ ಇದೆಯೆಂದು ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರಗಳ ಆಧಾರ ಒಂದು ಕಡೆಯಾದರೆ ಇನ್ನೊಂದು ಕಡೆ ಜೀವವಿಕಾಸವಾದ, ಪರ್ಯಾವರಣ ಅಧ್ಯಯನ, ಭೂಗರ್ಭಶಾಸ್ತ್ರದ ಅರಿವು ಇವೆಲ್ಲದರ ಜ್ಞಾನವನ್ನು ಹೊತ್ತು ನಡೆಸಿದ್ದ. ಆದರೆ ಜೇರ್ಡ್ ನ ಇತಿಹಾಸ ರಚನೆ ಪ್ರಾರಂಭವಾಗುವುದು ಇಂದಿನಿಂದ ಹದಿಮೂರು ಸಾವಿರ ವರ್ಷಗಳಿಂದ ಮಾತ್ರ. ಏಕೆಂದರೆ ಭೂಗರ್ಭಶಾಸ್ತ್ರದ ಪ್ರಕಾರ ಈ ಕಾಲದಲ್ಲಿ ಹಿಮಯುಗವು ಸರಿದು ‘ಇತ್ತೀಚಿನ’ ಯುಗ ಪ್ರಾರಂಭವಾಯಿತು. ಅಂದರೆ ಆಹಾರಕ್ಕಾಗಿ ಬೇಟೆಯಾಡಿ ಮತ್ತು ಅದರ ಜೊತೆ ತಿನ್ನಬಹುದಾದ ಸಸ್ಯಗಳ ಅನ್ವೇಷಣೆ ಮಾಡುತ್ತಿದ್ದ ಮನುಷ್ಯ ಒಂದು ಕಡೆ ತಳ ಊರಲು ಅಭ್ಯಾಸ ಮಾಡಿಕೊಳ್ಳುತ್ತಿದ್ದ ಕಾಲ. ಯಾವ ಬೆಳೆಗಳನ್ನು ಬಿತ್ತಿ ಬೆಳೆಯಬಹುದು, ಅದಕ್ಕಾಗಿ ಭೂಮಿಯನ್ನು ಹೇಗೆ ಉಪಯೋಗಿಸಬಹುದು, ಒಂದು ಕಡೆ ತಳ ಊರಿದರೆ ಆಹಾರಕ್ಕೆ ಯಾವ ಪ್ರಾಣಿಗಳನ್ನು ಪಳಗಿಸಿ ಸಾಕಬಹುದು ಅದರಿಂದ ಬೇಸಾಯಕ್ಕೆ ಏನಾದರು ನೆರವಾದೀತೇ ಎಂಬುದನ್ನು ಪರೀಶೀಲಿಸುತ್ತಿದ್ದ ಕಾಲ. ಒಂದು ರೀತಿಯಲ್ಲಿ ‘ಹೊಸ ತಾಂತ್ರಿಕತೆ’ಗೆ ಮನುಷ್ಯ ಸಿದ್ಧನಾಗುತ್ತಿದ್ದ ಕಾಲ. ಇದಕ್ಕೆ ಮುಂಚೆ ಏಳು ಮಿಲಯನ್ ವರ್ಷಗಳ  ಹಿಂದೆ ಮೂಲ ಮಾನವನ ನೆಲೆ ಆಫ್ರಿಕ ಖಂಡ ಎಂದು ಗುರುತಿಸಲಾಗಿದೆ. ಅಲ್ಲಿಂದ ಹಿಮಯುಗ ಮುಗಿಯುವವರೆಗೆ ಆತ ಭೂಮಿಯ ಬೇರೆ ಬೇರೆ ಕಡೆಗೆ ಪಸರಿಸಿದ ಎಂಬ ಸಿದ್ದಾಂತ ಪುರಾತತ್ವ ಮತ್ತು ಮಾನವಶಾಸ್ತ್ರಗಳಿಂದ ರೂಪುಗೊಂಡಿದೆ. ಅಂದರೆ ಕಳೆದ ಹದಿಮ್ಮೊರು ಸಾವಿರ ವರ್ಷಗಳಿಂದ ಆತ ಅಲೆಮಾರಿಯೇ ಆಗಿದ್ದ.

ಮಾನವ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಬೇಸಾಯ ಸಂಸ್ಕೃತಿ ಪ್ರಾರಂಭವಾದದ್ದು ಪಶ್ಚಿಮ ಏಷ್ಯಾದಲ್ಲಿ. ಇಲ್ಲಿ ಕ್ರಿ.ಪೂ.ಏಳು ಸಾವಿರ ವರ್ಷಗಳ ಹಿಂದೆ ಆಹಾರ ಉತ್ಪಾದನೆ ಪ್ರಾರಂಭವಾಯಿತು. ಈಗಿನ ಜೋರ್ಡಾನ್ , ಸಿರಿಯಾ,ಇರಾಕ್, ಟರ್ಕಿ ಈ ಭಾಗದಲ್ಲಿ. (ಇಲ್ಲಿಯೇ ಮೊದಲ ಬಾರಿಗೆ ಪಟ್ಟಣಗಳು, ಬರವಣಿಗೆ, ರಾಜ್ಯ, ನಾಗರೀಕತೆ ಪ್ರಾರಂಭವಾದದ್ದು) ಇಲ್ಲಿಂದ ಭೂಮಿಯ ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಈ ಬೆಳೆಗಳು , ಪ್ರಯಾಣ ಮಾಡಿದವು. ಜೇರ್ಡ್ ನ ಪ್ರಕಾರ ಈ ಭೂಭಾಗದಲ್ಲಿ ಆಹಾರ ಉತ್ಪಾದನೆ ಪ್ರಾರಂಭವಾದರೂ ಅದು ಸಮೃದ್ಧವಾಗಿ  ಬೆಳೆದದ್ದು ಯುರೋಪಿನಲ್ಲಿ. ಜೇರ್ಡ್ ನ ಪ್ರಮುಖವಾದ ವಾದವೆಂದರೆ ಮನುಷ್ಯನ ಅಭಿವೃದ್ಧಿಗೆ ಮುಖ್ಯಕಾರಣ ಆತ ಬದುಕುವ ಭೂಪ್ರದೇಶ; ಅಲ್ಲಿಯ ಪರ್ಯಾವರಣ; ಅದರಿಂದ ಆತ ಅಭಿವೃದ್ಧಿ ಹೊಂದುತ್ತಾನೆ ಎಂಬುದು.

23ಯಾವಾಗ ಮನುಷ್ಯ ಬೇಸಾಯ ಪ್ರಾರಂಭಿಸಿದನೋ ಆಗಿನಿಂದ ಆತನ ಬದುಕು ಬದಲಾಗಲು ಪ್ರಾರಂಭಿಸಿತು. ಬೇಸಾಯ ಯೋಗ್ಯ ಸಸ್ಯಗಳನ್ನು ಬೇಸಾಯಕ್ಕೆ ಒಗ್ಗಿಸಿಕೊಂಡ. ತಳ ಊರಿ ಬದುಕಲಾರಂಭಿಸಿದ . ಈ ಆಹಾರ ಉತ್ಪಾದನಾ ಸಂಸ್ಕೃತಿ ಬುಡಕಟ್ಟು ಜನಾಂಗದಲ್ಲಿ ಇಲ್ಲದ ಅನೇಕ ಖಾಯಿಲೆಗಳನ್ನು ಹುಟ್ಟು ಹಾಕಿತು. ಮನುಷ್ಯನ ಬಹುಪಾಲು ಖಾಯಿಲೆಗಳು ಸಾಕು ಪ್ರಾಣಿಜನ್ಯ ಎಂದು ಜೇರ್ಡ್ ಹೇಳುತ್ತಾನೆ. ಪ್ರಮುಖ ಖಾಯಿಲೆಗಳಾದ ಸಿಡುಬು,ಇನ್ಫುಎನ್ಜ , ಟಿಬಿ, ಮಲೇರಿಯ,ಪ್ಲೇಗ್, ದಡಾರ, ಕಾಲರಾ ಈ ಎಲ್ಲಾ ಖಾಯಿಲೆಗಳು ಮನುಷ್ಯನ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪ್ರಾತ್ರವನ್ನೇ ವಹಿಸಿವೆ. ಎರಡನೇ ವಿಶ್ವ ಸಮರದ ತನಕ ಜನರು ಯುದ್ಧಗಳಲ್ಲಿ ಸತ್ತದ್ದಕ್ಕಿಂತ ಮಾರ್ಕ್ ರೋಗಗಳಿಗೆ ತುತ್ತಾದವರ ಸಂಖ್ಯೆ ಜಾಸ್ತಿ. ಹಿಂದಿನ ಅನೇಕ ಯುದ್ದಗಳನ್ನು ಗೆದ್ದವರು ಸೈನಿಕರಲ್ಲ. ಸೈನ್ಕರು ಹೊತ್ತು ತಂದ ಖಾಯಿಲೆಯ. ಯುರೋಪಿಯನ್ನರು ಮೊದಲು ಅಮೆರಿಕಾವನ್ನು ಗೆದ್ದಾಗ ಸ್ತಳೀಯ ಅಮೇರಿಕನ್ ಬುಡಕಟ್ಟು ಜನಾಂಗದವರು ಸತ್ತಿದ್ದು ಈ ಫಿರಂಗಿಯವರ ಖಾಯಿಲೆಯಿಂದ. ಆಫ್ರಿಕಾ ಮತ್ತು ಏಷ್ಯಾದಲ್ಲೂ ಇದೇ ರೀತಿಯಾಯಿತು. ತಲೆತಲಾಂತರದಿಂದ ಬಂದ ಖಾಯಿಲೆಯನ್ನು ತಡೆಯುವ ದೇಹಶಕ್ತಿ ಇಲ್ಲದ ಇತರರಿಗೆ ಇವರು ಸುಲಭವಾಗಿ ಬಳುವಳಿಕೊಟ್ಟರು. ಅಲಾಸ್ಕಾದ ಒಂದು ಇಡೀ ಬುಡಕಟ್ಟು ಜನಾಂಗ ಇದರಿಂದ ನಿರ್ನಾಮವಾಯಿತಂತೆ.

ಬೇಸಾಯ ಸಂಸ್ಕೃತಿ ಜನಸಂಖ್ಯೆ ವೃದ್ಧಿಯಲ್ಲಿ ಪಾತ್ರವಹಿಸಿತು. ಪಟ್ಟಣಗಳು ಹುಟ್ಟಿಕೊಂಡವು . ಪಟ್ಟಣಗಳಲ್ಲಿ ಒಟ್ಟೊಟ್ಟಿಗೆ ವಾಸಮಾಡುವ ಮನುಷ್ಯ ತಾನೇ ಈ ಖಾಯಿಲೆಗಳನ್ನು ಹರಡುವ ಮಾಧ್ಯಮವಾದ. ರೋಮನ್ನರ ವ್ಯಾಪಾರ ಮಾರ್ಗದಲೆಲ್ಲ ಈ ಖಾಯಿಲೆಗಳು ಹಬ್ಬಿದವು. ಕ್ರಿ.ಶ.೧೬೫ ರಲ್ಲಿ ಮಿಲಿಯಾಂತರ ರೋಮನ್ ಪ್ರಜೆಗಳು ಸಿಡುನಿಂದ ಸತ್ತರು. ಇದೆಲ್ಲ ಆದದ್ದು ಯೂರೋಪಿನ ಕೊಡುಗೆ ಎಂದು ಜೇರ್ಡ್ ನ ಸಂಶೋಧನೆ ತಿಳಿಸುತ್ತದೆ.

ಬೇಸಾಯ ಸಂಸ್ಕೃತಿಯ ಮತ್ತೊಂದು ಕೊಡುಗೆಯೆಂದರೆ ಬರಹ ಕಂಡುಹಿಡಿದಿದ್ದು. ಬರಹ ಚಾರಿತ್ರಿಕ ಕಾಲದ ಸಮಾಜದಲ್ಲಿ ಶಕ್ತಿಯುತವಾದ ಆಯುಧವಾಗಿ ಉಪಯೋಗಿಸಿಕೊಳ್ಳಲ್ಪಟ್ಟಿತು. ಶಾಸ್ತ್ರಗಳ ಜೊತೆ ಖಾಯಿಲೆ ತರುವ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬರಹವೂ ತನ್ನ ಕೊಡುಗೆಯನ್ನು ಕೊಟ್ಟಿದೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಂಡು ಹಿಡಿದ ಬರಹ ಮಾಧ್ಯಮ ಇತ್ತೀಚಿನವರೆಗೂ ಚಕ್ರವರ್ತಿಗಳು ಮತ್ತು ವ್ಯಾಪಾರಿಗಳು ತಮ್ಮ ಜ್ಞಾನಕ್ಕೆ ಬೇಕಾದಾದ್ದನ್ನೆಲ್ಲ ಬರಹದಲ್ಲಿ ಮೂಡಿಸುತ್ತಿದ್ದರು. ಇದು ಕೆಲವೇ ವರ್ಗದ ಕೆಲವೇ ಜನರಲ್ಲಿ ಕೇಂದ್ರಿಕೃತವಾಗಿತ್ತು. ಬರಹ ಮಾಧ್ಯಮ ಇದ್ದದ್ದೇ ಗುಲಾಮರನ್ನು ಸೃಷ್ಟಿಸುವುದಕ್ಕಾಗಿ ಎಂಬ ಲೆವಿಸ್ತ್ರಾಸ್ ನ ವಾದವನ್ನು ಜೇರ್ಡ್ ಸಮರ್ಥಿಸುತ್ತಾನೆ.ಇತ್ತೀಚಿನವರೆಗೂ ಬರವಣಿಗೆ ಬುಡಕಟ್ಟು ಜನಾಂಗಕ್ಕೆ ಬೇಕಾಗಿರಲಿಲ್ಲ. ಏಕೆಂದರೆ ಅಲ್ಲಿ ಕೇಂದ್ರಿಕೃತ ಆಡಳಿತವಿರಲಿಲ್ಲ. ಆಯಾ ದಿನದ ಬದುಕು ಅಂದೇ ಚುಕ್ತವಾಗುತ್ತಿತ್ತು . ಆದರೆ ಬೇಸಾಯ ಸಂಸ್ಕೃತಿ ಸ್ತರೀಕೃತ ಸಮಾಜವನ್ನು ಸೃಷ್ಟಿಸಿತು . ವರ್ಷಪೂರ್ತ ದುಡಿಯ ಬೇಕಾಗಿರಲಿಲ್ಲ. ಆಹಾರ ಶೇಖರಣೆ ಬಿಡುವನ್ನು ಕೊಟ್ಟಿತು. ಅಲ್ಲದೆ ಸಂಕೀರ್ಣ ರಾಜಕೀಯ ಕೇಂದ್ರಗಳನ್ನು ಸೃಷ್ಟಿಸಿತು . ತಮ್ಮ ತಮ್ಮ ಭೂಮಿಯನ್ನು ತಾವು ಕಾಪಾಡಿಕೊಳ್ಳಲು ಯುಧ, ಯುದ್ಧಕ್ಕೆ ಆಯುಧಗಳು ಇತ್ಯಾದಿ ತಾಂತ್ರಿಕತೆ ಈ ಸ್ತರೀಕೃತ ಸಮಾಜದ ಮೂಲ ವೃತ್ತಿಗಳಾದವು. ಇವುಗಳ ಲೆಕ್ಕವನ್ನಿಡಲು ಬರಹ ಬೇಕಾಯಿತು.

ಈ ರೀತಿಯ ಆಯುಧಗಳೆಲ್ಲ ಯುರೋಪಿನಲ್ಲೇ ಏಕೆ ಬಂತು ? ಯುರೋಪ್ ಏಕೆ ಪ್ರಪಂಚದ ಇತರ ದೇಶಗಳನ್ನು ಗೆಲ್ಲಲು ಹೊರಟಿತು? ತಾಂತ್ರಿಕತೆ ಏಕೆ ಇಲ್ಲಿ ಅಭಿವೃದ್ಧಿ ಹೊಂದಿತು? ಆಫ್ರಿಕಾ, ಏಷ್ಯಾ ಖಂಡಗಳೇಕೆ ಯೂರೋಪನ್ನು ಗೆಲ್ಲಲಿಲ್ಲ? ಇವಕ್ಕೆಲ್ಲ ಆಯಾ ದೇಶಗಳ ರಾಜಕೀಯ ನಿಲುವುಗಳೇ  ಕಾರಣ ಎಂಬುದು ಜೇರ್ಡ್ ನ ವಾದ. ಯೂರೋಪಿಗೆ ಸೆಡ್ಡು ಹೊಡೆಯಬಹುದಾಗಿದ್ದ ರಾಷ್ಟ್ರ ಚರಿತ್ರೆಯಲ್ಲಿ ಚೀನಾ, ೧೪ನೆ ಶತಮಾನದಲ್ಲೇ ಸಮುದ್ರಯಾನದಲ್ಲಿ , ಸಿಡಿಮದ್ದಿನ ತಯಾರಿಕೆಯಲ್ಲಿ , ಯುದ್ಧ ಕಲೆಯಲ್ಲಿ ಯುರೋಪಿಗಿಂತ ಎಷ್ಟೋ ಶತಮಾನಗಳ ಹಿಂದೆಯೇ ಈ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡಿತ್ತು. ಚೀನಾದ ಯುದ್ಧದ ಹಡಗು ಒಮ್ಮೆ ಆಫ್ರಿಕ ದೇಶವನ್ನು ತಲುಪಿತ್ತು. ಆದರೆ ಚೀನಾದ ರಾಜಕೀಯ ನಿಲುವು ಯುದ್ಧವನ್ನು ನಿಯಂತ್ರಿಸುವುದಾಗಿತ್ತು ಮತ್ತು ಬೇರೆ ಬೇರೆ ದೇಶಗಳನ್ನು ಗೆಲ್ಲುವುದು ಆಗಿನ ಚೀನಾದ ರಾಜಕೀಯ ನಿಲುವಾಗಿರಲಿಲ್ಲ. ಅವರೇನಾದರೂ ತಮ್ಮ ನಿರ್ಧಾರವನ್ನು ವಿರುದ್ದ ರೀತಿಯಲ್ಲಿ ನಿರ್ಣಯಿಸಿದ್ದಾರೆ ಪ್ರಾಯಶಃ ಪ್ರಪಂಚದ ಇತಿಹಾಸ ಬೇರೆಯೇ ತರಹದ್ದಾಗಿರುತ್ತಿತ್ತು ಎಂಬುದು ಜೇರ್ಡ್ ನ ವಾದ.

ಅಂತೆಯೇ ಮಧ್ಯಯುಗದಲ್ಲಿ ಪ್ರಭಾವಶಾಲಿಯಾಗಿದುದ್ದು  ಅರಬ್ ದೇಶಗಳು. ಯುದ್ದ ಸಾಮಗ್ರಿಗಳ ತಾಂತ್ರಿಕತೆ ಇಲ್ಲೂ ಬೆಳೆದಿತ್ತು. ಆದರೆ ಧರ್ಮದ ಕೈ ಮೇಲಾದಾಗ ತಾಂತ್ರಿಕತೆ ಜ್ಞಾನ ಹಿಂದೆ ಬಿಟ್ಟು. ಅತ್ಯಂತ ಹೆಚ್ಚಿನ ಸಾಕ್ಷರತೆ ಇದ್ದ ಅರಬ್ ದೇಶಗಳು ಹಿಮ್ಮುಖ ಚಲನೆ ಪಡೆದವು ಎಂಬುದನ್ನು ಜೇರ್ಡ್ ವಿಶ್ಲೇಷಿಸುತ್ತಾನೆ.

ಆದ್ದರಿಂದ ಜೇರ್ಡ್ ನ ಪ್ರಾಕಾರ ಯುರೋ ಕೇಂದ್ರಿತ ರಾಜ್ಯಗಳ ರಾಜಕೀಯ ನಿಲುವು ಅಲ್ಲಿಯ ವಿಜ್ಞಾನ, ತಾಂತ್ರಿಕತೆ ಮತ್ತು ಸಮಾಜವನ್ನು ನಿಯಂತ್ರಿಸುತ್ತದೆ. ಮತ್ತೆ ಇದರ ಮೂಲ ಸ್ತಂಭ ಆಹಾರ ಉತ್ಪಾದನೆ.

ಜೇರ್ಡ್ ಪ್ರಪಂಚದ ಯಾವುದೇ ಜನಾಂಗವು ಬುದ್ದಿ ಮಾತ್ತೆಯಲ್ಲಿ ಹಿಂದೂ-ಮುಂದು ಎಂಬುದಿಲ್ಲ. ಬುದ್ದಿವಂತಿಕೆ ಎಲ್ಲಾ ಮಾನವರಲ್ಲೂ ಒಂದೇ ಸಮನಾಗಿರುತ್ತದೆ. ಇದು ವರ್ಗ, ವರ್ಣ, ಇದನ್ನು ಅವಲಂಬಿಸಿಲ್ಲ. ವೈವಿಧ್ಯ ಬದುಕು ಬುದ್ದಿವಂತಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿರುತ್ತದೆ . ಅದು ಅಮೆರಿಕಾದವರಿರಬಹುದು ಅಥವಾ ಬುಡಕಟ್ಟು ಜನಾಂಗದವರಿರಬಹುದು, ಎಲ್ಲರಲ್ಲೂ ಬುದ್ದಿಮತ್ತೆ ಅಷ್ಟೇ ತೀಕ್ಷ್ಣವಾಗಿರುತ್ತದೆ ಎಂಬುದನ್ನು ವಿವರಿಸಿ ಹೇಳುವುದು ಬಹಳ ಮುಖ್ಯವಾದ ಅಂಶ.

ಮಾನವನ ಇತಿಹಾಸದಲ್ಲಿ ಅತ್ಯಂತ ವೇಗದ ಬದಲಾವಣೆ ಕಂಡು ಬಂದದ್ದು ಕ್ರಿ.ಶ.೧೫ನೆ ಶತಮಾನದಿಂದ ಈಚೆಗೆ. ಅಲ್ಲಿಯವರೆಗೆ ಆತನ ಸಾಧನಗಳು ಮತ್ತು ಅವುಗಳ ಬದಲಾವಣೆ ನಡೆದದ್ದು. ಬಹಳ ನಿಧಾವಾಗಿ ಕಲ್ಲಿನ ಆಯುಧದಿಂದ ಆಧುನಿಕ ಅಣು ಬಾಂಬ್ ಗೆ ಬೆಳೆದು ಬಂದ ತಾಂತ್ರಿಕತೆಯ ಕಾರಿತ್ರೆ ಇವನ್ನು ಸ್ಪಷ್ಟಪಡಿಸುತ್ತದೆ. ಆಫ್ರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಖನಿಜಗಳಿಗೆ ಕೊರತೆ ಇಲ್ಲದಿದ್ದರೂ ಸುಮಾರು ಹದಿನೆಂಟನೆಯ ಶತಮಾನದವರೆಗೆ ಅದರ ಬಳಕೆ ನಲವತ್ತಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿಗೆ ಗೊತ್ತೇ ಇರಲಿಲ್ಲ. ಅದೆಲ್ಲ ಬಿಳಿಯರ ಪಾಲಾಯಿತು, ನಂತರದಲ್ಲಿ.

ಜೇರ್ಡ್ ಡೈಮಂಡ್ ನ ವಾದವೆಂದರೆ ಮನುಷ್ಯನ ಅಸಮಾನತೆಗೆ ಭೂಗುಣ, ಆಹಾರ ಉತ್ಪಾದನಾ , ಹವಾಮಾನ ಮೂಲ ಸೂತ್ರ. ಇದರ ಫಲಿತಾಂಶವೇ ಬಂದೂಕುಗಳು, ಖಾಯಿಲೆಯ ಸೂಕ್ಷ್ಮಾಣು ಜೀವಿಗಳೂ ಮತ್ತು ಉಕ್ಕು. ಈ ಮೂರು ಯೂರೋಪಿಯನ್ನರ ಪ್ರಮುಖ ಅಸ್ತ್ರಗಳಾದವು.

ಈ ರೀತಿಯ ನಿಲುವಿಗೆ ಆತ ಬರಲು ಪ್ರಮುಖ ಕಾರಣ ಪಾಪುವಾ ನೂಗಿನಿಯಾದ ಬುಡಕಟ್ಟು ಜನಾಂಗದ ಯಾಲಿ. ಈ ಪುಸ್ತಕ ರಚನೆಗೆ ಜೇರ್ಡ್ ಮೂವತ್ತು24 ಮೂರು ವರ್ಷಗಳನ್ನು ಮುಡುಪಾಗಿಡಬೇಕಾಯಿತು. ಅಲ್ಲದೆ ಇಡೀ ಪ್ರಪಂಚವನ್ನು ಸುತ್ತಿ ವಿವಿಧ ಜನಾಂಗಗಳ ಅಧ್ಯಯನವನ್ನು ವಿವಿಧಶಾಸ್ತ್ರಗಳ ಅಂತರಶಾಸ್ತ್ರೀಯ ಜ್ಞಾನದಿಂದ ಪುರಾವೆ ಸಮೇತ ಮುಂದಿಟ್ಟ. ಈ ಕೃತಿಗೆ ಅನೇಕ ಬಹುಮಾನಗಳನ್ನು ಪಡೆದ ಜೇರ್ಡ್ ಡೈಮಂಡ್ ಈಗ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೂಗೊಳಶಾಸ್ತ್ರದ ಪ್ರಾಧ್ಯಾಪಕನಾಗಿದ್ದಾನೆ. ಈ ಕೃತಿಗೆ ಬಂದ ಪ್ರುಮುಖ ಬಹುಮಾನವೆಂದರೆ ಪ್ರತಿಷ್ಟಿತವಾದ ಪುಲ್ತ್ಜರ್ ಅವಾರ್ಡ್. ಈತನ ಇನ್ನೊಂದು ಪ್ರಮುಖ ಕೃತಿ ಎಂದರೆ ದಿ ಥರ್ಡ್ ಚಿಂಪಾಂಜಿ(೨೦೦೪). ಇದಕ್ಕೆ ಮೆಕಾರ್ಥರ್ ಬಹುಮಾನ ಬಂದಿದೆ. ಈ  ಕೃತಿಗಳನ್ನು ಈತ ಅತ್ಯಂತ ಕಳಕಳಿಯಿಂದ ರೇಸಿಸ್ಟ್ ಚರಿತ್ರೆಯನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನ ಚರಿತ್ರೆಯನ್ನೂ ಕೇಂದ್ರ ಮಾಡಿಕೊಂಡು ರಚಿಸಿದ್ದಾನೆ . ಚರಿತ್ರೆಗ್ ಒಂದು ವೈಜ್ಞಾನಿಕ ತಿರುವನ್ನು ನೀಡಿದ್ದಾನೆ.

ದಮನಿತರಿಗೆ ಧ್ವನಿ ಕೊಡುವ ಕೆಲಸ

ದಮನಿತರಿಗೆ ಧ್ವನಿ ಕೊಡುವ ಕೆಲಸ

ನಮ್ಮ ‘ಅರಿವಿನ ಸ್ಫೋಟ’ (epistomological break) ಹೋಲಿಸಿದ ಅನೇಕ ಬರಹಗಳ ವಿಶ್ವವಿದ್ಯಾಲಯದ ಭದ್ರ ಗೋಡೆಯ ಆಚೆ ನಡೆಯುತ್ತಿರುತ್ತವೆ. ಗೆಲಿಯಾನೋನಾ ‘ಬೆಂಕಿಯ ನೆನಪು’ ಹೀಗೊಂದು ಕೃತಿ. ಈ ಕೃತಿ ಯಾವ ಚರಿತ್ರೆಯ ಸಿದ್ದಾಂತಗಳ ಭಾರದಿಂದಲೂ ಕುಸಿದಿರದ ಕಥಾನಕ. ಈ ಚರಿತ್ರೆಯನ್ನು ಕಾಣಲು ಸಾಧ್ಯವಾಗುವುದು ಔಪಚಾರಿಕ ಹಿನ್ನೆಲೆಯಲ್ಲಿ ಕಲಿತ ಸಿದ್ದಾಂತಗಳನ್ನು ಮರೆಯುವ ಸಾಧ್ಯತೆ ಇದ್ದಾಗ ಮಾತ್ರ. ಗೆಲಿಯಾನೋನನ್ನು ಓದಿದ ಮೇಲೆ ಚರಿತ್ರೆ ಯಾವುದೆಂದರೆ ಇದಲ್ಲ, ಇದಲ್ಲ, ಇದಲ್ಲ, ಹಾಂ! ಇದು ! ಎನ್ನಿಸುವ ಮನಸ್ಸನ್ನು ಸೃಷ್ಟಿಸುವುದು. ‘ಅವರ ಬಿಟ್ಟು, ಅವರ ಬಿಟ್ಟು ಅವರ್ಯಾರು?” ಎಂದು ಕೇಳಿ ತಿಳಿಯುವ ಸಾಮರ್ಥ್ಯವನ್ನು ಹೀಗೆ ನೀಡುವ ರೂಪ ಮತ್ತು ರೂಪಕ ಎರಡೂ ಆದ ‘ಬೆಂಕಿಯ ನೆನಪು’.

ಹೀಗೆಂದಾಕ್ಷಣ ರಾಜಕೇಂದ್ರಿತ ಚರಿತ್ರೆ, ಅಧಿಕಾರಶಾಹಿ ರಚಿಸಿದ ಚರಿತ್ರೆ, ಜನ ಕಟ್ಟಿದ ಜನಪದ ಚರಿತ್ರೆ (heroic epicvs, ballads) ಇವು ಯಾವುವು ಸಂಪೂರ್ಣ ತಪ್ಪೆಂದಲ್ಲ. ಇವು ಪರಿಪೂರ್ಣ ಅಲ್ಲ ಎಂದಷ್ಟೇ. ಇವೆಲ್ಲವಕ್ಕೂ ತಮ್ಮದೇ ಆದ ನಿಳುವುಗಲಿರುತ್ತವೆ. ಕಾಣುವ ಕ್ರಿಯೆ ಇರುತ್ತದೆ. ಆದರೆ ಈ ಚರಿತ್ರೆಗಳಲ್ಲಿ ಮನಷ್ಯ ಮಾತ್ರ ಸ್ಥಾಪಿತವಾಗಿರುವುದಿಲ್ಲ. ಜನಪದ ಚರಿತ್ರೆಯಲ್ಲಿ ಮಾತ್ರ ಮನುಷ್ಯ ಪ್ರತಿಷ್ಟಾಪಿತನಾಗಿರುವುದನ್ನು ಕಾಣಬಹುದು. ಏಕೆಂದರೆ ಜನಪದರು ತ್ರಿಕಾಲವನ್ನು ಒಟ್ಟುಗೂಡಿಸಿ ಘಟನೆಯನ್ನು ನೋಡಲು ಪ್ರಯತ್ನಿಸುತ್ತಾರೆ. ಏಕ ಕಾಲದಲ್ಲಿ ಅದು ವರ್ತಮಾನ, ಭೂತ, ಭಾವಿಶಯತ್ತಿನ ಕಡೆಗೆ ಮುಖ ಮಾಡಿರುತ್ತದೆ, ಇವೆ ಪುರಾಣ – ಇತಿಹಾಸ ಸೃಷ್ಟಿಗೆ ನಾಂದಿಯಾಗುವುದು. ಇದು ಭಾರತ ದೇಶದ ಜನರು ಚರಿತ್ರೆಯನ್ನು ನೋಡುವ ಕ್ರಮ. ಆದ್ದರಿಂದ ಇದೊಂದು ರೀತಿಯ ಮನುಷ್ಯನ ಮನಸ್ಸನ್ನು ಹಿಡಿಯುವ ಚರಿತ್ರೆಯಾಗಿರುತ್ತದೆ. ಚರಿತ್ರೆಯಲ್ಲಿ ಮನುಷ್ಯನನ್ನು ಸ್ಥಾಪಿಸಿದಾಗಲೇ ಅದಕ್ಕೆ ಜೀವ ಬರುವುದು.

ಚರಿತ್ರೆಯು ಮನುಷ್ಯನ ಮನಸ್ಸಿನ ಬೆಳವಣಿಗೆಯ ಪ್ರತೀಕವಾದಾಗಲೇ ಹಿಸ್ಟರಿ ಆಫ್ ಐಡಿಯಾಸ್ ಆಗುತ್ತದೆ, ‘ಇತಿಹಾಸ’ ವಾಗುತ್ತದೆ. ಸಾಂಸ್ಕೃತಿಕ ಸಂವಾದವಾಗುತ್ತದೆ. ಕಥಾನಕವಾಗುತ್ತದೆ. ಇದನ್ನೇ ಭಾರತದಲ್ಲಿ ಪುರಾಣೆತಿಹಾಸ ಎಂದು ಕರೆಯುತ್ತಾರೆ.

ಕನ್ನಡದ ಸಂದರ್ಭದಲ್ಲಿ ಈ ರೀತಿಯ ಇತಿಹಾಸ ರಚಿತವಾಗಿರುವುದು ಶಿವರಾಮಕಾರಂತರ ‘ಮೂಕಜ್ಜಿಯ ಕನಸು’ ಕಥಾನಕದಲ್ಲಿ. ಇದು ಎ ದೇಶದ ಧರ್ಮಗಳ, ಹೆಣ್ಣು – ಗಂಡುಗಳು ಪರಸ್ಪರ ತಮ್ಮನ್ನು ಕಂಡುಕೊಳ್ಳುವ , ಸಾಮಾಜಿಕ ರೀತಿ – ನೀತಿಗಳನ್ನು, ಅವುಗಳು ಕಾಲದಿಂದ ಕಾಲಕ್ಕೆ ಬದಲಾಗುವ, ಆದರೆ ಮನಸ್ಸಿನ ತಳದಲ್ಲೆಲ್ಲೋ ‘ಆಡಿಮತೆ’ ಉಳಿದೇ ಬಿಟ್ಟಿರುವ ವಿವಿಧ ಮುಖಗಳನ್ನು ಚಿತ್ರಿಸುವ ಸಂವಾದವಾಗಿ ಬೆಳೆದು ಬಂದಿದೆ. ಆದ್ದರಿಂದ ಇದು ದಿನಾಂಕಗಳ ಚರಿತ್ರೆಯಲ್ಲ, ಕಾರ್ಯಕಾರಣ ಸಂಬಂಧದ ಚರಿತ್ರೆಯಲ್ಲ, ವರ್ಗ ಸಂಘರ್ಷದ ಚರಿತ್ರೆಯಲ್ಲ, ಆದರೆ ಅವೆಲ್ಲವುಗಳ ಪಾಕವಾಗಿದೆ. ಭೂತದೊಡನೆ ವರ್ತಮಾನ ನಡೆಸುವ ಅನುಸಂಧಾನವಾಗಿದೆ.

ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ ಚರಿತ್ರಯೆಂದರೆ ಮನದಾಳದಲ್ಲಿ ಸೂಕ್ಷ್ಮವಾಗಿ ಕೆತ್ತಿದ ರಚನಾ ಪ್ರಕ್ರಿಯೆಯಾಗಿರುತ್ತದೆ. ಇದನ್ನು ಕೆದಕಬೇಕೆಂದರೆ ನೆನಪುಗಳು ಒಂದು ಜನಾಂಗವನ್ನು ಒಂದುಗೂಡಿಸಿ ಮುನ್ನಡೆಸುವ ಪ್ರಕ್ರಿಯೆಯಾಗಿ ಕೆಲಸ ಮಾಡುತ್ತಿರುತ್ತದೆ.(ಒಡೆಯಲೂ ಸಹ).

ಇದಕ್ಕಾಗಿಯೇ ಗೆಲಿಯಾನೋ ತನ್ನ ಕಥಾನಕವನ್ನು ‘ಬೆಂಕಿಯ ನೆನಪುಗಳು’ ಎಂದು ಕರೆದಿದ್ದಾನೆ. ಈ ಬೇಂದ್ಕಿಯಂತಹ ನೆನಪುಗಳ ಪುನರ್ ಸೃಷ್ಟಿ ಕಾರ್ಯ ಈ ಕೃತಿಯಲ್ಲಿ ನಡೆಯುತ್ತಲೇ ಇರುತ್ತದೆ. ಆದ್ದರಿಂದಲೇ ತನ್ನ ಮುನ್ನುಡಿಯಲ್ಲಿ ‘ನಾನು ಇತಿಹಾಸಕಾರನಲ್ಲ, (ಮೂಲತಃ ಗೆಲಿಯಾನೋ ಇತಿಹಾಸದ ವಿದ್ಯಾರ್ಥಿ ) ನಾನೊಬ್ಬ ಬರೆಹಗಾರ, ಇಡೀ ಅಮೆರಿಕಾದ ಅದರಲೂ ನನ್ನ ಪ್ರೀತಿಯ ನೆಲವಾದ ತಿರಸ್ಕೃತ ಲ್ಯಾಟಿನ್ ಅಮೆರಿಕಾದ ‘ಅಪಹೃತ ಸ್ಮೃತಿ’ಯ ಬಿಡುಗಡೆಯ ಯತ್ನಕ್ಕೆ ಕಿಂಚಿತ್ ಕೊಡುಗೆ ನೀಡಬಯಸುವ ಲೇಖಕ’ ಎಂದು ವಿನಯಾಪೂರ್ನವಾಗಿ ಹೇಳಿಕೊಂಡಿದ್ದಾನೆ.ಒಂದು ರೀತಿಯಲ್ಲಿ ಮನುಷ್ಯನ ಇತಿಹಾಸವೇ ಒಬ್ಬನ ಮೇಲೆ ಇನ್ನೊಬ್ಬ ತನ್ನ ಅಧಿಕಾರವನ್ನು ಹೆರುವ ಇತಿಹಾಸ ಆಗಿಬಿಟ್ಟಿರುತ್ತದೆ. – ಭೌತಿಕವಾಗಿಯೂ, ಬೌಧಿಕವಾಗಿಯೂ. ಆದರೆ ನಮಗೆ ಕೇಳಿಸುವುದು ಮಾತ್ರ ಬಲಾಡ್ಯನ ಧ್ವನಿ. ಗೆಲಿಯಾನೋ ಈ ಕಥಾನಕದಲ್ಲಿ ಮಾಡಿರುವುದು ದಮನಕ್ಕೊಳಗಾದ ಲ್ಯಾಟಿನ್ ಅಮೆರಿಕಾದ ಜನಾಂಗಗಳಿಗೆ ಧ್ವನಿ ಕೊಡುವು ಕೆಲಸ. ಆದ್ದರಿಂದ ಈ ನೆನಪು ‘ಬೆಂಕಿಯ ನೆನಪು’.

‘ಬೆಂಕಿಯ ನೆನಪು’ ಕೃತಿಯನ್ನು ಕನ್ನಡಕ್ಕೆ ತಂದಿರುವ , ತನ್ನ ಅಸ್ತಿತ್ವದ ಇತಿಹಾಸವನ್ನೇ ಮತೆತಂತಿರುವ ನನ್ನ ಬಹುಕಾಲದ ಗೆಳೆಯ ಕೆ.ಪಿ.ಸುರೇಶ , ಈ ಕೃತಿಯನ್ನು ನನ್ನ ಕೈಗೆ ಕೊಟ್ಟಾಗ ಓದಿದೆ. ಒಮ್ಮೆಯಲ್ಲ , ಐದು ಬಾರಿ. ಐದು ಬಾರಿ ಓದಿದಾಗಲೂ ನನ್ನ ಬುದ್ದಿ ಕೋಶ ಭಾವಕೋಶದೊಳಗೆ ಅಡಗಿ ಕುಳಿತುಬಿಟ್ಟಿತು . ಪ್ರಜ್ಞಾಪೂರ್ವಕವಾಗಿ ಇದರ ಬಗ್ಗೆ ಆಲೋಚಿಸುವಾಗಲೆಲ್ಲಾ ಅಪ್ರಜ್ಞಾಪೂರ್ವಕವಾಗಿ ಭಾವಕೋಶಕ್ಕೆ ಜಾರಿಕೊಂಡುಬಿಟ್ಟಿದ್ದೇನೆ.

ಈ ತ್ರಿವಳಿ ಪುಸ್ತಕಗಳ ಮೊದಲ ಭಾಗ – ಕೊಲಂಬಸ್ ಬಂದು ಕಾಲೂರುವ ತನಕ ಪುರಾಣೆತಿಹಾಸ ಸ್ಥಲೇಎಯ ಅಮೆರಿಕನ್ನರು ತಮ್ಮನ್ನು, ತಮ್ಮ ಹುಟ್ಟನ್ನು, ತಮ್ಮ ಪ್ರಾಪಂಚಿಕ ದೃಷ್ಟಿಯನ್ನು ರೂಢಿಸಿಕೊಂಡು ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದರು. ಕಾಲವನ್ನು ಗುರುತಿಸಲು ಕಲಿತರು, ತಮ್ಮದೇ ಆದ ಜಗತ್ತನ್ನು ಸೃಷ್ಟಿಸಿಕೊಂಡರು. ಗಂಡು – ಹೆಣ್ಣು ಜೊತೆಯಲ್ಲಿ ಬಾಳಿ ಬದುಕುವುದು, ಸ್ಸವನ್ನು ಎದುರಿಸುವುದನ್ನು ಕಲಿತರು. ‘ಹುಟ್ಟಿ ಸಾಯುವವರು, ಮತ್ತೆ ಹುಟ್ಟುವವರು, ಅವರು ಜನ್ಮಿಸುವುದಕ್ಕೆ ಅಂತ್ಯವಿಲ್ಲ. ಯಾಕೆಂದರೆ ಸಾವೆಂಬುದು ಮಿಥ್ಯ’ ತಮ್ಮಷ್ಟಕ್ಕೆ ತಾವು ಆಯಾ ದಿಂದ ಆಹಾರವನ್ನುಯ್ ಸಂಗ್ರಹಿಸಿಕೊಂಡು , ಹಂಚಿಕೊಂಡು ಇರುವ ಕಾಲ.

ಆದರೆ ಯುಕಾಟಿನ್ ಪುರೋಹಿತ ದೇವರ ಸಂದೇಶವನ್ನು ಕೇಳಿಸಿಕೊಂಡು ಹೇಳುವುದು ಅತ್ಯಂತ ಮಾರ್ಮಿಕವಾಗಿದೆ. ‘ಜಗದ ಉದ್ದಗಲಕ್ಕೂ ಹಾದಿ ಕುಣಿವ ಹೆನ್ನುಗಲಿರುತ್ತಾರೆ. ದುರಾಸೆಯ ಆಳ್ವಿಕೆಯ ಕಾಲದಲ್ಲಿ ಸಂಕಷ್ಟ ಅಧಿಕವಾಗಿರುತ್ತದೆ. ಮನುಷ್ಯರು ಗುಲಾಮರಾಗುತ್ತಾರೆ. ಸೂರ್ಯನ ಮುಖ ವಿಷಾದದಿಂದ ಕೂಡಿರುತ್ತದೆ. ಪ್ರಪಂಚದಲ್ಲಿ ಜನ ನಶಿಸುತ್ತಾರೆ. ಪ್ರಪಂಚ ಅವಮಾನದಿಂದ ಕುಬ್ಜವಾಗುತ್ತದೆ”.

ಆಳರಸರ, ಅಧಿಕಾರಶಾಹಿಗಳ ಚರಿತ್ರೆ ತಮ್ಮ ಧ್ವನಿಯನ್ನು ಮಾತ್ರ ಕೆತ್ತಿರುವಂತಹ ಚರಿತ್ರೆ. ಈ ಚಾರಿತ್ರಿಕ ಕಥನವು ನೆರವಾಗಲ್ಲದಿದ್ದರೂ, ಪರೋಕ್ಷವಾಗಿ ತಮ್ಮ ಚಹರೆಗಳನು ಬಿಟ್ಟಿರುತ್ತದೆ. ಈ ಚರೆಗಳು ಮೌನವಾಗಿ ಪಠ್ಯಗಳಲ್ಲಿ ಅಡಗಿ ಕುಳಿತಿರುತ್ತದೆ. ಇಂತಹ ಮೌನ, ಮಾತಿಗಾಗಿ ಗೆಲಿಯಾನೋನಂತಹ ಮನಸ್ಸುಳ್ಳ ವ್ಯಕ್ತಿಗಳಿಗಾಗಿ ಕಾಯುತ್ತಾ ಕುಳಿತ್ತಿರುತ್ತದೆ. ಅಧಿಕಾರಶಾಹಿ ಹೆಜ್ಜೆ ಗುರುತನ್ನು ಅನುಸರಿಸಿ ದಮಕ್ಕೊಳಗಾದವರ ಚರಿತ್ರೆಯನ್ನು, ಉಂಟಾಗಿರುವ ಗ್ಯಾಪ್ ಗಳನ್ನೂ ಗೆಲಿಯಾನೋ ತುಂಬಿಕೊಟ್ಟಿದ್ದಾನೆ. ಮೌನವಾಗಿ ಮಾತನಾಡಿಸಿದ್ದಾನೆ . ಇಂತಹ ಇತಿಹಾಸ ಬರೆದವರ ಭಾಷೆಯನ್ನೇ ಬಳಸಿ ಅವರಿಗೇ ತಿರುಗೇಟು ಕೊಡುತ್ತಾನೆ.

ಗೆಲಿಯಾನೋ ೧೬೯೩ರಿಂದ ಈಚಿನ ಲ್ಯಾಟಿನ್ ಅಮೆರಿಕಾದ ಇತಿಹಾಸವನ್ನು ಆ ಘಟನೆಗಳು ನಡೆದ ವರ್ಷಗಳನ್ನು ನಮೂದಿಸುತ್ತಾನೆ. ಹೀಗೆ ನಡೆದ ಘಟನೆಗಳ ಆಯ್ಕೆ ಮತ್ತು ಸಂಯೋಜನೆ ಚರಿತ್ರೆಯ ಆಧಾರ ಪಡೆದಿದ್ದರೂ ಚರಿತ್ರೆಯ ನಿರ್ವಹಣೆಯ ರೀತಿಯನ್ನೇ ಬದಲಾಯಿಸಿಬಿಡುತ್ತದೆ. ಈ ಎಲ್ಲಾ ನೆಗಳಿಂದ ತುಳಿತಕ್ಕೆ ಒಳಗಾದ ಮುಂಶ್ಯನ ಭಾವನೆ ಮುನ್ನೆಲೆಗೆ ಬರುವುದರಿಂದ; ಕಾಣದ ಮುಖಗಳು , ಅವುಗಳ ಮನಸ್ಸಿನೊಳಕ್ಕೆ ಓದುಗರನ್ನು ಸೆಳೆದುಕೊಂಡುಬಿಡುತ್ತದೆ.

ಧರ್ಮ ಮತ್ತು ಸಾಮ್ರಾಜ್ಯಶಾಹಿ ಬಲಗಳೆರಡೂ ಸೇರಿ ಮೂಲ ಅಮೆರಿಕಾದ ನಿವಾಸಿಗಳ ಮತ್ತು ಆಫ್ರಿಕಾದಿಂದ ಎಳೆದು ತಂದಿರುವ ಮನುಷ್ಯರ ದೇಹದ ಮೇಲೆ – ಅವರ ಮನಸ್ಸು ಇವರ ಕೈಗೆ ಸಿಗುವುದಿಲ್ಲವಲ್ಲ – ಆಡುವ ಆಟ.

ಆರು ಜನ ಇಂಡಿಯನ್ನರನ್ನು ಮರಕ್ಕೆ ಕಟ್ಟಿ ಜೀವಂತ ಸುಡುವ ಚಿತ್ರ. ಅವರು ಮಾಡಿದ್ದೆ ತಪ್ಪು ಇಷ್ಟೇ. ಮನ್ದಿಯೂರಿ ಪ್ರಾರ್ಥಿಸಿ ಎಂದು ಪಾದ್ರಿ ನೀಡಿದ ಏಸು ಕ್ರಿಸ್ತ ಮತ್ತು ಮೇರಿ ಪ್ರತಿಮೆಗಳನ್ನೂ ಈ ಆರು ಮಂದಿ ಇಂಡಿಯನ್ನು ನೆಲದಲ್ಲಿ ಹೊತಿದ್ದರು. ಧರ್ಮವನ್ನು ಅವಹೇಳನಗೊಳಿಸಿದ ಅಪರಾಧಕ್ಕೆ ಅವರನ್ನು ಜೀವಂತ ಸುಡಲಾಯಿತು. ಈ ಹೊಸ ದೇವರು ನಾಮಾ ನೆಲವನ್ನು ಫಲವತ್ತಾಗಿಸಲಿ – ಜೋಳ, ಕಾಳು, ಗೆದ್ದೇ, ಗೆಣಸು ಸಮೃದ್ಧವಾಗಲಿ ಎಂದು ಆಸೆಯ ಪ್ರಾರ್ಥನೆಯೊಂದಿಗೆ ಅವರು ಪ್ರತಿಮೆಗಳನ್ನು ಹೂತಿದ್ದರು.

‘ಲೋಕ ದೃಷ್ಟಿ’ಗಳು ಹಲವಿರುತ್ತದೆ. ಆದರೆ ‘ಅಧಿಕಾರ’ ಅವೆಲ್ಲವನ್ನು ಧ್ವಂಸಗೊಳಿಸಿ ತಮ್ಮ ‘ಲೋಕದೃಷ್ಟಿ’ಯೇ ಸಾಯಿ ಎಂಬ ‘ಅಹಂ’ ಅನ್ನು ಹೊಂದಿರುತ್ತದೆ.

ಆದರೆ ಅಧಿಕಾರ ಎನ್ನುವುದು ಯಾವಾಗಲೂ ಏಕಮುಖವಾಗಿ ವರ್ತಿಸುತ್ತಿದ್ದರೂ ಮೌನಿಗಳು, ದುರ್ಬಳರೂ ಈಅಧಿಕಾರವನ್ನು ಕೆಣಕುತ್ತಲೇ ಇರುತ್ತಾರೆ. ಒಂದು ಘಟ್ಟದಲ್ಲಿ ಗೆಲ್ಲುತ್ತಾರೆ ಕೂಡಾ. ಜಾಗತೀಕರಣಕ್ಕೆ ತಾವು ಸ್ಪೇಸ್ ನೀಡುತ್ತಿರುವವರು ಇದನ್ನ ಗಮನಿಸಬೇಕಾಗಿದೆ.

ಯಾವುದೇ ಅಧಿಕಾರ ಅಥವಾ ಶಕ್ತಿಯನ್ನು ಗಲೈಸಲೂ ಕೂಡ ಸಾಧನೆ ಮುಖ್ಯವಾಗುತ್ತದೆ. ಸಾಧನೆಗೆ ಶಿಸ್ತು ಬೇಕಾಗುತ್ತದೆ. ಅದು ಬೌಧಿಕತೆಯನ್ನು ಬೇಡುತ್ತದೆ. ಆದರೆ ಜ್ಞಾನ ಬೇಗ ನಾಶದ ಕಡೆಗೆ ಚಲಿಸುತ್ತಿರುತ್ತದೆ. ಈ ಶಕ್ತಿಯನ್ನುಯ್ ಸಮಾಜ ಒಳಿತಿಗಾಗಿ ಉಪಯೋಗಿಸಲು ‘ವಿವೇಕ’ ಬೇಕಾಗುತ್ತದೆ. ಈ ವಿಷಯವನ್ನು ಎರಡೆನೆಯ ಸಂಪುಟ ‘ಮುಖಗಳು ಮತ್ತು ಮುಖವಾಡಗಳು’ ವಿಷದವಾಗಿ ತಿಳಿಸುತ್ತವೆ.

ವಸಾಹತೀಕರಣವೆಂದರೆ ಇದು ಕೇವಲ ಆರ್ಥಿಕ ಆಯಾಮವನ್ನು ಮಾತ್ರ ಹೊಂದುವುದಿಲ್ಲ. ಆಳ್ವಿಕೆಗೆ ಒಳಪತ್ತವರ ದೇಹ ಮತ್ತು ಮನಸ್ಸಿನ ಆಳಕ್ಕೆ ಆಳುವವರ ವಿಚಾರಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇಲಿದುಬಿದುವಂತೆ ನೋಡಿಕೊಳ್ಳುವ ವಿಧಾನವಾಗಿರುತ್ತದೆ. ತನ್ನತನವನ್ನೇ ಮರೆಸಿ ವಿಸ್ಮೃತಿಗೆ ದೂಡಿಬಿಡುತ್ತದೆ, ಈ ತನ್ನದೆಲ್ಲವನ್ನೂ ಕೀಳರಿಮೆಗೆ ಒಳಪದಿಸಿಬಿದುತ್ತದೆ.

ಹೆಣ್ಣಿನ ಮೈಯಂತೂ ಕೇವಲ ಭೋಗದ ವಸ್ತುವಾಗಿಬಿಡುತ್ತದೆ. ಇವೆಲ್ಲವೂ ಪ್ರತಿ ಸಂಸ್ಕೃತಿಯನ್ನು ಸೃಷ್ಟಿಸಿಕೊಳ್ಳುತ್ತಾ ಹೋರಾಟವಾಗಿ ಮಾರ್ಪದಿಸಿಕೊಲ್ಲಬೇಕಾಗುತ್ತದೆ. ಇದಕ್ಕೆ ಅಪಾರ ದೈಹಿಕ, ಮಾನಸಿಕ ಶಕ್ತಿ ಬೇಕಾಗಾಗುತ್ತದೆ. ಗಾಂಧೀಜಿಯಂತಹವರು ಬೇಕಾಗುವುದು ಇಲ್ಲೇ. ಈ ವಿಚಾರಗಳನ್ನೆಲ್ಲಾ  ಗೆಲಿಯಾನೋ ಓದುಗರಿಗೆ ತನ್ನ ದೃಷ್ಟಿಕೋನದಿಂದ ನೀಡುತ್ತಾನೆ. ಹೊಸ ಚಾರಿತ್ರಿಕ ದೃಷ್ಟಿಕೋನವನ್ನು ಸೃಷ್ಟಿಸುತ್ತಾನೆ.

ಕನ್ನಡಕ್ಕೆ ಅತ್ಯಂತ ಸಮರ್ಪಕವಾಗಿ ಈ ಕೃತಿಯನ್ನು ಕೆ.ಪಿ.ಸುರೇಶ ತಂದಿರುವುದೇ ಅಲ್ಲದೆ ಮನುಕುಲದ ಚರಿತ್ರೆಯ ಕಾಣ್ಕೆಯನ್ನು ಹೊತ್ತು ತಂದಿದ್ದಾರೆ.

ವಚನವೊಂದರ ವಿಶ್ಲೇಷಣೆ

ವಚನವೊಂದರ ವಿಶ್ಲೇಷಣೆ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ;
ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ;
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ;
ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು; ಕೂಡಲಸಂಗಮದೇವಾ .
ಪ್ರೊ . ಎಂ . ಜಿ .ಕೃಷ್ಣಮೂರ್ತಿಯವರು ಈ ವಚನವನ್ನು ಬಹಳ ಸಮರ್ಥವಾಗಿ ವಿಶ್ಲೇಷಣೆ ಮಾಡುತ್ತಾ :
೧)ಕವನದ ಮೊದಲು ಮೂರು ಸಾಲುಗಳಲ್ಲಿ ‘ತಂದೆ’ ಪದದ ಪುನುರುಕ್ತಿ ಹಾಗೂ ಆ ಪದದ ಸಾಮಾನ್ಯ ಮತ್ತು ಧ್ವನಿತಾರ್ಥಗಳನ್ನು ಗುರುತಿಸಿದ್ದಾರೆ.
೨)ಮೊದಲ ಮೂರು ಸಾಲಿನ ನಿಷೇಧಕಕ್ಕೂ , ಕೊನೆಯ ಸಾಲಿನ ನಿಷೇಧಕಕ್ಕೂ ಇರುವ ಸಂಬಂಧ  – ವ್ಯತ್ಯಾಸ , ಪರಿಮಿತಿ – ಶಕ್ತಿಗಳನ್ನು ಗುರುತಿಸಿದ್ದಾರೆ.
೩) ಕೂಡಲ ಸಂಗಮ ದೇವಾ – ಎಂಬ ಪದ(ಪುಂಜ) ಕೆರಳಿಸುವ ಕುತೂಹಲವನ್ನು ವಿಶ್ಲೇಷಿಸುತ್ತಾ : ” ಈ ಹೆಸರಿಂದ ಒಂದೊಂದು
ಪದವೂ ಕವನಕ್ಕೆ ಅರ್ಥವನ್ನು ನೀಡುತ್ತದೆ.. ಕನ್ನಡದ ಕೂಡು ಶಬ್ದಕ್ಕೂ ಸಂಸ್ಕೃತದ ಗಮ (ಚಲಿಸುವ) ಶಬ್ದಕ್ಕೂ ಬಲು ಸಂಬಂಧವಿದೆ. ಹೀಗೆ ‘ಕೂಡು‘ ಹಾಗೂ ‘ಗಮ‘ಗಳು ಕೂಡಿ ಬಂದಿರುವುದರಿಂದ ‘ಕೂಡುವಿಕೆ‘ ಹಾಗೂ ‘ಹೋಗುವಿಕೆ‘ ಕೂಡಿಯೇ ನಡೆದಂತಾಗಿದೆ. ಇದು ಕವನವು ಒಳಗೊಂಡಿರುವ ದೈವತ್ವದ ಕಲ್ಪನೆಯ ಮೇಲೆ ಬೆಳಕು ಚೆಲ್ಲುತ್ತದೆ” ಎಂದು ವಿವರಿಸಿ, ಮುಂದೆ “ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆ ಎಳಸದಂತೆ ಇರಿಸು ” ಎಂಬ ಕೋರಿಕೆಯಲ್ಲಿ , ನಿಜವಾಗಿಯೂ ಒಂದು ನಿರ್ದಿಷ್ಟ  ಇದೆ. ಪರಿಣಾಮವೆಂದರೆ ಮೊದಲ ಸಾಲಿನ ‘ಹೋಗು’ ಶಬ್ದದ ಅರ್ಥವ್ಯಾಪ್ತಿಯು ಕವನದಲ್ಲೇ ಸಂಭವಿಸಿ ಕವನ ಅರ್ಥವೂ  ಹೊಮ್ಮುತ್ತದೆ”ಎಂದಿದ್ದಾರೆ.  ವಿಮರ್ಶಕರಾಗಿ ಎಂ .ಜಿ . ಕೆ .  ಯವರು ಮಾಡಿರುವ ಈ ವಚನದ ವಿಶ್ಲೇಷಣೆ ಎಷ್ಟು ಮರ್ಪಕವಾಗಿದೆಯೆಂದರೆ, ಇದರ ಮೇಲೆ ಇನ್ನೂ ಹೆಚ್ಚಿನ ವಿಶ್ಲೇಷಣೆ, ವಿಮರ್ಶೆಗೆ ಎಡೆಯಿಲ್ಲ ಎನಿಸುತ್ತದೆ. ಆದರೆ, ಭಾಷಾಶಾಸ್ತ್ರದ ವಿದ್ಯಾರ್ಥಿ ಈ ವರ್ಚನವನ್ನು ಹೇಗೆ ನೋಡಬಹುದು ಎಂಬುದು ನನ್ನ ಕುತೂಹಲ. ಇದನ್ನು ಹತ್ತಿಕ್ಕಲಾರದೆ ನ್ನೆನು ಈ ಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ಅಲ್ಲದೆ ಈ ವಚನದಲ್ಲಿ ಪ್ರಯೋಗವಾಗಿರುವ ಪ್ರತಿಯೊಂದು ಪದ – ವ್ಯಾಕರಣ , ವಿಶೇಷ ಮತ್ತು ವಾಕ್ಯದ ಬಳಕೆ ಕಾವ್ಯ ಸಂದರ್ಭದಲ್ಲಿ ಆಕಸ್ಮಿಕವಲ್ಲ ಎಂಬ ಇನ್ನೊಂದು ಅಂಶವೂ ಕಾರಣ. ಈ ಕೆಳಗಿನ ವಿಮರ್ಶೆ ದೊಂಬರಾಟ ಎಣಿಸಬಹುದು. ಇರಲಿ.
ಇಲ್ಲಿ ನಾನು ಎಂ .ಜಿ. ಕೆ . ಯವರ ಮೇಲಿನ ಮೂರು ಅಂಶಗಳನ್ನು ಸಂಗ್ರಹಿಸಿದ್ದಕ್ಕೆ ಕಾರಣ ಇವು ನನ್ನ ಮುಂದಿನ ಭಾಷಾ ವಿಶ್ಲೇಷಣೆಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಅಂಶದಿಂದ .
೧)ಮೇಲಿನ ವಚನದಲ್ಲಿ ಪ್ರತಿಯೊಂದು ಮಾಲ್ಕು ವಾಕ್ಯ (ಮತ್ತು ಐದು ಸಾಲು) ಗಳ್ಲಲೂ ಬರುವ ಕ್ರಿಯಾಪದಗಳು ಎರಡು ರೀತಿಯಾಗಿವೆ.
ಅ )ಅಸಮಾಪಕ(infinte ) ಆ) ಸಮಾಪಕ(finite ) ಕ್ರಿಯಾಪದಗಳು .
ಅಸಮಾಪಕ ಕ್ರಿಯಾಪದಗಳು : ೧)ಹೊಳದಂತೆ, ನೋಡದಂತೆ, ಕೇಳದಂತೆ, ಎಳಸದಂತೆ ಇವು ನಾಲ್ಕು ಕ್ರಿಯಾಪದಗಳೂ ಅಸಮಾಪಕ ಕ್ರಿಯಾಪದಗಳು. ಆದ್ದರಿಂದ ಇವು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಲಾರವು. ಈ ಕ್ರಿಯಾಪದಗಳೆಲ್ಲವೂ ವಾಕ್ಯದಲ್ಲಿ
ಭಕ್ತನಿಗೆ ಸಂಬಂಧಪಟ್ಟುವುಗಳಾದ್ದರಿಂದ ಮತ್ತು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಲಾರದವುಗಳಾಗಿರುವುದರಿಂದ ಭಕ್ತ- ತಂದೆಯನ್ನು ಅವಲಂಬಿಸಿರುವುದನ್ನು ಧ್ವನಿಸುತ್ತದೆ.
೨) ಹೋಗು , ನೋಡು, ಕೇಳು, ಎಳಸು – ಈ ಕ್ರಿಯಾಪದಗಳೆಲ್ಲ ಗತಿಸೂಚಕ (motion) ಕ್ರಿಯಾಪದಗಳು೨ . ಈ ಗತಿಸೂಚಕ ಕ್ರಿಯಾಪದಗಳು ಭಕ್ತನ ಚಂಚಲತೆಯನ್ನು ಧ್ವನಿಸುತ್ತವೆ . ಈ ಕ್ರಿಯಾಪದಗಳ ಹಿಂದೆ ಬರುವ ಅತ್ತಲಿತ್ತ , ಸುತ್ತಸುಲಿದು, ಮತ್ತೊಂದು, ಅನ್ಯ ಈ ಪದಗಳು ಚಂಚಲತೆಗೆ ಇನ್ನಷ್ಟು ಪುಷ್ಟಿಕೊಡುತ್ತವೆ .
**************************************************************************************************
೧. “ಐದು ವಚನಗಳು: ಒಂದು ವಿಶ್ಲೇಷಣೆ ” ಆಧುನಿಕ ಭಾರತೀಯ ಸಾಹಿತ್ಯ ಮತ್ತು ಇತರ ಲೇಖನಗಳು (೧೯೭೦) ಅಕ್ಷರ ಪ್ರಕಾಶನ ೬೭-೬೮.
೨. ಭಾಷೆಯ ಮೂಲ ಕ್ರಿಯಾಪದಗಳನ್ನು ಅರ್ಥವಿಜ್ಞಾನದ(semantics) ಪ್ರಕಾರ ನಾಲ್ಕು ಭಾಗಗಳನ್ನಾಗಿ ವಿಂಗಡಿಸಬಹುದು.
ಅ ) ಸ್ಥಿರ ಸ್ಥಿತಿ ಸೂಚಕ ಕ್ರಿಯಾಪದ (static verb ): ‘ ಮರ ಒಣಗಿದೆ ‘ – ಈ ರೀತಿಯ ವಾಕ್ಯಗಳಲ್ಲಿ ಕ್ರಿಯೆಯು ನಾಮಪದದ ಇರುವಿಕೆಯನ್ನು (state) ಸೂಚಿಸುತ್ತದೆ .
ಆ ) ಪರಿವರ್ತನಾ ಕ್ರಿಯಾಪದ (process verb): ‘ ಮರ ಒಣಗಿತ್ತು’ – ಈ ರೀತಿಯ ವಾಕ್ಯಗಳಲ್ಲಿ ನಾನು(ಕರ್ತೃ ) ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾವಣೆಯನ್ನು ಹೊಂದುತ್ತದೆ ಎಂಬುದನ್ನು ಕ್ರಿಯಾಪದ ಸೂಚಿಸುತ್ತದೆ. ಈ ರೀತಿಯ ವಾಕ್ಯಗಳಿಗೆ “ಏನಾಯಿತು” ಎಂಬ ಪ್ರಶ್ನೆಗೆ ಉತ್ತರೆ ಸಿಗುತ್ತದೆ.
ಇ) ಗತಿಸೂಚಕ ಮತ್ತು ಕ್ರಿಯಾಸೂಚಕ ಕ್ರಿಯಾಪದ (motion  action  verb ):  ‘ರಾಮ ಓಡಿದ ‘, ‘ಅವನು ನೋಡಿದ’ ಈ ರೀತಿಯ ವಾಕ್ಯಗಳಲ್ಲಿ  ಕರ್ತೃ ಏನು ಮಾಡುತ್ತದೆ ಎಂಬುದನ್ನು ಕ್ರಿಯೆ ಸೂಚಿಸುತ್ತದೆ. ಕರ್ತೃವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬರುವ ಚಲನೆಯನ್ನು (ಬದಲಾವಣೆಯನ್ನು) ಸೂಚಿಸುತ್ತದೆ. ಏನು ಮಾಡಿ(-ದ , -ಳು , -ತು ) ಮುಂತಾದ ಪ್ರಶ್ನೆಗಳಿಗೇ ಈ ರೀತಿಯ ಕ್ರಿಯಾಪದಗಳು ಉತ್ತರ ಕೊಡುತ್ತವೆ.
ಈ ) ಪ್ರಕ್ರಿಯಾ ಕ್ರಿಯಾಪದ (process  and action verb ): ‘ ರಾಮ ಬಟ್ಟೆಯನ್ನು ಒಣಗಿಸಿದ’. ಈ ರೀತಿಯ ವಾಕ್ಯಗಳಲ್ಲಿ ಕ್ರಿಯಾಪದವು ಕರ್ತೃ ಏನು ಮಾಡಿದ್ದಾನೆ ? ಕರ್ಮಾ ಏನು ಬದಲಾವಣೆ ಹೊಂದಿದೆ? ಎಂಬ ಎರಡೂ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ.
**************************************************************************************************
ಸಮಾಪಕ ಕ್ರಿಯಾಪದಗಳು : ೧) ನಾಲ್ಕು ವಾಕ್ಯಗಳ ಈಡನ್ ಭಾಗದಲ್ಲಿ ‘ತಂದೆ’ಗೆ ಸಂಬಂಧಿಸಿ ಬರುವ ‘ಮಾಡು’ ಮತ್ತು ‘ಇರಿಸು’ ಎಂಬುವು ಸಮಾಪಕ ಕ್ರಿಯಾಪದಗಳು. ಸಮಾಪಕ ಕ್ರಿಯಾಪದಗಳು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಬಲ್ಲವು. ಈ ಕ್ರಿಯಾಪದಗಳು ‘ತಂದೆ’ಯ ಸ್ವತಂತ್ರ ಅಸ್ತಿತ್ವವನ್ನು ಧ್ವನಿಸುತ್ತವೆ .
೨) ಈ ಭಾಗದಲ್ಲಿ ಬರುವ ‘ಮಾಡು’ ಕ್ರಿಯಾಪದ, ಕ್ರಿಯಾಸೂಚಕ ಕ್ರಿಯಾಪದವಾದಂತೆಯೇ ಸೃಷ್ಠಿಸೂಚಕವೂ ಆಗಿದೆ. ಇದು ‘ತಂದೆ’ಯ  ಸೃಜನಶೀಲತೆ(creativity) ಶಕ್ತಿಯನ್ನು ಧ್ವನಿಸುತ್ತವೆ .
೩)ಇರ್  + ಇಸು . ‘ಇರ್’ ಎಂಬ ಕ್ರಿಯಾಪದದ ಸ್ಥಿರಸೂಚಕ(static ) ಕ್ರಿಯಾಪದ. ‘ತಂದೆ’ ಮಾತ್ರ ಭಕ್ತನನ್ನು ಒಂದು ಸ್ಥಿತಿಯಲ್ಲಿ ಇಡಬಲ್ಲ ಎಂಬುದನ್ನು ಸೂಚಿಸಿದರೆ, ಇಸು ಎಂಬ ಪ್ರೇರಣಾತ್ಮಕ ಪ್ರತ್ಯಯ ತಂದೆಯೇ ಈ ರೀತಿಯಲ್ಲಿ ಇರಿಸಲು ಸಮರ್ಥನಾದ, ಕಾರಣ ಕರ್ತಾ ಮತ್ತು ಪ್ರೇರಕ ಎಂಬುದನ್ನು ಧ್ವನಿಸುತ್ತದೆ . ೪)’ತಂದೆ’ಯು ಕ್ರಿಯಾಶೀಲನೂ ಪ್ರೇರಣಾತ್ಮಕನೂ ಆದ್ದರಿಂದ ಇವೆರಡನ್ನೂ ಕೂಡಿಕೊಂಡಿರುವ ಕೂದಲ ಸಂ -ಗಮ (ಚಲನಶೀಲ ಕ್ರಿಯಾಪದ) ಭಕ್ತ ಅಂತಹ ತಂದೆಯೊಡನೆ ಕೂಡಿಕೊಂಡಿರಲು ಮೊರೆ ಇಡುತ್ತಿರುವುದು ಧ್ವನಿತವಾಗುತ್ತದೆ.
೨) ಮತ್ತು ನಾಲ್ಕು ವಾಕ್ಯಗಳಲ್ಲಿ ಬರು ಕೂಡುವಾಕ್ಯರಚನಾ(conjunctive) ಪ್ರತ್ಯಯ ‘ಭಕ್ತ’ ಮತ್ತು ‘ತಂದೆ’ ಕೂಡುವ ಆಕಾಂಕ್ಷೆಯನ್ನು ಹೇಳಿ ‘ಕೂದಲ ಸಂಗಮ’ ಎಂಬ ಧ್ವನಿಯನ್ನು ಪುಷ್ಟೀಕರಿಸುತ್ತದೆ.
೩) ಮೊದಲ ಮೂರು ವಾಕ್ಯಗಳಲ್ಲೂ ‘ನಾನು’ ಅಥವಾ ‘ನೀವು’ ಎಂಬ ಸರ್ವನಾಮಗಳು ವಾಕ್ಯಗಳ ಮೇಲೆ ಮೇಲ್ಮೈ ಮಟ್ಟದಲ್ಲಿ (surface level) ಕಾಣಿಸಿಕೊಳ್ಳುವುದಿಲ್ಲ. ‘ನಾನು’ ವಾಕ್ಯದ ಮೊದಲಲ್ಲೂ ‘ನೀವು’ ಕೂಡು ವಾಕ್ಯದ ಮೊದಲಲ್ಲೂ  ಗೃಹೀತವಾಗಿ ಬಂದಿದೆ. ಆದರೆ ನಾಲ್ಕನೆಯ ವಾಕ್ಯದಲ್ಲಿ ಈ ಕ್ರಮ ಹಿಂದೂ ಮುಂದಾಗಿ ‘ನಿಮ್ಮ’ ಎಂದು ಗೌರವ ಸೂಚಕವಾಗಿ ಬರಂದಿರುವುದರಿಂದ ‘ನೀವು’ ವಾಕ್ಯದ ಮೇಲ್ಮೈ ಮಟ್ಟದಲ್ಲಿ ಮೂರ್ತವಾಗುತ್ತದೆ. ಈ ಸ್ಥಾನ ಪಲ್ಲಟ ಮತ್ತು ‘ತಂದೆ’ಗೆ ಸಂಬಂಧಪಟ್ಟ ಸರ್ವನಾಮದ ಮೂರ್ತತೆ ವಚನದ ಸಂದರ್ಭದಲ್ಲಿ ಗಮನಾರ್ಹವಾಗಿದೆ.
 ೪)ಹೋಗದಂತೆ, ನೋಡದಂತೆ, ಕೇಳದಂತೆ , ಎಳಸದಂತೆ ಎಂಬ ಕ್ರಿಯಾ ನಿಷೇಧಕಗಳ ಭಕ್ತನ ‘ಅಭಾವ’ವನ್ನು ಸೂಚಿಸಿದರೆ, ‘ಪಾದವಲ್ಲದೆ’ ಎಂಬ ನಾಮ ನಿಷೇಧಕವು ‘ಖಚಿತತೆ’ಯನ್ನು ಸೂಚಿಸುತ್ತದೆ. ಅಂದರೆ ರೂಪ (linguistic  form) ಮಟ್ಟದಲ್ಲಿ ನಿಷೇಧಕವಾಗಿದ್ದರೂ ಅರ್ಥದ ದೃಷ್ಟಿಯಿಂದ postive  ಆಗಿ ಬಂದಿದೆ.
೫)ಹೆಳವ, ಅಂಧಕ, ಕಿವುಡಮ್ ಅನ್ಯವಿಷಯ ಎಂಬ ಪದಗಳು ತಮ್ಮ ಮುಂದೆ ಬರುವ ನಿಷೇಧಾರ್ಥಕ ಕ್ರಿಯಾಪದದ ಸಂಸರ್ಗ (collocation)ದಿಂದ ಭಕ್ತನ ಆಕಾಂಕ್ಷೆಯನ್ನು ಸೂಚಿಸುತ್ತವೆ

ಹೀಗೆ ಈ ವಚನದಲ್ಲಿ ಬರುವ ಒಂದೊಂದು ಭಾಷಾ – ಘಟಕವೂ ಅರ್ಥವತ್ತಾದ ಶಬ್ದ- ಅರ್ಥದ ಪರಿಪೂರ್ಣ ಬೆಸುಗೆಯಾಗಿದೆ. ಈ ರೀಇಟಿ ಕವನಗಳಲ್ಲಿ ಧ್ವನಿಮಾಪದ, ವ್ಯಾಕರಣ ಮತ್ತು ವಾಕ್ಯರಚನೆಯಲ್ಲಿ ಕವನದ ವಸ್ತುವಿನ ಕಡೆಗೆ ತುಡಿಯುವುದನ್ನು ಶೈಲಿ ವಿಜ್ಞಾನ (stylistic )ದಲ್ಲಿ lingusitic cohesion ಎಂದು ಕರೆಯುತ್ತಾರೆ.

ರುಜುವಾತು : ೧೩
ಜನವರಿ – ಮಾರ್ಚ್ ೧೯೮೪
ಪುಟ : ೩೭-೪೦